ಮೊನ್ನೆ ಡಾ. ರಾಜ್ಕುಮಾರ್ ಪುತ್ತಳಿಗೆ ಯಾರೋ ಬೆಂಕಿ ಹಚ್ಚಿ ಅವಮಾನ ಮಾಡಿದ್ದು ತುಂಬಾ ಬೇಸರ ತರಿಸಿತು. ಹಾಗೆಯೇ ರಾಜ್ ಅಭಿಮಾನಿಗಳು ಚಿಂತಿಸಬೇಕಾದ ಅವಶ್ಯಕತೆ ಸಹ ಇದೆ. ಅದೇನೆಂದರೆ ರಾಜ್ರ ಪ್ರತಿಮೆಗಳನ್ನು ಬೀದಿ ಪದಿಯಲ್ಲಿ, ಫುಟ್ಪಾತ್ ಬಳಿ ಹೀಗೆ ಎಲ್ಲೆಂದರಲ್ಲಿ ಇಡಲಾಗುತ್ತಿದೆ. ಈಗಾಗಲೇ ಅವರ ನೂರಾರು ಪ್ರತಿಮೆಗಳನ್ನು ರಾಜ್ಯಾಧ್ಯಂತ ಇರಿಸಿದ್ದು ಅವುಗಳಲ್ಲಿ ಕೆಲವೊಂದನ್ನು ಹೊರತು ಪಡಿಸಿ ಉಳಿದ ಯಾವುದಕ್ಕೂ ಸ್ವತಃ ಪ್ರತಿಮೆ ಇರಿಸಿದವರೇ ಗೌರವ ನೀಡಿದಂತೆ ಕಾಣಿಸುತ್ತಿಲ್ಲ. ಅಣ್ಣೋರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಕಡೆ ಪಕ್ಷ ಉದ್ಯಾನಗಳಲ್ಲಿ, ಅಥವಾ ಒಳ್ಳೆಯ ಪರಿಸರದಲ್ಲಿ ಪಾಲಿಕೆಯ ಅನುಮತಿ ಪಡೆದು ಇರಿಸಬೇಕು. ಹಾದಿ ಬೀದಿಯ ಬದಿಗಳಲ್ಲಿ ಅವರ ಪ್ರತಿಮೆ ಇರಿಸಿ ಅವರಿಗೆ ಅಗೌರವ ಉಂಟು ಮಾಡುವುದು ಸರಿಯಲ್ಲ.
ಮನಸು ಹೃದಯಗಳ ಸವಿಮಾತು............