ವಿಷಯಕ್ಕೆ ಹೋಗಿ

ತಾಳ ತಪ್ಪಿದ ಮೋಹನ ಭಾಗವತಿಗೆ !

"ಭಾರತಕ್ಕಿಂತಲೂ ಇಂಡಿಯಾದಲ್ಲೇ ಅತ್ಯಾಚಾರಗಳು ಹೆಚ್ಚು" ಎನ್ನುವ ಮೂಲಕ ನಿರಾಧಾರ ಸುಳ್ಳೊಂದನ್ನು ತೇಲಿ ಬಿಟ್ಟು ಪರಿಹಾಸ್ಯಕ್ಕೀಡಾಗಿದ್ದಾರೆ RSS ಮುಖಂಡ ಮೋಹನ್ ಭಾಗವತ್. ಜನರಿಗೆ ಸುಳ್ಳನ್ನು ಸತ್ಯವೆಂದು ನಂಬಿಸುವ ಕಲೆ ಇವರಿಗೆಲ್ಲಾ ಚೆನ್ನಾಗಿ ಕರಗತವಾಗಿದೆ. ಆದರೂ ಈ ಬಾರಿ ಯಾಕೋ ಎಡವಿದ್ದಾರೆ. ಕಾರಣ ಜನರು ಮೊದಲಿನಷ್ಟು ದಡ್ಡರಾಗಿ ಉಳಿದಿಲ್ಲ ಅನ್ನುವುದು ಬಹುಶಃ ಇವರಿಗೆ ಅರ್ಥವಾಗಿಲ್ಲದಿರಬಹುದು. 
ಭಾರತ ಮತ್ತು ಇಂಡಿಯಾ ಎಂದು ದೇಶವನ್ನು ಎರಡು ಭಾಗ ಮಾಡುವುದೇ ಒಂದು ಅಪದ್ಧ. ಇವರ ಪ್ರಕಾರ ಅವೆರಡಕ್ಕೂ ಅದೇನು ವ್ಯತ್ಯಾಸವಿದೆಯೋ ಗೊತ್ತಿಲ್ಲ. ಬಹುಶಃ ಆಧುನಿಕತೆಯ ಭಾರತ "ಇಂಡಿಯ"ವಾಗಿಯೂ, ಇನ್ನೂ ಹಿಂದುಳಿದಿರುವ (ಗ್ರಾಮೀಣ) ಇಂಡಿಯವು ಭಾರತವಾಗಿಯೂ ಇವರಿಗೆ ಕಂಡಿರಬಹುದು. ಹೇಗೆ ನೋಡಿದರೂ ಅಪ್ಪ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಂಡು ಜನ ಸಾಯಲಿ ಎಂಬುದಷ್ಟೇ ಇದರ ತಾತ್ಪರ್ಯವಾದೀತು. ಏಕೆಂದರೆ ಜನರುಅಭಿವೃದ್ದಿಗೆ ಆಧುನಿಕತೆ ಬೇಕೇ ಬೇಕು. ಅತ್ಯಂತ ಮಿತಿ ಮೀರಿರುವ ಭಾರತದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಆಧುನಿಕತೆ ಇಲ್ಲದ ಭಾರತ ಇವರು ಹೇಳುವ ಭಾರತವಾಗಿಯೂ ಉಳಿಯದೇ ಭಿಕ್ಷುಕರ ನಾಡಾದೀತು. ಅಥವಾ ಮತ್ತೊಮ್ಮೆ ಪರಕೀಯರ ಸೊತ್ತಾಗಬಹುದು (ಈಗ ರಾಜಕಾರಣಿಗಳ ಸೊತ್ತಾಗಿರುವುದು ವಿಪರ್ಯಾಸ). 

