ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

'ಜೈಲ್‌ಭರೋಗೆ ಸಿದ್ದರಾಗಿ' - ಅಣ್ಣಾ ಹಜಾರೆ

ನಿನ್ನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಣ್ಣಾ ಹಜಾರೆ ಅವರ ಮತ್ತು ಸಂಗಡಿಗರ ಬಹಿರಂಗ ಸಭೆ ಇತ್ತು. ಅಣ್ಣಾ ಅವರೊಂದಿಗೆ ಅರವಿಂದ್ ಕೇಜ್ರೀವಾಲ್, ಸ್ವಾಮಿ ಅಗ್ನಿವೇಶ್ ಮತ್ತು ಕಿರಣ್ ಬೇಡಿ ಮತ್ತು ಮಾಸ್ಟರ‍್ ಹಿರಣ್ಯಯ್ಯ ಅವರು ಭಾಗವಹಿಸಿದ್ದರು. ಇವರೆಲ್ಲರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದಂತಿದ್ದವು. ಆದರೆ ಈ ಬಹಿರಂಗ ಸಭೆಗೆ ಆಗಮಿಸಿದ ಜನಸಂಖ್ಯೆ ಅಷ್ಟೇನೂ ಖುಷಿ ಪಡುವಂತಿರಲಿಲ್ಲ. ದೇಶದ ಪ್ರಮುಖ ಸಮಸ್ಯೆಯಾದ "ಭ್ರಷ್ಟಾಚಾರ"ದ ಬಗ್ಗೆ ಜನ ನೀರಸ ಪ್ರತಿಕ್ರಿಯೆ ತೋರಿದ್ದು ಭಾರತದ ದುರ್ದೈವವೇ ಸರಿ. ಆದರೂ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಯಾವುದೇ ಆಮಿಷವಿಲ್ಲದೇ ಆಗಮಿಸಿದ್ದರು ಎಂಬುದೇ ಸಂತೋಷದ ವಿಷಯ. ಕಿರಣ್ ಬೇಡಿಯವರ ಮಾತುಗಳು ವಜ್ರದ ಹರಳಿನಷ್ಟು ಮೊನಚಾಗಿದ್ದವು. ಅರವಿಂದ್ ಕೇಜ್ರೀವಾಲ್ ಅವರು ಜನಲೋಕಪಾಲ ಮಸೂದೆಯ ಬಗ್ಗೆ ವಿವರಿಸಿದರು. ಹಿರಣ್ಯಯ್ಯನವರು ತಮ್ಮ "ಲಂಚಾವತಾರ" ನಾಟಕದ ಹಿನ್ನೆಲೆಯನ್ನು ಮತ್ತು ಅದರಿಂದ ತಮಗೆ ಎದುರಾದ ಕಷ್ಟಗಳನ್ನು ವಿವರಿಸಿದರು. ಆಗಸ್ಟ್ ೧೫ರೊಳಗೆ ಜನಲೋಕಪಾಲ್ ಮಸೂದೆಯನ್ನು ಸಂಸತ್ತು ಅಂಗೀಕರಿಸದೇ ಹೋದರೆ ಮತ್ತೆ ತಾವು ಜಂತರ‍್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಕೂರುವುದಾಗಿಯೂ, ಆಗ ದೇಶವಾಸಿಗಳು ಎಲ್ಲೆಡೆ "ಜೈಲ್ ಭರೋ" ಚಳುವಳಿ ಪ್ರಾರಂಭಿಸಬೇಕು ಎಂದು ಅಣ್ಣಾ ಕರೆ ಕೊಟ್ಟರು. ಈ ಸಭೆಗೆ ಸಂತೋಷ್ ಹೆಗಡೆಯವರು ಬಾರದಿದ್ದುದು ಹಲವರಿಗೆ ಬೇಸರ ಮ

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ

ಸುಳ್ಳು ಹೇಳದೋರ್ ಯಾರ್ ಅವ್ರೇ ?

