ಗೆಳೆಯರೇ..... ಗೆಳೆಯರೇ.... ಭಾರತದ ಪ್ರೀತಿವೆತ್ತ ಸ್ನೇಹ ಬಂಧು ಮಿತ್ರರೆ | ಬನ್ನಿ ಹೆಗಲ ಕೊಡುವ ನಮ್ಮ ಅಣ್ಣನೊಡನೆ ಇಂದು ಬನ್ನಿ ದೇಶಕ್ಕಾಗಿ ಮೀಸಲಿಡುವ ರಕ್ತ ಬಿಂದು || ದೇಶಕ್ಕಿಂದು ಅಂಟಿರುವ ಭ್ರಷ್ಟಾಚಾರ ಕೊಂದು ಬಲವಾದ ಹೆಜ್ಜೆ ಇಟ್ಟು ನಾವು ನಡೆವ ಮುಂದು || ರಕ್ತ ಸುರಿಸಿ ಪ್ರಾಣ ತೆತ್ತು ಪಡೆದರು ಸ್ವಾತಂತ್ರ್ಯ ಅವರ ಋಣದ ಸಮಾದಿ ಮೇಲೆ ಆಯ್ತು ಗಣತಂತ್ರ || ಆಳುತಿರುವ ದೊರೆಗಳಿಗೆ ದುಡ್ಡಿನದೇ ಮಂತ್ರ ಅಧೋಗತಿಗೆ ಇಳಿದ ದೇಶ ಆಯ್ತು ಅತಂತ್ರ || ಅಣ್ಣನಿಗೆ ತಮ್ಮನಾಗಿ ನಮ್ಮ ಸಂತೋಷ್ ಹೆಗಡೆ ಅರವಿಂದ ಕೇಜ್ರಿವಾಲ ಅವರ ಜೊತೆಗೆ ನಡಿಗೆ || ಘರ್ಜಿಸಿದ ದೇಶಪ್ರೇಮಿ ಕಿರಣ್ ಬೇಡಿ ಇಹರು ಸ್ವಾಮಿ ಅಗ್ನಿವೇಶರೊಡನೆ ಶಾಂತಿಭೂಷಣ್ ತ್ರಯರು || ಕಡು ಬಡವರು ಅರೆ ಹೊಟ್ಟೆಗೆ ಪ್ರಾಣ ನೀಗುತಿಹರು ಕಡು ಭ್ರಷ್ಟರು ನಮ್ಮನಾಳಿ ಕೇಕೆ ಹಾಕುತಿಹರು || ನಾವು ಬೀಳಲಾರೆವಿಂದು ರಾತ್ರಿ ಕಂಡ ಬಾವಿಗೆ ಅಣ್ಣ ತಂಡ ತಂದಿವುದು ಜನಲೋಕ್ಪಾಲ್ ದೀವಿಗೆ || --------------------------------------------------- ಇಂದು [27.08.2011] ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆದಿದ್ದ ಸುಮಾರು ನಾಲ್ಕೈದು ಸಾವಿರ ಅಣ್ಣಾ ಬೆಂಬಲಿಗರ ಎದುರು ಈ ಹಾಡನ್ನು ಸ್ವತಃ ನಾನೇ ಹಾಡಿದೆ. ಆ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗಡೆ ಅವರೂ ಅಲ್ಲಿ ಉಪಸ್ಥಿತರಿದ್ದರು. ತುಂಬಾ ಖುಷಿಯಾಯ್ತು.
ಮನಸು ಹೃದಯಗಳ ಸವಿಮಾತು............