ವಿಷಯಕ್ಕೆ ಹೋಗಿ

ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದು ಹೇಗೆ ?


ಮೊದಲನೆಯದಾಗಿ ಅದು ಬುದ್ಧಿ ಕಲಿಯುವ ದೇಶವೇ ಅಲ್ಲ. ಹಾಗಂತ ತೀರ್ಮಾನಿಸಬಹುದಾದರೂ ಅದಕ್ಕೊಂದು ಬುದ್ಧಿ ಕಲಿಸದೇ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ. ಆದರೆ ಸಮಸ್ಯೆ ಇರುವುದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದಾದರೂ ಹೇಗೆ ? ಹಿಂದೆ ಇಲಿಗಳೆಲ್ಲಾ ಸೇರಿಕೊಂಡು ಬೆಕ್ಕಿಗೆ ಗಂಟೆ ಕಟ್ಟಿದ್ದವಂತೆ. ಆದರೆ ಈಗ ಭಾರತದಂತ ಬೆಕ್ಕೇ ಪಾಕಿಯಂತಹ ಇಲಿಗೆ ಗಂಟೆ ಕಟ್ಟುವುದು ಹೇಗಪ್ಪಾ ಎಂದು ಯೋಚಿಸುವಂತಾಗಿದೆ. ಇದು ದುರಂತ.

ಅದೊಂತರ ಮಡಿಲೊಳಗಿನ ಗೊಣಗಲು ಮುಳ್ಳಿನ ಪೊದೆಯಂತೆ, ನಾವು ಅಲ್ಲಾಡಿದರೂ ಚುಚ್ಚುತ್ತೆ, ಅದೇ ಅಲ್ಲಡಿದರೂ ಚುಚ್ಚುತ್ತೆ. ಪಕ್ಕದ ಮನೆಯಲ್ಲೆ ಹುಚ್ಚು ಮುಂಡೇಮಕ್ಕಳಿದ್ದರೆ ಎಷ್ಟು ತೊಂದರೆಯೋ ಅಷ್ಟೇ ತೊಂದರೆ ಈ ಪಾಕಿಸ್ತಾನದಿಂದ. ಸಧ್ಯಕ್ಕೆ ಕಾಶ್ಮೀರ ಭಯೋತ್ಪಾದನೆ ಕಡಿಮೆ ಆಗಿದೆ. ಅಲ್ಲಿ ವಿರೋಧದ ನಡುವೆಯೂ ಮಿಲಿಟರಿ ಬಿಗಿಗೊಂಡದ್ದು ಒಂದು ಕಾರಣವಾದರೆ ಅಫ್ಘನಿಸ್ತಾನದ ಭಯೋತ್ಪಾದಕರನ್ನು ಅಮೆರಿಕ ಬಗ್ಗು ಬಡಿದದ್ದೂ ಕಾರಣವಿರಬಹುದು. ಆದರೂ ಗಡಿಯಲ್ಲಿನ ತಂಟೆ ಇನ್ನೂ ನಿಂತಿಲ್ಲ. 

ಪಾಕಿಸ್ತಾನವು ಭಾರತದೊಂದಿಗೆ ಕಾಲು ಕೆರೆದು ಜಗಳ ತೆಗೆಯುವುದಕ್ಕೆ ಹಲವಾರು ಕಾರಣವಿದೆ. ತನಗೆ ಒಳಗೊಳಗೆ ತುರಿಕೆಯಾದಾಗೆಲ್ಲ ಅದನ್ನು ತುರಿಸಿಕೊಳ್ಳುವುದನ್ನು ಯಾರೂ ನೋಡಬಾರದು ಎಂಬ ಕಾರಣಕ್ಕೆ ಅದು ಇತ್ಲಾಗೆ ಒಂದು ಕಲ್ಲು ಎಸೆದು ಪ್ರಪಂಚದ ದಿಕ್ಕು ತಪ್ಪಿಸುವ ಯತ್ನವನ್ನು ಮಾಡುತ್ತಲೇ ಬರುತ್ತಿದೆ. ಅದು ಅದರ ಕರ್ಮ, ಆದರೆ ಅದರಿಂದ ತೊಂದರೆಗೆ ಒಳಗಾಗುತ್ತಿರುವುದು ಮಾತ್ರ ನಾವೆ. ಹಾಗಂತೆ ಎಷ್ಟು ಅಂತ ಸಹಿಸುವುದು ? ಎಲ್ಲಾ ತಾಳ್ಮೆಗಳಿಗೂ ಒಂದು ಕೊನೆಯಿದ್ದೇ ಇರುತ್ತದೆ. ಭಾರತದ ತಾಳ್ಮೆಗೆ ಕೊನೆ ಇದೆಯೋ ಇಲ್ಲವೋ ಗೊತ್ತಿಲ್ಲ.  

ಏಕಾಏಕಿ ಅದರ ಮೇಲೆ ಯುದ್ಧ ಸಾರಿ ಅದನ್ನು ಹೊಸಕಿ ಹಾಕಿಬಿಡಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಒಂದು ರೀತಿ ಯೋಚಿಸಿದರೆ ಅದು ಸರಿ ಅನ್ನಿಸಲೂ ಬಹುದು. ಆದರೆ ಒಂದೇ ಸಲಕ್ಕೆ ಹೊಸಕಿ ಹಾಕಿ ಬಿಡಲು ಸಾಧ್ಯವೇ ? ಕಂಡಿತಾ ಇಲ್ಲ. ಪಾಕಿಸ್ತಾನಿಯರು ತಿನ್ನಲಿಕ್ಕೆ ಕೂಳಿಗೆ ಗತಿ ಇಲ್ಲವೆಂದರೂ ಬೇಕಾದಷ್ಟು ಆಯುಧ, ಆಣುಬಾಂಬ್‌ಗಳನ್ನು ತಯಾರಿಸಿಟ್ಟು ಕೊಂಡಿದ್ದಾರೆ. ಅದು ಭಾರತ ದಾಳಿ ಮಾಡಿ ಬಿಡುತ್ತದೆ ಅನ್ನುವ ಭಯಕ್ಕಲ್ಲ, ತಾವೇ ಯಾವಾಗಲಾದರೂ ಸಮಯ ಸಿಕ್ಕರೆ ಭಾರತದ ಮೇಲೆ ದಾಳಿ ಮಾಡಲಿಕ್ಕೆ. ಇಂತಹ ಕ್ಷುದ್ರ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಭಾರತ ಗೆಲ್ಲುವುದು ಕಷ್ಟವೆಂದೇನಲ್ಲ, ಆದರೆ ಅದರಿಂದ ಪಾಕಿಸ್ತಾನ ನಿರ್ವಂಶವಾಗಿಯೇ ಹೋಗಬಹುದು... ಆದರೆ ಭಾರತವೂ ಅಂಗಾಂಗಗಳನ್ನು ಊನವಾಗಿಸಿಕೊಳ್ಳಬೇಕಾಗುತ್ತದೆ. ಮತ್ತೊಂದು ಅಪಾಯ ಚೀನಾದ್ದು. ಇತ್ತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿರುವಂತೆಯೇ ಚೀನಾ ಅದರ ಬೆಂಬಲಕ್ಕೆ ನಿಲ್ಲುತ್ತದೆ. ಭಾರತದ ಗೆಳೆಯ ರಷ್ಯಾ ಮೊದಲಿನಷ್ಟು ಸಧೃಡವಾಗಿಲ್ಲ, ಅಮೆರಿಕವನ್ನು ನೆಚ್ಚಿಕೊಳ್ಳುವಂತಿಲ್ಲ. ಆಗ ಭಾರತ ಏಕಾಂಗಿಯಾಗಬೇಕಾದೀತು. ನಾವು ಎಷ್ಟೇ ಮಿಲಿಟರಿ ಸಾಮರ್ಥ್ಯ ಹೊಂದಿದ್ದರೂ ಚೀನಾವನ್ನು ಬಗ್ಗು ಬಡಿಯು ಸಾಮರ್ಥ್ಯ ನಮಗಿಲ್ಲ. ಇದು ಪಾಕಿಸ್ತಾನದ ಮೇಲೆ ಭಾರತವು ದಂಡೇಳದಂತೆ ತಡೆದಿರುವ ಅನೇಕ ಕಾರಣಗಳಲ್ಲಿ ಒಂದು. ನಮ್ಮ ಒಂದು ಕಣ್ಣು ಹೋದರೆ ಹೋಗಲಿ, ಪಾಕಿಸ್ತಾನದ ಎರಡೂ ಕಣ್ಣು ತೆಗೆಯೋಣ ಎಂದು ಹೊರಡುವುದು ಮೂರ್ಖತನವಾದೀತು.

ಹಾಗಾದರೆ ಭಂಡ ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದಾದರೂ ಹೇಗೆ ? ಇದನ್ನು ಮುಳ್ಳನ್ನು ಮುಳ್ಳಿನಿಂದಲೇ ತೆಗೆವ ದಾರಿಯಲ್ಲೇ ಮಾಡಬಹುದು. ಈಗಾಗಲೇ ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರು ಕ್ರಿಯಾಶೀಲರಾಗಿದ್ದು ಪಾಕಿಸ್ತಾನಕ್ಕೆ ತಲೆನೋವಾಗಿದ್ದಾರೆ.  ಭಾರತ ಅನುಸರಿಸ ಬೇಕಾಗಿರುವುದು "ಶತ್ರುವಿನ ಶತ್ರು ಮಿತ್ರ" ಎಂಬ ನಾಣ್ನುಡಿಯನ್ನು. ಅಂದರೆ ಬಲೂಚಿಸ್ತಾನದ ಭಯೋತ್ಪಾದಕರಿಗೆ ಯಥೇಚ್ಚವಾಗಿ ಧನ ಸಹಾಯ ಮಾಡುವ ಮೂಲಕ ಪಾಕಿಸ್ತಾನಕ್ಕೆ ತೊಂದರೆ ಕೊಡುವುದಷ್ಟೇ ಈಗಿರುವ ಮಾರ್ಗ. ಈಗಾಗಲೇ ಭಾರತವು ಅಂತಹ ಕಾರ್ಯವನ್ನು ಮಾಡುತ್ತಿರಬಹುದು. ಏಕೆಂದರೆ ಭಾರತದಲ್ಲಿ ಪಾಕಿಸ್ತಾನ ಪ್ರೇರಿತ ದಾಳಿಗಳು ನಡೆದ ನಂತರವೆಲ್ಲಾ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರಿಂದ ಪಾಕಿಸ್ತಾನದ ಮೇಲೆಯೇ ದಾಳಿಗಳಾಗಿವೆ. 
ಭೂಮಿಗೆ ಅಪ್ಪಳಿಸಲು ಬರುವ ಕ್ಷುದ್ರ ಗ್ರಹವೊಂದನ್ನು ತಡೆಯಲು ವಿಜ್ಞಾನಿಗಳು ಇಲ್ಲಿಂದ ರಾಕೇಟ್ ಕಳಿಸಿ ಢಿಕ್ಕಿ ಹೊಡೆಸಿ ಅದರ ದಿಕ್ಕು ತಪ್ಪಿಸುವಂತೆಯೆ ಪಾಕಿಸ್ತಾನದ ಕ್ಷುದ್ರ ಶಕ್ತಿಯನ್ನು ದಿಕ್ಕು ತಪ್ಪಿಸಬೇಕಾಗಿದೆ. ಅದನ್ನು ಭಾರತ ಸರ್ಕಾರವು ಯಶಸ್ವಿಯಾಗಿ ನಡೆಸಲಿ ಎಂದು ಆಶಿಸೋಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...