ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭ್ರಷ್ಟಾಚಾರದ ಸುಳಿಯಲ್ಲಿ ಬಡ ಭಾರತ

ಭಾರತಕ್ಕೆ ಉತ್ತಮ ಭವಿಷ್ಯವಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಎಲ್ಲೋ ಒಮ್ಮೊಮ್ಮೆ ಮಿಂಚಿನಂತೆ ಉದಯಿಸುವ ಆಶಾಕಿರಣಗಳು ಸ್ವಲ್ಪ ಸಮಯದಲ್ಲೇ ಭ್ರಷ್ಟ ಮೋಡದ ಸುಳಿಗೆ ಸಿಲುಕಿ ಜನರ ಎದುರಿನಿಂದ ಕಾಣೆಯಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಣ್ಣಾ ಹಜಾರೆ, ಸಂತೋಷ್ ಹೆಗಡೆ ಮುಂತಾದ ನಕ್ಷತ್ರಗಳು ಆಗಾಗ ಉದಯಿಸಿದರೂ ಸಹ ಅವರ ವರ್ಚಸ್ಸು ಮತ್ತು ಪ್ರಾಮಾಣಿಕತೆಯನ್ನು ಈ ಭಂಡ ರಾಜಕಾರಣಿಗಳು ಹೊಸಕಿ ಹಾಕುತ್ತಿದ್ದಾರೆ. ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. ಬರೇ ರಾಜಕಾರನಿಗಳನ್ನ ದೂರಿ ಪ್ರಯೋಜನವಿಲ್ಲ ಅನ್ನುವವರಿದ್ದಾರೆ. ಅದು ನಿಜ ಕೂಡಾ. ಆದರೆ ಆ ಅಧಿಕಾರಿಗಳನ್ನು ಕೊಬ್ಬಲು ಬಿಟ್ಟಿದ್ದು ಮಾತ್ರ ಇದೇ ರಾಜಕಾರಣಿಗಳೇನೆ. ರಾಜಕಾರಣಿಗಳು ಸರಿಯಾಗಿದ್ದರೆ ಅಧಿಕಾರಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನಲ್ಲ. ಮುಖ್ಯವಾಗಿ ಅಧಿಕಾರಿಗಳು ರಾಜಕಾರಣಿಗಳಷ್ಟು ಭ್ರಷ್ಟರಲ್ಲ. ಅವರಿಗೆ ಕೆಲಸದ ಭಯವಿರುತ್ತದೆ. ಕೆಲಸ ಕಳೆದುಕೊಂಡರೆ ಬದುಕೋದು ಕಷ್ಟ ಎಂಬ ಅರಿವಿರುತ್ತದೆ. ಆದರೆ ರಾಜಕಾರಣಿಗಳಿಗೆ ಯಾವ ಭಯವೂ ಇಲ್ಲ. ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬರಬಹುದು ಎಂಬ ನಂಬಿಕೆ ಅವರಿಗಿದೆ. ಯಡಿಯೂರಪ್ಪನಂತವರ ಕೃಪಾಕಟಾಕ್ಷವಿದ್ದರೆ ಸೋತರೂ ಸೋಮಣ್ಣನಂತೋರು ಮಂತ್ರಿ ಆಗ್ತಾರೆ. ಭಂಡ ರಾಜಕಾರಣಿಗಳಿಗೆ ಇನ್ನೇನು ಬೇಕು ? ಹೀಗಾಗಿ ಇಂದು ಹಗರಣಗಳ ಮೇಲೆ ಹಗರನಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದರಂತೆ ಸಾವಿರಾರು ಕೋಟ

ಲೋಕಾಯುಕ್ತಕ್ಕೂ ವಕ್ಕರಿಸುತ್ತಿದೆ ಜಾತಿ ಪಿಡುಗು.

ಈ ಭಂಡ ಯಡ್ಡಿ ಕರ್ನಾಟಕವನ್ನು ಬರ್ಬಾದು ಮಾಡದೇ ಹೋಗಲ್ಲ ಅನ್ನಿಸ್ತಿದೆ. ಲೋಕಾಯುಕ್ತ ಹೆಗಡೆಯವರು ಈತನಿಗೆ ಮಗ್ಗುಲ ಮುಳ್ಳಾಗಿದ್ದರು. ಅವರ ಅಧಿಕಾರಾವಧಿ ಇನ್ನೇನು ಮುಗಿಯುತ್ತಿದೆ ಅಂತ ಖುಷಿ. ಹಾಗೆಯೇ ಮುಂದಿನ ಲೋಕಾಯುಕ್ತರನ್ನಾಗಿ ತನ್ನ ಜಾತಿಯವರನ್ನೇ ನೇಮಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ ಯಡಿಯೂರಪ್ಪ. ತಮ್ಮದೇ ಜಾತಿಯ ಲೋಕಾಯುಕ್ತರಿದ್ದರೆ ಅವರು ತಮ್ಮ ಮಾತು ಕೇಳಿಲ್ಲ ಅಂದರೂ ತಾವು ದುಡ್ಡು ಕೊಟ್ಟು ಸಾಕುತ್ತಿರುವ ಯಾವುದಾದರೂ ಸ್ವಾಮೀಜಿ ಕಡೆಯಿಂದ ಒತ್ತಡ ತಂದು ಕೇಳುವಂತೆ ಮಾಡಬಹುದು ಅನ್ನುವ ಲೆಕ್ಕಾಚಾರ ಯಡ್ಡಿಯದು.

ಭಾರತ ಕಾಯೋ ಅಣ್ಣಾ... ನೀನೇ ಜನ ಲೋಕಪಾಲ !

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಇದೀಗ ವಿಜಯದ ಹಾದಿಯಲ್ಲಿ ಮುನ್ನಡೆಯುತ್ತಿರುವ ಅಣ್ಣಾ ಹಜಾರೆಯವರಿಂದಾಗಿ ಮುಳುಗುತ್ತಿದ್ದ ದೇಶಕ್ಕೆ ಕೊನೆಗೂ ಒಂದು ಹುಲ್ಲುಕಡ್ಡಿಯ ಆಸರೆ ದೊರೆತಂತಾಗಿದೆ. ಸಾವಿರಾರು ಕೋಟಿಹ ಹಗರಣಗಳನ್ನು ತಡೆದುಕೊಂಡೂ ನಮ್ಮ ದೇಶ ಉಸಿರಾಡುತ್ತಿರುವುದೇ ಒಂದು ಪವಾಡವಾಗಿತ್ತು. ಅತ್ತ ದೇಶವನ್ನು ಅವರು ಕೊಳ್ಳೆ ಹೊಡೆಯುತ್ತಿದ್ದರೆ ಇತ್ತ ರಾಜ್ಯವನ್ನು ಇವರು ದೋಚುತ್ತಿದ್ದಾರೆ. ಆದರೆ ಸಾಮಾನ್ಯ ಜನತೆ ಮಾತ್ರ ಏನೂ ಮಾಡಲಾಗದೇ ರಾಜಕಾರಣಿಗಳ, ಅಧಿಕಾರಿಗಳ ವೈಭೋಗವನ್ನು ನೋಡಿ ವಿಲವಿಲ ಒದ್ದಾಡುವುದಷ್ಟೇ ಕೆಲಸವಾಗಿತ್ತು. ಇತ್ತೀಚಿಗೆ ಜನರೂ ಸಹ ಭ್ರಷ್ಟಾಚಾರಕ್ಕೆ ಎಷ್ಟು ಒಗ್ಗಿ ಹೋಗಿದ್ದರೆಂದರೆ ಪರಮ ಭ್ರಷ್ಟ ಮುಖ್ಯಮಂತ್ರಿಯನ್ನೂ ಸಹ ಸಮರ್ಥಿಸಿಕೊಳ್ಳುವ ಮಟ್ಟಿಗೆ ಜನರ ಮನಸ್ಸು ಒಗ್ಗಿ ಹೋಗಿತ್ತು. ಇತ್ತೀಚಿನ ದಿನಗಳಲ್ಲಂತೂ ಹಗರಣಗಳದ್ದೇ ಸರಮಾಲೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೂರು ಇನ್ನೂರು ಕೋಟಿಗಳನ್ನು ನುಂಗಿ ನೀರು ಕುಡಿಯುತ್ತಿದ್ದರೆ ಅತ್ತ ಸೋನಿಯಾ ಗ್ಯಾಂಗ್ ಸಾವಿರಾರು ಕೋಟಿಗಳನ್ನು ನುಂಗಿ ನೀರೂ ಕುಡಿಯದೇ ಅರಗಿಸಿಕೊಳ್ಳುವ ತಾಕತ್ತನ್ನು ಹೊಂದಿತ್ತು. ಆದುದರಿಂದಲೇ ರಾಜ್ಯ ಮತ್ತು ಕೆಂದ್ರ ಸರ್ಕಾರಗಳೆರಡೂ ಮೇಲಿಂದ ಮೇಲೆ ಹಗರಣಗಳನ್ನು ಮಾಡುತ್ತಲೇ ಸಾಗಿದ್ದವು. ಆದರ್ಶ ಹಗರಣ, ಕಾಮನ್ವೆಲ್ತ್, 2ಜಿ ಹೀಗೆ ಸಾವಿರಾರು ಕೋಟಿಗಳ ಸರಮಾಲೆ ಸಾಗಿತ್ತು. ಇವೆಲ್ಲಾ ತಮ್ಮ ಮೂಗಿನ ಕೆಳಗೇ ನಡೆಯುತ್ತಿದ್ದರೂ ಸಹ ಸೋನಿಯಾ ಮತ್ತು

ಇಸ್ಕಾನ್ ಎಂಬ ಶಾಪಿಂಗ್ ಮಾಲ್

ಮೊನ್ನೆ ಇಸ್ಕಾನ್ ದೇವಸ್ಥಾನಕ್ಕೆ ಗೆಳೆಯರೊಂದಿಗೆ ಅನಿವಾರ್ಯವಾಗಿ ಹೋಗಬೇಕಾಗಿ ಬಂತು. ದ್ವಾರದಲ್ಲೇ ಮೆಟೆಲ್ ಡಿಟೆಕ್ಟರ್‌ನಿಂದ ಪರಿಶೀಲನೆ ನಂತರ ಒಳ ಪ್ರವೇಶಿಸಿ, ಮುಂದೆ ನಡೆದಾಗ ಒಬ್ಬರು ಕರೆದು ನಾಲ್ಕೈದು ಜನರಿಗಾಗಿ ಇರುವ ಟಿಕೇಟೊಂದರ "ಆಫರ‍್" ಬಗ್ಗೆ ಹೇಳಿದರು. ನಂತರ ಒಳಗೆ ಹೋದಾಗ ಅಲ್ಲಲ್ಲಿ "ಜೇಬುಗಳ್ಳರಿದ್ದಾರೆ ಎಚ್ಚರಿಕೆ" ಎಂಬ ಫಲಕ ಕಾಣಿಸಿತು. ದೇವರ ದಶ್ನ ಮುಗಿಸಿ ಹೊರ ಬರುತ್ತಿರುವಾಗ ಎದುರಾಯ್ತು, ಜನ ಜಂಗುಳಿಯ ಒಂದು ವರಾಂಡ. ಅದು ಥೇಟ್ ಚಿಕ್ಕದೊಂದು ಮಾಲ್‌ನಂತೆಯೇ ಇತ್ತು. ಅಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾರುತ್ತಿದ್ದರು. ಬೇಕರಿ ಇತ್ತು. ಪಾನೀಪೂರಿಯಿಂದ ಹಿಡಿದು ತಂಪು ಪಾನೀಯಗಳ ವರೆಗೆ ಎಲ್ಲಾ ದೊರೆಯುತ್ತಿದ್ದವು. ಅವುಗಳನ್ನು ಜನ ಮುಗಿಬಿದ್ದು ಖರೀದಿಸಿ ತಿನ್ನುತ್ತಿದ್ದರು. ಜಾಗವೇ ಇರದಷ್ಟು ಜನ ಸಂದಣಿ. ಅದು ದೇವಸ್ಥಾನದ ಆವರಣ ಅನ್ನುವ ಯಾವ ಛಾಯೆಯೂ ಅಲ್ಲಿರಲಿಲ್ಲ. ಯಾವುದೋ ಫುಟ್‌ಪಾತ್ ಹೋಟೆಲುಗಳ ಸಂದಿಯಲ್ಲಿ ನಾವಿರುವಂತೆ ಕಂಡು ಬಂತು. ಮೇಲಾಗಿ ಅಲ್ಲಿ ಯಲ್ಲಾ ವಸ್ತುಗಳ ಬೆಲೆಯೂ ತುಂಬಾ ದುಬಾರಿಯಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಆ ಆವರಣದಿಮದ ಹೊರಗೆ ಬಂದಾಗ ಉಚಿತವಾಗಿ ಬಿಸಿಬೇಳೆ ಬಾತ್ ವಿತರಿಸುತ್ತಿದ್ದರು. ಒಳಗೆ ಹಣ ತೆತ್ತು ಹೊಟ್ಟೆ ತುಂಬಿಸಿಕೊಂಡು ಬಂದಿರುವ ಬಹುತೇಕ ಮಂದಿ ಇಲ್ಲಿ ಇದನ್ನು ಪಡೆಯುತ್ತಿರಲಿಲ್ಲ. ಅಂತೂ ಹೊರಗೆ ಬಂದಾಗ ಮೂಡಿದ ಒಂದೇ ಪ್ರಶ್ನೆ ... "ಆ ಜೇಬುಗಳ್ಳರು ಯಾರು

ಅನ್ಯಾಯದ ಪರ ನ್ಯಾಯವಾದಿಗಳು ?

ಒಬ್ಬ ವ್ಯಕ್ತಿ ಅಪರಾಧಿ ಎಂದು ತಿಳಿದ ನಂತರವೂ ಅವನ ಪರವಾಗಿ ನಿಂತು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಾಡುವುದು ತಪ್ಪಲ್ಲವೇ? ಇದೊಂದು ಸಂದೇಹ ಹಲವರನ್ನು ಕಾಡದಿರದು. ಒಬ್ಬ ವ್ಯಕ್ತಿ ವಕೀಲರೊಬ್ಬರ ಬಳಿ ಬಂದು `ತಾನೊಂದು ಕೊಲೆ ಮಾಡಿರುವುದಾಗಿ ತಿಳಸಿ ತನ್ನ ಪರವಾಗಿ ನ್ಯಾಯಾಲಯದಲ್ಲಿ ವಾದಾಡಬೇಕೆಂದು ಕೇಳಿದರೆ ಅವನು ಕೊಲೆ ಮಾಡಿರುವುದು ತಿಳಿದೂ ನ್ಯಾಯವಾದಿ ಅವನ ಪರ ವಹಿಸಬಹುದೇ? ಅದು ಎಷ್ಟರ ಮಟ್ಟಿಗೆ ಸರಿ? ಅದು `ನ್ಯಾಯ' ಹೇಗಾಗುತ್ತದೆ? ಅವರು ನ್ಯಾಯವಾದಿ ಹೇಗಾಗುತ್ತಾರೆ? ಎಂಬ ಪ್ರಶ್ನೆ ಪಾಮರರಾದ ನಮ್ಮನ್ನು ಕಾಡದಿರದು. ಇಂತಹ ಪ್ರಶ್ನೆಗೆ ಕೊಂಚ ಸಮಾಧಾನಕರ ಪರಿಹಾರ ನೀಡುವ ಪ್ರಯತ್ನ ಈ ಲೇಖನ. ಇಲ್ಲಿ ನ್ಯಾಯವಾದಿಗಳ `ಕರ್ತವ್ಯ' ಮಾತ್ರ ಪ್ರಧಾನವಾಗುತ್ತದೆ. ಹಾಗೆಯೇ ಅವರು ನ್ಯಾಯವಾದಿಗಳಾಗಿದ್ದರೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಬಂದು `ನಾನೊಂದು ಕೊಲೆ ಮಾಡಿದ್ದೇನೆ. ನನ್ನ ಪರವಾಗಿ ವಾದ ಮಾಡಬೇಕು'. ಎಂದು ಕೇಳಿಕೊಂಡರೆ ನ್ಯಾಯವಾದಿ ಯಾವ ಕಾರಣಕ್ಕೂ ಅವನನ್ನು `ಅಪರಾಧಿ' ಎಂದು ಪರಿಗಣಿಸುವಂತಿಲ್ಲ. ಉದಾ: ಮುಂಬೈ ದಾಳಿಕೋರ ಕಸಬ್ ಪರವಾಗಿ ಸಹ ಒಬ್ಬರು ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಅವನು ಅಪರಾಧಿ ಎಂದು ದೇಶಕ್ಕೆಲ್ಲಾ ತಿಳಿದಿದ್ದರೂ ಸಹ ಅವನ ಪರವಾಗಿ ಒಬ್ಬ ನ್ಯಾಯವಾದಿ ವಾದಿಸಲೇ ಬೇಕಾಗಿತ್ತು. ನಮ್ಮ ದೇಶದ ಕಾನೂನು ಇರುವುದೇ ಹಾಗೆ. ಏಕೆಂದರೆ ಅದನ್ನು ತೀರ್ಮಾನಿಸಬ

ನೀವೆಂತಾ ಅದೃಷ್ಟವಂತರು,

ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ ತವಕ ತರುವುದಿಲ್ಲ ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ ಏಕೆಂದರೆ ನನಗಾವ ಭಾವನೆಗಳೂ ಇಲ್ಲ.

