ಮರಳುಗಾಡಲ್ಲಿ ಯಾಕೆ ಬೋಟ್ಗಳು ನಿಂತಿವೆ ಅಂತ ಚಕಿತರಾಗಬೇಡಿ. ಕೇವಲ ಆರೇಳು ದಶಕದ ಹಿಂದೆ ಇದು ಒಂದು ಚಿಕ್ಕ ಸಮಸ್ರವಾಗಿತ್ತು ಮತ್ತು ಈ ಜಾಗದಲ್ಲಿ ೨೦೦ ಮೀಟರಿಗೂ ಹೆಚ್ಚು ಎತ್ತರ ನೀರು ನಿಂತಿತ್ತು. ಆದರೆ ಇಂದು ಎಲ್ಲವೂ ಬತ್ತಿ ಬರಡಾಗಿ ಸಮಸ್ರವಿದ್ದ ಜಾಗ ಮರಳುಗಾಡಾಗಿದೆ. ಈ ಸಮುದ್ರದ ಹೆಸರು "Aral Sea" ಎಂದು. ಕಜಕಿಸ್ತಾನ್ ದೇಶದಲ್ಲಿದೆ. ಒಂದು ಸಮಯದಲ್ಲಿ ಇದರಿಂದ ವರ್ಷಕ್ಕೆ ೫೦,೦೦೦ ಟನ್ಗಳಷ್ಟು ಮೀನು ಸಿಗುತ್ತಿತ್ತಂತೆ ! ಆದರೆ ಈಗ ಹೀಗೆ ಬರಡು ಬೂಮಿಯನ್ನಾಗಿಸಿದ್ದು ಮಾತ್ರ ಮನುಷ್ಯ. ನದಿಗಳನ್ನು ತಿರುಗಿಸಿ, ಈ ಸಮುದ್ರದಿಂದಲೂ ನೀರನ್ನೆತ್ತಿ ಕೃಷಿಗೆ ಅಂತ ಉಪಯೋಗಿಸಲಾರಂಭಿಸಿದರು. ಅರ್ಧ ಶತಮಾನ ಕಳೆಯುವುದರಲ್ಲಿ ಸಮುದ್ರ ಮರಳುಗಾಡಾಗಿ ಬದಲಾಗಿದೆ. ಈಗ ಅಲ್ಲಿನ ಕೃಷಿಯೂ ನೀರಿಲ್ಲದೇ ಅತಂತ್ರ ಸ್ಥಿತಿಯಲ್ಲಿದೆ. ಅಂದಿನ ಸೋವಿತ್ ಯೂನಿಯನ್ ಸರ್ಕಾರ ಮಾಡಿದ ಎಡವಟ್ಟಿನಿಂದ ಪ್ರಕೃತಿಗೆ ಅತಿ ದೋಡ್ಡ ಹೊಡೆತ ಬಿದ್ದಿದೆ. ಹಾಗೆಯೇ ಈಗ ನಮ್ಮ ಯೂನಿಯನ್ ಸರ್ಕಾರ ಸಹ "ಗಂಗಾ ಕಲ್ಯಾಣ" "ಗಂಗಾ ಕಾವೇರಿ" ಎಂಬ ಏನೇನೋ ಯೋಜನೆಗಳ ಬಗ್ಗೆ ಮಾತಾಡುತ್ತಿದೆ. ಗಂಗಾ ನದಿಯನ್ನು ತಿರುಗಿಸಿ ದೇಶವನ್ನು ಉದ್ದಾರ ಮಾಡ್ತೀವಿ ಅಂತಿದ್ದಾರೆ. ಆದರೆ ಮುಂದಿನ ಪರಿಣಾಮ ?
ಮನಸು ಹೃದಯಗಳ ಸವಿಮಾತು............