ತಮಿಳುನಾಡಿನ ಕುತಂತ್ರಿಗಳು ಕಮಲಹಾಸನರ "ವಿಶ್ವರೂಪಂ" ಚಿತ್ರಕ್ಕೂ ಕೊಕ್ಕೆ ಹಾಕಿ ಕೇಕೆ ಹಾಕಿದ್ದಾರೆ. ಅದು ಭಯೋತ್ಪಾದನೆಯ ವಿಷಯವನ್ನು ಒಳಗೊಂಡಿದೆ ಅನ್ನುವುದು ಕುಮಾರಿ (?!) ಜಯಲಲಿತ ಸರ್ಕಾರ ನೀಡಿರುವ ಕಾರಣವಾದರೂ ಅದರ ಹಿಂದಿನ ನಿಗೂಢ ವಿಷಯಗಳು ಬೇರೆಯೇ ಇವೆ. ಭಯೋತ್ಪಾದನೆಯ ವಿಷಯವಿರುವುದಕ್ಕೂ ಮುಸ್ಲಿಮರಿಗೂ ಏನು ಸಂಬಂಧ ? ದೇಶದಲ್ಲಿ ಅಷ್ಟೇ ಅಲ್ಲದೇ ಪ್ರಪಂಚದಲ್ಲೆಲ್ಲಾ ಭಯೋತ್ಪಾದನೆ ಹರಡಿರುವುದು ಸುಳ್ಳೇ ? ತಮಿಳು ಭಯೋತ್ಪಾದನೆ ಈ ಕುಮರಿಯನ್ನೇ ಉಡಾಯಿಸುವಷ್ಟು ಬೆಳೆದಿದ್ದರಿಂದಲೇ ಅಲ್ಲವೇ ಈಕೆ ಝಡ್ + ಕಾವಲು ಹಾಕಿಸಿಕೊಂಡಿದ್ದು? ವಿಶ್ವರೂಪಂ ಚಿತ್ರವು ತಯಾರಾಗುತ್ತಲೇ ಕಮಲ್ ಒಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದರು. ಅದು ಹಂಚಿಕೆ ವಿವಾದ. ಏರ್ಟೆಲ್ ನವರಿಗೆ ಚಿತ್ರದ ಸ್ಯಾಟಲೈಟ್ ಬಿತ್ತರಣೆ ಹಕ್ಕನ್ನು ಮಾರಿಕೊಂಡಿದ್ದು ತಮಿಳುನಾಡಿನ ಚಿತ್ರ ವಿತರಕರ ಕಣ್ಣು ಕೆಂಪಾಗಿಸಿತ್ತು. ಆದರೆ ಅವರಿಗೆ ಕಮಲ್ ಬಗ್ಗಿರಲಿಲ್ಲ. ಆದನ್ನೇ ನೆಪವಾಗಿಟ್ಟುಕೊಂಡ ವಿತರಕ ಮಹಾಷಯರು ಈಗ ಜಯಾ ಮೂಲಕ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಪೋಲಕಲ್ಪಿತ ವದಂತಿಯನ್ನು ಹರಿಯ ಬಿಟ್ಟು ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ. ಮುಸ್ಲಿಂ ಮತಗಳ ಬೇಟೆಯ ಚಿಕ್ಕ ಅವಕಾಶವನ್ನೂ ಕಳೆದುಕೊಳ್ಳಲಿಚ್ಚಿಸದ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಇಂತಹ ಸುವರ್ಣಾವಕಾಶ ಸಿಕ್ಕರೆ ಕೇಳಬೇಕೆ? ಈಗ ನಡೆದಿರುವುದೂ ಅದೇನೆ. ಇಲ್ಲವೆಂದರೆ ಸೆನ್ಸಾರ್ ಮ
ಮನಸು ಹೃದಯಗಳ ಸವಿಮಾತು............