ನಿನ್ನ ಸ್ನೇಹ

ಒಂಟಿತನದ ಬರುಡು ಜೀವನವ ಹಸನು ಮಾಡಿದಂತ ನಿನ್ನ ಸ್ನೇಹ ಹೊಸ ಚೈತನ್ಯ ಮೂಡಿ ಪ್ರಪುಲ್ಲವಾದಂತೆ ಭಾಸ ಒಳಗೇ ರಾಚಿಕೊಂಡಿರುವ ಕತ್ತಲನ್ನು ಹೊಡೆದೋಡಿಸಿದಂತೆ ಜಗತ್ತಿನ ಎಲ್ಲಾ ಬಣ್ಣಗಳ ಬೆಳಕನ್ನು ಎಳೆದುತಂದಂತೆ ಬದುಕಿನ ತುಂಬಾ ಸುಂದರತೆಯನ್ನು ತುಂಬಿದೆ ಹಿಂದಿರುಗಿ ನೋಡಿದರೆ ಜೀವನದಿ ಮೆಲುಕು ಹಾಕಿ ಮೆಲ್ಲಲು ಮಧುರ ಸವಿ ಕ್ಷಣಗಳ ನೀಡಿದೆ ನಿನ್ನ ಜೊತೆ ಹೃದಯ ಒಡ್ಡು ಒಡೆದ ನದಿಯಂತೆ ಜೀಕುವ ಉಯ್ಯಾಲೆಯಂತೆ ಚಿಮ್ಮುವ ಕಾರಂಜಿಯಂತೆ ಪ್ರತಿ ಮುಂಜಾವಿನ ಬೆಳಗು ಹೊಸತರಂತೆ ಹೂನಗೆ ನಕ್ಕು ನಲಿದು ಪಿಸುದನಿಯಲಿ ಉಲಿದಂತೆ. - ಸವಿತ ಸದಾನಂದನ್  

ಯಾವ ನಾಣ್ಯ ಯಾವ ಊರಿನಲ್ಲಿ ತಯಾರಾಗಿದೆ ?

ನಮ್ಮ ದೇಶದಲ್ಲಿ ನಾಣ್ಯಗಳು ನಾಲ್ಕು ಕಡೆಗಳಲ್ಲಿ ತಯಾರಾಗುತ್ತವೆ. ೧. ದೆಹಲಿ ೨. ಮುಂಬೈ ೩. ಹೈದರಾಬಾದ್ ೪. ಕೋಲ್ಕತ್ತಾ ಯಾವ ನಾಣ್ಯ ಯಾವ ಊರಿನಲ್ಲಿ ತಯಾರಾಗಿದೆ ಎಂದು ಕೂಡಾ ಕಂಡು ಹಿಡಿಯಬಹುದು. ಯಾವುದೇ ನಾಣ್ಯದಲ್ಲಿರುವ ಇಸವಿಯ ಕೆಳಗೆ ಚಿಕ್ಕ ಚಿಹ್ನೆಯ ಮೂಲಕ ಇದನ್ನು ತೋರಿಸಲಾಗಿರುತ್ತದೆ. ಅದು ಈ ಕೆಳಗಿನಂತಿರುತ್ತದೆ. ೧. ದೆಹಲಿ = ಒಂದು ಚುಕ್ಕೆ ೨. ಮುಂಬೈ = ವಜ್ರ ದ ಚಿಹ್ನೆ ೩. ಹೈದರಾಬಾದ್ = ನಕ್ಷತ್ರ ೪. ಕೋಲ್ಕತ್ತಾ = ಏನೂ ಇರುವುದಿಲ್ಲ.

ಯಡಿಯೂರಪ್ಪನವರ ಢೋಂಗಿ "ಜನತಾ ದರ್ಶನ"