ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು. ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ ! ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು. ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ? ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರ
ಮನಸು ಹೃದಯಗಳ ಸವಿಮಾತು............