ಗ್ರಾಮೀಣತನವೇ ಇವರು ಹೇಳುವ ಭಾರತ ಎಂದಾದರೆ ಭಾಗವತರು ಇಡೀ ಇಂಡಿಯಾದ ಜನರ ಕಿವಿ ಮೇಲೆ ದೊಡ್ಡ ದಾಸವಾಳದ ಹೂವನ್ನೇ ಇಡಲು ಪ್ರಯತ್ನ ಪಟ್ಟಿದ್ದಾರೆನ್ನಬಹುದು. ಅಥವಾ ಅಂಕಿ-ಸಂಖಿಗಳ ಜ್ಞಾನವಿಲ್ಲದೇ ಹೇಳಿಕೆಯೊಂದನ್ನು ತೇಲಿ ಬಿಟ್ಟಿದ್ದಾರೆ. ಏಕೆಂದರೆ ಅತ್ಯಾಚಾರಗಳ ಪರಿಮಾಣವನ್ನು ಅವಲೋಕಿಸಿದರೆ ಭಾಗವತರು ಹೇಳುವ ನಗರಗಳೆಂಬ ಇಂಡಿಯಾಕ್ಕಿಂತಲೂ ಗ್ರಾಮೀಣ ಭಾರತದಲ್ಲೇ ಅತ್ಯಾಚಾರಗಳು ಹೆಚ್ಚು... ಎಲ್ಲರಿಗೂ ತಿಳಿದಿರುವಂತೆ ಗ್ರಾಮಾಂತರ ಪ್ರದೇಶದಲ್ಲಿ ಆಗುವ ಅದೆಷ್ಟೋ ಅತ್ಯಾಚಾರ ಪ್ರಕರಣಗಳು ಕಂಡಿತಾ ಪೊಲೀಸ್‌ ಠಾಣೆ ವರೆಗೆ ಬರುವುದೇ ಇಲ್ಲ. ಭಯದಿಂದಲೋ ಅಥವಾ ಹಳ್ಳಿ ಮುಖಂಡರ ಪಂಚಾಯ್ತಿ ದೆಸೆಯಿಂದಲೋ ಅಲ್ಲೇ ಮುಚ್ಚಿ ಹೋಗುವ ಪ್ರಕರಣಗಳೇ ಹೆಚ್ಚು. ಹಗಿರುವಾಗಲೂ ಸಹ ಪೊಲೀಸ್‌ ಠಾಣೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯನ್ನು ತೆಗೆದುಕೊಂಡರೆ ಒಟ್ಟು ಅತ್ಯಾಚಾರಗಳಲ್ಲಿ ಶೇ ೭೫ ರಷ್ಟು ಗ್ರಾಮಾಂತರ ಪ್ರದೇಶದಲ್ಲೇ ನಡೆಯುತ್ತಿವೆಯಂತೆ ! ಅಲ್ಲಿಗೆ ಭಾಗವತರ ಭಾರತ ಖಲ್ಲಾಸ್ ! ಭಾಗವತರೀಗ ಹಾಡಲು ಹೊಸ ಪದ್ಯ ಹುಡುಕಬೇಕಷ್ಟೇ!

ಇದೇ ಭಾಗವತರ ಮತ್ತೊಂದು ಆಲಾಪ ಏನೆಂದರೆ "ಹೆಂಗಸರು ಮನೆಯಲ್ಲಿ ಅಡುಗೆ ಮಾಡಿಕೊಂಡು ಇದ್ದರೆ ಒಳ್ಳೆಯದು, ಅವರು ಹೊರಗೆ ಬರಬಾರದು, ಅವರು ಹೊರಗೆ ಬರುವುದರಿಮದಲೇ ಈ ರೀತಿ ಅತ್ಯಾಚಾರಗಲು ನಡೆಯುತ್ತಿರುವುದು". ಆದರೆ ಮನೆಯಲ್ಲೇ ಇದ್ದಂತಹ ಅನೇಕ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿರುವುದು ಅವಿವೇಕಿ ಭಾಗವತರ ಗಮನಕ್ಕೆ ಬಂದಿಲ್ಲವೇ ? ನೂರಾರು ವರ್ಷಗಳಿಂದಲೂ ಮಹಿಳೆಯನ್ನು ತುಳಿದ ದುಷ್ಟ ಮನುಷ್ಯರು ಇಂದಿಗೂ ಭಾಗವತರ ರೂಪದಲ್ಲಿ ಇರುವುದು ಖೇದಕರ. ಇವರೆಲ್ಲ ಒಂದು ಬಗೆಯ ಹಿಂದೂ ಮುಲ್ಲಗಳು. ಇವರಿಗೆ ಮಹಿಳೆಯರ ಉನ್ನತಿ ಬೇಕಾಗಿಲ್ಲ, ಕೆಳ ವರ್ಗದವರ ಉನ್ನತಿ ಬೇಕಾಗಿಲ್ಲ.

