ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಂದಿನ ಸಮುದ್ರ ಇಂದಿನ ಮರಳುಗಾಡು !

ಮರಳುಗಾಡಲ್ಲಿ ಯಾಕೆ ಬೋಟ್‌ಗಳು ನಿಂತಿವೆ ಅಂತ ಚಕಿತರಾಗಬೇಡಿ. ಕೇವಲ ಆರೇಳು ದಶಕದ ಹಿಂದೆ ಇದು ಒಂದು ಚಿಕ್ಕ ಸಮಸ್ರವಾಗಿತ್ತು ಮತ್ತು ಈ ಜಾಗದಲ್ಲಿ ೨೦೦ ಮೀಟರಿಗೂ ಹೆಚ್ಚು ಎತ್ತರ ನೀರು ನಿಂತಿತ್ತು. ಆದರೆ ಇಂದು ಎಲ್ಲವೂ ಬತ್ತಿ ಬರಡಾಗಿ ಸಮಸ್ರವಿದ್ದ ಜಾಗ ಮರಳುಗಾಡಾಗಿದೆ. ಈ ಸಮುದ್ರದ ಹೆಸರು "Aral Sea" ಎಂದು. ಕಜಕಿಸ್ತಾನ್‌ ದೇಶದಲ್ಲಿದೆ. ಒಂದು ಸಮಯದಲ್ಲಿ ಇದರಿಂದ ವರ್ಷಕ್ಕೆ ೫೦,೦೦೦ ಟನ್‌ಗಳಷ್ಟು ಮೀನು ಸಿಗುತ್ತಿತ್ತಂತೆ ! ಆದರೆ ಈಗ ಹೀಗೆ ಬರಡು ಬೂಮಿಯನ್ನಾಗಿಸಿದ್ದು ಮಾತ್ರ ಮನುಷ್ಯ. ನದಿಗಳನ್ನು ತಿರುಗಿಸಿ, ಈ ಸಮುದ್ರದಿಂದಲೂ ನೀರನ್ನೆತ್ತಿ ಕೃಷಿಗೆ ಅಂತ ಉಪಯೋಗಿಸಲಾರಂಭಿಸಿದರು. ಅರ್ಧ ಶತಮಾನ ಕಳೆಯುವುದರಲ್ಲಿ ಸಮುದ್ರ ಮರಳುಗಾಡಾಗಿ ಬದಲಾಗಿದೆ. ಈಗ ಅಲ್ಲಿನ ಕೃಷಿಯೂ ನೀರಿಲ್ಲದೇ ಅತಂತ್ರ ಸ್ಥಿತಿಯಲ್ಲಿದೆ. ಅಂದಿನ ಸೋವಿತ್‌ ಯೂನಿಯನ್‌ ಸರ್ಕಾರ ಮಾಡಿದ ಎಡವಟ್ಟಿನಿಂದ ಪ್ರಕೃತಿಗೆ ಅತಿ ದೋಡ್ಡ ಹೊಡೆತ ಬಿದ್ದಿದೆ. ಹಾಗೆಯೇ ಈಗ ನಮ್ಮ ಯೂನಿಯನ್‌ ಸರ್ಕಾರ ಸಹ "ಗಂಗಾ ಕಲ್ಯಾಣ" "ಗಂಗಾ ಕಾವೇರಿ" ಎಂಬ ಏನೇನೋ ಯೋಜನೆಗಳ ಬಗ್ಗೆ ಮಾತಾಡುತ್ತಿದೆ. ಗಂಗಾ ನದಿಯನ್ನು ತಿರುಗಿಸಿ ದೇಶವನ್ನು ಉದ್ದಾರ ಮಾಡ್ತೀವಿ ಅಂತಿದ್ದಾರೆ. ಆದರೆ ಮುಂದಿನ ಪರಿಣಾಮ ?

ವಿಶ್ವ ಹಿರಿದೋ ? ನಕ್ಷತ್ರ ಹಿರಿದೋ ??

ಬಹುತೇಕ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಈ ವಿಶ್ವದ ಸೃಷ್ಟಿಯಾಗಿದ್ದು ( ಮಹಾಸ್ಪೋಟದ ಮೂಲಕ ) ೧೩.೮ ಬಿಲಿಯನ್‌ ವರ್ಷಗಳ ಹಿಂದೆ. ಈಗ ಅಸ್ತಿತ್ವದಲ್ಲಿ ಇರುವ ವಸ್ತು, ಕಪ್ಪು ವಸ್ತು, ಕಪ್ಪು ಶಕ್ತಿ - ಹೀಗೆ ಎಲ್ಲವೂ ೧೩.೮ ಬಿಲಿಯನ್‌ ವರ್ಷದ ಹಿಂದಷ್ಟೇ ಸೃಷ್ಟಿ ಆದವು ಎನ್ನಲಾಗಿದೆ. ಅಂದರೆ ಅದಕ್ಕಿಂತ ಮೊದಲು ಈಗ ಇರುವ ಏನೊಂದೂ ಇರಲಿಲ್ಲ. ಆದರೆ ಅದೇ ವಿಜ್ಞಾನಿಗಳಿಗೆ ಈಗ ಬಹು ದೊಡ್ಡ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ ಸುಮಾರು ೧೪.೫ ಬಿಲಿಯನ್‌ ವರ್ಷ ವಯಸ್ಸಿನ ಕೆಲವು ನಕ್ಷತ್ರಗಳನ್ನು ಇದೀಗ ಹಬಲ್‌ ಟೆಲಿಸ್ಕೋಪ್‌ ಗುರುತಿಸಿದೆ ! ವಿಶ್ವಕ್ಕಿಂತಲು ಸುಮಾರು ೦.೭ ಬಿಲಿಯನ್‌ ವರ್ಷ ಹಿರಿಯ ನಕ್ಷತ್ರಗಳು ಬಂದಿರುವುದಾದರೂ ಎಲ್ಲಿಂದ ? ಇದು ಹೇಗೆ ಸಾಧ್ಯವಾಯ್ತು ಅನ್ನೋದು ವಿಜ್ಞಾನಿಗಳ ತಲೆಬಿಸಿಗೆ ಕಾರಣವಾಗಿದೆ. ಅಂದರೆ ಇಲ್ಲಿ ಒಂದೋ ವಿಶ್ವದ ಸೃಷ್ಟಿಯ ಲೆಕ್ಕಾಚಾರ ತಪ್ಪಿರಬೇಕು. ( ೧೪.೫ ಬಿಲಿಯನ್‌ ವರ್ಷಗಳಿಗಿಂತಲೂ ಹಿಂದೆಯೇ ವಿಶ್ವವು ಸೃಷ್ಟಿಯಾಗಿರಬೇಕು. ). ಅಥವಾ ನಕ್ಷತ್ರಗಳ ವಯಸ್ಸಿನ ಲೆಕ್ಕಚಾರ ತಪ್ಪಾಗಿರಬೇಕು. ( ನಕ್ಷತ್ರಗಳ ಗಾತ್ರ, ಅವುಗಳಿಂದ ಬರುತ್ತಿರುವ ಇನ್ಫ್ರಾರೆಡ್‌ ಕಿರಣ, ಬೆಳಕಿನ ವೇವ್‌ಲೆನ್ತ್‌, ಮಾಸ್‌ ಮುಂತಾದವುಗಳ ಮೂಲಕ ನಕ್ಷತ್ರವೊಂದರ ವಯಸ್ಸನ್ನು ಅಳೆಯಲಾಗುತ್ತಿದೆ. ) ಇವೆರಡರಲ್ಲಿ ಯಾವ ಲೆಕ್ಕ ತಪ್ಪಾಗಿದೆ ಅನ್ನೋದನ್ನ ಈಗ ಪತ್ತೆ ಹಚ್ಚುವ ಕೆಲಸ ನಡೆದಿದೆಯಂತೆ. 

ವೇಶ್ಯಾವೃತ್ತಿ ಕಾನೂನುಬದ್ದಗೊಳ್ಳಲಿ...

