ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ನಾಡಿನ ಕಲಿ ಸಂಗೊಳ್ಳಿ ರಾಯಣ್ಣ

ಈ ಹೆಸರು ಕೇಳಿದರೇನೇ ಎಂತವರ ಮೈಯ್ಯಲ್ಲೂ ಒಂದು ಮಿಂಚಿನ ಸಂಚಾರವಾಗುತ್ತದೆ. ರಾಯಣ್ಣ ಅನ್ನುವುದು ಒಂದು ವ್ಯಕ್ತಿಯಲ್ಲ, ಅದೊಂದು ಈ ಕರುನಾಡಿನಲ್ಲಿ ಹುಟ್ಟಿದ ಮಹಾನ್‌ ಶಕ್ತಿ. ಅಂದು ಬ್ರಿಟೀಷರು ರಾಯಣ್ಣನ ಹೆಸರು ಕೇಳಿದರೇನೇ ನಡುಗುತ್ತಿದ್ದರು. ರಾಯಣ್ಣನ ಹೆಸರು ಕೇಳಿದರೆ ಅವರ ಮೈಯ್ಯಲ್ಲಿ ಕಂಪನ ಶುರುವಾಗುತ್ತಿತ್ತು. ರಾಯಣ್ಣನಿಂದಾಗಿ ಬ್ರಿಟಿಷರು ಕಿತ್ತೂರಿನ ಕಡೆ ಕಾಲಿಡಲೂ ಹೆದರುವ ಕಾಲವೊಂದಿತ್ತು. ಅದು ರಾಯಣ್ಣನ ಶಕ್ತಿ ಮತ್ತು ಯುಕ್ತಿಯ ಹೆಚ್ಚುಗಾರಿಕೆ. ರಾಯಣ್ಣ ಹುಟ್ಟಿದ್ದು ೧೭೯೮ ರ ಆಗಷ್ಟ್‌ ೧೫ ರಂದು ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ. ರಾಯಣ್ಣನ ಹಿರಿಯರು ಕಿತ್ತೂರು ಸಂಸ್ಥಾನದ ಅರಮನೆಗಳಲ್ಲಿ ವಾಲೇಕಾರ ಕೆಲಸ ಮಾಡುತ್ತಾ ಬಂದವರು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರೆ. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿಯಾಗಿದ್ದ. ಊರೊಳಗೆ ನುಗ್ಗಿ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಯೊಂದನ್ನು ಹೊಡೆದು ಹಾಕಿದ ಸಾಹಸಿ ಬರಮಣ್ಣ! ಅವರ ಆ ಸಾಹಸಕ್ಕೆ ಮೆಚ್ಚಿ ರಾಜರು "ರಕ್ತ ಮಾನ್ಯದ ಹೊಲ"ವನ್ನು ಬಳುವಳಿ ನೀಡಿದ್ದರು. ಅದಲ್ಲದೇ ಬರಮಣ್ಣ ಸಂಗೊಳ್ಳಿಯ ಗರಡಿ ಮನೆಯ ಗಟ್ಟಿ ಕಟ್ಟಾಳು ಕೂಡಾ ಆಗಿದ್ದರು. ಅಂತಹ ಅಂಜದೆಯ ಗಂಡಿನ ಮಗನಾಗಿ ಹುಟ್ಟಿದ ರಾಯಣ್ಣ ನೂರೆದೆಯ ಸಾಹಸಿಯಾಗಿದ್ದ. ಇತ್ತ ಕಿತ್ತೂರಿನ ದೊರೆ ಮಲ್ಲಸರ್ಜನು ಮರಾಠಿ ಪೇಶ್ವೆಗಳ ಮೋಸದ ಬಲೆಗೆ ಸಿಕ್ಕು ಸಾವಿಗೆ ಈಡ

ಮಳೆ ಶುಭವೋ ಅಶುಭವೋ ?

ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು. ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ ! ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು. ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ? ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರ

ಗುಬ್ಬಿ ಗೂಡು ಮತ್ತು ಅನಾಥ ಮರಿ !

ಆಗ ನಾನು ಕುಂಬಳಗೊಡಿನ ಪೆಪ್ಸಿ ಕಂಪನಿಯ ಸಮೀಪ ಮನೆ ಮಾಡಿಕೊಂಡಿದ್ದೆ. ಆ ಮನೆಯ ಹೊರಗಿನ ಒಂದು ಮೂಲೆಯಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ಇದ್ದವು. ಅವು ಮೊಟ್ಟೆ ಇಟ್ಟು ಮರಿಯನ್ನೂ ಮಾಡಿದವು. ಅದೇ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೆ ಇದ್ದ ನನ್ನ ಗೆಳೆಯನ ಮೆಯವರು ಅವರ ಗೋಡೌನ್‌ ಸ್ವಚ್ಚ ಮಾಡುವಾಗ ಅಲ್ಲಿಯೂ ಒಂದು ಗುಬ್ಬಿ ಗೂಡು ಇದ್ದು, ಅದರಲ್ಲೂ ಎರಡು ಮರಿಗಳು ಇದ್ದವು. ಆದರೆ ಅವರು ನೋಡದೇ ಎಳೆದು ಹಾಕಿದ್ದರಿಂದ ಬಿದ್ದು ಒಂದು ಮರಿ ಸತ್ತು ಹೋಗಿ ಮತ್ತೊಂದು ಮರಿ ಮಾತ್ರ ಉಳಿಯಿತು. ಅದನ್ನು ಅವನು ತಂದು ನನಗೆ ಕೊಟ್ಟ. ನಾನದನ್ನು ನಮ್ಮ ಮನೆಯಲ್ಲಿ ಇದ್ದ ಗುಬ್ಬಿ ಗೂಡಿನ ಒಳಗೆ ಇದನ್ನೂ ಬಿಟ್ಟೆ. ಮೂರೂ ಮರಿಗಳೂ ಒಂದೇ ತರ ಇದ್ದವು. ಮೂರೂ ಕಣ್ಣು ಕೂಡಾ ಬಿಟ್ಟಿರಲಿಲ್ಲ. ಆದರೆ ಹೊರಗೆ ಹೋಗಿದ್ದ ತಾಯಿ ಗುಬ್ಬಿ ಬಂದು ತನ್ನ ಮರಿಗಳ ಜೊತೆ ಬೇರೆ ಮರಿಯೊಂದು ಇರುವುದನ್ನು ಹೇಗೋ ಗುರುತಿಸಿ ಅದನ್ನು ಎಳೆದು ಹೊರಗೆ ಹಾಕಿತು. ಅದು ಹೀಗೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ನಾನು ಆ ಗೂಡಿನ ನೇರಕ್ಕೆ ಗೋಣಿಚೀಲಗಳನ್ನೆಲಾ ಹಾಕಿ ಮೆತ್ತೆ ಮಾಡಿ ಇಟ್ಟಿದ್ದೆ, ಮರಿ ಬಿದ್ದರೂ ಏನೂ ಆಗಬಾರದು ಅಂತ. ತಾಯಿ ಗುಬ್ಬಿ ಹೊರಗೆ ಹೋದಾಗ ಮತ್ತೆ ಆ ಮರಿಯನ್ನು ಗೂಡಿನೊಳಗೆ ಬಿಟ್ಟರೂ ಮತ್ತೊಮ್ಮೆ ಬಂದಾಗ ಮತ್ತೆ ಹೊರಗೆ ತಳ್ಳಿತು. ಬೇರೆ ದಾರಿ ಕಾಣದೇ ಅನಾಥ ಮರಿಯನ್ನು ತಂದು ಮನೆಯ ಒಳಗೆ ಒಂದು ಮೂಲೆಯಲ್ಲಿ ಗೂಣಿಚೀಲವನ್ನೇ ಗೂಡಿನಂತೆ ಮಾಡಿ ನೀರು ಕುಡಿಸಿ ಮರಿಯನ್ನು ಅಲ

ರಾಜ್ ವಿಷ್ಣು ನಡುವೆ ತಡೆಯಾಗಿ ನಿಂತವರು ಯಾರು ?

ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಅಮೋಘ ನಟನೆಯ ಮುತ್ತಿನ ಹಾರ ಚಿತ್ರದಲ್ಲಿ ಒಂದು ಹಾಡು ಬರುತ್ತದೆ, "ದೇವರು ಹೊಸೆದಾ ಪ್ರೇಮದ ದಾರಾ..." ಅಂತ. ನನಗೆ ಈ ಹಾಡನ್ನು ಕೇಳುವಗೆಲ್ಲ ಅನ್ನಿಸೋದು, ಇದನ್ನು ಅಣ್ಣೋರು ಹಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ. ಬಾಲ ಮುರುಳಿ ಕೃಷ್ಣ ಅವರು ಹಾಡಿದ್ದು ಚೆನ್ನಾಗಿದೆ ಆದರೂ ಅದನ್ನು ರಾಜ್ ರಿಂದ ಹಾಡಿಸಿದ್ದರೆ ಕನ್ನಡದಲ್ಲಿ ಮತ್ತೊಂದು ಅಪೂರ್ವ ಸಂಗಮ ಆದಂತೆ ಇರುತ್ತಿತ್ತು. ಅದಾಗಲೇ ರಾಜ್ ಬೇರೆ ನಾಯಕರಿಗೆ ಆಗೊಂದು ಈಗೊಂದು ಹಾಡುಗಳನ್ನು ಹಾಡುತ್ತ ಇದ್ದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪ್ರಜಾವಾಣಿ ಯಲ್ಲಿ ಆ ಚಿತ್ರದ ನಿರ್ಮಾಣದ ಬಗ್ಗೆ ಬರೆದಿದ್ದರು, ಅದರಲ್ಲಿ ಕಷ್ಟ ಪಟ್ಟು ಹೈದರಾಬಾದ್ ಹೋಗಿ ಬಾಲ ಮುರುಳಿ ಕೃಷ್ಣ ಅವರ ಹತ್ತಿರ ಹಾಡಿಸಿದೆವು ಅಂತ ಬರೆದಿದ್ದರು. ಆದರೆ ಎಲ್ಲಿಯೂ ರಾಜ್ ರಿಂದ ಅದನ್ನು ಹಾಡಿಸಬಹುದೇ ಎಂಬುದರ ಬಗ್ಗೆ ಯೋಚಿಸಿದ ಪ್ರಸ್ತಾಪವೇ ಇರಲಿಲ್ಲ! ಯಾಕೆ ಅಷ್ಟು ದೊಡ್ಡ ನಿರ್ದೇಶಕರಿಗೆ ಅಂತಹ ಯೋಚನೆ ಬರಲಿಲ್ಲ ಅಂತ ಆಶ್ಚರ್ಯ ಆಗುತ್ತದೆ. ಒಂದು ವೇಳೆ ಬಾಬು ಮತ್ತು ವಿಷ್ಣು ಇಬ್ಬರೂ ಹೋಗಿ ರಾಜ್ ರಲ್ಲಿ ಕೇಳಿಕೊಂಡಿದ್ದರೆ ರಾಜ್ ಹಾಡಲು ಒಪ್ಪದೇ ಇರುತ್ತಿರಲಿಲ್ಲ. ಸಂಗೀತ ನಿರ್ದೇಶಕ ಹಂಸಲೇಖ ಕೂಡ ಅದಾಗಲೇ ರಾಜ್ ಬ್ಯಾನರ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ನಿರ್ದೇಶಕರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ಡಾ. ರಾಜ್ ಮತ್ತೆ ವಿಷ್ಣುವರ್ಧನ್ ಗಂಧದ