ನಿನ್ನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಣ್ಣಾ ಹಜಾರೆ ಅವರ ಮತ್ತು ಸಂಗಡಿಗರ ಬಹಿರಂಗ ಸಭೆ ಇತ್ತು. ಅಣ್ಣಾ ಅವರೊಂದಿಗೆ ಅರವಿಂದ್ ಕೇಜ್ರೀವಾಲ್, ಸ್ವಾಮಿ ಅಗ್ನಿವೇಶ್ ಮತ್ತು ಕಿರಣ್ ಬೇಡಿ ಮತ್ತು ಮಾಸ್ಟರ್ ಹಿರಣ್ಯಯ್ಯ ಅವರು ಭಾಗವಹಿಸಿದ್ದರು. ಇವರೆಲ್ಲರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದಂತಿದ್ದವು. ಆದರೆ ಈ ಬಹಿರಂಗ ಸಭೆಗೆ ಆಗಮಿಸಿದ ಜನಸಂಖ್ಯೆ ಅಷ್ಟೇನೂ ಖುಷಿ ಪಡುವಂತಿರಲಿಲ್ಲ. ದೇಶದ ಪ್ರಮುಖ ಸಮಸ್ಯೆಯಾದ "ಭ್ರಷ್ಟಾಚಾರ"ದ ಬಗ್ಗೆ ಜನ ನೀರಸ ಪ್ರತಿಕ್ರಿಯೆ ತೋರಿದ್ದು ಭಾರತದ ದುರ್ದೈವವೇ ಸರಿ. ಆದರೂ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಯಾವುದೇ ಆಮಿಷವಿಲ್ಲದೇ ಆಗಮಿಸಿದ್ದರು ಎಂಬುದೇ ಸಂತೋಷದ ವಿಷಯ. ಕಿರಣ್ ಬೇಡಿಯವರ ಮಾತುಗಳು ವಜ್ರದ ಹರಳಿನಷ್ಟು ಮೊನಚಾಗಿದ್ದವು. ಅರವಿಂದ್ ಕೇಜ್ರೀವಾಲ್ ಅವರು ಜನಲೋಕಪಾಲ ಮಸೂದೆಯ ಬಗ್ಗೆ ವಿವರಿಸಿದರು. ಹಿರಣ್ಯಯ್ಯನವರು ತಮ್ಮ "ಲಂಚಾವತಾರ" ನಾಟಕದ ಹಿನ್ನೆಲೆಯನ್ನು ಮತ್ತು ಅದರಿಂದ ತಮಗೆ ಎದುರಾದ ಕಷ್ಟಗಳನ್ನು ವಿವರಿಸಿದರು. ಆಗಸ್ಟ್ ೧೫ರೊಳಗೆ ಜನಲೋಕಪಾಲ್ ಮಸೂದೆಯನ್ನು ಸಂಸತ್ತು ಅಂಗೀಕರಿಸದೇ ಹೋದರೆ ಮತ್ತೆ ತಾವು ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಕೂರುವುದಾಗಿಯೂ, ಆಗ ದೇಶವಾಸಿಗಳು ಎಲ್ಲೆಡೆ "ಜೈಲ್ ಭರೋ" ಚಳುವಳಿ ಪ್ರಾರಂಭಿಸಬೇಕು ಎಂದು ಅಣ್ಣಾ ಕರೆ ಕೊಟ್ಟರು. ಈ ಸಭೆಗೆ ಸಂತೋಷ್ ಹೆಗಡೆಯವರು ಬಾರದಿದ್ದುದು ಹಲವರಿಗೆ ಬೇಸರ ಮ
ಮನಸು ಹೃದಯಗಳ ಸವಿಮಾತು............