ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರ್ನಾಟಕಕ್ಕಾಗಿ ಬಿಹಾರದಲ್ಲಿ ನಿತೀಶ್‌ಕುಮಾರ್‌ ಗೆಲ್ಲಬೇಕಾಗಿದೆ !

​ ಬಿಹಾರ ಚುನಾವಣೆಯಲ್ಲಿ ನನ್ನ ನೆಚ್ಚಿನ ನಿತೀಶ್‌ ಕುಮಾರ್‌ ಜಯ ಗಳಿಸಲಿ ಎಂದು ಆಸಿಸುವೆ. ನಿತೀಶ್‌ ಬರುವ ಮೊದಲು ಬಿಹಾರ ಕೆಟ್ಟು ಕೆರ ಹಿಡಿದು ಹೋಗಿತ್ತು. ಲಾ & ಆರ್ಡರ್‌ ಮಣ್ಣು ಪಾಲಾಗಿತ್ತು. ಸ್ವತಃ ಪೊಲೀಸರೇ ದರೋಡೆ, ಅತ್ಯಾಚಾರಕ್‌ಇಳಿದ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದವು. ದೂರದ ಕರ್ನಾಟಕದ ಪತ್ರಿಕೆಗಳಲ್ಲೂ ದಿನ ನಿತ್ಯ ಬಿಹಾರದ ಒಂದಿಲ್ಲೊಂದು ಸಮಾಜ ಘಾತಕದ ಸುದ್ದಿ ಇದ್ದೇ ಇರುತ್ತಿತ್ತು. ಹಾಗೆಯೇ ಅಲ್ಲಿನ ಅರಾಜಕತೆಯಿಂದ ಬೇಸತ್ತು ಮತ್ತು ಕೆಲಸವೇ ಇಲ್ಲದೇ ಲಕ್ಷಾಂತರ ಜನರು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸ ಬಂದು ಇಲ್ಲಿನ ಸ್ಥಳೀಯರ ಸಮಸ್ಯೆಯನ್ನು ಹೆಚ್ಚಿಸಿದ್ದರು. ಆದರೆ ನಿತೀಶ್‌ಕುಮಾರ್‌ ಮುಖ್ಯಮಂತ್ರಿಯಾದ ನಂತರ ಬಿಹಾರದ ಚಿತ್ರಣವನ್ನೇ ಬದಲಿಸಿದರು. ಅಲ್ಲಿ ಮೊದಲು ಲಾ & ಆರ್ಡರ್‌ ಸರಿಪಡಿಸಲಾಯ್ತು. ನಂತರ ಚಿಕ್ಕಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲಾಯ್ತು. ಅಲ್ಲಿ ಯಾವ ಮಟ್ಟಿಗೆ ಬದಲಾವಣೆ ಆಯ್ತು ಎಂದರೆ ವಲಸೆ ಬಂದ ಬಿಹಾರಿಗಳಿಂದಲೇ ನಡೆಯುತ್ತಿದ್ದ ಬೆಂಗಳೂರಉ ಚೆನ್ನೈನಂತಹ ನಗರಗಳ ಬೃಹತ್‌ ಕಟ್ಟಡಗಳ ಕೆಲಸಕ್ಕೆ ಕ್ರಮೇಣ ಬಿಹಾರಿಗಳ ಕೊರತೆ ಎದುರಾಯ್ತು. (ಈಗ ಅವರ ಜಾಗದಲ್ಲಿ ಉತ್ತರ ಪ್ರದೇಶದವರೂ, ಹರಿಯಾಣ, ಒಡಿಶಾ, ಆಂಧ್ರದವರೂ ತುಂಬಿಕೊಂಡಿದ್ದಾರೆ). ಒಬ್ಬ ಮುಖ್ಯಮಂತ್ರಿ ಮಾಡಬೇಕಾದ ಕೆಲಸವೇ ಅದು. ಈ ಕಾರಣಕ್ಕೆ ನಿತೀಶ್‌ ನನಗೆ ಇಷ್ಟವಾಗುತ್ತಾರೆ, ಅದಕ್ಕಿಂತ ಮಿಗಿಲಾ

ರೈತರ ಆತ್ಮಹತ್ಯೆಗೆ ಕಾರಣ ಹುಡುಕುತ್ತಾ...