ಕೆಲವು ವರ್ಷದ ಹಿಂದೆ ಒಬ್ಬರು ಕನ್ನಡದ ನಟಿ ( ತಾರಾ ಅವರು ಅಂತ ನೆನಪು ) "ವೇಶ್ಯಾವಾಟಿಕೆ ಯನ್ನು ಕಾನೂನು ಬದ್ಧಗೊಳಿಸಬೇಕು" ಅಂತ ಹೇಳಿದ್ದರು. ಅದನ್ನು ಅಂದು ಬಹಳಷ್ಟು ಮಂದಿ ವಿರೋಧ ಮಾಡಿದ್ದರು. ಅದನ್ನು ನಾನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೆ ಮಾಡಿದಾಗ ಅಲ್ಲಿಯೂ ತುಂಬಾ ಜನ ವಿರೋಧ ಮಾಡಿದ್ದರು. "ನಿನ್ನ ಅಕ್ಕ, ತಂಗಿ ಆ ವೃತ್ತಿಯಲ್ಲಿ ಇದ್ದಿದ್ದರೂ ಹೀಗೆ ಬೆಂಬಲ ಕೊಡುತಿದ್ಯಾ?" ಅಂತಲೂ ಕೇಳಿದ್ದರು. ವೇಶ್ಯಾವಾಟಿಕೆ ನಿರ್ಮೂಲನೆ ಹೇಗೆ ? ಅಂತ ತಿರುಗಿ ಕೇಳಿದರೆ ಅದಕ್ಕೆ ಕಾನೂನು ಇದೆಯಲ್ಲ ಅಂದಿದ್ದರು..  ಅದಾಗಿ ಐದಾರು ವರ್ಷಗಳೇ ಕಳೆದಿವೆ. ಈಗಲೂ ವೇಶ್ಯಾವಾಟಿಕೆ ಯಲ್ಲಿ ನಮ್ಮ ರಾಜ್ಯದಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ ಅನ್ನೋ ವರದಿ ಬಂದಿದೆ !! ವೇಶ್ಯಾವಾಟಿಕೆ ವಿರೋಧಿ ಕಾನೂನು ಹಾಗೆಯೇ ಇದೆ, ಆದರೆ ಆ ದಂದೆ ಮಾತ್ರ ನಿಂತಿಲ್ಲ. ಅದರಲ್ಲಿ ತೊಡಗಿಸಿಕೊಂಡಿರುವ ಆ ಲಕ್ಷಕ್ಕೂ ಹೆಚ್ಚು ಮಹಿಳೆಯರ ಮಾಹಿತಿ ಯಾರ ಬಳಿಯೂ ಇಲ್ಲ ! ಅವರಿಂದ ಬರುವ ಆದಾಯ ಅವರಿಗೇ ಸಿಗುತ್ತಿದೆ ಅಂತ ಯಾರಾದರೂ ಹೇಳಲು ಸಾದ್ಯವೇ ? ವಿಟರಿಂದ, ಪೊಲೀಸರಿಂದ ಮತ್ತು ದಂದೆ ನಡೆಸುವವರಿಂದ ನಡೆಯುತ್ತಿರುವ ದೌರ್ಜನ್ಯವನ್ನು ಯಾರು ತಡೆಯಲು ಸಾಧ್ಯ ಹೇಳಿ. 'ಕೊಳಕು ಎಷ್ಟಾದರೂ ಇರಲಿ, ಅದು ಎದುರಿಗೆ ಕಾಣಿಸದಿದ್ದರೆ ಸಾಕು' ಅನ್ನುವಂತಿದೆ ಇವರು ಹೇಳುವುದು. [ ಕೃಪೆ : ಪ್ರಜಾವಾಣಿ ೧೫ ಜುಲೈ ೨೦೧೭

ಪ್ರೇಮಿಗಳು...

ಆ ಬೆಟ್ಟದ ತುದಿಯ ಬೋಳು ಮರದ ಕೆಳಗೆ ಸದಾ ಭೇಟಿ ಆಗುವ ಆ ಪ್ರೇಮಿಗಳು... ಐನ್ ಸ್ಟೈನ್ ನ ವಿಶೇಷ ಸಮಯದ ನಿಯಮ ಬಹುಶಃ ಇವರಿಗೂ ಅನ್ವಯ ಆಗಿತ್ತೋ ಏನೋ ನಮ್ಮ ಇಡೀ ಒಂದು ದಿನ ಇವರ ಪಾಲಿಗೆ ಒಂದು ಗಳಿಗೆಯಷ್ಟೂ ಆಗಿರಲಿಲ್ಲ. ಬೋಳು ಮರ ನೆರಳು ಕೊಡದಿದ್ದರೂ ಬಿಸಿಲು ಅವರಿಗೆ ತಾಕಲಿಲ್ಲ ಬೀಸುವ ಗಾಳಿಗೆ ತೂರಿದ ಆ ಸುಂದರಿಯ ಕೂದಲ ಕಾರಣಕ್ಕೆ ಆಕೆಯ ಮುಖ ಸರಿಯಾಗಿ ತೋರಲಿಲ್ಲ. ಏನೋ ಮಾತು, ನಡು ನಡುವೆ ಮುದ್ದು ಮತ್ತೇನನ್ನೂ ನಾನು ಕದ್ದು ನೋಡಲಿಲ್ಲ. ಅವರ ಈ ಮುಗಿಯದ ಮಾತಿನ ಸಂತೆಯಲ್ಲಿ ಕಳೆದು ಹೋಗಿರಬಹುದಾದ ಚಿಂತೆ ಇತ್ತೋ ಇಲ್ಲವೋ ತಿಳಿಯಲಿಲ್ಲ. ವಸಂತನಾಗಮನ ಹತ್ತಿರವಾದಂತೆ.. ಪ್ರೇಮಿಗಳೆದೆಯಲ್ಲಿ ಹೊಸ ಕಾವ್ಯ ಹುಟ್ಟಿರಬಹುದೇನೋ ಎಂಬ ನನ್ನ ಕಲ್ಪನೆ.. ಸುಳ್ಳಾಗುತ್ತ ಸಾಗಿದ್ದು ಚಿಗುರೆಲೆಯಷ್ಟೇ ಸತ್ಯ. ಮುಂಗಾರು ಮೋಡ ಅಂಬರವ ಮುಸುಕಿದಂತೆ ತೆರೆ ತೆರೆಯಾಗಿ ಮುಸುಕುತಿತ್ತು ಪ್ರೇಮಿಗಳ ಮೊಗದಲ್ಲಿ ಚಿಂತೆ. ಕೊನೆಗೊಂದು ದಿನ.. ಪ್ರೇಮಿಗಳ ಬೋಳು ಮರದ ಕೆಳಗೆ ಜನವೋ ಜನ... ಬಿದ್ದೋಡಿ ಹೋಗಿ ನೋಡಿದರೆ ಅಲ್ಲೆರಡು ಹೆಣ. ಮರದೆಲೆಗಳು ಚಿಗಿಯುತ್ತಿದ್ದವು... ವಸಂತ ಬರುತ್ತಿದ್ದ ಭೂಮಿಗೆ... ಪ್ರೇಮ ಪಕ್ಷಿಗಳು ಹಾರಿದ್ದವು ಬಾನಿಗೆ. *Download app : https://goo.gl/9ZnKGJ *

ಆಕಾಶವಾಣಿ... ವಾರ್ತೆಗಳು

ಒಂದಾನೊಂದು ಕಾಲದಲ್ಲಿ ಹಳೇ ಕಾಲದ ರೇಡಿಯೋದಲ್ಲಿ ಉಪೇಂದ್ರ ರಾವ್, ರಂಗ ರಾವ್ ಸುಧಾ ದಾಸ್ ಅವರುಗಳು ವಾರ್ತೆ ಓದುತ್ತಿದ್ದುದು ಬಹಳಾ ಚೆಂದವಿತ್ತು.. ಆರ್ಕೆ ದಿವಾಕರ ಚಿತ್ತರಂಜನ್ ದಾಸ್ ಮುಂತಾದವರ ಪ್ರದೇಶ ಸಮಾಚಾರ ಮುದವಾಗಿ ಕಿವಿಗೆ ಅಡರುತ್ತಿತ್ತು. ಮುಂದೇನಾಯ್ತೆಂದರೆ.. ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ ಮೂರ್ಖರ ಪೆಟ್ಟಿಗೆಯಲ್ಲಿ ದೂರ ದರ್ಶನವನ್ನು ಅಡಚಣೆಗಾಗಿ ಕ್ಷಮಿಸುತ್ತ ಹತ್ತಿರ ಮಾಡಿಕೊಂಡಂತೆಯೇ... 'ಉದಯ'ವಾದವು ಹೊಸ ಖಾಸಗಿ ವಾಹಿನಿಗಳು... ವಾರ್ತೆಗಳನ್ನು ಓದುತ್ತಿದ್ದವರ ಕಾಲ ಸರಿದು.. ವಾಕರಿಕೆ ಬರುವಂತೆ ವದರುವವರ ಕಾಲ ಸುರುವಾಯ್ತು. ಸುದ್ದಿ ಹೆಕ್ಕಿ ತರುವವರೇ ಸುದ್ದಿಯನ್ನು ಸೃಷ್ಟಿಸಲಾರಂಭಿಸಿ.. ಸುದ್ಧಿಗಿಂತ ಹೆಚ್ಚಾಗಿ ಸದ್ದುಗಳೇ ತುಂಬಿ ಹೋಗಿ... ಸಂದರ್ಶನಕ್ಕೆ ಕೂತರೆ.. ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ.. ಮುಗಿಯದ ಪ್ರಶ್ನೆಗೆ ಉತ್ತರಿಸಲು ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ... ನೋಡುಗರ ತಿಥಿ ಆಗುವ ಹೊತ್ತಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು ! *Download app : https://goo.gl/9ZnKGJ *

