ಬಿಜೆಪಿ ಸುಧಾರಿಸುವಂತೆ ಕಾಣಿಸುತ್ತಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿದ್ಧಯ್ಯ ಅವರನ್ನು ಎತ್ತಂಗಡಿ ಮಾಡಲು ತಯಾರಿ ನಡೆಸಿದ್ದಾರೆ ಯಡಿಯೂರಪ್ಪ. ಇದಕ್ಕೆ ಕಾರಣ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಮಿಷನ್ ಕಡಿಮೆ ಆಗಿರುವುದು. ವಾಸ್ತವ ಏನೆಂದರೆ ಈ ವರ್ಷದಲ್ಲಿ ಅಧಿಕಾರಿಗಳು ಪಟ್ಟಿ ಮಾಡಿದ್ದ "ಅಭಿವೃದ್ಧಿ" ಕೆಲಸಗಳಲ್ಲಿ ಸುಮಾರು ಸಾವಿರದಷ್ಟನ್ನು ಸಿದ್ದಯ್ಯ "ಅನಗತ್ಯ ಖರ್ಚು" ಎಂದು ತೆಗೆದು ಹಾಕಿದ್ದಾರೆ. ಅವು ಎಂತಹ ಕೆಲಸಗಳೆಂದರೆ, ಚೆನ್ನಾಗಿದ್ದ ರಸ್ತೆ ಮೇಲೆ ಮತ್ತೆ ಡಾಂಬರು ಹಾಕುವುದು, ಕಲ್ಲು ಹಾಸಿನ ಫೂಟ್ಪಾತ್ ತೆಗೆದು ಟೈಲ್ ಹಾಕುವುದು ಇತ್ಯಾದಿ. ಆದರೆ ಇದರಿಂದ ನಮ್ಮ ಅಭಿವೃದ್ಧಿ ಶೂರರಿಗೆ ಕಮಿಷನ್ ಹೋಯ್ತು ಅಂತ ಹೊಟ್ಟೆ ಉರಿ. ಕೂಡಲೇ ಸಿದ್ಧಯ್ಯ ಅವರ ಮೇಲೆ "ಅಭಿವೃದ್ಧಿ ವಿರೋಧಿ" ಹಣೆಪಟ್ಟಿ ಕಟ್ಟಿಯೇ ಬಿಟ್ಟಿದ್ದಾರೆ. ಎಸ್.ಕೆ. ನಟರಾಜ್ ಎಂಬ ಆಸಾಮಿ ಅರಚಾಡಿ ಆಗಿದೆ. ಈಗ ಭ್ರಷ್ಟರ ಪಾಲಿನ ಆರಾಧ್ಯ ದೈವ ಯಡ್ಡಿ ಸಿದ್ದಯ್ಯ ಅವರ ಎತ್ತಂಗಡಿಗೆ ಮುಹೂರ್ತ ಇಟ್ಟಿದ್ದಾರಂತೆ. ಇದು ಬಿಜೆಪಿ ಮತ್ತೊಂದು ಅಭಿವೃದ್ಧಿ ಮಂತ್ರ.
ಮನಸು ಹೃದಯಗಳ ಸವಿಮಾತು............