ವಿಷಯಕ್ಕೆ ಹೋಗಿ

ಜಿಮೈಲ್‌ನಲ್ಲಿ ಅನಗತ್ಯ ಮಿನ್ನಂಚೆಗಳನ್ನು ಸ್ಪಾಮ್‌ಗೆ ಕಳಿಸುವುದು ಹೇಗೆ ?


ನೀವು ಉಪಯೋಗಿಸುವ ಮಿನ್ನಂಚೆ (ಮೈಲ್) ಒಳ ಪೆಟ್ಟಿಗೆಗೆ ದಿನವೂ ಬೇಡವಾದ ಮಿನ್ನಂಚೆಗಳು ಬಂದು ಬೀಳುತ್ತಿವೆಯೆ ? ಇದು ಸಾಧಾರಣವಾಗಿ ಎಲ್ಲರೂ ಅನುಭವಿಸುವ ಸಂಕಷ್ಟ. ತಿಳಿದೋ ತಿಳಿಯದೆಯೋ ಯಾವುದಾದರೂ ಸಾಮಾಜಿಕ ಜಾಲತಾಣದಲ್ಲಿ "ನೋಟಿಫಿಕೇಷನ್"ಗಳನ್ನು ಸಕ್ರಿಯಗೊಳಿಸಿರುತ್ತೇವೆ. ಫೇಸ್‌ಬುಕ್‌ನಲ್ಲಂತೂ ಇದು ಸರ್ವೇ ಸಾಮಾನ್ಯ. ಅಲ್ಲಿ ಯಾವುದಾದರೂ ಒಂದು ಗುಂಪಿಗೆ ನೀವು ಸೇರಿಕೊಂಡರೂ ಮುಗೀತು, ಮಿನ್ನಂಚೆಗಳ ದಂಡೇ ಬಂದು ನಿಮ್ಮನ್ನು ಗುಂಪಲ್ಲಿ ಗೋವಿಂದ ಮಾಡಿ ಬಿಡಬಹುದು. ಅಲ್ಲಿ ಪ್ರತಿಯೊಂದು ಹೊಸ ಗೋಡೆ ಬರಹ ಬಂದಾಗ ಅಥವಾ ಪ್ರತಿಕ್ರಿಯೆ ಬಂದಾಗ ಅವು ನಮ್ಮ ಮಿನ್ನಂಚೆಗೆ ಬಂದು ಬೀಳತೊಡಗುತ್ತವೆ. ಹೀಗಾದಾಗ ನಿಜವಾಗಿಯೂ ನಮಗೆ ಬೇಕಾದ ಅತ್ಯಗತ್ಯ ಮಿನ್ನಂಚೆಯನ್ನೂ ಸಹ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದಕ್ಕೆ ಪರಿಹಾರವೇನು ?

ಇದಕ್ಕೆ ಪರಿಹಾರ ಇಲ್ಲದಿಲ್ಲ. ಮೊದಲನೇ ಪರಿಹಾರ ಆಯಾ ಸಾಮಾಜಿಕ ತಾಣಗಳಲ್ಲೇ ಕಂಡೂ ಕಾಣದಂತೆ ಸೂಚನಾ ಮಿನ್ನಂಚೆಗಳನ್ನು ತಡೆಯುವ ಅವಕಾಶವನ್ನು ನೀಡಿರುತ್ತಾರೆ. ಉದಾ : ಫೇಸ್‌ಬುಕ್ಕಿನ ಗುಂಪುಗಳ ಪುಟದಲ್ಲಿ ಬಲಭಾಗದ ಮೇಲ್ಗಡೆ "Notification" ಎಂಬ ಒಂದು ಗುರುತು ಇದೆ. ಅದರಲ್ಲಿ Notification ಗಳನ್ನು OFF ಮಾಡಲು ಸಹ ಅವಕಾಶವಿದೆ. ಹಾಗೆ ಮಾಡಿದರೆ ಅಲ್ಲಿಂದ ಬರುವ ಸಾವಿರಾರು ಮಿನ್ನಂಚೆಗಳು ಬರುವುದಿಲ್ಲ. ಆದರೂ ಫೇಸ್‌ಬುಕ್‌ನ ಇತರೆ ವಿಷಯಗಳು ನಮ್ಮ ಮಿನ್ನಂಚೆಗೆ ಬಂದೇ ಬರುತ್ತವೆ. ಅವು ನಿಮಗೆ ಅಗತ್ಯವಲ್ಲ ಅನ್ನಿಸಿದರೆ ಎರಡನೇ ದಾರಿಯನ್ನು ಹಿಡಿಯಬಹುದು. (ಈ ಚಿತ್ರ ನೋಡಿ..)



ಎರಡನೇ ಮಾರ್ಗವೇನೆಂದರೆ, ನಮ್ಮ ಮಿನ್ನಂಚೆಯ ಒಳ ಪೆಟ್ಟಿಗೆಗೆ ಬಂದ ಮಿನ್ನಂಚೆಗಳಲ್ಲಿ ಇಂತಹ ಬೇಡವಾದವುಗಳನ್ನು ಆಯ್ಕೆ ಮಾಡಿ ಮೇಲ್ಗಡೆ ಇರುವ ಸ್ಪಾಮ್‌ ಗುರುತನ್ನು ಒತ್ತುವುದು. (ಚಿತ್ರ ನೋಡಿ), ಹೀಗೆ ಮಾಡುವುದರಿಂದ ಸಂಬಂಧ ಪಟ್ಟ ಜಾಲತಾಣದ ಎಲ್ಲ ಮಿನ್ನಂಚೆಗಳೂ ನೇರವಾಗಿ ಸ್ಪಾಮ್ ಬುಟ್ಟಿಗೆ ಹೋಗುತ್ತವೆ. ಇದರಿಂದ ನಮ್ಮ ಮಿನ್ನಂಚೆಯ ಒಳಾಂಕಣ ಸ್ವಚ್ಚವಾಗಿ ಇರುತ್ತದೆ.



ಅಗತ್ಯ ಮಿನ್ನಂಚೆ ಸ್ಪಾಮ್ ಆಗುತ್ತಿದೆಯೆ ?

ಕೆಲವೊಮ್ಮೆ ಮತ್ತೊಂದು ಬಗೆಯ ತೊಂದರೆಯನ್ನೂ ಎದುರಿಸಬೇಕಾಗಬಹುದು. ಅದೇನೆಂದರೆ ನಮಗೆ ಅಗತ್ಯವಿರುವ ಮಿನ್ನಂಚೆ ಸಹ ಸ್ಪಾಮ್ ಬುಟ್ಟಿಗೆ ಹೋಗಿ ಬಿಡುವುದು. ಆಗ ಕೆಲವೊಮ್ಮೆ ಅದು ನಮ್ಮ ಗಮನಕ್ಕೆ ಬರದೇ ತೊಂದರೆಯಾಗಲೂ ಬಹುದು. ಇದನ್ನೂ ಸಹ ನಿವಾರಿಸಲು ಉಪಾಯ ಉಂಟು. ಅದು ಏನೆಂದರೆ ನಮಗೆ ಅಗತ್ಯವಾದ ಅಂತಹ ಮಿನ್ನಂಚೆ ವಿಳಾಸಗಳನ್ನು ನಮ್ಮ ಮಿನ್ನಂಚೆ ವಿಳಾಸದ ಪಟ್ಟಿಯಲ್ಲಿ ದಾಖಲಿಸಿ ಬಿಡುವುದು. ಆಗ ಜಿಮೈಲ್ ಅದರಿಂದ ಬರುವ ಮಿನ್ನಂಚೆಗಳನ್ನು ಸ್ಪಾಮ್ ಎಂದು ವಿಂಗಡಿಸದೇ ಒಳಾಂಕಣಕ್ಕೆ ಬಿಡುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ...