ಟಿಪ್ಪು ಸುಲ್ತಾನ್ ಮತಾಂಧನಗಿದ್ದ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆತನಿಂದ ನಡೆದ ಹತ್ಯೆಗಳು, ಯುದ್ದಗಳು ಎಲ್ಲದಕ್ಕೂ ಕಾರಣ ಆತನ ರಾಜ್ಯ ವಿಸ್ತರಿಸುವ, ತನ್ನೆದುರು ತಲೆ ಎತ್ತಿ ನಿಂತವರನ್ನು ಬಗ್ಗು ಬಡಿವ ಯುದ್ದೋನ್ಮಾದಗಳೇ ಕಾರಣವಾಗಿತ್ತು. ಈ ಯುದ್ದೋನ್ಮಾದ ಆತನ ತಂದೆ ಹೈದರಾಲಿಯಿಂದ ಬಂದುದು. ಹೈದರಾಲಿ ಮತ್ತು ಟಿಪ್ಪುವಿನ ಆಸ್ಥಾನ ಮಂತ್ರಿ ದಿವಾನ್ ಪೂರ್ಣಯ್ಯ ಒಬ್ಬ ಬ್ರಾಹ್ಮಣರಾಗಿದ್ದರು. ಹೈದರಾಲಿಯ ಕಾಲದಲ್ಲಿ ದುರ್ಗದ ಮದಕರಿ ನಾಯಕನನ್ನೂ ಸೇರಿದಂತೆ, ಪೇಶ್ವೆಗಳು ಮತ್ತು ಕೆಳದಿ, ಶೀರ್ವ, ರಾಮದುರ್ಗ ಮುಂತಾದ ಎಲ್ಲಾ ಹಿಂದು ಪಾಳೆಯಗಾರರನ್ನೂ ರಾಜರುಗಳನ್ನೂ ಸೋಲಿಸಲು ಪೂರ್ಣಯ್ಯನವರ ತಂತ್ರ ಕುತಂತ್ರಗಳೇ ಕಾರಣವಾಗಿದ್ದವು. ಮದಕರಿ ನಾಯಕನ ಮಂತ್ರಿ ಕೂಡಾ ಹೈದರಾಲಿಗೆ ದುರ್ಗದ ರಹಸ್ಯಗಳನ್ನು ಒದಗಿಸಿ ಮದಕರಿಯ ಸೋಲಿಗೆ ಕಾರಣವಾಗುತ್ತಾನೆ. ಹಾಗೆಯೇ ಹೈದರಾಲಿಯ ಮುಸ್ಲಿಂ ಸರ್ದಾರನೊಬ್ಬ ಕೂಡಾ ಮದಕರಿ ನಾಯಕನೊಂದಿಗೆ ಸ್ನೇಹ ಬೆಳೆಸಿ ಹೈದರಾಲಿಗೂ ಮೋಸ ಮಾಡುತ್ತಾನೆ. ಇವೆಲ್ಲಾ ಆಗಿನ ಸಂದರ್ಭದ ಸಹಜ ಘಟನಾವಳಿಗಳು. ಹೈದರಾಲಿಯಂತೆಯೇ ಯುದ್ದೋತ್ಸಾಹ ತೋರುವ ಟಿಪ್ಪು ಅಕ್ಕಪಕ್ಕದ ಪಾಳೆಗಾರರ ಮೇಲೆ ದಂಡೆತ್ತಿ ಹೋಗಿದ್ದರಲ್ಲಿ ಮತ್ತು ಅಲ್ಲಿ ಯುದ್ದ, ಸಾವು ನೋವು ಸಂಭವಿಸಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಹಾಗೆಯೇ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ, ಮಂಡ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಯಥೇಚ್ಚವಾಗಿರಬೇಕಿತ್ತು. ಅಂದು ಹಿಂದು ರಾಜರುಗಳೇ ಹಿಂದು ರಾಜ್ಯಗಳ
ಮನಸು ಹೃದಯಗಳ ಸವಿಮಾತು............