ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣ್ಣೋರನ್ನು ಹಾದಿ ಬದಿ ತಂದು ಕೂರಿಸಬೇಡಿರಪ್ಪೋ !

​ ಮೊನ್ನೆ ಡಾ. ರಾಜ್‌ಕುಮಾರ್‌ ಪುತ್ತಳಿಗೆ ಯಾರೋ ಬೆಂಕಿ ಹಚ್ಚಿ ಅವಮಾನ ಮಾಡಿದ್ದು ತುಂಬಾ ಬೇಸರ ತರಿಸಿತು. ಹಾಗೆಯೇ ರಾಜ್‌ ಅಭಿಮಾನಿಗಳು ಚಿಂತಿಸಬೇಕಾದ ಅವಶ್ಯಕತೆ ಸಹ ಇದೆ. ಅದೇನೆಂದರೆ ರಾಜ್‌ರ ಪ್ರತಿಮೆಗಳನ್ನು ಬೀದಿ ಪದಿಯಲ್ಲಿ, ಫುಟ್‌ಪಾತ್ ಬಳಿ ಹೀಗೆ ಎಲ್ಲೆಂದರಲ್ಲಿ ಇಡಲಾಗುತ್ತಿದೆ. ಈಗಾಗಲೇ ಅವರ ನೂರಾರು ಪ್ರತಿಮೆಗಳನ್ನು ರಾಜ್ಯಾಧ್ಯಂತ ಇರಿಸಿದ್ದು ಅವುಗಳಲ್ಲಿ ಕೆಲವೊಂದನ್ನು ಹೊರತು ಪಡಿಸಿ ಉಳಿದ ಯಾವುದಕ್ಕೂ ಸ್ವತಃ ಪ್ರತಿಮೆ ಇರಿಸಿದವರೇ ಗೌರವ ನೀಡಿದಂತೆ ಕಾಣಿಸುತ್ತಿಲ್ಲ. ಅಣ್ಣೋರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಕಡೆ ಪಕ್ಷ ಉದ್ಯಾನಗಳಲ್ಲಿ, ಅಥವಾ ಒಳ್ಳೆಯ ಪರಿಸರದಲ್ಲಿ ಪಾಲಿಕೆಯ ಅನುಮತಿ ಪಡೆದು ಇರಿಸಬೇಕು. ಹಾದಿ ಬೀದಿಯ ಬದಿಗಳಲ್ಲಿ ಅವರ ಪ್ರತಿಮೆ ಇರಿಸಿ ಅವರಿಗೆ ಅಗೌರವ ಉಂಟು ಮಾಡುವುದು ಸರಿಯಲ್ಲ.

ಸರಕಾರಿ ಅಧಿಕಾರಿಗಳಿಗೆ ಆಧಾರ್‌ ಕಡ್ಡಾಯ

​ ಭ್ರಷ್ಟಾಚಾರದ ಬಗ್ಗೆ ನಾವು ಕೇವಲ ರಾಜಕಾರಣಿಗಳನ್ನು ದೂರುತ್ತೇವೆ. ಆದರೆ ನಿಜವಾಗಿಯೂ ಹೆಚ್ಚು ಭ್ರಷ್ಟರಾಗಿರುವುದು ಈ ದೇಶದ ಅಧಿಕಾರಿಗಳು.  ಹಾಗೆಯೇ ಹೊರ ದೇಶದಲ್ಲಿರುವ ಕಪ್ಪುಹಣಕ್ಕಿಂತಾ ನಮ್ಮ ದೇಶದಲ್ಲಿರುವ ಕಪ್ಪು ಹಣ ಅತಿ ಮುಖ್ಯ. (ಇಂದಿಗೂ ಪ್ರತಿನಿತ್ಯ ಇದು ಸೃಷ್ಟಿಯಾಗುತ್ತಲೇ ಇದೆ) ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಮಾತ್ರ ಭ್ರಷ್ಟಾಚಾರಕ್ಕೆ ಹಾಗೂ ಕಪ್ಪು ಹಣಕ್ಕೆ ಬಹುತೇಕ ಕಡಿವಾಣ ಹಾಕಲು ಸಾಧ್ಯ. ಆಧಾರ್‌ಗೆ ಮನ್ನಣೆ ನೀಡಿರುವ ಕೇಂದ್ರಕ್ಕೆ ಧನ್ಯವಾದಗಳು. ಇದೀಗ ಕೆಂದ್ರ ಸರ್ಕಾರದ ಎಲ್ಲಾ ಅಧಿಕಾರಿಗಳೂ ತಮ್ಮ ಸೇವಾ ಪುಸ್ತಕದಲ್ಲಿ ಆಧಾರ್‌ ಸಮಖ್ಯೆ ನೀಡುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಅನುಸರಿಸಬೇಕು. ಆದರೆ ಕೇವಲ ಪಿಂಚಣಿ ಮುಂತಾದುವಕ್ಕೆ ಇದನ್ನು ಉಪಯೋಗಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮೊದಲು ಎಲ್ಲರಿಗೂ ಆಧಾರ‍್ ವಿತರಿಸಿ, ನಂತರ ಸಾವಿರ ರೂಪಾಯಿಗಿಂತಾ ಹೆಚ್ಚಿನ ಮೌಲ್ಯದ  ಯಾವುದೇ ವಸ್ತು ಕೊಳ್ಳಬೇಕೆಂದರೂ ಆಧಾರ‍್ ಸಂಖ್ಯೆ ನೀಡುವುದು (ಪ್ರತಿಯೊಬ್ಬರೂ) ಕಡ್ಡಾಯವಾಗಬೇಕು. ಹಾಗೆ ಕೊಳ್ಳುವ ವಸ್ತುಗಳ ವಿವರ ನಮ್ಮ ಆಧಾರ್‌ ಖಾತೆಯಲ್ಲಿ ದಾಖಲಾಗುತ್ತಾ ಹೋಗಬೇಕು. ಇದನ್ನು ಮೋದಿಯವರು ಮಾಡಲಿ ಎಂದು ಆಶಿಸುತ್ತೇನೆ.