"ಐಚ್ಚಿಕ" ಹೆಸರಲ್ಲಿ "ಕಡ್ಡಾಯ ಹಿಂದಿ" ಹೇರಿಕೆ

ಮೊನ್ನೆ ಮೊನ್ನೆ "ಹಿಂದಿಯಾ" ಅನ್ನೋ ಹೋಟೆಲಿಗೆ ಹೋಗಿದ್ದೆ. ತಿನ್ನಲು ಏನೇನಿದೆ ? ಅಂತ ಕೇಳಿದ್ದಕ್ಕೆ "ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಚಿತ್ರಾನ್ನ..." ಎಂಬ ಉತ್ತರ ಬಂತು. "ಇಡ್ಲಿ ಕೊಡಿ" ಅಂದೆ, "ಕ್ಷಮಿಸಿ, ಇಡ್ಲಿ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. "ದೋಸೆ ಕೊಡಿ" "ಕ್ಷಮಿಸಿ, ದೋಸೆ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. "ಚಿತ್ರಾನ್ನ ಕೊಡಿ" "ಕ್ಷಮಿಸಿ, ಚಿತ್ರಾನ್ನ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. ನನಗೆ ಬೇಕಾದ್ದು ಇಲ್ಲಿ ಸಿಗಲ್ಲ, ಸರಿ ನಾನು ಹೊರಗೆ ಹೋಗ್ತೀನಿ ಎಂದು ಎದ್ದೆ. ನನ್ನನ್ನು ತಡೆದು ಹೇಳಿದರು.. "ಏನೂ ತಿನ್ನದೆ ಹೋಗುವ ಹಾಗೆಯೇ ಇಲ್ಲ, ಇದು "ಕಡ್ಡಾಯ ತಿನ್ನಣ" "ಆದರೆ ಚಪಾತಿಯನ್ನೇ ತಿನ್ನಬೇಕು ಅಂತ ಕಡ್ಡಾಯ ಮಾಡ್ತಿದೀರಲ್ಲ? ಇದು ಚಪಾತಿ ಹೇರಿಕೆ ಅಲ್ವಾ ?" "ಇಲ್ಲ, ಚಪಾತಿ ತಿನ್ನಬೇಕು ಅನ್ನೋದು ಐಚ್ಚಿಕ ವಿಷಯ. ಯಾರಿಗೂ ಹೇರಿಕೆ ಮಾಡುತ್ತಿಲ್ಲ. ಜೊತೆಗೆ ಬೇರೆ ಬೇರೆ ತಿನಿಸುಗಳೂ ಇವೆಯಲ್ಲ, ನಿಮಗೆ ಇಷ್ಟ ಬಂದಿದ್ದನ್ನ ತಿನ್ನಬಹುದು." "ಆದರೆ ಬೇರೆ ತಿನಿಸು ಯಾವುದೂ ತಯಾರಿಲ್ಲವಲ್ಲ ?" "ಹೌದು, ಹಾಗಾಗಿ ನೀವು ಚಪಾತಿ ತಿನ್ನಲೇ ಬೇಕ

ಜಗತ್ತನ್ನು ಬೆಳಗಿದ ಅನಾಮಿಕ ವಿಜ್ಞಾನಿ : ನಿಕೋಲ ಟೆಸ್ಲಾ !

