ಇಂದು ಎಲ್ಲಾ ಪತ್ರಿಕೆಗಳಲ್ಲು ಒಂದು ಕಾಲು ಪುಟದ ಜಾಯೀರಾತು. ಅದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಾಕಿದ ನೇರ ಸವಾಲು. ಅದೇನು ಅಂದ್ರೆ ಕುಮಾರಸ್ವಾಮಿಯವರು ಕಳೆದ ಕೆಲವು ದಿನಗಳಿಂದ ಯಡ್ಡಿ ಮೇಲೆ ಹಲವಾರು ಆಪಾದನೆ ಮಾಡುತ್ತಾ ಬಂದಿದ್ದಾರೆ. ಈ ಜಾಹೀರಾತಿನಲ್ಲಿ ಯಡ್ಡಿ "ಅವುಗಳೆಲ್ಲಾ ಶುದ್ಧ ಸುಳ್ಳು, ಬೇಕಾದರೆ ಧರ್ಮಸ್ಥಳದಲ್ಲಿ ಬಂದು ಇಬ್ಬರೂ ಪ್ರಮಾಣ ಮಾಡೋಣ. ಬರುತ್ತೀರಾ ? " ಎಂದು ಸವಾಲು ಹಾಕಿದ್ದಾರೆ.
ಅದಕ್ಕೆ ಕುಮ್ಮಿ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ( ಯಡ್ಡಿ ಹಗರಣಗಳ ನೇರ ಮಾತುಕತೆಗೆ ಆರ್ಎಸ್ಎಸ್ ನೇತಾರರೊಂದಿಗೆ ಬರುವಂತೆ ಕುಮ್ಮಿ ಹಾಕಿದ ಸವಾಲನ್ನು ಯಡ್ಡಿ ಸ್ವೀಕರಿಸಿಲ್ಲ. ಅದಕ್ಕೆ ಉತ್ತರವನ್ನೂ ಕೊಟ್ಟಿಲ್ಲ. )
ಆದರೆ ಯಡ್ಡಿಯ ಈ ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು ಮಾಡುವ ಅಗತ್ಯ ಏನಿತ್ತು ? ಏಕೆಂದರೆ ಇವರು ಸವಾಲು ಹಾಕಿದ ಜಾಹೀರಾತು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಬಂದಿದೆ. ನೇರವಾಗಿ ಕುಮ್ಮಿಗೇ ಒಂದು ಕರೆ ಮಾಡಿ ಹೇಳಬಹುದಿತ್ತು. ಅಥವಾ ರಿಜಿಸ್ಟರ್ ಪೋಸ್ಟ್ನಲ್ಲಿ (೪೦ ರೂ ಖರ್ಚು) ಕಳಿಸಿದ್ದರೆ ಆಗಿತ್ತು. ಇನ್ನೂ ಬೇಕಾದರೆ ೫೦೦ ರೂ ಖರ್ಚು ಮಾಡಿ ಒಂದು ಪತ್ರಿಕಾ ಘೋಷ್ಠಿ ನಡೆಸಿದ್ದರೂ ಸಾಕಿತ್ತು. ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಬರುತ್ತಿತ್ತು. ಹೀಗೆ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಬೇಕಿತ್ತಾ ?
ಗಮನಿಸಿದ್ದೀರಾ ? ಇತ್ತೀಚಿಗೆ ಎಲ್ಲಾ ಪತ್ರಿಕೆಗಳಲ್ಲೂ ಕರ್ನಾಟಕ ಸರ್ಕರದ ಜಾಹೀರಾತುಗಳು ಹೆಚ್ಚು ಕಡಿಮೆ ದಿನನಿತ್ಯ ಪ್ರಕಟವಾಗುತ್ತಿವೆ. ಈ ರೀತಿ ಮಠಗಳಾದ ನಂತರ ಪತ್ರಿಕೆಗಳನ್ನು ತಮ್ಮ ಬುಟ್ಟಿಗೆ ಹಾಕಿಕಳ್ಳಲು ಹವಣಿಸಿದ್ದಾರೆ ಯಡಿಯೂರಪ್ಪ.
ಅದಕ್ಕೆ ಕುಮ್ಮಿ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ( ಯಡ್ಡಿ ಹಗರಣಗಳ ನೇರ ಮಾತುಕತೆಗೆ ಆರ್ಎಸ್ಎಸ್ ನೇತಾರರೊಂದಿಗೆ ಬರುವಂತೆ ಕುಮ್ಮಿ ಹಾಕಿದ ಸವಾಲನ್ನು ಯಡ್ಡಿ ಸ್ವೀಕರಿಸಿಲ್ಲ. ಅದಕ್ಕೆ ಉತ್ತರವನ್ನೂ ಕೊಟ್ಟಿಲ್ಲ. )
ಆದರೆ ಯಡ್ಡಿಯ ಈ ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು ಮಾಡುವ ಅಗತ್ಯ ಏನಿತ್ತು ? ಏಕೆಂದರೆ ಇವರು ಸವಾಲು ಹಾಕಿದ ಜಾಹೀರಾತು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಬಂದಿದೆ. ನೇರವಾಗಿ ಕುಮ್ಮಿಗೇ ಒಂದು ಕರೆ ಮಾಡಿ ಹೇಳಬಹುದಿತ್ತು. ಅಥವಾ ರಿಜಿಸ್ಟರ್ ಪೋಸ್ಟ್ನಲ್ಲಿ (೪೦ ರೂ ಖರ್ಚು) ಕಳಿಸಿದ್ದರೆ ಆಗಿತ್ತು. ಇನ್ನೂ ಬೇಕಾದರೆ ೫೦೦ ರೂ ಖರ್ಚು ಮಾಡಿ ಒಂದು ಪತ್ರಿಕಾ ಘೋಷ್ಠಿ ನಡೆಸಿದ್ದರೂ ಸಾಕಿತ್ತು. ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಬರುತ್ತಿತ್ತು. ಹೀಗೆ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಬೇಕಿತ್ತಾ ?
ಗಮನಿಸಿದ್ದೀರಾ ? ಇತ್ತೀಚಿಗೆ ಎಲ್ಲಾ ಪತ್ರಿಕೆಗಳಲ್ಲೂ ಕರ್ನಾಟಕ ಸರ್ಕರದ ಜಾಹೀರಾತುಗಳು ಹೆಚ್ಚು ಕಡಿಮೆ ದಿನನಿತ್ಯ ಪ್ರಕಟವಾಗುತ್ತಿವೆ. ಈ ರೀತಿ ಮಠಗಳಾದ ನಂತರ ಪತ್ರಿಕೆಗಳನ್ನು ತಮ್ಮ ಬುಟ್ಟಿಗೆ ಹಾಕಿಕಳ್ಳಲು ಹವಣಿಸಿದ್ದಾರೆ ಯಡಿಯೂರಪ್ಪ.
ಕಾಮೆಂಟ್ಗಳು