ಮೊನ್ನೆ ಸಾಗರದಿಂದ ನಾನೂ ಮತ್ತಿಬ್ಬರು ನಮ್ಮ ಸ್ನೇಹಿತರೂ ಶಿವಮೊಗ್ಗಕ್ಕೆ ಖಾಸಗಿ ಬಸ್ ಒಂದರಲ್ಲಿ ಹೊರಟೆವು. ಸಾಗರದ ಜೋಗ ನಿಲ್ದಾಣದಿಂದ ಹೊರಟಾಗ ಬಸ್ನಲ್ಲಿ ಹಿಂದಿ ಹಾಡು ಹಾಕಿರುವುದು ಕಂಡು ಬಂತು. ಸ್ವಲ್ಪ ದೂರದ ಬಿಹೆಚ್ ರಸ್ತೆ ನಿಲ್ದಾಣದಲ್ಲಿ ಬಸ್ ನಿಂತಾಗ ಮೂರೂ ಜನ ಕೆಳಗಿಳಿದೆವು. ನಾವು ಇಳಿದುದು ನೋಡಿ ಮತ್ತೊಬ್ಬ ತಮಿಳನೂ ಇಳಿದುಕೊಂಡ. ಕಂಡಕ್ಷರ್ ಓಡೋಡಿ ಬಂದು ಹೆದರಿಸುವವನಂತೆ "ಯಾಕ್ರೀ ಇಳೀತೀರಾ, ಹತ್ರಿ ಹೊರಡ್ತೀವಿ ಈಗ' ಎಂದು ಗದರಿದ. ನಾನೂ ಕೂಡಾ 'ಎಷ್ಟೊತ್ತಿಗೆ ಹೊರಡ್ತೀಯಾ?" ಎಂದು ಅಷ್ಟೇ ಜೋರಾಗಿ ಕೇಳಿದೆ. 'ಈಗ ಹೊರಡ್ತೀವಿ ಹತ್ರೀ ಬಸ್ನ" ಅಂದ. "ನಿನ್ನ ಹಿಂದಿ ಹಾಡು ತೆಗೆದು ಕನ್ನಡ ಹಾಕು, ಇಲ್ಲಾ ಆಫ್ ಮಾಡು ಹತ್ತುತೀವಿ" ಅಂದೆ. ಅವನಿಗೆ ಶಾಕ್ ಆದಂತಾಯ್ತು. ಕನ್ನಡ ಹಾಡಿಗಾಗಿ ಈ ರೀತಿ ಬಸ್ ಬಿಟ್ಟು ಇಳಿಯುವವರೂ ಇದ್ದಾರಾ ಅಂದುಕೊಂಡಿರಬೇಕು. ಕೂಡಲೇ ಮೆತ್ತಗಾದ ಅವನು 'ಸರಿ ಅದಕ್ಕೇನು, ಹಾಕಿಸುತ್ತೀನಿ ಹತ್ತಿ" ಎಂದ ನಂತರ ಬಸ್ ಹತ್ತಿದೆವು. ಆತ ಚಾಲಕನಿಗೆ ಹೇಳಿ ಹಿಂದಿ ಹಾಡುಗಳನ್ನ ನಿಲ್ಲಿಸಿದ. ನಂತರ ಟಿಕೇಟ್ ಪಡೆದುಕೊಂಡ. ಬಸ್ ಕೂಡಾ ಹೊರಟಿತು. ಈ ನಡುವೆ ಕಂಡಕ್ಷರ್ ಕೂಡಾ ಬದಲಾದ. ಸ್ವಲ್ಪ ದೂರ ಹೋಗುವುದರೊಳಗೆ ಚಾಲಕ ಮತ್ತೆ ಹಿಂದಿ ಹಾಡು ಹಾಕಿದ. ನನಗೆ ರೇಗಿತು, ಇದೆ ಇರು ಇವರಿಗೆ ಹಬ್ಬ ಎಂದುಕೊಂಡು ನಿರ್ವಾಹಕ ನಮ್ಮ ಬಳಿ ಬರುವುದನ್ನೇ ಕಾದು 'ಹಿಂದ
ಮನಸು ಹೃದಯಗಳ ಸವಿಮಾತು............