ಅದು ೧೮೮೪, ಕ್ರೊವೇಶಿಯಾದ ೨೮ ವರ್ಷದ ಒಬ್ಬ ಯುವಕ ತನ್ನ ಅಪ್ರತಿಮ ಬುದ್ದಿವಂತಿಕೆಯನ್ನು ಬಸಿದು ಹಣ ಸಂಪಾದಿಸುವ ಯೋಚನೆಯೊಂದಿಗೆ ಅಮೆರಿಕಾಕ್ಕೆ ಪ್ರವೇಶಿಸಿ ಅಲ್ಲಿ ಅದಾಗಲೇ ಪ್ರಸಿದ್ದಿ ಪಡೆದಿದ್ದ ಇನ್ನೊಬ್ಬ ಯುವ ವಿಜ್ಞಾನಿಯ ಎದುರು ತಾನೇ ಬರೆದುಕೊಂಡು ತಂದಿದ್ದ ಚಿಕ್ಕದೊಂದು ಪತ್ರವನ್ನು ಹಿಡಿದು ನಿಲ್ಲುತ್ತಾನೆ. ಎದುರಿಗಿದ್ದ ವಿಜ್ಞಾನಿಯೋ ಅದಾಗಲೇ ಜಗತ್ಪ್ರಸಿದ್ದಿ ಪಡೆದಿದ್ದ ಮತ್ತು ವಿದ್ಯುತ್‌ ಜನರೆಟರ್‌ಗಳನ್ನು ತಯಾರಿಸಿ ಮಾರುವ ಅತಿ ದೊಡ್ಡ ಸಂಸ್ಥೆಯ ಒಡೆಯ ಕೂಡಾ. ಈ ಯುವಕ ನೀಡಿದ ಆ ಪತ್ರದಲ್ಲಿ ಇದ್ದುದು ಎರಡೇ ಸಾಲು... "ಈ ಜಗತ್ತಿನಲ್ಲಿ ಈಗ ಇರುವುದು ಇಬ್ಬರೇ ಜೀನಿಯಸ್‌ಗಳು. ಅದರಲ್ಲಿ ಒಬ್ಬರು ನೀವು, ಮತ್ತೊಬ್ಬ ನಾನು!" ಈತನ ಕ್ರಿಯಾಶೀಲತೆಯನ್ನು ಕಂಡು ಬೆರಗಾದ ಆ ವಿಜ್ಞಾನಿ "ನಿನ್ನ ಯೋಜನೆಗಳನ್ನು ಇಲ್ಲಿ ಮಾಡು, ನಾವು ತಯಾರಿಸುತ್ತಿರುವ ಜನರೇಟರ್‌ಗಳ ರೀ-ಡಿಸೈನ್‌ ಮಾಡಿ ಕೊಡು, ನಿನಗೆ ೫೦ ಸಾವಿರ ಡಾಲರ್‌ ಬೋನಸ್‌ ಕೊಡುತ್ತೇನೆ" ಎಂದು ಭರವಸೆ ನೀಡಿದ. ೫೦ ಸಾವಿರ ಡಾಲರ್‌ ಅನ್ನುವುದು ಆಗ ಊಹೆಗೂ ನಿಲುಕದ ದೊಡ್ಡ ಮೊತ್ತವಾಗಿತ್ತು! ಈಗಲೂ ಕೂಡಾ. ಅತ್ಯಂತ ಕುಶಿಗೊಂಡ ಆ ಬಡ ಯುವಕ ಬೇಗ ಬೇಗನೆ ಅನೇಕ ಜನರೆಟರ್‌ಗಳ ಮಾಡೆಲ್‌ಗಳನ್ನು ಮಾಡಿ ಆ ವಿಜ್ಞಾನಿಗೆ ತೋರಿಸಿದ. ಎಲ್ಲವೂ ಈ ಮೊದಲು ಅವರು ತಯಾರಿಸುತ್ತಿದ್ದ ಜನರೇಟರ್‌ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರು ಮಾಡಬಹುದಾದಂತಹ ಮಾಡೆಲ್‌ಗಳು. ಹೀಗೆ ತನ

ನಿರ್ಜೀವ ವಸ್ತುಗಳಿಂದ ಜೀವಕೋಶದ ರಚನೆ...

ಜೀವಿಗಳ ಉಗಮ ಆಕಸ್ಮಿಕವಾದುದು ಎಂಬ ವಿಜ್ಞಾನಿಗಳ ಹೇಳಿಕೆಗೆ ಈಗಾಗಲೇ ಸಾವಿರಾರು ಪುರಾವೆಗಳು ಸಿಕ್ಕಿವೆ. ಅವುಗಳಲ್ಲಿ ಪ್ರಮುಖವಾದುದು ಜೀವಕೋಶಗಳ ರಚನೆ ಆಗುತ್ತಿರುವು ಮುಖ್ಯವಾಗಿ ಕೇವಲ ಐದು ಮೂಲ ವಸ್ತುಗಳಿಂದ. ಅವುಗಳೆಂದರೆ .. ೧. ಹೈಡ್ರೋಜನ್‌ ೨. ಆಕ್ಸಿಜನ್‌ ೩. ಕಾರ್ಬನ್‌ ೪. ನೈಟ್ರೋಜನ್‌ ೫. ಕ್ಯಾಲ್ಸಿಯಂ ಈ ಐದು ಮೂಲ ವಸ್ತುಗಳೇ ನಮ್ಮ ದೇಹದ ೯೯% ಭಾಗವನ್ನು ಆವರಿಸಿಕೊಂಡಿರುವುದು. ಇದನ್ನು ಹೇಳಿದ ಕೂಡಲೇ ಆಸ್ತಕರು ತಕ್ಷಣ "ಹಾಗಿದ್ದರೆ ಈ ವಸ್ತುಗಳನ್ನು ಕೊಡುತ್ತೇನೆ, ಜೀವಿಯೊಂದನ್ನು ಮಾಡಿ ಕೊಡಿ ನೋಡುವ" ಅನ್ನುವ ಸವಾಲನ್ನು ಒಡ್ಡುತ್ತಾರೆ. ಆ ಸವಾಲನ್ನು ವಿಜ್ಞಾನಿಗಳು ಈಗಾಗಲೇ ಸ್ವೀಕರಿಸಿದ್ದಾರೆ, ಮತ್ತು ನಿರ್ಜೀವ ವಸ್ತುಗಳಿಂದ ಜೀವಕೋಶವನ್ನು ಸೃಷ್ಟಿಸಲು ಹೆಣಗುತ್ತಿದ್ದಾರೆ.  ಮೇಲೆ ತಿಳಿಸಿದ ಮೂಲವಸ್ತುಗಳ ಯಾವುದೋ ಒಂದು ವಿಶಿಷ್ಟ ಮಿಶ್ರಣದಲ್ಲೇ ಜೀವಿಗಳ ಉದಯ ಆಯ್ತು ಅನ್ನುವುದುವಿಜ್ಞಾನಿಗಳ ಬಲವಾದ ನಂಬಿಕೆ. ಏಕೆಂದರೆ ಮೇಲ್ಕಾಣಿಸಿದ ಎಲ್ಲಾ ಐದೂ ವಸ್ತುಗಳೂ ಸಹ ಜ್ವಾಲಾಮುಖಿಯ ಲಾವಾರಸ ನೀರಿನೊಂದಿಗೆ ಬೆರೆಯುವ ಸ್ಥಳದಲ್ಲಿ ಹೆಚ್ಚಾಗಿ ಇರುವುದನ್ನು ಕಾಣಬಹುದು. ಆ ಜಾಗವು ಒಂದು ವಿಶಿಷ್ಟ ರಾಸಾಯನಿಕ ಕ್ರಿಯೆಯನ್ನು ನಡೆಸುತ್ತಾ ಇರುತ್ತದೆ. ಇಂತಹ ಸಮಯದಲ್ಲೇ ಜೀವಿಯ ಉಗಮ ಆಗಿರುವ ಸಾಧ್ಯತೆ ಬಲವಾಗಿದೆ. ಏಕೆಂದರೆ ಭೂಮಿಯು ರಚನೆಗೊಂಡು ತಂಪಾಗುತ್ತಿದ್ದ ಸಮಯದಲ್ಲಿ ಕೂಡಾ ಇದೇ ತೆರನಾದ ಸ್ಥಿತಿಯು ಲಕ್ಷಾಂತರ ವರ್ಷಗಳ ವರೆಗೆ ಮುಂದ