​ ಕಳೆದ ಏಳು ತಿಂಗಳಲ್ಲಿ ೫೧೬ ರೈತರು ನಮ್ಮ ರಾಜ್ಯವೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದೊಂದು ಗಾಬರಿ ಹುಟ್ಟಿಸುವ ಸುದ್ದಿಯೇ ಹೌದು. ಹೀಗೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ? ನಿಜವಾದ ಸಾಲದ ಸಮಸ್ಯೆಯೇ ಇದಕ್ಕೆ ಕಾರಣವೇ ? ಅಷ್ಟೊಂದು ಸಾಲವನ್ನಾದರೂ ಯತಕ್ಕಾಗಿ ಮಾಡಿಕೊಂಡರು ? ಬರಗಾಲ ಕಾರಣವೆನ್ನಲು ಈಗಿನದಕ್ಕಿಂತಲೂ ಭೀಕರ ಬರಗಾಲ ಎಷ್ಟೋ ಸಮಯ ಬಂದು ಹೋಗಿದೆ. ಆಗೆಲ್ಲಾ ಈ ರೀತಿ ರೈತರು ಆತ್ಮಹತ್ಯೆಗೆ ಇಳಿಯುತ್ತಿರಲಿಲ್ಲ. ಆದರೆ ಇತ್ತೀಚಿಗೆ ಏನೋ ಯಡವಟ್ಟಾಗುತ್ತಿರುವುದಂತೂ ನಿಜ. ನಿನ್ನೆಯ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿಯ ಹೇಳಿಕೆಗಳು ಪ್ರಕಟವಾಗಿದೆ. (ಅವರ ಮನೆಗೆ ರಾಹುಲ್‌ಗಾಂಧಿ ಭೇಟಿ ನೀಡುವುದಿದೆಯಂತೆ). ಆ ಮಹಿಳೆ ಹೇಳಿರುವ ಪ್ರಕಾರ ಅವರಿಗೆ ಇರುವುದು ಬರೇ ೧.೩೮ ಎಕರೆ ಹೊಲ. ಆದರೆ ಆ ರೈತ ೨೦೦೫ ರಲ್ಲಿಯೇ ಟ್ರಾಕ್ಟರ್‌ ಕರೀದಿಸಿದ್ದಾನೆ ! ಅದರ ಸಾಲ ಮತ್ತು ಬೆಳೆ ಸಾಲ ಸೇರಿ ಈಗ ಸಾಲದ ಮೊತ್ತ ಹನ್ನೊಂದು ಲಕ್ಷವನ್ನೂ ಮೀರಿದೆ. ಈ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜ, ಒಂದೂವರೆ ಎಕರೆಯೂ ಇಲ್ಲದ ಹೊಲದ ರೈತ ಅಷ್ಟೊಂದು ಸಾಲ ತೀರಿಸುವುದು ಕನಸಿನ ಮಾತು. ಅದು ಹಾಗಿರಲಿ, ಆದರೆ ಆತ ಮಾಡಿಕೊಂಡಿರುವ ಸಾಲದ ಪರಿಯನ್ನು ಒಮ್ಮೆ ಗಮನಿಸಿ. ತನಗಿರುವ ಕೇವಲ ೧.೩೮ ಎಕರೆ ಹೊಲಕ್ಕಾಗಿ ಟ್ರಾಕ್ಟರ್‌ ಕೊಳ್ಳುವ (ಅದೂ ಸಾಲ ಮಾಡಿ) ಅಗತ್ಯವಾ

"ಡಿಜಿಟಲ್‌ ಇಂಡಿಯಾ" - ಮೋದಿಯ ಮತ್ತೊಂದು ಕಲರ್‌ಫುಲ್‌ ಆಟ !

