ನಿನ್ನೆ ಚೆನ್ನೈಯಿಂದ ಲಾಲ್ಬಾಗ್ ಎಕ್ಸ್ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದೆ. ಟಿಕೇಟು ಕಾಯ್ದಿರಿಸಿರದಿದ್ದ ಕಾರಣ ಸಾಮಾನ್ಯ ಬೋಗಿಯಲ್ಲೇ ಹತ್ತಿದ್ದೆ. ಅದು ಹೆಸರಿಗೆ ಮಾತ್ರ ಎಕ್ಸ್ಪ್ರೆಸ್, ಆದರೆ ಬಹುತೇಕ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುತ್ತೆ. ಚೆನ್ನೈ ನಂತರದ ಒಂದು ನಿಲ್ದಾಣದಲ್ಲಿ ಕೆಲವರು ಅಕ್ಕಿ ಮೂಟೆಗಳನ್ನು ಹೇರಿದರು. ಮೂರ್ನಾಲ್ಕು ನಿಲ್ದಾಣಗಳ ನಂತರ ಒಂದು ನಿಲ್ದಾಣದಲ್ಲಿ ಬಂದ ರೈಲ್ವೇ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಆಗ ಮೂಟೆಗಳ ವಾರಸುದಾರರು ಯಾರೂ ಮುಂದೆ ಬರಲಿಲ್ಲ. ರೈಲು ಅಲ್ಲಿಂದ ಹೊರಟ ನಂತರ ಮೂಟೆಗಳನ್ನು ತಂದಿದ್ದವರು 'ಅಷ್ಟು ಕೆ.ಜಿ. ಅಕ್ಕಿ ಇತ್ತು, ಇಷ್ಟು ಕೆ.ಜಿ. ಅಕ್ಕಿ ಇತ್ತು' ಎಂದು ತಮ್ಮ ಅಳಲು ತೋಡಿಕೊಂಡರು. ಆದರೆ ಯಾರ ಮುಖದಲ್ಲೂ ಅಕ್ಕಿ ಹೋದುದರ ದುಃಖ ಕಿಂಚಿತ್ತೂ ಇರದಿದ್ದುದನ್ನು ಕಂಡು ಆಶ್ಚರ್ಯವಾಯ್ತು. ನಂತರ ಅಕ್ಕಪಕ್ಕದವರನ್ನು ವಿಚಾರಿಸಿದೆ. ಆಗ ತಿಳಿದು ಬಂದ ವಿಷಯವೇ ಬೇರೆ. ಅದೇನೆಂದರೆ ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಜಯಲಲಿತ ಪೈಪೋಟಿಯಲ್ಲಿ ಮತಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಅವುಗಳ ಅಂಗವಾಗಿ ಮನೆ ಮನೆಗೆ ಟಿವಿ, ಮಿಕ್ಸಿ, ಸೀರೆ ಮುಂತಾದ ವಸ್ತುಗಳು ಬಂದಿವೆ. ಜೊತೆಗೆ ಪಡಿತರ ಕಾರ್ಡುದಾರರಿಗೆ ತಿಂಗಳಿಗೆ ೨೦ ಕಿಲೋ ಅಕ್ಕಿ ಉಚಿತ! ಹಲವರು ಒಂದೇ ಕುಟುಂಬಕ್ಕೆ ನಾಲ್ಕೈದು ಕಾರ್ಡು ಹೊಂದಿದ್ದು ಉಚಿತವಾಗಿ ಸಿಗುವ ಕ್ವಿಂಟಾಲ್ಗಟ್ಟಲೇ ಅಕ್ಕಿಯನ್ನು ಬೆಂಗಳೂರು ಮುಂತಾದೆಡೆ ತಂದು ಒಳ್ಳೆ
ಮನಸು ಹೃದಯಗಳ ಸವಿಮಾತು............