"ಇಲ್ಲ" ಅಂತೀರಾ ಅಂತ ಗೊತ್ತು. ಆದ್ರೂ ಕೇಳದೇ ವಿಧಿ ಇಲ್ಲ ನೋಡಿ. ಈ ರಾಜಕಾರಣ ಅಂದರೇನೇ ಮೂರೂ ಬಿಟ್ಟವರ ಸ್ವರ್ಗ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ನಿಮ್ಮನ್ನು ಮೆಚ್ಚಲೇ ಬೇಕು. ಯಾಕೆ ಗೊತ್ತಾ ? ನಾಚಿಕೆ, ಮಾನ, ಮರ್ಯಾದೆಗಳು ಇಲ್ಲದಿದ್ದರೂ ಇವೆಯೆಂಬಂತಾದರೂ ನಟಿಸುವ ರಾಜಕಾರಣಿಗಳ ಮಧ್ಯೆ "ಅವ್ಯಾವೂ ನನಗಿಲ್ಲ ಕಣ್ರೀ? ಏನ್ರೀ ಈವಾಗ?" ಅಂತ ರಾಜಾರೋಷವಾಗಿ ಕುರ್ಚಿ ಹಿಡಿದು ಕುಳಿತಿದ್ದೀರಲ್ಲ... ಅದಕ್ಕೆ. ಆರೋಪಗಳು ರಾಜಕಾರಣಿಗಳ ಮೇಲೊಂದೇ ಅಲ್ಲ. ಹಳ್ಳಿಯ ಮುಗ್ದ ಜನರ ಮೆಲೂ ಆಗಾಗ ಬರುತ್ತಲೇ ಇರುತ್ತವೆ. ಆಗ ಅವರು ಆಣೆ-ಪ್ರಮಾಣ ಮಾಡುವುದು ಸಾಧಾರಣ ವಿಷಯ. ಏಕೆಂದರೆ ಅವರಿಗೆ ಕೋರ್ಟು-ಕಚೇರಿ ಸುತ್ತುವುದು ಸಾಧ್ಯವಿಲ್ಲ. ದೇವರ ಮೇಲೆ ಅಪಾರ ನಂಬಿಕೆ. ಅದೇನಿದ್ದರೂ ದೇವರು ನೋಡಿಕೊಳ್ಳಲಿ ಎಂದು ಆಣೆ ಮಾಡುತ್ತಾರೆ. ಹಾಗಂತೆ ಅದನ್ನು ಕಂಡವರ ದುಡ್ಡಲ್ಲಿ ಜಾಹೀರಾತು ನೀಡಿ ಎಲ್ಲರಿಗೂ ತಿಳಿಸುವುದಿಲ್ಲ. ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ಮಾಡುತ್ತಾರೆ. ಅದು ಅವರ ಪರಿಮಿತಿ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೇನಾಗಿದೇರಿ ದಾಡಿ ? ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದರೆ, ವೃಥಾ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ? ಅವರು ಬಹಿರಂಗ ಮಾಡುತ್ತಿರುವ ದಾಖಲೆಗಳು ನಕಲಿ ಆಗಿದ್ದರೆ ಮಾನನಷ್ಟ ಮೊಖದ್ದಮೆ ಹೂಡಬಹುದಲ್ಲ? ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ ಕೋಟಿ ಕಳೆಯುವ
ಮನಸು ಹೃದಯಗಳ ಸವಿಮಾತು............