ಹಿಂದುಗಳ ಉದ್ದಾರಕರು ಎಂದು ಬೀಗುವ ಇಂತಹ ಮುಖಂಡರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ, ಏಕೆಂದರೆ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಅತ್ಯಾಚಾರಿಗಳು ಶೇ ೯೯ % ಹಿಂದುಗಳೇ ಆಗಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇತರೆ ಧರ್ಮದವರು ಇದ್ದಾರೆ. ದೇಶದ ಜನ ಸಂಖ್ಯೆಗೆ ಹೋಲಿಸಿದರೆ ಇತರೆ ಧರ್ಮದ ಜನ ಸುಮಾರು ೨೦% ಇದ್ದಾರೆ. ಹಾಗೆ ನೋಡಿದರೆ ಅತ್ಯಾಚಾರಿಗಳಲ್ಲೂ ಹಿಂದುಗಳು ೮೦% ಶೇ ಮಾತ್ರ ಇರಬೇಕಾಗಿತ್ತಲ್ಲವೇ ? ಉಹುಂ, ಇಂತಹ ಅಂಕಿ ಸಂಕಿಗಳ ಗೊಡವೆ ಅವರಿಗೆ ಬೇಡ. ಅದೇ ಮಂಗಳೂರಿನ ಹುಡುಗಿಯೊಬ್ಬಳು ಸಾಬಿಯೊಬ್ಬನೊಂದಿಗೆ ಓಡಿ ಹೋದರೆ ಅದು ಇವರಿಗೆ "ಲವ್ ಜಿಹಾದ್" ಆಗಿ ಕಾಣಿಸುತ್ತದೆ. ತಮ್ಮ ಧರ್ಮದವರಿಂದಲೇ ಅತ್ಯಾಚಾರಕ್ಕೊಳಗಾಗಿ ಮಾನ ಮರ್ಯಾದೆ ಕಳೆದುಕೊಂಡು ಸತ್ತರೆ ಪರ್ವಾಗಿಲ್ಲ, ಅನ್ಯ ಧರ್ಮದವರನ್ನು ಪ್ರೀತಿ  ಮಾತ್ರ ಮಾಡಬಾರದು. ದೆಹಲಿಯಲ್ಲಿ ನಡೆದ ಅತ್ಯಾಚಾರಕ್ಕೆ ಎದ್ದು ಬಿದ್ದೂ ಹೋರಾಡುವ ಇವರು ಕರ್ನಾಟಕದ ಅತ್ಯಾಚಾರಗಳಿಗೆ ತುಟಿ ಪಿಟಕ್ ಅನ್ನುವುದಿಲ್ಲ. ಕಾರಣ ಇಲ್ಲ ತಮ್ಮದೇ ಬಿಜೆಪಿ ಸರ್ಕಾರವಿದೆ! 

ಕುಕ್ಕೆಯ ಹೀನ ಎಂಜಲೆಲೆ ಮೇಲಿನ ಉರುಳಾಟವನ್ನು ಇದೇ ಭಾಗವತರು ಒಂದು ಚಿಟಿಕೆ ಹೊಡೆಯುವ ಮೂಲಕ ನಿಲ್ಲಿಸಬಹುದು, ಉಹುಂ, ಬೇಡ, ಉರುಳುವವರು ಅದ್ಯಾರೋ ಕೀಳು ಜನಾಂಗದವರು! ಯಾರೇ ಉರುಳಾಡಲಿ, ಕೆಟ್ಟ ಹೆಸರು ಹಿಂದು ಧರ್ಮಕ್ಕೆ ಅನ್ನುವ ಜ್ಞಾನ ಇವರಿಗೆ ಇಲ್ಲದಿಲ್ಲ.... ಎಲ್ಲರೂ ಸಮಾನರಾದರೆ ತಮ್ಮ ತಮ್ಮ ಜಾತಿಗೆ ಎಲ್ಲಿಯ ನೆಲೆ ಎಂಬ ಭಯ ಮೇಲ್ವರ್ಗಕ್ಕೆ?!

ಈ ನಡುವೆ ಕಳ್ಳ ಕಂಗ್ರೆಸ್‌ನವರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ವಿಷಯದಲ್ಲಿ ಮತ್ತೆ ಉಲ್ಟಾ ಹೊಡೆದಿದ್ದಾರೆ. ಮೊನ್ನೆಯವರೆಗೂ ಅತ್ಯಾಚಾರಿಗಳಿಗೆ "ನಿರ್ವೀರ್ಯತೆ" ಯ ಶಿಕ್ಷೆ ಕೊಡೋಣ ಅನ್ನುತ್ತಿದ್ದವರು ನಿನ್ನೆ "ಅಷ್ಟೆಲ್ಲಾ ಯಾಕೆ? ಕಠಿಣ ಸಜೆ ಸಾಕು" ಅನ್ನತೊಡಗಿದ್ದಾರೆ. ಬಹುಶಃ ಕಾಂಗ್ರೆಸ್‌ನೊಳಗೆ ಇರುವ ಅನೇಕ ಅತ್ಯಾಚಾರಿಗಳು ನಿರ್ವೀರ್ಯರಾಗುವುದು ಇಷ್ಟವಿಲ್ಲವೇನೊ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಕಾರ್ಗಿಲ್ ಕಥೆ : ಸೈನಿಕನೆಂದರೆ

"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು  ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್‌ಗಳೂ ಅವರ ಗನ್‌ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು. ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?" ``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ. ``ಇದು ನಮಗೆ ಎಷ್ಟನೇ ಮುಖಾಮುಖಿ? ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು" ``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು. ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು. *  *  *  ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜ...