ಪಾಲಿಕೆಯ ಸಾವಿರಾರು ಎಕರೆ ಭೂಮಿ ಬಲಾಢ್ಯರಿಂದ ಅತಿಕ್ರಮಣವಾಗಿದೆಯೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಒತ್ತುವರಿಯಲ್ಲಿ ಜನಪ್ರತಿನಿಧಿಗಳ ಬೇನಾಮಿ ವಂಚನೆ ಇರದೆ ಇವೆಲ್ಲಾ ನಡೆಯಲು ಸಾಧ್ಯವಿಲ್ಲ. ನಗರದ ಕೆರೆ ಕುಂಟೆಗಳು, ರಾಜಕಾಲುವೆಗಳು, ಹಳೆಯ ಗುಂಡಿತೋಪು ಜಾಗ, ಉದ್ಯಾನವನ, ಸರ್ಕಾರಿ ಕಚೇರಿಗೆ ಸೇರಿದ ಭೂಮಿ, ಶಾಲೆಗಳ ಆಟದ ಮೈದಾನವೂ ಸೇರಿದಂತೆ ಪಾಲಿಕೆಯ ಭೂಮಿ ಅಕ್ರಮ ಒತ್ತುವರಿಯಾಗಿವೆ. ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ ಪಾಲಿಕೆ ವ್ಯಾಪ್ತಿಯ ಭೂ ಒತ್ತುವರಿ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪೂರಕ ದಾಖಲೆಗಳನ್ನು ಒದಗಿಸಿ ಭೂ ಒತ್ತುವರಿ ವಶಕ್ಕೆ ಶಿಫಾರಸು ಮಾಡಿರುತ್ತಾರೆ. ಆದರೆ ಈ ಸಂಬಂಧ ಪಾಲಿಕೆ ಆಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ ನಿರ್ಲಕ್ಷ್ಯ ತೋರಿದೆ. ಅತಿಕ್ರಮಿತ ಭೂಮಿ ವಶಪಡಿಸಿಕೊಂಡರೆ ಪಾಲಿಕೆಗೆ ದೊಡ್ಡ ಮಟ್ಟದ ಆಸ್ತಿ ಉಳಿಯಲಿದೆ. ಆದಾಯಕ್ಕೂ ಮೂಲವಾಗಲಿದೆ. ಈ ಬಗ್ಗೆ ಬಿಬಿಎಂಪಿ ಮೇಯರ್ ಅವರಿಗೆ ಚಿಂತಿಸಲು ಸಮಯವಿಲ್ಲದಾಗಿದೆ. ನಿರೀಕ್ಷಿತ ಸಾಧನೆ ತೋರದೆ ಅವರು ಸ್ಥಾನ ತ್ಯಜಿಸುವ ಚಿಂತೆ ಅವರದು. ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಯಾವ ನಿರ್ಧಾರ ತಳೆಯುವರೋ ನೋಡಬೇಕಿದೆ. ಸತ್ಯ ನುಡಿದವರ ಮೇಲೆಯೇ ಗಧಾ ಪ್ರಹಾರ ! ಭೂಮಾಫಿಯಾದ ಕಬಂದ ಬಾಹುಗಳು ಎಷ್ಟು ಬಲಿಷ್ಟವಾಗಿವೆ ಎಂಬುದಕ್ಕೆ ಸತ್ಯ ನುಡಿದು ಈಗ ಸದನದ ಹಕ್ಕುಚ್ಯುತಿ ಎದುರಿಸುತ್ತಿರುವ ಪ್ರಾಮ
ಮನಸು ಹೃದಯಗಳ ಸವಿಮಾತು............