ವಿಷಯಕ್ಕೆ ಹೋಗಿ

ಓವೈಸಿ ಎಂಬಂತಹ ಅತೃಪ್ತ ಆತ್ಮಗಳ ಬಗ್ಗೆ...


"ಹದಿನೈದು ನಿಮಿಷ ಪೊಲೀಸರು ಸುಮ್ಮನಾಗಲಿ, ನಮ್ಮ ಹದಿನೈದು ಕೋಟಿ ಮುಸ್ಲಿಮರು ಹೇಗೆ ನೂರು ಕೋಟಿ ಹಿಂದುಗಳನ್ನು ಹೊಸಕಿ ಹಾಕುತ್ತಾರೆ ಎಂದು ನೋಡುತ್ತೀರಿ" ಎಂದು ಪರಮ ಅಪದ್ಧಕಾರಿಯಾಗಿ ಹಾಗೂ ಅಷ್ಟೇ ಆತಂಕಕಾರಿಯಾಗಿ ಹೇಳಿದವನು ಯಾರೋ ಭಯೋತ್ಪಾದಕರ ನಾಯಕನೋ ಅತವಾ ತಲೆ ಕೆಟ್ಟ ಮುಲ್ಲಾನೋ ಅಲ್ಲ. ಈತನೊಬ್ಬ ಜನ ನಾಯಕ ಹಾಗೂ ಈ ದೇಶದ ಸಂವಿಧಾನದ ಮೂಲಕ ಆರಿಸಿ ಬಂದಂತಹ ಶಾಸಕ ಕೂಡಾ. ಇಂತಹವನ ಬಾಯಿಂದ ಇಂತಹ ಆಣಿಮುತ್ತುಗಳು ಉದುರಿದ್ದು ಕಂಡು ಒಂದಿಷ್ಟು ಅಪ್ರಬುದ್ಧ ಮುಸ್ಲಿಂ ಜೀವಗಳು ಕೈ ತಟ್ಟಿ ಖುಷಿ ಪಟ್ಟಿರಲಿಕ್ಕೂ ಸಾಕು, ಹಾಗೆಯೇ ಹಿಂದುಗಳೋಳಗೆ ಸಾವಿರ ತೂತುಗಳಿದ್ದರೂ ಹಿಂದುಸ್ಥಾನ ಕಟ್ಟುತ್ತೇವೆಂದು ಬೊಗಳೆ ಬಿಡುತ್ತಾ ಕೆಳವರ್ಗದವರನ್ನು ಎಂಜಲೆಲೆ ಮೇಲೆ ಉರುಳಿಸಿ ಕುಷಿ ಪಡುವ ಹಲವು ಹಿಂದೂ ಮಹಾನುಭಾವರು "ಹೋ..." ಎಂದು ಹೋರಾಟಕ್ಕೆ ಅಣಿಯಾಗಿರಬಹುದು.

ಓವೈಸಿಯಂತಹವರನ್ನು ಕೇವಲ ಧರ್ಮಾಂಧರು ಅನ್ನಲು ಸಾಧ್ಯವಿಲ್ಲ. ಎಕೆಂದರೆ ಎಷ್ಟೇ ಧರ್ಮಾಂಧನಾಗಿದ್ದರೂ ಸಹ ಕನಿಷ್ಟ ಜ್ಞಾನವಿರುವ ಎಂತಹವನಿಗಾದರೂ ತಿಳಿದಿರುವ ವಿಷಯ ಸಾವಿರಾರು ವರ್ಷಗಳಿಂದ ಸಾಧ್ಯವಾಗದಿರುವ ಹಿಂದುಗಳ ನಿರ್ನಾಮ ಹದಿನೈದು ನಿಮಿಷಗಳಲ್ಲಿ ಸಾಧ್ಯವಿಲ್ಲ ಎಂಬುದು. ವಾಸ್ತವವಾಗಿ ಹದಿನೈದು ನಿಮಿಷವಲ್ಲ, ಹದಿನೈದು ವರ್ಷ ಪೊಲೀಸರಿಲ್ಲದಿದ್ದರೂ ಸಹ ಓವೈಸಿಯಂತಹ ಮತಿಗೇಡಿಗಳ ಬಯಕೆ ನೆರವೇರದು. ಇಂತಹವರಿಂದ ಹೆಚ್ಚೆಂದರೆ ದೊಡ್ಡದೊಂದು ರಕ್ತಪಾತವನ್ನು ನಡೆಸಲು ಸಾಧ್ಯವಾಗಬಹುದಷ್ಟೇ. ಅಲ್ಲ, ಹದಿನೈದು ಕೋಟಿ ಮುಸ್ಲಿಮರು ಮೇಲೆರಗುವಾಗ ನೂರು ಕೋಟಿ ಹಿಂದುಗಳು ಕೈ ಕಟ್ಟಿ ಕುಳಿತಿರುತ್ತಾರೆಯೇ ? ಇವರ ಜೊತೆ ಪಾಕಿಸ್ತಾನದ ಇನ್ನಷ್ಟು ಕೋಟಿ ಜನ ಮುಸ್ಲಿಮರು ಸೇರಿ ಬಂದರು ಇವರ ಬಯಕೆ ನೆರವೇರದು. ಇಷ್ಟಕ್ಕೂ ಇವನು ಹೇಳಿದ ಅಂತ ಹಿಂದುಗಳ ಮೇಲೆರಗಲು ಇರುವ ಎಲ್ಲಾ ಮುಸ್ಲಿಮರೂ ಇವನಂತೆಯೇ ಧರ್ಮಾಂಧರೆ ? ಹಾಗೆನಾದರೂ ಆಗಿದ್ದರೆ ಹದಿನೈದು ನಿಮಿಷವಲ್ಲ, ಹದಿನೈದು ಗಂಟೆಗಳವರೆಗೇ ಪೊಲೀಸರನ್ನ ನಿಷ್ಕ್ರಿಯಗೊಳಿಸಿ ನೋಡೇ ಬಿಡೋಣ!

ಬಹುಶಃ ಅಂತಹುದೊಂದು ಸಂದರ್ಭ ಬಂದರೆ ಓವೈಸಿಯಂತಹ ಹೇತ್ಲಾಂಡಿಯನ್ನು ಸ್ವತಃ ಮುಸ್ಲಿಮರೇ ಟಾರ್ಚು ಹಾಕಿ ಹುಡುಕಬೇಕಾದೀತು. ಏಕೆಂದರೆ ಇಂತಹವರಿಗೆ ಮುನ್ನುಗ್ಗಿ ಹೋರಾಡುವ ಸ್ಥೈರ್ಯ ಕಂಡಿತಾ ಇರುವುದಿಲ್ಲ. ಕೇವಲ ಹೇಳಿಕೆ ಕೊಟ್ಟು ಒಂದಿಷ್ಟು ಮುಸ್ಲಿಮರನ್ನು ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಜೀವನ ಸಾಗಿಸುವುದು ಇವರ ಗುರಿ. ಅಕಸ್ಮಾತ್ ಇವರು ಅಂತಹುದೊಂದು ಹೋರಾಟಕ್ಕೆ ಹೊರಟರೂ ಸಹ ಇವರಿಗೆ ಸಮಸ್ತ ಮುಸ್ಲಿಮರ ಬೆಂಬಲವೂ ದಕ್ಕುವುದಿಲ್ಲ. ಮುಸ್ಲಿಮರಿಗೂ ಹೊಟ್ಟೆಪಾಡು, ಜೀವನ, ಕುಟುಂಬ ಎಲ್ಲಾ ಇದೆ. ಎಲ್ಲೋ ಕೆಲವು ಪಟ್ಟೆಗಳು ಇಂತಹವನ ಹಿಂಬಾಲಕರಾಗಿ ನಡೆದಾಡಬಹುದು. 

ಆದರೂ ಇಂತಹ ಸುದ್ದಿ ಶಿಖಂಡಿಗಳನ್ನು ಹಾಗೆಯೇ ಬಿಡಬಾರದು. ಎರಡು ಧರ್ಮಗಳ ಜನರೊಳಗೆ ಅಂತಃಕಲಹ ಉಂಟು ಮಾಡುವ ಕೃತ್ಯಗಳನ್ನೂ ಸಹ ದೇಶದ್ರೋಹವೆಂದೇ ಪರಿಗಣಿಸಿ ಕಠಿಣ ಶಿಕ್ಷೆಯನ್ನು ಈತನಿಗೆ ನೀಡಬೇಕು. ಮೊದಲಿಗೆ ಈತನ ಶಾಸಕತ್ವವನ್ನು ಹಿಂಪಡೆದು ಜೈಲಿಗೆ ತಳ್ಳಬೇಕಾದುದು ಮೊದಲಿನ ಕೆಲಸವಾಗಿದೆ. ಇವರೆಲ್ಲಾ ದೇಶದ ಸುಭದ್ರತೆಗೆ ಸದಾ ಧಕ್ಕೆ ತರುವ ಕ್ರಿಮಿಗಳು. ಇವರನ್ನು ಹೊಸಕಿ ಹಾಕೆದೇ ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ. ರಕ್ತದೊಳಗಿನ ಕ್ಯಾನ್ಸರ‍್ ರೋಗಾಣುವಿನಂತೆ ನಮ್ಮೊಳಗೇ ಇದ್ದು ಒಂದಲ್ಲಾ ಒಂದು ದಿನ ತಮ್ಮದೇ ಒಂದು ಪಡೆ ಕಟ್ಟಿಕೊಂಡು ದೊಡ್ಡ ಗಾಯ ಮಾಡಲು ತಯಾರಾಗಬಹುದು. ಹಾಗಾಗಿ ಇವನಿಗೆ ಕೂಡಲೆ ಶಿಕ್ಷೆಯಾಗಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...