​ ಫೇಸ್‌ಬುಕ್‌ನಲ್ಲಿ  ಯಾರ ಪ್ರೊಫೈಲ್‌ ಚಿತ್ರ ನೋಡಿದರೂ ಕಲರ್‌ ಕಲರ್‌ ! ಅರೆರೆ ಏನಿದು ಎಲ್ಲರೂ ಈ ರೀತಿ ಮಕಕ್ಕೆ ಬಣ್ಣ ಬಳಕೊಂಡವರಲ್ಲ ಅಂತ ನೋಡಿದರೆ ಅದರ ಹಿಂದಿರುವುದು ಮತ್ತದೇ ಮೋದಿಯ ಮತ್ತೊಂದು ಕಲರ್‌ಫುಲ್‌ ಆಟದ ಹಕೀಕತ್ತು. ಮಾಧ್ಯಮಗಳಿಗೆ ಅಮೇಧ್ಯ ಉಣ್ಣಿಸಿ ತನ್ನ ಪ್ರತಿ ನಡೆಯನ್ನೂ ಜಾಹೀರಾತನ್ನಾಗಿ ಮಾಡಿಕೊಳ್ಳುತ್ತಿರುವ ಪ್ರಧಾನಿ ಮೋದಿ ಇದೀಗ "ಡಿಜಿಟಲ್‌ ಇಂಡಿಯಾ" ಎಂಬ ಹೆಸರಲ್ಲಿ ದೇಶೀಯ ಡಿಜಿಟಲ್‌ ಉದ್ಯಮವನ್ನ ಬೇರು ಸಮೇತ ಕಿತ್ತೊಗೆಯಲು ವಿದೇಶಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ. ಏನಿದು ಡಿಜಿಟಲ್‌ ಇಂಡಿಯಾ ? ಎಂದು ಯಾರಾದರೂ ಮಕಕ್ಕೆ ಬಣ್ಣ ಬಳಕೊಂಡವರ ಬಳಿ ಕೇಳಿ ನೋಡಿ. ಅವರಿಂದ ಬರುವ ಉತ್ತರ "ಗೊತ್ತಿಲ್ವ? ಡಿಜಿಟಲ್‌ ಇಂಡಿಯಾ ಕಣ್ರೀ, ಮೋದಿಯ ಮಹತ್ವಾಕಾಂಕ್ಷೆಯ ಯೋಜನೆ. ಇಡೀ ಭಾರತಕ್ಕೇ ಉಚಿತವಾಗಿ ವೈಫೈ ಮೂಲಕ ಇಂಟರ್ನೆಟ್‌ ಕೊಡುವ ಅತ್ಯದ್ಬುತ ಯೋಜನೆ ಇದು. ನೀವು ಯಾಕೆ ಇನ್ನೂ ಬೆಂಬಲ ನೀಡಿಲ್ಲ? ಮೋದಿಯನ್ನು ವಿರೋಧಿಸೋದೇ ಕೆಲಸಾನಾ? ಇಂತಹ ಒಳ್ಳೆಯ ಕೆಲಸ ಮಾಡಿದಾಗಲೂ ಬೆಂಬಲಿಸಬಾರದಾ?" ಅಂತ ಪ್ರಶ್ನಿಸದಿದ್ದರೆ ಕೇಳಿ. ಅದು ಅವರ ಅಮಾಯಕತೆ. ಕೆಲವರಿಗೆ ವಿಷಯದ ಅರಿವಿದ್ದರೂ ಬೇರೆ ಬೇರೆ ಸ್ವಾರ್ಥ ಕಾರಣಗಳಿಗಾಗಿ ಮುಚ್ಚಿಡುತ್ತಿದ್ದಾರೆ. ಇಂಟರ್ನೆಟ್‌ ಎಂಬುದು ಲಕ್ಷಾಂತರ ಕೋಟಿಯ ಉದ್ಯಮ ಡಿಜಿಟಲ್‌ ಇಂಡಿಯಾದ ಮೂಲ ಉದ್ದೇಶ ಜನರೆಲ್ಲಾ ತಿಳಿದಿರುವಂತೆ ಉಚಿತ ಇಂಟರ್ನೆಟ್‌ ಕೊಡುವುದೇನೋ ನಿಜ. ಆದರೆ ಅದರ ಸಾಧಕ