ಮಹಾನಗರದ ಮರಗಳು ನಾವು ಮೈ ಹರವಿ ನೆರಳಾಗುವೆವು ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ ಗಾಳಿ ಮಳೆಗೆ ಆವ ಜನ್ಮದ ಪಾಪ ತಟ್ಟಿಹುದೋ ಎಮಗೆ ? ಎಲ್ಲರೂ ವೈರಿಗಳು ಈ ಮಹಾನಗರದೊಳಗೆ ವಸಂತಕ್ಕೆ ಮೈದಳೆದರೆ... ಕೊಂಚ ಮೈ ಕೊಡವಿ ಚಿಗಿತರೆ ಕೆ.ಇ.ಬಿ.ಯವರ ಕಟಾವು ಕಿಂಚಿತ್ ಒಣಗಿದರೆ ಕೊಂಬೆ ಪಾಲಿಕೆಯವರ ಕೊಡಲಿ ನಾ ಹೇಗೆ ನೆರಳ ಕೊಡಲಿ ? ರಸ್ತೆ ಅಗಲೀಕರಣ, ಫುಟ್ಪಾತ್ ನವೀಕರಣ ಏನಿಲ್ಲದಿದ್ದರೂ ಯೋಧರ ವನ ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ ಕತ್ತರಿಸಿದರೂ ರೆಂಬೆ ಕೊಂಬೆಗಳ ಮತ್ತೆ ಚಿಗಿತು ಜೀವನದಲಿ ಹೋರಾಡೆಂಬ ಪಾಠ ಸಾರುವೆವು ಬಿಸಿಲಿಗೆ ಬೇಯುವ ಜನಕೆ ಬಿಡದೆ ನೆರಳಾಗುವೆವು.
ಮನಸು ಹೃದಯಗಳ ಸವಿಮಾತು............