ಬಿಹಾರ ಚುನಾವಣೆಯಲ್ಲಿ ನನ್ನ ನೆಚ್ಚಿನ ನಿತೀಶ್ ಕುಮಾರ್ ಜಯ ಗಳಿಸಲಿ ಎಂದು ಆಸಿಸುವೆ. ನಿತೀಶ್ ಬರುವ ಮೊದಲು ಬಿಹಾರ ಕೆಟ್ಟು ಕೆರ ಹಿಡಿದು ಹೋಗಿತ್ತು. ಲಾ & ಆರ್ಡರ್ ಮಣ್ಣು ಪಾಲಾಗಿತ್ತು. ಸ್ವತಃ ಪೊಲೀಸರೇ ದರೋಡೆ, ಅತ್ಯಾಚಾರಕ್ಇಳಿದ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದವು. ದೂರದ ಕರ್ನಾಟಕದ ಪತ್ರಿಕೆಗಳಲ್ಲೂ ದಿನ ನಿತ್ಯ ಬಿಹಾರದ ಒಂದಿಲ್ಲೊಂದು ಸಮಾಜ ಘಾತಕದ ಸುದ್ದಿ ಇದ್ದೇ ಇರುತ್ತಿತ್ತು. ಹಾಗೆಯೇ ಅಲ್ಲಿನ ಅರಾಜಕತೆಯಿಂದ ಬೇಸತ್ತು ಮತ್ತು ಕೆಲಸವೇ ಇಲ್ಲದೇ ಲಕ್ಷಾಂತರ ಜನರು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸ ಬಂದು ಇಲ್ಲಿನ ಸ್ಥಳೀಯರ ಸಮಸ್ಯೆಯನ್ನು ಹೆಚ್ಚಿಸಿದ್ದರು. ಆದರೆ ನಿತೀಶ್ಕುಮಾರ್ ಮುಖ್ಯಮಂತ್ರಿಯಾದ ನಂತರ ಬಿಹಾರದ ಚಿತ್ರಣವನ್ನೇ ಬದಲಿಸಿದರು. ಅಲ್ಲಿ ಮೊದಲು ಲಾ & ಆರ್ಡರ್ ಸರಿಪಡಿಸಲಾಯ್ತು. ನಂತರ ಚಿಕ್ಕಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲಾಯ್ತು. ಅಲ್ಲಿ ಯಾವ ಮಟ್ಟಿಗೆ ಬದಲಾವಣೆ ಆಯ್ತು ಎಂದರೆ ವಲಸೆ ಬಂದ ಬಿಹಾರಿಗಳಿಂದಲೇ ನಡೆಯುತ್ತಿದ್ದ ಬೆಂಗಳೂರಉ ಚೆನ್ನೈನಂತಹ ನಗರಗಳ ಬೃಹತ್ ಕಟ್ಟಡಗಳ ಕೆಲಸಕ್ಕೆ ಕ್ರಮೇಣ ಬಿಹಾರಿಗಳ ಕೊರತೆ ಎದುರಾಯ್ತು. (ಈಗ ಅವರ ಜಾಗದಲ್ಲಿ ಉತ್ತರ ಪ್ರದೇಶದವರೂ, ಹರಿಯಾಣ, ಒಡಿಶಾ, ಆಂಧ್ರದವರೂ ತುಂಬಿಕೊಂಡಿದ್ದಾರೆ). ಒಬ್ಬ ಮುಖ್ಯಮಂತ್ರಿ ಮಾಡಬೇಕಾದ ಕೆಲಸವೇ ಅದು. ಈ ಕಾರಣಕ್ಕೆ ನಿತೀಶ್ ನನಗೆ ಇಷ್ಟವಾಗುತ್ತಾರೆ, ಅದಕ್ಕಿಂತ ಮಿಗಿಲಾ
ಮನಸು ಹೃದಯಗಳ ಸವಿಮಾತು............