ಎಲ್ಲೋ ಒಂದು ಕಣ್ಣ ಬಿಂದು ಜಾರುತ್ತದೆ ಕೆನ್ನೆ ಮೇಲೆ ತಾನಾಗಿ. ಅದು ನೀನಿಟ್ಟ ಪ್ರೀತಿಗಾ? ನಾನಿಟ್ಟ ನಂಬಿಕೆಗಾ? ತನ್ನ ತಾನು ಹಿಡಿದಿಡಲಾಗದ ಬಿರುಕು ಬಿಟ್ಟ ಮಡಕೆಗಾ? ಉತ್ತರವಿರದು ಎಲ್ಲಾ ಪ್ರಶ್ನೆಗಳಿಗೂ ಪ್ರಶ್ನಿಸಲೂ ಆಗದು ಎಲ್ಲಾ ಸಂದೇಹಗಳಿಗೂ ಸಾಗಬೇಕು ನಾವೇ ಹೆಣೆದ ಬಲೆಯಿಂದ ಹೊರಗೆ ಬಾಗಬೇಕು ಭಾವನೆಯ ಕಿರು ಹೊಸ್ತಿಲಿಗೆ ಭಾವನೆಯ ಜೇಡ ಕಟ್ಟುವುದು ದಿನವೂ ಭಾವಗಳ ಬೇಲಿಯ ಪಡೆದರೂ ನೋವು ಬಂಧಿಸಲಾಗದು ಯಾವ ಹೃದಯವ ಬಯಲಾಗುವುದು ಬಲೆ, ಅದು ಸದಾ ಅಬಲೆ.
ಮನಸು ಹೃದಯಗಳ ಸವಿಮಾತು............