ವೈದ್ಯರೊಂದಿಗೆ ಮತ್ತು ನ್ಯಾಯವಾದಿಯೊಂದಿಗೆ ಸುಳ್ಳು ಹೇಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಜನ ಎಲ್ಲರೊಂದಿಗೂ ಸುಳ್ಳು ಹೇಳಿ ದಕ್ಕಿಸಿಕೊಳ್ಳುತ್ತಾರೆ. ಸುಳ್ಳುಗಾರರನ್ನು ಜನರು ಬೈಯ್ಯುತ್ತಾರೆ. ಹೀಯಾಳಿಸುತ್ತಾರೆ; ಕೀಳಾಗಿ ಕಾಣುತ್ತಾರೆ. ಅವರನ್ನು ನಂಬದಿರುವಂತೆ ಬೇರೆಯವರಿಗೆ ಸಲಹೆ ನೀಡುತ್ತಾರೆ; ಹಣ ಮುಂತಾದ ಕೆಲ ವಿಚಾರಗಳಲ್ಲಂತೂ ಸುಳ್ಳು ಹೇಳುವವರನ್ನು ಯಾರೂ ನಂಬುವುದೇ ಇಲ್ಲ. ವಿಚಿತ್ರವೆಂದರೆ  ಎಲ್ಲರೂ ಒಂದಿಲ್ಲೊಂದು ಸಮಯದಲ್ಲಿ ಸುಳ್ಳು ಹೇಳಿಯೇ ಇರುತ್ತಾರೆ. ಅದು ಉತ್ತಮ ಕಾರಣಕ್ಕೇ ಇರಬಹುದು ಅಥವಾ ಕೃತ್ರಿಮ ಕಾರಣಕ್ಕೇ ಇರಬಹುದು, ಆದರೆ ಸುಳ್ಳು ಮಾತ್ರ ಸರ್ವಾಂತರ್ಯಾಮಿ ! ನಾವು ಯಾವುದಾದರೂ ಸಂದಿಗ್ಥ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತೇವೆ. ಆದರಿಂದ ಪಾರಾಗಲು ಯಾವ ದಾರಿಯೂ ತೋರದಿದ್ದಾಗ ತಟ್ಟನೆ ಒಂದು ಪರಮ ಸುಳ್ಳನ್ನು ಹೇಳಿದರೆ ಆ ತಾಪತ್ರಯದಿಂದ ಪಾರು! ಸುಳ್ಳು ಹೇಳಿದರೂ ನಂಬುವಂತಿಬೇಕೆಂದು ಸುಳ್ಳಿನ ಪರ ವಹಿಸುವವರೂ ಇದ್ದಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಇವರು ಸುಳ್ಳು ಹೇಳಬಲ್ಲರು. ಕೆಲವರು ಬಾಯಿ ಬಿಟ್ಟರೆ ಬರುವುದೆಲ್ಲಾ ಸುಳ್ಳೇ ಆಗಿದ್ದರೆ, ಇನ್ನು ಕೆಲವರು ಬಾಯಿ ಬಿಡುವ ಮೊದಲೇ ತಿಳಿದು ಹೋಗುತ್ತದೆ, ಏನೋ ಮಹಾನ್ ಸುಳ್ಳು ಹೇಳಲಿದ್ದಾನೆ ಎಂದು. ಸುಳ್ಳು ಹೇಳಿಕೊಂಡೇ ಕೆಲವರು ಜೀವನ ಸಾಗಿಸುವವರೂ ಇದ್ದಾರೆ. ಕೆಲವರು ತಾವು ಹೇಳುವ ಸುಳ್ಳನ್ನು ಎದುರಿನವರು ನಂಬಲಿ ಎಂದು ಈ ವಿಷಯ ದೇವರಾಣೆ ಸತ್ಯ ಎಂದೋ, ತಾಯಿ ಮೇಲಾಣೆ ಎಂದ