ದುಡ್ಡಿನಾಸೆಗೆ ಮಂಗನಾಟ ಆಡಿದ ಐವರು ಪಕ್ಷೇತರ (ಮಾಜಿ) ಶಾಸಕರು ಅನರ್ಹಗೊಂಡಿದ್ದಾರೆ. ಅವರಿನ್ನು ಆರು ವರ್ಷ ಯಾವುದೇ ಚುನಾವಣೆ ಎದುರಿಸುವಂತಿಲ್ಲ. ರೆಡ್ಡಿಗಳ ಕಂತೆ ಕಂತೆ ನೋಟು ಎಣಿಸಿಕೊಂಡು ಮತದಾರರನ್ನು ಕಾಲ ಕಸ ಮಾಡಿದ್ದ ಇವರಿಗೆ ತಕ್ಕ ಶಾಸ್ತಿಯಾಗಿದೆ. ಯಡಿಯೂರಪ್ಪ ಇವರಿಗೆ ಮಾಡಿದ್ದು ಮೋಸವೇ ಆದರೂ ಇವರು ಮತದಾರರಿಗೆ ಮಾಡಿದ ಮೋಸಕ್ಕೆ ತಕ್ಕ ಬೆಲೆ ತೆತ್ತಿದ್ದಾರೆ.
ಮೂರೂ ಪಕ್ಷವನ್ನು ತಿರಸ್ಕರಿಸಿ ಜನ ಪಕ್ಷೇತರರನ್ನು ಗೆಲ್ಲಿಸಿದ್ದೇ ಇವರಾದರೂ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂದು. ಆದರೆ ಇವರೂ ಜನರ ನಿರೀಕ್ಷೆಗೆ ಎಳ್ಳು ನೀರು ಬಿಟ್ಟು ರೆಸಾರ್ಟ್ ರಾಜಕೀಯವನ್ನೇ ಮಾಡಿದರು.
ಬಿಜೆಪಿಗೆ ಕೇವಲ ಬಾಹ್ಯ ಬೆಂಬಲ ಕೊಟ್ಟು ಸುಮ್ಮನಾಗಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ. ಇವರಷ್ಟೇ ಅಲ್ಲದೇ ಆಪರೇಷನ್ ಕಮಲಕ್ಕೆ ಬಲಿಯಾದವರಿಗೂ ಇದೇ ಶಿಕ್ಷೆಯಾಗಬೇಕು. ಆಗ ಮಾತ್ರ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ.
ಮೂರೂ ಪಕ್ಷವನ್ನು ತಿರಸ್ಕರಿಸಿ ಜನ ಪಕ್ಷೇತರರನ್ನು ಗೆಲ್ಲಿಸಿದ್ದೇ ಇವರಾದರೂ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂದು. ಆದರೆ ಇವರೂ ಜನರ ನಿರೀಕ್ಷೆಗೆ ಎಳ್ಳು ನೀರು ಬಿಟ್ಟು ರೆಸಾರ್ಟ್ ರಾಜಕೀಯವನ್ನೇ ಮಾಡಿದರು.
ಬಿಜೆಪಿಗೆ ಕೇವಲ ಬಾಹ್ಯ ಬೆಂಬಲ ಕೊಟ್ಟು ಸುಮ್ಮನಾಗಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ. ಇವರಷ್ಟೇ ಅಲ್ಲದೇ ಆಪರೇಷನ್ ಕಮಲಕ್ಕೆ ಬಲಿಯಾದವರಿಗೂ ಇದೇ ಶಿಕ್ಷೆಯಾಗಬೇಕು. ಆಗ ಮಾತ್ರ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ.
ಕಾಮೆಂಟ್ಗಳು