ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾನಗರದ ಮರಗಳು ನಾವು

ಮಹಾನಗರದ ಮರಗಳು ನಾವು ಮೈ ಹರವಿ ನೆರಳಾಗುವೆವು ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ ಗಾಳಿ ಮಳೆಗೆ ಆವ ಜನ್ಮದ ಪಾಪ ತಟ್ಟಿಹುದೋ ಎಮಗೆ ? ಎಲ್ಲರೂ ವೈರಿಗಳು ಈ ಮಹಾನಗರದೊಳಗೆ ವಸಂತಕ್ಕೆ ಮೈದಳೆದರೆ... ಕೊಂಚ ಮೈ ಕೊಡವಿ ಚಿಗಿತರೆ ಕೆ.ಇ.ಬಿ.ಯವರ ಕಟಾವು ಕಿಂಚಿತ್ ಒಣಗಿದರೆ ಕೊಂಬೆ ಪಾಲಿಕೆಯವರ ಕೊಡಲಿ ನಾ ಹೇಗೆ ನೆರಳ ಕೊಡಲಿ ? ರಸ್ತೆ ಅಗಲೀಕರಣ, ಫುಟ್ಪಾತ್ ನವೀಕರಣ ಏನಿಲ್ಲದಿದ್ದರೂ ಯೋಧರ ವನ ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ ಕತ್ತರಿಸಿದರೂ ರೆಂಬೆ ಕೊಂಬೆಗಳ ಮತ್ತೆ ಚಿಗಿತು ಜೀವನದಲಿ ಹೋರಾಡೆಂಬ ಪಾಠ ಸಾರುವೆವು ಬಿಸಿಲಿಗೆ ಬೇಯುವ ಜನಕೆ ಬಿಡದೆ ನೆರಳಾಗುವೆವು.

ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ ಏನು ಏನು ತಪ್ಪು ಮಾಡಿದೆ

ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ ಏನು ಏನು ತಪ್ಪು ಮಾಡಿದೆ ಕನ್ನಡಿಗರು ಇದೆನೆಲ್ಲ ಓದಿದ ಮೇಲೆ ಗೊತ್ತಾಗುತ್ತೆ, ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ  ಏನು ಏನು ತಪ್ಪು ಮಾಡಿದೆ ಅಂತ.   ಇದೆಕ್ಕೆಲ್ಲ  ಕಾರಣ ಕನ್ನಡ ಗಣಕ ಪರಿಷತ್ ಮತ್ತು ಶೇಷಾದ್ರಿವಾಸು.     ೧. ಕನ್ನಡದ ಗಣಕೀಕರಣದಲ್ಲಿ ಈಗಾಗಲೇ ಹಲವು ವರ್ಷಗಳ ಹಿಂದೆಯೇ ನಮ್ಮಲ್ಲಿ ಅನೇಕ ತಂತ್ರಜ್ಞರಿದ್ದರು, ತಂತ್ರಾಂಶಗಳಿದ್ದವು, ಹಾಗೂ ಅವುಗಳಿಗೆ ಬೇಡಿಕೆ ಮತ್ತು ಪೂರೈಕೆ ಎರ್ಡೂ ಸಮತೋಲವಾಗಿ ಸಾಗಿತ್ತಿದ್ದವು.       ೨. ತಂತ್ರಜ್ಞಾನ ಬೆಳದಂತೆ ಕನ್ನಡದ ಗಣಕೀಕರಣವೂ ಸಾಕಷ್ಟು ಪ್ರಗತಿ ಸಾಧಿಸ ಬಹುದಿತ್ತು.     ೩. ಕನ್ನಡದ ಗಣಕೀಕರಣದಲ್ಲಿ ೧೯೯೩ ರಿಂದ ೨೦೦೩ ರ ಅವಧಿಯಲ್ಲಿಯೇ ಅನೇಕ ಅನ್ವಯಿಕ ತಂತ್ರಾಂಶಗಳು (Application softwares)    ಲಭ್ಯ ವಾಗಿತ್ತು.       ೪. ಕನ್ನಡದ ಗಣಕೀಕರಣದಲ್ಲಿ , ಮೊದಲಿನ ವೇಗದಲ್ಲಿ ಕಂಡು ಬಂದ ಬೆಳವಣಿಗೆ ಈಗ ಕಂಡು ಬರುತ್ತಿಲ್ಲ. ಯಾಕೆ ಅಂತ ನಾವೆಲ್ಲ ಯೋಚನೆ ಮಾಡಬೇಕು?         ಕನ್ನಡಿಗರು ಇದೆನೆಲ್ಲ ಓದಿದ ಮೇಲೆ ಗೊತ್ತಾಗುತ್ತೆ,       ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ ಭಾರತೀಯ ಭಾಷೆಗಳನ್ನ ಗಣಕೀಕರಿಸಲು ಕೆಲಸಗಳು ಆರಂಬವಾಗಿ ಸುಮಾರು ೨೭ ವರ್ಷಗಳೇ ತುಂಬಿವೆ.   * ಗಣಕದಲ್ಲಿ ಸಂಶೋದನೆಗಳು ಆರಂಬವಾದ ದಿನಗಳಿಂದಲೇ, * ಗಣಕಗಳೆಂದರೇನು? ಎಂದು, ಜನ ಸಾಮಾನ್ಯರಿಗೆ