"ಹದಿನೈದು ನಿಮಿಷ ಪೊಲೀಸರು ಸುಮ್ಮನಾಗಲಿ, ನಮ್ಮ ಹದಿನೈದು ಕೋಟಿ ಮುಸ್ಲಿಮರು ಹೇಗೆ ನೂರು ಕೋಟಿ ಹಿಂದುಗಳನ್ನು ಹೊಸಕಿ ಹಾಕುತ್ತಾರೆ ಎಂದು ನೋಡುತ್ತೀರಿ" ಎಂದು ಪರಮ ಅಪದ್ಧಕಾರಿಯಾಗಿ ಹಾಗೂ ಅಷ್ಟೇ ಆತಂಕಕಾರಿಯಾಗಿ ಹೇಳಿದವನು ಯಾರೋ ಭಯೋತ್ಪಾದಕರ ನಾಯಕನೋ ಅತವಾ ತಲೆ ಕೆಟ್ಟ ಮುಲ್ಲಾನೋ ಅಲ್ಲ. ಈತನೊಬ್ಬ ಜನ ನಾಯಕ ಹಾಗೂ ಈ ದೇಶದ ಸಂವಿಧಾನದ ಮೂಲಕ ಆರಿಸಿ ಬಂದಂತಹ ಶಾಸಕ ಕೂಡಾ. ಇಂತಹವನ ಬಾಯಿಂದ ಇಂತಹ ಆಣಿಮುತ್ತುಗಳು ಉದುರಿದ್ದು ಕಂಡು ಒಂದಿಷ್ಟು ಅಪ್ರಬುದ್ಧ ಮುಸ್ಲಿಂ ಜೀವಗಳು ಕೈ ತಟ್ಟಿ ಖುಷಿ ಪಟ್ಟಿರಲಿಕ್ಕೂ ಸಾಕು, ಹಾಗೆಯೇ ಹಿಂದುಗಳೋಳಗೆ ಸಾವಿರ ತೂತುಗಳಿದ್ದರೂ ಹಿಂದುಸ್ಥಾನ ಕಟ್ಟುತ್ತೇವೆಂದು ಬೊಗಳೆ ಬಿಡುತ್ತಾ ಕೆಳವರ್ಗದವರನ್ನು ಎಂಜಲೆಲೆ ಮೇಲೆ ಉರುಳಿಸಿ ಕುಷಿ ಪಡುವ ಹಲವು ಹಿಂದೂ ಮಹಾನುಭಾವರು "ಹೋ..." ಎಂದು ಹೋರಾಟಕ್ಕೆ ಅಣಿಯಾಗಿರಬಹುದು.
ಓವೈಸಿಯಂತಹವರನ್ನು ಕೇವಲ ಧರ್ಮಾಂಧರು ಅನ್ನಲು ಸಾಧ್ಯವಿಲ್ಲ. ಎಕೆಂದರೆ ಎಷ್ಟೇ ಧರ್ಮಾಂಧನಾಗಿದ್ದರೂ ಸಹ ಕನಿಷ್ಟ ಜ್ಞಾನವಿರುವ ಎಂತಹವನಿಗಾದರೂ ತಿಳಿದಿರುವ ವಿಷಯ ಸಾವಿರಾರು ವರ್ಷಗಳಿಂದ ಸಾಧ್ಯವಾಗದಿರುವ ಹಿಂದುಗಳ ನಿರ್ನಾಮ ಹದಿನೈದು ನಿಮಿಷಗಳಲ್ಲಿ ಸಾಧ್ಯವಿಲ್ಲ ಎಂಬುದು. ವಾಸ್ತವವಾಗಿ ಹದಿನೈದು ನಿಮಿಷವಲ್ಲ, ಹದಿನೈದು ವರ್ಷ ಪೊಲೀಸರಿಲ್ಲದಿದ್ದರೂ ಸಹ ಓವೈಸಿಯಂತಹ ಮತಿಗೇಡಿಗಳ ಬಯಕೆ ನೆರವೇರದು. ಇಂತಹವರಿಂದ ಹೆಚ್ಚೆಂದರೆ ದೊಡ್ಡದೊಂದು ರಕ್ತಪಾತವನ್ನು ನಡೆಸಲು ಸಾಧ್ಯವಾಗಬಹುದಷ್ಟೇ. ಅಲ್ಲ, ಹದಿನೈದು ಕೋಟಿ ಮುಸ್ಲಿಮರು ಮೇಲೆರಗುವಾಗ ನೂರು ಕೋಟಿ ಹಿಂದುಗಳು ಕೈ ಕಟ್ಟಿ ಕುಳಿತಿರುತ್ತಾರೆಯೇ ? ಇವರ ಜೊತೆ ಪಾಕಿಸ್ತಾನದ ಇನ್ನಷ್ಟು ಕೋಟಿ ಜನ ಮುಸ್ಲಿಮರು ಸೇರಿ ಬಂದರು ಇವರ ಬಯಕೆ ನೆರವೇರದು. ಇಷ್ಟಕ್ಕೂ ಇವನು ಹೇಳಿದ ಅಂತ ಹಿಂದುಗಳ ಮೇಲೆರಗಲು ಇರುವ ಎಲ್ಲಾ ಮುಸ್ಲಿಮರೂ ಇವನಂತೆಯೇ ಧರ್ಮಾಂಧರೆ ? ಹಾಗೆನಾದರೂ ಆಗಿದ್ದರೆ ಹದಿನೈದು ನಿಮಿಷವಲ್ಲ, ಹದಿನೈದು ಗಂಟೆಗಳವರೆಗೇ ಪೊಲೀಸರನ್ನ ನಿಷ್ಕ್ರಿಯಗೊಳಿಸಿ ನೋಡೇ ಬಿಡೋಣ!
