ಕಾವೇರಿ ಕೊಳ್ಳದ ಕದನ ಸಧ್ಯಕ್ಕೆ ಮುಗಿದು ಅನ್ನಿಸುತ್ತೆ. ಮುಗಿಸುವ ಯೋಚನೆಯೂ ನಮ್ಮ ಯಾವ ರಾಜಕಾರಣಿಗಳಿಗೂ ಇದ್ದಂತಿಲ್ಲ. ಎಲ್ಲರೂ ಕಾವೇರಿಯ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರೆ. ಅಂದು ನಡೆದ ಪ್ರಧಾನಿಗಳ ಅಧ್ಯಕ್ಷತೆಯ ಕಾವೇರಿ ಪ್ರಾಧಿಕಾರದ ಸಬೆಯಲ್ಲಿ ಸಿಂಗ್ ನೀಡಿದ ಆದೇಶ ನಮ್ಮ ರಾಜ್ಯಕ್ಕೆ ಮಾರಕವಾಗಿತ್ತು. ಜಯಾ ಕೇಳಿದ್ದು ಪ್ರತಿ ದಿನ ೨ ಟಿಎಂಸಿ. ಸಿಂಗ್ ಬಿಡಲು ಹೇಳಿದ್ದು ದಿನವೂ ೯,೦೦೦ ಕ್ಯೂಸೆಕ್ ನೀರು. ಪರವಾಗಿಲ್ಲ, ೨ ಟಿಎಂಸಿ ಕೇಳಿದರೆ ಕೇವಲ ೯,೦೦೦ ಕ್ಯೂಸೆಕ್ ನೀಡಲು ಹೇಳಿ ಕರ್ನಾಟಕದ ಕಡೆಗೇ ನ್ಯಾಯ ಒದಗಿಸಿದ್ದಾರೆ ಅನ್ನುವಂತಿಲ್ಲ. ಏಕೆಂದರೆ ಜಯಾ ಇಲ್ಲಿ ಮಹಾನ್ ನಾಟಕವಾಡಿದ್ದಾಳೆ. ಅದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವಳಿಗೆ ಸಧ್ಯಕ್ಕೆ ನೀರಿನ ಅವಶ್ಯಕತೆಯೇ ಇಲ್ಲ. ಈಗಾಗಲೇ ರಾಜ್ಯದಿಂದ ಸಾಕಷ್ಟು ನೀರು ಹೋಗಿ ಮರಟ್ಟೂರು ಅಣೆ ತುಂಬಿಸಿದೆ. ತಮಿಳುನಾಡಿನಲ್ಲಿ ಹಿಂಗಾರು ಮಳೆಯೇ ಹೆಚ್ಚು. ಅದು ಇನ್ನೂ ಬಂದೇ ಇಲ್ಲ. ಅದು ಬರುವ ಸಮಯಕ್ಕೆ ಬೇಕಾದಷ್ಟು ನೀರು ಸಿಕ್ಕಿ ಅದು ಹೆಚ್ಚಾಗಿ ಸಮುದ್ರವನ್ನೂ ಸೇರುತ್ತದೆ. ಆದರೂ ಅವಳಿಗೆ ಕರ್ನಾಟಕದ ಮೂರ್ಖ ರಾಜಕಾರಣಿಗಳನ್ನು ಆಟ ಆಡಿಸುವ ಚಟ. ಆದುದರಿಂದಲೇ ಆಕೆ ದಿನವೂ ೨ ಟಿಎಂಸಿ ನೀರು ಬೇಕು ಎಂದು ಕೇಳಿದ್ದು. ಕಾವೇರಿ ವಿಷಯದಲ್ಲಿ ಕರ್ನಾಟಕದ ರಾಜಕಾರಣಿಗಳು ಸರಿಯಾಗಿ ವ್ಯವಹಾರ ನಡೆಸಲ್ಲ ಅನ್ನೊದು ಲಗಾಯ್ತಿನಿಂದಲೂ ತಿಳಿದು ಬಂದಿರುವ