ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಫೇಸ್‌ಬುಕ್‌ ಎಂಬ ಜನಾರಣ್ಯ

ತರಗೆಲೆಯಂತೆ ಉದುರುವ ಪ್ರಕಟಣೆಗಳು.. ಕೆಲವು ಹಸಿ, ಕೆಲವು ಬಿಸಿ ಒಮ್ಮೆ ಘಮಲು ಕೆಲವು ತೊದಲು ಯಾರದೋ ನೋವು ಯಾರದೋ ನಲಿವು ಅಲ್ಲಲ್ಲಿ ಜಾತಿ ಚರ್ಚೆ! ತಿಳುವಳಿಕೆಯದೇ ಕೊಂಚ ಕೊರತೆ! ಹರಿವ ಕವನಗಳ ಸಾಲು ಬರೆದು ತೇಗುವ ತೆವಲು ಶಿಥಿಲಗೊಂಡು ಉರುಳುವ ಸ್ನೇಹಗಳು ಕೆಲವು. ಶಿಲೆಯಂತೆ ಘನವಾಗಿ ನಿಂತ ಬಂಧಗಳು ಹಲವು. ವಿಜ್ಞಾನ ತಂದ ಕೀಲಿಮಣೆಯಲ್ಲಿ ಜ್ಯೋತಿಷ್ಯದ ಅಂಕಿ-ಸಂಕಿ ಇಂಟರ್ನೆಟ್ಟಿನಲೂ ತುಂಬಿಹುದು ಧರ್ಮದ ದುರ್ಗಂಧದಮಲು ! ಹರಟೆಯ ಬರಾಟೆಯಲಿ ಮರೆತ ಸಮಯದ ಕಂದೀಲು ಪ್ರೀತಿ ಪ್ರೇಮದ ನೆಪದಲಿ ಕಾಮ ದಾಹದ ಕೊಯಿಲು ಎಂದೋ ಮರೆತಿದ್ದವರ ಮರಳಿ ನೀ ಪಡೆವೆ.. ಎಂದೂ ತಿಳಿಯದಿದ್ದವರ ಜೊತೆಗೂ ನೀ ಬೆರೆವೆ.. ಫೇಸ್‌ಬುಕ್‌ನ ಓ ಪಯಣವಾಸಿ ನಿನ್ನನೇ ನೀನೆಲ್ಲಿ ಕಳೆದುಕೊಂಡಿರುವೆ ? - ಶ್ರೀಪತಿ ಗೋಗಡಿಗೆ

ಕಪ್ಪು ಶಕ್ತಿ ಮತ್ತು ಕಪ್ಪು ವಸ್ತು !

​ ಯಾವುದೇ ವಸ್ತು ಸೂರ್ಯನ ಹತ್ತಿರ ಅಥವಾ ಉರಿವ ನಕ್ಷತ್ರಗಳ ಹೋದಾಗ ಬಿಸಿಯಾಗುತ್ತದೆ. ಅವುಗಳಿಂದ ದೂರವಾದಾಗ ತಣ್ಣಗಾಗುತ್ತಾ ಹೋಗುತ್ತದೆ. ಹೀಗೆ ಶಾಖದಿಂದ ದೂರ ಹೋದಂತೆಯೇ ವಸ್ತುಗಳನ್ನು ತಣ್ಣಗಾಗಿಸುವ ವಸ್ತುವಾದರೂ ಏನು ? ವಿಜ್ಞಾನಿಗಳು ಇದಕ್ಕೆ ಇತ್ತೀಚಿಗೆ ಉತ್ತರ ಹುಡುಕಿದ್ದಾರೆ. ಅದು ಕಪ್ಪು ವಸ್ತು (ಡಾರ್ಕ್‌ ಮ್ಯಾಟರ್‌). ಇದು ನಮ್ಮ ಕಣ್ಣಿಗೆ ಕಾಣಿಸದಿರುವುದರಿಂದ ಹಾಗೂ ಇದುವರೆಗಿನ ಯಂತ್ರಗಳೂ ಸಹ ಇದನ್ನು ಸ್ಪಷ್ಟವಾಗಿ ಗುರುತಿಸಲು ಅಸಾಧ್ಯವಾಗಿರುವುದರಿಂದ ಇದನ್ನು 'ಡಾರ್ಕ್‌ ಮ್ಯಾಟರ್‌' ಎಂದು ಕರೆಯುತ್ತಿದ್ದಾರೆ. ಇದು ವಿಶ್ವದ ಒಟ್ಟು ವಸ್ತುವಿನಲ್ಲಿ ಶೇ ೨೬% ಇದೆಯಂತೆ. ನಮ್ಮ ಕಣ್ಣಿಗೆ ಗೋಚರವಾಗುವ ನಕ್ಷತ್ರ, ಗ್ರಹ ಇತ್ಯಾದಿಗಳ ಪ್ರಮಾಣ ೪% ಭಾಗದಷ್ಟು ಮಾತ್ರ . ಹಾಗಿದ್ದರೆ ಉಳಿದ ೭೦% ಭಾಗ ಏನಿದೆ ? ಅದು ಕಪ್ಪು ಶಕ್ತಿ ! ಈ ಡಾಕ್‌ ಮ್ಯಾಟರ್‌ ಅಲ್ಲದೇ ವಿಶ್ವವನ್ನು ನಿಯಂತ್ರಿಸುತ್ತಿರುವ ಮತ್ತೊಂದು ಅದೃಶ್ಯ ಶಕ್ತಿಯಿದೆ. ಇದರ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯದೇ ಇರುವುದರಿಂದ ಇದನ್ನು ಕಪ್ಪು ಶಕ್ತಿ (ಡಾರ್ಕ್‌ ಎನರ್ಜಿ) ಎಂದು ಕರೆಯುತ್ತಿದ್ದಾರೆ. ಇವೆರಡೂ ಸೇರಿಕೊಂಡು ಇಡೀ ವಿಶ್ವವನ್ನು ಬಂಧಿಸಿಟ್ಟಿವೆ. ಗೆಲಾಕ್ಸಿಗಳೂ ಸಹ ಕಪ್ಪುಶಕ್ತಿಯ ಕಲಸುಮೆಲೋಗರಗೊಂಡ ಬಲೆಯಂತಹ ಸ್ಥಿತಿಯೊಳಗೆ ಸಿಕ್ಕಿಕೊಂಡಿದೆ. ಈ ಶಕ್ತಿ ಗೆಲಾಕ್ಸಿಗಳನ್ನು ದೂರ ದೂರ ತಳ್ಳುತ್ತಾ ವಿಶ್ವವನ್‌ಉ ಹಿಗ್ಗಿಸುತ್ತಿದೆ ಎಂಬ ವಾದವೂ ಇದೆ. ಒಟ್ಟಿನಲ್ಲಿ ಖಗ

ತಾನೊಂದು ಬಗೆದರೆ....

​ ನಾನು ಇಪ್ಪತ್ತು ವರ್ಷದವನಿದ್ದಾಗ ಚೆನ್ನೈ ಸಮೀಪದ ವೆಳ್ಳವೇಡು ಎಂಬ ಸ್ಥಳದಲ್ಲಿ ಪೋಟೋ ಸ್ಟುಡಿಯೋ ಹಾಕಿದ್ದೆ. ಹೆದ್ದಾರಿ ಪಕ್ಕದಲ್ಲಿದ್ದರೂ ಆ ಊರಿಗೆ ಪೋಟೋ ಸಟುಡಿಯೋ ಅಂತ ಬಂದಿದ್ದು ಅದೇ ಮೊದಲು. (ಇದರ ಪೂರ್ಣ ಕತೆ ಬರೆದರೆ ಒಂದು ಹಾಸ್ಯ ಪ್ರಬಂಧವೇ ಆಗುತ್ತದೆ.)  ಒಂದು ದಿನ ವ್ಯಕ್ತಿ ಬಂದು ತಮ್ಮೂರಿನಲ್ಲಿ ಸಟುಡಿಯೋ ಹಾಕಿದ್ದಕ್ಕೆ ಸಂತೋಷದಿಂದ ಕೃತಜ್ಞತೆ ಹೇಳಿ 'ತುಂಬಾ ಅನುಕೂಲವಾಯಿತು. ಇಲ್ಲಾಂದರೆ ಯಾವುದಾದರೂ ಕಾರ್ಯಕ್ರಮ ನಡೆದರೆ ದೂರದಿಂದ ಕ್ಯಾಮೆರಾಮೆನ್‌ ಕರೆಸಬೇಕಿತ್ತು. ಚಿಕ್ಕ ಪುಟ್ಟ ಕಾರ್ಯಗಳಿಗೆ ದೂರ ಅಂತ ಅವರೂ ಬರುತ್ತಿರಲಿಲ್ಲ.' ಎಂದೆಲ್ಲಾ ಹೇಳಿ ಕೊನೆಗೆ 'ತನಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತು ಗಂಡು. ದೊಡ್ಡವಳು ಇನ್ನೇನು ವಯಸ್ಸಿಗೆ ಬರುವವಳಿದ್ದಾಳೆ, ಪೂ ಪೂಕ್ಕುಂ ವಿಳಾಗೆ (ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ತಮಿಳುನಾಡಲ್ಲಿ ಬಡವರಾದರೂ ಸಹ ಸ್ವಲ್ಪ ಅದ್ದೂರಿಯಾಗಿಯೇ ಕಾರ್ಯಕ್ರಮ ಮಾಡುತ್ತಾರೆ.) ಬಂದು ಒಳ್ಳೊಳ್ಳೆ ಫೋಟೋ ತೆಗೆದು ಕೊಡು. ನಂತರ ಮದುವೆಗೂ ನೀನೇ ಬರುವಂತೆ' ಎಂದು ಹೇಳಿ ಹೋದ. ನನ್ನ ಸ್ಟುಡಿಯೋ ಎದುರು ರಸ್ತೆ. ಮತ್ತು ರಸ್ತೆಯನ್ನು ದಾಟಿದರೆ ಪೊಲೀಸ್‌ ಠಾಣೆ ಇತ್ತು. ಸುಮಾರು ದಿನಗಳ ನಂತರ ಒಬ್ಬ ಪೇದೆ ಬಂದು 'ಆಕ್ಸಿಡೆಂಟ್‌ ಆಗಿದೆ ಬಾ' ಎಂದು ಕರೆದ. ಅದು ವಿಭಾಗ ಮಾಡಿರದ ಹೆದ್ದಾರಿಯಾದುದರಿಂದ ತಿಂಗಳಿಗೆ ಒಂದಾದರೂ ಪ್ರಾಣಹಾನಿಯ ದುರಂತಗಳು ನಡೆಯುತ್ತಿದ್ದವು. ಕ್ಯಾಮೆರಾ ಬ