ಬಹುಶಃ ಅಂತಹುದೊಂದು ಸಂದರ್ಭ ಬಂದರೆ ಓವೈಸಿಯಂತಹ ಹೇತ್ಲಾಂಡಿಯನ್ನು ಸ್ವತಃ ಮುಸ್ಲಿಮರೇ ಟಾರ್ಚು ಹಾಕಿ ಹುಡುಕಬೇಕಾದೀತು. ಏಕೆಂದರೆ ಇಂತಹವರಿಗೆ ಮುನ್ನುಗ್ಗಿ ಹೋರಾಡುವ ಸ್ಥೈರ್ಯ ಕಂಡಿತಾ ಇರುವುದಿಲ್ಲ. ಕೇವಲ ಹೇಳಿಕೆ ಕೊಟ್ಟು ಒಂದಿಷ್ಟು ಮುಸ್ಲಿಮರನ್ನು ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಜೀವನ ಸಾಗಿಸುವುದು ಇವರ ಗುರಿ. ಅಕಸ್ಮಾತ್ ಇವರು ಅಂತಹುದೊಂದು ಹೋರಾಟಕ್ಕೆ ಹೊರಟರೂ ಸಹ ಇವರಿಗೆ ಸಮಸ್ತ ಮುಸ್ಲಿಮರ ಬೆಂಬಲವೂ ದಕ್ಕುವುದಿಲ್ಲ. ಮುಸ್ಲಿಮರಿಗೂ ಹೊಟ್ಟೆಪಾಡು, ಜೀವನ, ಕುಟುಂಬ ಎಲ್ಲಾ ಇದೆ. ಎಲ್ಲೋ ಕೆಲವು ಪಟ್ಟೆಗಳು ಇಂತಹವನ ಹಿಂಬಾಲಕರಾಗಿ ನಡೆದಾಡಬಹುದು.
ಆದರೂ ಇಂತಹ ಸುದ್ದಿ ಶಿಖಂಡಿಗಳನ್ನು ಹಾಗೆಯೇ ಬಿಡಬಾರದು. ಎರಡು ಧರ್ಮಗಳ ಜನರೊಳಗೆ ಅಂತಃಕಲಹ ಉಂಟು ಮಾಡುವ ಕೃತ್ಯಗಳನ್ನೂ ಸಹ ದೇಶದ್ರೋಹವೆಂದೇ ಪರಿಗಣಿಸಿ ಕಠಿಣ ಶಿಕ್ಷೆಯನ್ನು ಈತನಿಗೆ ನೀಡಬೇಕು. ಮೊದಲಿಗೆ ಈತನ ಶಾಸಕತ್ವವನ್ನು ಹಿಂಪಡೆದು ಜೈಲಿಗೆ ತಳ್ಳಬೇಕಾದುದು ಮೊದಲಿನ ಕೆಲಸವಾಗಿದೆ. ಇವರೆಲ್ಲಾ ದೇಶದ ಸುಭದ್ರತೆಗೆ ಸದಾ ಧಕ್ಕೆ ತರುವ ಕ್ರಿಮಿಗಳು. ಇವರನ್ನು ಹೊಸಕಿ ಹಾಕೆದೇ ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ. ರಕ್ತದೊಳಗಿನ ಕ್ಯಾನ್ಸರ್ ರೋಗಾಣುವಿನಂತೆ ನಮ್ಮೊಳಗೇ ಇದ್ದು ಒಂದಲ್ಲಾ ಒಂದು ದಿನ ತಮ್ಮದೇ ಒಂದು ಪಡೆ ಕಟ್ಟಿಕೊಂಡು ದೊಡ್ಡ ಗಾಯ ಮಾಡಲು ತಯಾರಾಗಬಹುದು. ಹಾಗಾಗಿ ಇವನಿಗೆ ಕೂಡಲೆ ಶಿಕ್ಷೆಯಾಗಲಿ.

ಕಾಮೆಂಟ್ಗಳು