ವಿಷಯಕ್ಕೆ ಹೋಗಿ

ಜಿಮೈಲ್‌ನಲ್ಲಿ ಅನಗತ್ಯ ಮಿನ್ನಂಚೆಗಳನ್ನು ಸ್ಪಾಮ್‌ಗೆ ಕಳಿಸುವುದು ಹೇಗೆ ?


ನೀವು ಉಪಯೋಗಿಸುವ ಮಿನ್ನಂಚೆ (ಮೈಲ್) ಒಳ ಪೆಟ್ಟಿಗೆಗೆ ದಿನವೂ ಬೇಡವಾದ ಮಿನ್ನಂಚೆಗಳು ಬಂದು ಬೀಳುತ್ತಿವೆಯೆ ? ಇದು ಸಾಧಾರಣವಾಗಿ ಎಲ್ಲರೂ ಅನುಭವಿಸುವ ಸಂಕಷ್ಟ. ತಿಳಿದೋ ತಿಳಿಯದೆಯೋ ಯಾವುದಾದರೂ ಸಾಮಾಜಿಕ ಜಾಲತಾಣದಲ್ಲಿ "ನೋಟಿಫಿಕೇಷನ್"ಗಳನ್ನು ಸಕ್ರಿಯಗೊಳಿಸಿರುತ್ತೇವೆ. ಫೇಸ್‌ಬುಕ್‌ನಲ್ಲಂತೂ ಇದು ಸರ್ವೇ ಸಾಮಾನ್ಯ. ಅಲ್ಲಿ ಯಾವುದಾದರೂ ಒಂದು ಗುಂಪಿಗೆ ನೀವು ಸೇರಿಕೊಂಡರೂ ಮುಗೀತು, ಮಿನ್ನಂಚೆಗಳ ದಂಡೇ ಬಂದು ನಿಮ್ಮನ್ನು ಗುಂಪಲ್ಲಿ ಗೋವಿಂದ ಮಾಡಿ ಬಿಡಬಹುದು. ಅಲ್ಲಿ ಪ್ರತಿಯೊಂದು ಹೊಸ ಗೋಡೆ ಬರಹ ಬಂದಾಗ ಅಥವಾ ಪ್ರತಿಕ್ರಿಯೆ ಬಂದಾಗ ಅವು ನಮ್ಮ ಮಿನ್ನಂಚೆಗೆ ಬಂದು ಬೀಳತೊಡಗುತ್ತವೆ. ಹೀಗಾದಾಗ ನಿಜವಾಗಿಯೂ ನಮಗೆ ಬೇಕಾದ ಅತ್ಯಗತ್ಯ ಮಿನ್ನಂಚೆಯನ್ನೂ ಸಹ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದಕ್ಕೆ ಪರಿಹಾರವೇನು ?

ಇದಕ್ಕೆ ಪರಿಹಾರ ಇಲ್ಲದಿಲ್ಲ. ಮೊದಲನೇ ಪರಿಹಾರ ಆಯಾ ಸಾಮಾಜಿಕ ತಾಣಗಳಲ್ಲೇ ಕಂಡೂ ಕಾಣದಂತೆ ಸೂಚನಾ ಮಿನ್ನಂಚೆಗಳನ್ನು ತಡೆಯುವ ಅವಕಾಶವನ್ನು ನೀಡಿರುತ್ತಾರೆ. ಉದಾ : ಫೇಸ್‌ಬುಕ್ಕಿನ ಗುಂಪುಗಳ ಪುಟದಲ್ಲಿ ಬಲಭಾಗದ ಮೇಲ್ಗಡೆ "Notification" ಎಂಬ ಒಂದು ಗುರುತು ಇದೆ. ಅದರಲ್ಲಿ Notification ಗಳನ್ನು OFF ಮಾಡಲು ಸಹ ಅವಕಾಶವಿದೆ. ಹಾಗೆ ಮಾಡಿದರೆ ಅಲ್ಲಿಂದ ಬರುವ ಸಾವಿರಾರು ಮಿನ್ನಂಚೆಗಳು ಬರುವುದಿಲ್ಲ. ಆದರೂ ಫೇಸ್‌ಬುಕ್‌ನ ಇತರೆ ವಿಷಯಗಳು ನಮ್ಮ ಮಿನ್ನಂಚೆಗೆ ಬಂದೇ ಬರುತ್ತವೆ. ಅವು ನಿಮಗೆ ಅಗತ್ಯವಲ್ಲ ಅನ್ನಿಸಿದರೆ ಎರಡನೇ ದಾರಿಯನ್ನು ಹಿಡಿಯಬಹುದು. (ಈ ಚಿತ್ರ ನೋಡಿ..)



ಎರಡನೇ ಮಾರ್ಗವೇನೆಂದರೆ, ನಮ್ಮ ಮಿನ್ನಂಚೆಯ ಒಳ ಪೆಟ್ಟಿಗೆಗೆ ಬಂದ ಮಿನ್ನಂಚೆಗಳಲ್ಲಿ ಇಂತಹ ಬೇಡವಾದವುಗಳನ್ನು ಆಯ್ಕೆ ಮಾಡಿ ಮೇಲ್ಗಡೆ ಇರುವ ಸ್ಪಾಮ್‌ ಗುರುತನ್ನು ಒತ್ತುವುದು. (ಚಿತ್ರ ನೋಡಿ), ಹೀಗೆ ಮಾಡುವುದರಿಂದ ಸಂಬಂಧ ಪಟ್ಟ ಜಾಲತಾಣದ ಎಲ್ಲ ಮಿನ್ನಂಚೆಗಳೂ ನೇರವಾಗಿ ಸ್ಪಾಮ್ ಬುಟ್ಟಿಗೆ ಹೋಗುತ್ತವೆ. ಇದರಿಂದ ನಮ್ಮ ಮಿನ್ನಂಚೆಯ ಒಳಾಂಕಣ ಸ್ವಚ್ಚವಾಗಿ ಇರುತ್ತದೆ.



ಅಗತ್ಯ ಮಿನ್ನಂಚೆ ಸ್ಪಾಮ್ ಆಗುತ್ತಿದೆಯೆ ?

ಕೆಲವೊಮ್ಮೆ ಮತ್ತೊಂದು ಬಗೆಯ ತೊಂದರೆಯನ್ನೂ ಎದುರಿಸಬೇಕಾಗಬಹುದು. ಅದೇನೆಂದರೆ ನಮಗೆ ಅಗತ್ಯವಿರುವ ಮಿನ್ನಂಚೆ ಸಹ ಸ್ಪಾಮ್ ಬುಟ್ಟಿಗೆ ಹೋಗಿ ಬಿಡುವುದು. ಆಗ ಕೆಲವೊಮ್ಮೆ ಅದು ನಮ್ಮ ಗಮನಕ್ಕೆ ಬರದೇ ತೊಂದರೆಯಾಗಲೂ ಬಹುದು. ಇದನ್ನೂ ಸಹ ನಿವಾರಿಸಲು ಉಪಾಯ ಉಂಟು. ಅದು ಏನೆಂದರೆ ನಮಗೆ ಅಗತ್ಯವಾದ ಅಂತಹ ಮಿನ್ನಂಚೆ ವಿಳಾಸಗಳನ್ನು ನಮ್ಮ ಮಿನ್ನಂಚೆ ವಿಳಾಸದ ಪಟ್ಟಿಯಲ್ಲಿ ದಾಖಲಿಸಿ ಬಿಡುವುದು. ಆಗ ಜಿಮೈಲ್ ಅದರಿಂದ ಬರುವ ಮಿನ್ನಂಚೆಗಳನ್ನು ಸ್ಪಾಮ್ ಎಂದು ವಿಂಗಡಿಸದೇ ಒಳಾಂಕಣಕ್ಕೆ ಬಿಡುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಕಾರ್ಗಿಲ್ ಕಥೆ : ಸೈನಿಕನೆಂದರೆ

"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು  ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್‌ಗಳೂ ಅವರ ಗನ್‌ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು. ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?" ``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ. ``ಇದು ನಮಗೆ ಎಷ್ಟನೇ ಮುಖಾಮುಖಿ? ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು" ``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು. ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು. *  *  *  ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜ...