ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಜಾಮತ ಅಶೋಕ್‌ ಬಾಬುರವರಿಗೆ ನಮನಗಳು

​ ನಾನು ಐದಾರು ಚಿಕ್ಕ ಚಿಕ್ಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೆಗಳು ಚಿಕ್ಕವಾದರೂ ಇವುಗಳ ಸಂಪಾದಕರು ಮಾತ್ರ ಸಾಮಾನ್ಯದವರು ಅಂತ ನನಗನ್ನಿಸಿಲ್ಲ. ಕೆಲವರಂತೂ ಅಂಗೈಯಲ್ಲೇ ಆಕಾಶ ತೋರಿಸಬಲ್ಲ ಜಾಣರು, ಮತ್ತು ಅವಕಾಶ ಸಿಕ್ಕರೆ ಅದೇ ಅಕಾಶವನ್ನೇ ನುಂಗಿ ಅರಗಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯರು. ಅವರುಗಳಲ್ಲಿ ಇಬ್ಬರು ಅಂತಹ ಅಸಾಧಾರಣ ವ್ಯಕ್ತಿಗಳ ಜೊತೆ ಕೆಲಸ ಮಡುವ ಅವಕಾಶ ನನಗೆ ದೊರೆತಿತ್ತು. ಮೊದಲನೆಯವರು ವಿ. ಶಶಿಧರ್‌. ಕೇವಲ ಇವರ ಹೆಸರು ಹೇಳಿದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ದೇಶದಲ್ಲೇ ಏಕೈಕ 'ಪೊಲೀಸ್‌ ಮಹಾ ಸಂಘ'ವನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಿ ಅದರ ಮೂಲಕ ಇಡೀ ಇಲಾಖೆಗೆ ಮತ್ತು ಸರ್ಕಾರಕ್ಕೆ ತಲೆ ನೋವಾಗಿ ಒಂದು ಸಮಯದಲ್ಲಿ ಕಲರವವೆಬ್ಬಿಸಿದ ಶಶಿಧರ‍್ ಎಂದರೆ ಬಹುತೇಕರಿಗೆ ಗೊತ್ತಾಗಿ ಹೋಗುತ್ತದೆ. ಇಂದು ಪತ್ರಿಕೆ ನಿಲ್ಲಿಸಿದ್ದರೂ ಭ್ರಷ್ಟರ ಮೇಲೆ ದೂರು ದಾಖಲಿಸುತ್ತಾ ಕೆಲವರ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಒಂದು ಕೇಸಿನಲ್ಲಿ ಸೋನಿಯಾ ಗಾಂಧಿಗೂ ಹೈಕೋರ್ಟ್‌‌ನಿಂದ ನೋಟೀಸ್ ಕೊಡಿಸಿದ ಕೀರ್ತಿ ಇವರದು! ಇವರು ಸ್ಥಾಪಿಸಿದ 'ಪೊಲೀಸ್‌ ವರ್ಲ್ಡ್‌' ಪತ್ರಿಕೆಗೆ ಸುಮಾರು ಮೂರು ವರ್ಷ ದುಡಿದೆ.  ಎರಡನೆಯವರು ಪ್ರಜಾಮತ ಖ್ಯಾತಿಯ ಅಶೋಕ್‌ ಬಾಬು. ನನಗೆ ತಿಳಿದಂತೆ ಇವರು ಕನ್ನಡ ಪತ್ರಿಕಾ ರಂಗದ ದಿಗ್ಗಜರೇ ಹೌದು. ನಾವು ಚಿಕ್ಕ ಹುಡುಗರಾಗಿದ್ದಾಗ ಇವರ ಪ್ರಜಾಮತ ಮನೆ ಮಂದಿಯ ಪತ

ಅಣ್ಣೋರನ್ನು ಹಾದಿ ಬದಿ ತಂದು ಕೂರಿಸಬೇಡಿರಪ್ಪೋ !

​ ಮೊನ್ನೆ ಡಾ. ರಾಜ್‌ಕುಮಾರ್‌ ಪುತ್ತಳಿಗೆ ಯಾರೋ ಬೆಂಕಿ ಹಚ್ಚಿ ಅವಮಾನ ಮಾಡಿದ್ದು ತುಂಬಾ ಬೇಸರ ತರಿಸಿತು. ಹಾಗೆಯೇ ರಾಜ್‌ ಅಭಿಮಾನಿಗಳು ಚಿಂತಿಸಬೇಕಾದ ಅವಶ್ಯಕತೆ ಸಹ ಇದೆ. ಅದೇನೆಂದರೆ ರಾಜ್‌ರ ಪ್ರತಿಮೆಗಳನ್ನು ಬೀದಿ ಪದಿಯಲ್ಲಿ, ಫುಟ್‌ಪಾತ್ ಬಳಿ ಹೀಗೆ ಎಲ್ಲೆಂದರಲ್ಲಿ ಇಡಲಾಗುತ್ತಿದೆ. ಈಗಾಗಲೇ ಅವರ ನೂರಾರು ಪ್ರತಿಮೆಗಳನ್ನು ರಾಜ್ಯಾಧ್ಯಂತ ಇರಿಸಿದ್ದು ಅವುಗಳಲ್ಲಿ ಕೆಲವೊಂದನ್ನು ಹೊರತು ಪಡಿಸಿ ಉಳಿದ ಯಾವುದಕ್ಕೂ ಸ್ವತಃ ಪ್ರತಿಮೆ ಇರಿಸಿದವರೇ ಗೌರವ ನೀಡಿದಂತೆ ಕಾಣಿಸುತ್ತಿಲ್ಲ. ಅಣ್ಣೋರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಕಡೆ ಪಕ್ಷ ಉದ್ಯಾನಗಳಲ್ಲಿ, ಅಥವಾ ಒಳ್ಳೆಯ ಪರಿಸರದಲ್ಲಿ ಪಾಲಿಕೆಯ ಅನುಮತಿ ಪಡೆದು ಇರಿಸಬೇಕು. ಹಾದಿ ಬೀದಿಯ ಬದಿಗಳಲ್ಲಿ ಅವರ ಪ್ರತಿಮೆ ಇರಿಸಿ ಅವರಿಗೆ ಅಗೌರವ ಉಂಟು ಮಾಡುವುದು ಸರಿಯಲ್ಲ.

ಸರಕಾರಿ ಅಧಿಕಾರಿಗಳಿಗೆ ಆಧಾರ್‌ ಕಡ್ಡಾಯ

​ ಭ್ರಷ್ಟಾಚಾರದ ಬಗ್ಗೆ ನಾವು ಕೇವಲ ರಾಜಕಾರಣಿಗಳನ್ನು ದೂರುತ್ತೇವೆ. ಆದರೆ ನಿಜವಾಗಿಯೂ ಹೆಚ್ಚು ಭ್ರಷ್ಟರಾಗಿರುವುದು ಈ ದೇಶದ ಅಧಿಕಾರಿಗಳು.  ಹಾಗೆಯೇ ಹೊರ ದೇಶದಲ್ಲಿರುವ ಕಪ್ಪುಹಣಕ್ಕಿಂತಾ ನಮ್ಮ ದೇಶದಲ್ಲಿರುವ ಕಪ್ಪು ಹಣ ಅತಿ ಮುಖ್ಯ. (ಇಂದಿಗೂ ಪ್ರತಿನಿತ್ಯ ಇದು ಸೃಷ್ಟಿಯಾಗುತ್ತಲೇ ಇದೆ) ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಮಾತ್ರ ಭ್ರಷ್ಟಾಚಾರಕ್ಕೆ ಹಾಗೂ ಕಪ್ಪು ಹಣಕ್ಕೆ ಬಹುತೇಕ ಕಡಿವಾಣ ಹಾಕಲು ಸಾಧ್ಯ. ಆಧಾರ್‌ಗೆ ಮನ್ನಣೆ ನೀಡಿರುವ ಕೇಂದ್ರಕ್ಕೆ ಧನ್ಯವಾದಗಳು. ಇದೀಗ ಕೆಂದ್ರ ಸರ್ಕಾರದ ಎಲ್ಲಾ ಅಧಿಕಾರಿಗಳೂ ತಮ್ಮ ಸೇವಾ ಪುಸ್ತಕದಲ್ಲಿ ಆಧಾರ್‌ ಸಮಖ್ಯೆ ನೀಡುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಅನುಸರಿಸಬೇಕು. ಆದರೆ ಕೇವಲ ಪಿಂಚಣಿ ಮುಂತಾದುವಕ್ಕೆ ಇದನ್ನು ಉಪಯೋಗಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮೊದಲು ಎಲ್ಲರಿಗೂ ಆಧಾರ‍್ ವಿತರಿಸಿ, ನಂತರ ಸಾವಿರ ರೂಪಾಯಿಗಿಂತಾ ಹೆಚ್ಚಿನ ಮೌಲ್ಯದ  ಯಾವುದೇ ವಸ್ತು ಕೊಳ್ಳಬೇಕೆಂದರೂ ಆಧಾರ‍್ ಸಂಖ್ಯೆ ನೀಡುವುದು (ಪ್ರತಿಯೊಬ್ಬರೂ) ಕಡ್ಡಾಯವಾಗಬೇಕು. ಹಾಗೆ ಕೊಳ್ಳುವ ವಸ್ತುಗಳ ವಿವರ ನಮ್ಮ ಆಧಾರ್‌ ಖಾತೆಯಲ್ಲಿ ದಾಖಲಾಗುತ್ತಾ ಹೋಗಬೇಕು. ಇದನ್ನು ಮೋದಿಯವರು ಮಾಡಲಿ ಎಂದು ಆಶಿಸುತ್ತೇನೆ.

ಕಪ್ಪುಹಣದ ಚೆಂಡು ಸುಪ್ರೀಂ ಅಂಗಳದಲ್ಲಿ

​ 'ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಇರಿಸಿದವರ ಎಲ್ಲಾ ಹೆಸರುಗಳನ್ನು ತನಗೊಪ್ಪಿಸುವಂತೆಯೂ, ತಾನೇ ತನಿಖೆ ನಡೆಸಿ ಕಪ್ಪು ಹಣವಿದ್ದರೆ ವಾಪಸ್ಸು ತರುವುದಾಗಿಯೂ, ಕೇಂದ್ರ ಸರ್ಕಾರದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ ಎಂಬುದಾಗಿಯೂ' ನಿನ್ನೆ ಸುಪ್ರೀಂ ಕೋರ್ಟ್‌ ಆದೇಶಿಸುವುದರೊಂದಿಗೆ ಕಪ್ಪು ಹಣವನ್ನು ತಂದು ಮತ ಹಾಕಿದವರಿಗೆ ನ್ಯಾಯ ಒದಗಿಸಿ, ವಿರೋಧಿಸಿದವರ ಬಾಯನ್ನೂ ಮುಚ್ಚಿಸಬಹುದಾಗಿದ್ದ ಸುವರ್ಣಾವಕಾಶವನ್ನು ಬಿಜೆಪಿ (ಮುಖ್ಯವಾಗಿ ಮೋದಿ) ಕಳೆದುಕೊಂಡರು. ಲಪಡಾ ಬಾಬಾನೊಬ್ಬ ನಗೆಪಾಟಲಿಗೂ ಈಡಾದುದು ಈಗ ಇತಿಹಾಸ. ಯುಪಿಎ ಸಹ ಕಪ್ಪು ಹಣ ತರುವ ಪ್ರಯತ್ನವನ್ನು (ಪ್ರಾಮಾಣಿಕ ಅನ್ನಲಾಗದಿದ್ದರೂ) ಶುರು ಮಾಡಿತ್ತು. ಆದರೆ ಎನ್‌ಡಿಎ ಕೂಡಾ ಯುಪಿಎ ಗಿಂತ ಹೆಚ್ಚಿನದನ್ನಾಗಲೀ ಭಿನ್ನವಾಗಿಯಾಗಲೀ ಮಾಡಲಿಲ್ಲ. ಇದರಿಂದಾಗಿ ಪ್ರಜೆಗಳಂತೆಯೇ ನ್ಯಾಯಾಲಯ ಸಹ ಮುನಿಸುಗೊಂಡಿರುವುದು ಸ್ಪಷ್ಟ. ಇಂದಿನಿಂದ ಕಪ್ಪು ಹಣದ ಚೆಂಡು ನ್ಯಾಯಾಲಯದ ಅಂಗಳದಲ್ಲಿರಲಿದೆ. ಇನ್ಮುಂದೆ ಕಪ್ಪು ಹಣ ಬರುವುದಾಗಲೀ, ಬಾರದಿರುವುದಾಗಲೀ ನಡೆದರೆ ಅದಕ್ಕೆ ಕಾರಣ ನ್ಯಾಯಾಲಯವಾಗಿರುತ್ತದೆಯೇ ಹೊರತೂ ಮೋದಿ/ಬಿಜೆಪಿ ಅಲ್ಲ. ಒಂದು ವೇಳೆ ನ್ಯಾಯಾಲಯವು ತನಿಖೆ ನಡೆಸಿ ಕಪ್ಪುಹಣ ತಂದುಬಿಟ್ಟರೆ ಮೋದಿ ಭಕ್ತರು ಯಥಾ ಪ್ರಕಾರ ಮೋದಿಯ ಗುಣಗಾನ (ಸುಳ್ಳು) ಮಾಡಿ ಮುಗ್ದರನ್ನು 'ಇದು ಮೋದಿಯೇ ತಂದಿದ್ದು' ಎಂದು ನಂಬಿಸಲೂಬಹುದು. ಆದರೆ ಪ್ರಜ್ಞಾವಂತರೆಲ್ಲರಿಗೂ (ಇಷ್ಟು ದಿನ ಮೋದಿಯನ್ನು

ಅಣ್ಣನ ಸಾವನ್ನು ಬದಿಗಿಟ್ಟು ಸತ್ಯಾಗ್ರಹದಲ್ಲಿ ತೊಡಗಿದವರು....

​ ಒಬ್ಬರು ಒಂದು ಪ್ರಬಲ ಹೋರಾಟವನ್ನು ಕೆಲವೇ ಸಮಾನ ಮನಸ್ಕರ ಜೊತೆಗೂಡಿ ಶುರು ಮಾಡುತ್ತಾರೆ. ಅದು ಸರ್ಕಾರಕ್ಕೂ ಬಿಸಿ ಮುಟ್ಟಿಸುವಂತಾ ಹೋರಾಟ. ಧರಣಿ ಸತ್ಯಾಗ್ರಹ ಶುರುವಾಗುತ್ತದೆ. ನಾಲ್ಕೈದು ದಿನ ಕಳೆದರೂ ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಹಾಗೆಯೇ ಒಂದು ದಿನ ಬೆಳಗ್ಗೆ ಏಳುವಾಗ ಒಂದು ಸುದ್ದಿ ಬರುತ್ತದೆ... ಅದು ಅವರ ಒಡಹುಟ್ಟಿದ ಅಣ್ಣ ನಿದನರಾಗಿರುವ ಸುದ್ದಿ!  ಸಾವಿನ ಮನೆಗೆ ಹೋಗುವುದಾದರೆ ತಮ್ಮದೇ ನೇತೃತ್ವದ ಧರಣಿ ಸತ್ಯಾಗ್ರಹಕ್ಕೆ ಗೈರಾಗಬೇಕು. ಏನು ಮಾಡುವುದೆಂದು ಯೋಚಿಸಿದ ಅವರು ಬೇಗನೆ ತಯಾರಾಗಿ ಹೊರಡುತ್ತಾರೆ... ಸತ್ಯಾಗ್ರಹದ ಸ್ಥಳಕ್ಕೆ.  ತಮ್ಮ ಪತ್ನ ಮಗನನ್ನು ತಮ್ಮ ಅಣ್ಣನ ಮನೆಗೆ ಕಳಿಸಿ ಎಂದಿನಂತೆ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಣ್ಣ ಸತ್ತ ವಿಷಯವನ್ನೂ ಸಹ ಉಳಿದವರಿಗ್ಯಾರಿಗೂ ಹೇಳದೇ ದುಃಖ ನುಂಗಿಕೊಂಡು ಸತ್ಯಾಗ್ರಹ ಮುಂದುವರಿಯುತ್ತದೆ... ಸುಮಾರು ನಕವತ್ತು ದಿನಗಳ ವರೆಗೆ! ಇವರ ನ್ಯಾಯ ನಿಷ್ಠುರ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮಣಿಯುತ್ತದೆ. ಆಗ ತಮ್ಮೊಂದಿಗೆ ಭಾಗವಹಿಸಿದ ಹೋರಾಟಗಾರರಿಗೆ ತಮ್ಮ ಅಣ್ಣ ಸತ್ತು ಹೋಗಿರುವ ದುಃಖಕರ ವಿಷಯವನ್ನು ತಿಳಿಸುತ್ತಾರೆ! ನೆನಪಿರಲಿ, ಇದು ಯಾವುದೋ ಹಳೆಯ ಕಾಲದ ಘಟನೆ ಅಲ್ಲ. ನಮ್ಮ ನಿಮ್ಮ ನಡುವೆಯೇ ಇರುವ ನ್ಯಾಯ ನಿಷ್ಟುರ ವ್ಯಕ್ತಿಯೊಬ್ಬರ ವಿಷಯ. ಅವರೇ 'ಭೂಕಬಳಿಕೆ ವಿರೋಧಿ ಹೋರಾಟ'ವನ್ನು ಪ್ರಾರಂಭಿಸಿ, ಸರ್ಕಾರದಿಂದ ಹೊಸ ಕಾನೂನು ಮತ್ತು ಪ್ರತ್ಯೇಕ ನ್ಯಾಯಾಲಯ

ಕತೆ - ಸೂರ್ಯಾವಸಾನ

​ ೨೦೧೨ನೇ ಇಸವಿ ಡಿಸೆಂಬರ್ ೨೧ ಅಂದು ಖಗೋಳ ಶಾಸ್ತ್ರದ ವಿಜ್ಞಾನಿಗಳೆಲ್ಲಾ ದಿಗಿಲುಗೊಂಡು ಗರಬಡಿದವರಂತೆ ಕುಳಿತುಬಿಟ್ಟಿದ್ದರು. ಅದಕ್ಕೆ ಬೃಹತ್ ಕಾರಣವೇ ಇತ್ತು ಉರಿಯುತ್ತಿರುವ ಗೋಲ ಸೂರ್ಯನಲ್ಲಿ ದಿಢೀರ್ ಬದಲಾವಣೆಗಳು ಕಂಡು ಬಂದಿದ್ದವು. ಸೂರ್ಯನಲ್ಲಿ ನಡೆಯುತ್ತಿದ್ದ ರಾಸಾಯನಿಕ ಪ್ರಕ್ರಿಯೆಗಳು ಅದು ಹೇಗೋ ಉಲ್ಟಾ ಆಗಿ ಸೂರ್ಯ ತಣ್ಣಗಾಗತೊಡಗಿದ್ದ ! ಅವನ ಸಾವು ನಿಶ್ಚಯವಾಗಿ ಕೆಲವೇ ದಿನಗಳಲ್ಲಿ ಬ್ಲಾಕ್ ಹೋಲ್ ಆಗಲಿದ್ದ! ಸಾವಿರಾರು ವರ್ಷಗಳಲ್ಲಿ ನಡೆಯಬೇಕಾದ ಈ ಕ್ರಿಯೆ ಕೆಲವೇ ದಿನಗಳಲ್ಲಿ ಉಚ್ಚ ಘಟ್ಟವನ್ನು ತಲುಪಿದ್ದಕ್ಕೂ, ಇನ್ನು ಕೆಲವೇ ದಿನಗಳಲ್ಲಿ ಸೂರ್ಯ ಪೂರ್ತಿ ಇಲ್ಲವಾಗಿ ಬಿಡುವುದಕ್ಕೂ ಕಾರಣವನ್ನೇ ಕಂಡುಹಿಡಿಯಲಾಗದೆ ವಿಲವಿಲನೆ ಒದ್ದಾಡುತ್ತಿದ್ದರು ವಿಜ್ಞಾನಿಗಳು!  ಕಾರಣವನ್ನು ಕಂಡು ಹಿಡಿದರೆ ಅದನ್ನು ತಡೆಯುವುದಕ್ಕೂ ದಾರಿ ಹೊಳೆಯಬಹುದೆಂಬುದು ಅವರ ಆಶಯವಾಗಿತ್ತು. ಆ ಕಾರಣಗಳನ್ನೆಲ್ಲಾ ಸರಿಯಾಗಿ ಕಂಡುಕೊಳ್ಳದೆ ಜನರಿಗೆ ವಿಷಯವನ್ನು ಮುಂದೊಡ್ಡುವಂತೆಯೂ ಇಲ್ಲ.  ಈ ನಡುವೆ ಯಾವುದೋ ದೇಶದ ಇನ್ಯಾವುದೋ ಒಬ್ಬ ಅನಾಮಧೇಯ ವಿಜ್ಞಾನಿ ಸೂರ್ಯನು ದಿನೇ ದಿನೇ ಕುಂದುತ್ತಿದ್ದಾನೆ! ಕೆಲವೇ ದಿನಗಳಲ್ಲಿ ಸೂರ್ಯನ ಸಾವು ನಿಶ್ಚಿತ! ಹಾಗೆ ನಡೆದು ಹೋದರೆ ನಮ್ಮ ಸಾವು ನಿಶ್ಚಿತ! ಏಕೆಂದರೆ ಸೂರ್ಯನ ಗುರುತ್ವ ಬಲದಲ್ಲೇ ಈ ನಮ್ಮ ಭೂಮಿ ನಿಂತಿದೆ. ಸೂರ್ಯನೇ ಇಲ್ಲವೆಂದ ಮೇಲೆ ಭೂಮಿ ಬಿದ್ದು ಹೋಗುತ್ತದೆ. ಅಥವಾ ಸೂರ್ಯನ ಅಗಾಧ ಗುರುತ್ವ ಬಲಕ್ಕೆ ಒಳಗಾಗಿ ಸರ್

ಅತಿಥಿ ಸತ್ಕಾರ ಮತ್ತು ಬಡತನ !

​ ತೀರಾ ಬಡತನದಲ್ಲಿ ಹುಟ್ಟಿ ಬೆಳೆದವನು ನಾನು. ನಾನು ಹುಟ್ಟುವ ಮೊದಲು ನಮ್ಮ ತಂದೆ ತಾಯಿ ಎಷ್ಟೋ ಸಮಯ ಯಾರದೋ ಮನೆಯಿಂದ ತಂದ ಬಾಳೆ ಕಾಯಿಗಳನ್ನು ತಿಂದು ನೀರು ಕುಡಿದು ಹಸಿವು ನೀಗಿಸಿಕೊಂಡಿದ್ದಿದೆಯಂತೆ. ನಾನು ಹುಟ್ಟಿದ ವರ್ಷವೇ ನಮ್ಮಪ್ಪ ನಮ್ಮನೆ ಎದುರಿನ ಪಾಳು ಬಿದ್ದ ಒಂದಿಷ್ಟು ಜಾಗವನ್ನು ಕುಂಟೆ ಹೊಡೆದು ಭತ್ತ ಬೆಳೆದಿದ್ದನಂತೆ. ಹಾಗಾಗಿ ನಾನು ಹುಟ್ಟಿದ ನಂತರ ಊಟದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಯ್ತಂತೆ. ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮ ಮನೆಯ ಗೋಡೆ ಮಣ್ಣು-ಇಟ್ಟಿಗೆಯದಾಗಿರಲಿಲ್ಲ, ಬದಲಿಗೆ ಅಡಿಕೆ ಹಾಳೆ ಮತ್ತು ದಬ್ಬೆಗಳಿಂದ ಮಾಡಿದ ತಟ್ಟಿಯಾಗಿತ್ತದು. ಅಡಿಕೆ ಸೋಗೆಯನ್ನೆ ಮಾಡಿಗೆ ಹೊದೆಸಲಾಗಿತ್ತು. ಎಷ್ಟೋ ಸಮಯ ನಾಯಿ, ಕೋಳಿ, ಹಾವುಗಳು ಸರಾಗವಾಗಿ ಮನೆಯೊಳಗೆ ಬಂದು ಬಿಡುತ್ತಿದ್ದವು.  ಸುಮಾರು ವರ್ಷದ ನಂತರ ಅಪ್ಪ ಮಣ್ಣಿನ ಗೊಡೆಯ ಮನೆ ಕಟ್ಟಿಸಿದ. ಅದಾದ ಸುಮರು ವರ್ಷಗಳ ನಂತರ ಮಾಡಿಗೆ ಹೆಂಚು ಬಂತು.  ಆಗೆಲ್ಲಾ ಗಂಜಿ ಊಟ ಸಾಧಾರಣವಾಗಿತ್ತು. ಹಬ್ಬಕ್ಕೆ ನುಚ್ಚಕ್ಕಿ ಹಾಗೂ ಬೆಲ್ಲದ ಪಾಯಸವೇ ಅದ್ಬುತ ಸಿಹಿ ಪದಾರ್ಥವಾಗುತ್ತಿತ್ತು. ಕೊನೆ ಕೊನೆಗೆ ಅಪ್ಪ ಬೇರೆಯವರ ಜಮೀನಿನಲ್ಲಿ ಅದ್ಯಾವುದೋ ಲೆಕ್ಕಾಚಾರದಲ್ಲಿ ಕಬ್ಬು ಬೆಳೆದು ಮನೆಗೆ ಬೆಲ್ಲ ಬರುವಂತಾಯ್ತು. ಆಲೆಮನೆ ಸಮಯದಲ್ಲಿ ಕಬ್ಬಿನ ರಸದಿಂದ ಮಣ್ಣಿ ಎಂಬ ಒಂದು ಬಗೆಯ ಮೈಸೂರ‍್ ಪಾಕ್‌ ತಯಾರಿಸುತ್ತಿದ್ದಳು ಅವ್ವ. ಗದ್ದೆಗಳನ್ನು ವಿಸ್ತರಿಸುತ್ತಾ ಹ

ಚಿಕ್ಕ-ಪುಟ್ಟ ಕಳ್ಳರು ಜೈಲಿಗೆ, ದೊಡ್ಡ ದೊಡ್ಡ ಕಳ್ಳರು ವಿಧಾನಸಭೆಗೆ ?!

​ ಭೂಕಬಳಿಕೆಯ ಭೀಕರತೆ ! ನೀವು ಭೀಕರ ಬರಗಾಲದ ಬಗ್ಗೆ, ಭೀಕರ ನೆರೆ ಹಾವಳಿ ಬಗ್ಗೆ, ಭೀಕರ ಭೂಕಂಪದ ಬಗ್ಗೆ ಕೇಳಿರಬಹುದು, ನೋಡಿರಲೂ ಬಹುದು.ಆದರೆ ಭೀಕರ ಭೂಕಬಳಿಕೆಯನ್ನು ಕೇಳಿದ್ದೀರಾ ? ನೋಡಿದ್ದೀರಾ ? ಇಂತಹುದೊಂದು ಭೀಕರ ಭೂಕಬಳಿಕೆ ನಮ್ಮ ನಿಮ್ಮ ನಡುವೆ ನಮ್ಮ ರಾಜ್ಯದಲ್ಲೇ ಯಾವ ಲಂಗು ಲಗಾಮು ಇಲ್ಲದೆ ಸಾಗಿದೆ. ಅದು ಅಂತಿಂತಹ ಭೂಕಬಳಿಕೆ ಅಲ್ಲ. ಇದರ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಿದರೆ ಇಡೀ ದೇಶದಲ್ಲೇ ಇಷ್ಟೊಂದು ಮಟ್ಟದ ಹಗರಣ ನಡೆದಿಲ್ಲ ಎನ್ನಬಹುದು. ಆದರೂ ನಮ್ಮ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗಿದೆ. ಏಕೆಂದರೆ ಭೂಕಬಳಿಕೆ ಮಾಡಿರುವವರು ಸಾಧಾರಣ ವ್ಯಕ್ತಿಗಳಲ್ಲ. ಸರ್ಕಾರವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲಂತ ಬಿಲ್ಡರ್‌ಗಳು, ರಾಜಕಾರಣಿಗಳು, ವಾಣಿಜ್ಯೋಧ್ಯಮಿಗಳು ಮತ್ತು ಹಿರಿಯ ಅಧಿಕಾರಿಗಳೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಭೂಕಬಳಿಕೆಯನ್ನು ತಡೆಯಲು ನೂರೆಂಟು ವಿಘ್ನಗಳು. ಕಬಳಿಕೆಗೊಂಡ ಭೂಮಿಯನ್ನು ಮರಳಿ ಪಡೆಯಲಿಕ್ಕೇ ಸಾಧ್ಯವಾಗದಂತೆ ಭದ್ರ ಕೋಟೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಇದೊಂದು ಮಹಾ ಮಾರಿಯಾಗಿ ದೇಶವನ್ನೇ ವ್ಯಾಪಿಸುತ್ತಿದೆ. ದೇಹವನ್ನು ಒಳಗಿಂದೊಳಗೇ ತಿನ್ನುವ ಗ್ಯಾಂಗ್ರಿನ್ ರೋಗದಂತೆ ಇದು ಹರಡುತ್ತಿದೆ. ಇದು ಈಗಾಗಲೇ ರಾಜ್ಯದ, ಮುಖ್ಯವಾಗಿ ಬೆಂಗಳೂರು ನಗರದ ಸುತ್ತ ಮುತ್ತಲಿನ ಭೂಮಿಯನ್ನು ನುಂಗಿದೆ. ಇದನ್ನು ಈಗಲೇ ಸರಿ ಪಡಿಸಿ ಸರ್ಕಾರವು ತನ್ನ ಭೂಮಿಯನ್ನು ಮರಳಿ ಹಿಂಪಡೆಯದೇ ಹೋದರೆ ಮ

ಆಂಡ್ರಾಯಿಡ್ ಮೊಬೈಲ್‌ಗಳಿಗೆ ಒಂದು ಕನ್ನಡ ಕೀಲಿಮಣೆ

​ ನನ್ನ ಪಿಸುಮತು ಸಂಸ್ಥೆಯಿಂದ ಒಂದು ಉಚಿತ ಆಂಡ್ರಾಯಿಡ್ ಕೀಲಿಮಣೆಯನ್ನು ಅಭಿವೃದ್ದಿ ಪಡಿಸಲಾಗಿದೆ. ಇದನ್ನು ನಿಮ್ಮ ಆಂಡ್ರಾಯಿಡ್ ಮೊಬೈಲ್‌, ಟ್ಯಾಬ್‌ಗಳಿಗೆ ಅಳವಡಿಸಿಕೊಂಡು ಕನ್ನಡ ಅಕ್ಷರಗಳನ್ನು ಸುಲಭವಾಗಿ ಮೂಡಿಸಬಹುದಾಗಿದೆ.  ಈ ತಂತ್ರಾಂಶದಲ್ಲಿ ನಾಲ್ಕು ಆಯ್ಕೆಗಳಿವೆ.  ೧. ಕನ್ನಡ - ಕನ್ನಡ ಅಕ್ಷರ ಮಾಲೆಯ ಕೀಲಿಮಣೆಯ ಮೂಲಕ ಕನ್ನಡ ಬರೆಯಲು. ೨. ಪೊನೆಟಿಕ್ ಕನ್ನಡ - ಆಂಗ್ಲ ಕೀಲಿಮಣೆ ವಿನ್ಯಾಸದಲ್ಲಿ ಕನ್ನಡ ಕೀಲಿಮಣೆ. ೩. ಪೊನೆಟಿಕ್ ಇಂಗ್ಲೀಷ್ - ಆಂಗ್ಲ ಕೀಲಿಮಣೆಯ ಆಂಗ್ಲ ಅಕ್ಷರಗಳ ಮೂಲಕ ಕನ್ನಡ ಬರೆಯಲು. ೪. ಇಂಗ್ಲೀಷ್ - ಆಂಗ್ಲದಲ್ಲಿ ಬರೆಯಲು (ಈ ರೀತಿ ನಾಲ್ಕು ಅವಕಾಶಗಳನ್ನು ನೀಡುತ್ತಿರುವ ಮೊದಲ ಕನ್ನಡದ ಅಪ್ಲಿಕೇಶನ್ ಇದಾಗಿದೆ) ಅಂದರೆ ಕನ್ನಡ ಬರೆಯಲು ಒಟ್ಟು ಮೂರು ಬಗೆಯ ಅವಕಾಶವನ್ನು ನೀಡಲಾಗಿದೆ. * ಮೊದಲು ನಿಮ್ಮ ಮೊಬೈಲ್‌ಗೆ ಇದನ್ನು ಇಳಿಸಿ ಸ್ಥಾಪಿಸಿಕೊಳ್ಳಿ.  * ನಂತರ ಸೆಟ್ಟಿಂಗ್ಸ್ ಹೋಗಿ ಭಾಷೆ ಮತ್ತು ಇನ್‌ಪುಟ್‌ನಲ್ಲಿ 'PM Keyboard' ಅನ್ನು ಆಯ್ದುಕೊಳ್ಳಿ. * ಡಿಫಾಲ್ಟ್‌ ಕೀಬೋರ್ಡ್‌ ಅನ್ನೂ 'PM Keyboard' ಅನ್ನು ಆಯ್ಕೆ ಮಾಡಿರಿ. ಅದಾದ ನಂತರ ನೀವು ಸಂದೇಶ ಕಳಿಸುವಾಗ, ವಾಟ್ಸ್‌ಆಪ್‌ನಲ್ಲಿ ಚಾಟ್‌ ಮಾಡುವಾಗ ಅಥವಾ ಮಿನ್ನಂಚೆ ಕಳಿಸುವಾಗ ಕನ್ನಡದಲ್ಲಿಯೇ ಬರೆಯಬಹುದು. ಇಲ್ಲಿಂದ ಇದನ್ನು ನಿಮ್ಮ ಮೊಬೈಲ್‌ಗೆ ಪಡೆಯಬಹುದು : https://play.google.com/st

ಕಾಡು ಪ್ರಾಣಿಗಳು ಮತ್ತು ನಾವು

​ ನಾನು ಕಾಡಿನಲ್ಲೇ ಹುಟ್ಟಿ ಬೆಳೆದವನು. ಕಾಡೆಮ್ಮೆ ಇಂದಿಗೂ ನಮ್ಮ ಮನೆ ಅಂಗಳದ ತನಕೆ ಕೆಲವೊಮ್ಮೆ ಬಂದು ಹೋಗುತ್ತವೆ. ಹುಲಿ, ಕತ್ತೆ ಕಿರುಬಗಳು ಬಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗುತ್ತವೆ. ಆಗಾಗ ನಮ್ಮನೆ ಹಸುಗಳು ಹುಲಿಗೆ ಆಹಾರವಾಗುತ್ತಿರುತ್ತವೆ. ನಾವು ಹುಡುಗರಾಗಿದ್ದಾಗ ನಮ್ಮನೆಯಿಂದ ಸ್ವಲ್ಪ ದೂರದಲ್ಲೇ ತೋಳದ ಹಿಂಡೊಂದು ನಮ್ಮ ಚಿಕ್ಕ ಕರುವೊಂದನ್ನು ಹಿಡಿಯಲು ಬಂದಿದ್ದವು. ಅವುಗಳಿಂದ ಕರುವನ್ನು ರಕ್ಷಿಸಲು ನಮ್ಮ ದನಕರುಗಳು ಸಾಹಸ ಮಾಡುತ್ತಿದ್ದವು. ಇದನ್ನು ಕಂಡ ನಾನೂ ನಮ್ಮಣ್ಣನೂ (ಆಗ ಚಿಕ್ಕ ಹುಡುಗರು) ನಾಯಿಯನ್ನು ಕರೆದುಕೊಂಡು ಕೂಗುತ್ತಾ ಅಲ್ಲಿಗೆ ಓಡಿದೆವು. ನಾವು ಹತ್ತಿರ ಹೋಗುವವರೆಗೂ ತೋಳಗಳು ಕದಲಿಲ್ಲ. ನಾವಿಬ್ಬರು ಮತ್ತು ನಾಯಿಗಳೆರಡು (ಅವು ಹಳ್ಳಿ ನಾಯಿಗಳು) ಇದ್ದುದರಿಂದ ಕೊನೆಗೂ ಅವು ಕಾಡಿನೊಳಗೆ ಓಡಿದವು. ಅಕಸ್ಮಾತ್ ಅವು ತಿರುಗಿ ನಮ್ಮೆ ಮೇಲೆಯೇ ಮುಗಿ ಬಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಲಢ್ಯ ತೋಳಗಳ ಎದುರಲ್ಲಿ ನಮ್ಮ ಕಂಟ್ರಿ ನಾಯಿಗಳು ಏನೂ ಮಾಡುವಂತಿರಲಿಲ್ಲ. ಆಮೇಲೊಂದು ದಿನ ಬೆಳಗ್ಗೆ ಶಾಲೆಗೆ ಹೋಗಲು ನಮ್ಮನೆಯಿಂದ ಕಾಡಿನ ಅಂಕುಡೊಂಕು ದಾರಿಯಲ್ಲಿ ಓಡುತ್ತಾ ಹೊರಟಿದ್ದೆ. ಒಂದು ತಿರುವು ತಿರುಗಿದಾಗ ಕೇವಲ ಎಂಟತ್ತು ಅಡಿ ದೂರದಲ್ಲೇ ನಿಂತಿತ್ತು ಬೃಹತ್ ಗಾತ್ರದ ಕಾಡುಕೋಣ. ಎದೆ ಝಲ್ ಎಂದಿತ್ತು. ಹಿಂತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದೇ ಹೆದರಿ ಓಡಿ ಹೋಗಿತ್ತು. ಮತ್ತೊಂದು ದಿನ ಸಂಜ

ಭಾರತ-ಚೀನಾ ಗಡಿ ಸಮಸ್ಯೆ ನಿವಾರಣೆಗೆ ಇದು ಪ್ರಶಸ್ತ ಸಮಯ !

​ ಬಿಜೆಪಿಗೆ ಭರ್ಜರಿ ಬಹುಮತ ಇರುವುದರಿಂದ ಮೋದಿ ಈ ಬಾರಿ ದೇಶಕ್ಕೆ ಒಂದು ಉಪಕಾರವನ್ನು ಮಾಡಬಹುದು. ಅದೇನೆಂದರೆ ಭಾರತ-ಚೀನಾ ಗಡಿಯನ್ನು ಸ್ಪಷ್ಟವಾಗಿ ತೀರ್ಮಾನಿಸಿ ಸಮಸ್ಯೆಗೆ ಅಂತಿಮ ವಿದಾಯ ಹೇಳುವುದು. ಅರುಣಾಚಲ ಪ್ರದೇಶದ ಬಹುಭಾಗ ಹಿಂದೆ ಚೀನಾಕ್ಕೆ ಸೇರಿದ್ದಾಗಿಯೂ ಅದನ್ನು ತನಗೆ ಬಿಟ್ಟು ಕೊಟ್ಟಲ್ಲಿ ತಾನು ಆಕ್ರಮಿಸಿಕೊಂಡಿರುವ ಅಕ್ಸಾಯ್‌ ಚಿನ್ ಪ್ರಾಂತ್ಯವನ್ನು ಭಾರತಕ್ಕೆ ಬಿಡಲು ತಯಾರಿರುವುದಾಗಿ ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಚೀನಾ ಹೇಳಿದ್ದಾಗಿ, ಅದಕ್ಕೆ ನೆಹರು ಒಪ್ಪದಿರುವುದರಿಂದಲೇ ಗಡಿ ಸಮಸ್ಯೆ ಇಂದಿಗೂ ಮುಂದುವರಿದಿರುವುದಾಗಿಯೂ ಒಂದು ಲೇಖನದಲ್ಲಿ ಓದಿದ್ದೆ. ಮೋದಿ ಸರ್ಕಾರ ಈ ವಿಷಯವನ್ನು ರಚನಾತ್ಮಕವಾಗಿ ಪರಿಶೀಲಿಸಿ ಅರುಣಾಚಲ ಪ್ರದೇಶದ ಒಂದಿಷ್ಟು ಭಾಗವನ್ನು ನಾವು ಕಳೆದುಕೊಂಡರೂ (ಅಕ್ಸಾಯ್‌ ಚಿನ್‌ ನಮ್ಮದಾಗುವುದರಿಂದ) ಸಮಸ್ಯೆಯನ್ನು ಕೊನೆಗೊಳಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಈ ಸಮಸ್ಯೆಯನ್ನು ಬಗೆ ಹರಿಸಲು ಇದು ಅತ್ಯುತ್ತಮವಾದ ಸಮಯ. ಏಕೆಂದರೆ ಚೀನಾಕ್ಕೆ ಸಹ ತನ್ನ ಬಂಡವಾಳವನ್ನು ತೊಡಗಿಸಲು ಭಾರತಕ್ಕಿಂತಾ ಪ್ರಶಸ್ತ ದೇಶ ಇನ್ನೊಂದಿಲ್ಲ ಎಂಬ ಅರಿವು ಇದೆ. ಭಾರತದಕ್ಕೂ ಬಂಡವಾಳ ಬೇಕು ಅನ್ನುವ ಸಂಕಲ್ಪದಲ್ಲಿ ಮೋದಿ ದೇಶ-ವಿದೇಶ ಸುತ್ತುತ್ತಿದ್ದಾರೆ. ಇದೇ ಸಮಯದಲ್ಲಿ ಗಡಿ ವಿಷಯವನ್ನು ಮುಂದಿಟ್ಟುಕೊಂಡು ಕೂತರೆ ಆ ದೇಶವೂ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬಹುದು. ಮತ್ತು ಬಿಜೆಪಿಗೆ ಸ್ಪಷ್ಟ ಬಹುಮತ ಇರು

ಧರ್ಮಾಂಧತೆಗೆ ಔಷಧಿ ಇಲ್ಲವೇ ?

​ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಬ್ಬ ಮುಸ್ಲಿಂ ಹುಡುಗಿ ಕೆಲಸಕ್ಕೆ ಬರುತ್ತಿದ್ದಳು. ಆಕೆ ಮನೆಯಿಂದ ಬರುವಾಗ ಬುರ್ಕಾ ಹಾಕಿಕೊಂಡು ಬರುತ್ತಿದ್ದಳು. ಕಚೇರಿಗೆ ಬಂದೊಡನೆಯೇ ಅದನ್ನು ತೆಗೆದಿರಿಸಿ ಕೆಲಸಕ್ಕೆ ಕೂರುತ್ತಿದ್ದಳು. ಕಚೇರಿಯಲ್ಲಿ ಬುರ್ಕಾ ಧರಿಸಬಾರದು ಅಂತ ಯಾರೂ ಆಕೆಗೆ ಹೇಳಿರಲಿಲ್ಲ. ಸಂಜೆ ಮನೆಗೆ ಹೊರಡುವಾಗ ಯಥಾ ಪ್ರಕಾರ ಅದನ್ನು ಹಾಕಿಕೊಂಡು ಹೊರಡುತ್ತಿದ್ದಳು.  ಚೆನ್ನಾಗಿ ಪರಿಚಿತರಾದ ನಂತರ 'ಯಾಕೆ ಹೀಗೆ ಮಾಡುತ್ತಿರುವೆ?' ಎಂದು ಕೇಳಿದ್ದಕ್ಕೆ ಆಕೆ ಹೇಳಿದ್ದು.. "ಇದನ್ನ ಯಾವ್ ನನ್‌ ಮಗಾ ಕಂಡು ಹಿಡಿದನೋ ಕರ್ಮ. ಇವರುಗಳದ್ದು ಒಳ್ಳೆ ಹಿಂಸೆ. ನಮಗೆ ಇಷ್ಟ ಇಲ್ಲಾ ಅಂದ್ರೂ ಹಾಕಿಕೊಳ್ಳಬೇಕು..' ಎಂದು ಹೇಳಿ ಇನ್ನೊಂದಿಷ್ಟು ಯಾರಿಗೋ ಉಗಿದಳು.  'ಇವರುಗಳದ್ದು ಒಳ್ಳೆ ಹಿಂಸೆ' ಅಂದರೆ ? ಯಾರದ್ದು? ಯಾರವರು ? ಅಂತ ಕೇಳಿದ್ದಕ್ಕೆ ಆಕೆ ಸರಿಯಾಗಿ ಉತ್ತರಿಸಲಿಲ್ಲ, 'ಹೀಗೇ... ಇರ್ತಾರಲ್ಲ!' ಅಂತ ತೇಲಿಸಿದಳು. ಅವರು ಯಾರಂತ ಕೊನೆಗೂ ಗೊತ್ತಾಗಲಿಲ್ಲ. ಹಾಗೆಯೇ ಇನ್ನೊಂದು ಘಟನೆ ಕೂಡಾ ನೆನಪಾಗ್ತಿದೆ. ಒಮ್ಮೆ ಫೋಟೋ ಸ್ಟುಡಿಯೋ ಸಹ ಹೊಂದಿದ್ದೆ. ಆಗ ಒಂದು ಮದುವೆಗೆ ಹೋದಾಗ (ಅದು ಹಿಂದುಗಳದ್ದು) ಅಲ್ಲಿಗೆ ಅವರ ಮುಸಲ್ಮಾನ ಕುಟುಂಬವೊಂದು ಸಹ (ಒಂದಿಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು) ಬಂದಿತ್ತು. ಮದುಮಕ್ಕಳು ಎಲ್ಲರ ಜೊತೆ ನಿಂತು ಫೋಟೋ ತೆಗೆಸುತ್ತಾ ಕೊನೆಗೊಮ್ಮೆ ಇವರನ

ಜನ-ಧನ್‌ ಹಾಗೂ ಆಧಾರ್‌ !

​ ಮೊನ್ನೆ ಮೊನ್ನೆ ಕೆಂದ್ರ ಸರ್ಕಾರದ ಜನ-ಧನ್ ಯೋಜನೆಯಲ್ಲಿ ಕೋಟ್ಯಾಂತರ ಜನರಿಗೆ  ಬ್ಯಾಂಕ್‌ ಖಾತೆ ನೀಡಲಾಯ್ತು. ಪ್ರತಿಯೊಬ್ಬ ಪ್ರಜೆಗೂ ಒಂದು ಬ್ಯಾಂಕ್‌ ಖಾತೆ ಇರಲೇ ಬೇಕು, ಹಾಗಾಗಿ ಇದೊಂದು ಅತ್ಯುತ್ತಮ ಯೋಜನೆ.  ಆದರೆ ಇದನ್ನು ಜಾರಿಗೊಳಿಸಿದ ರೀತಿಯಲ್ಲಿನ ಯಡವಟ್ಟು ನೋಡಿ... ಈ ಯೋಜನೆಯ ಪ್ರತಿಫಲ ಸಿಗಬೇಕಾಗಿದ್ದುದು ಈ ಮೊದಲೇ ಬ್ಯಾಂಕ್‌ ಖಾತೆ ಹೊಂದಿಲ್ಲದಿರುವವರಿಗೆ ಮಾತ್ರ. ಆದರೆ ಮೊದಲೇ ಬ್ಯಾಂಕ್‌ ಖಾತೆ ಇದ್ದವರೂ ಈ ಯೋಜನೆಯಡಿ ಲಕ್ಷಾಂತರ ಜನರು ಮತ್ತೊಂದು ಖಾತೆ ಮಾಡಿಸಿಕೊಂಡಿದ್ದಾರೆ ಎಂಬುದು ಈಗ ಸರ್ಕಾರದ ಅರಿವಿಗೆ ಬಂದಿದೆ. (ಹೀಗಾಗುತ್ತದೆ ಎಂದು ಮೊದಲೇ ತಿಳಿದಿರಲಿಲ್ಲ ಎನ್ನಲಾಗದು, ಸಂಖ್ಯೆಯ ಲಾಭ ಪಡೆಯಲು ಸುಮ್ಮನಾಗಿದ್ದಿರಲೂ ಬಹುದು.) ಈಗ ಅಂತಹ ಖಾತೆದಾರರನ್ನು ಹೊರ ಹಾಕಲು ಇನ್ನೊಂದು ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಎಂಬ ಸುದ್ದಿ ಬಂದಿದೆ. ಅದು ಆರು ತಿಂಗಳೋ ವರ್ಷವೋ ಹಿಡಿದರೆ ಅಚ್ಚರಿಯೇನಲ್ಲ, ಅಥವಾ ಎಷ್ಟರ ಮಟ್ಟಿಗೆ ಸರಿಯಾದ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ ಎಂಬುದನ್ನಂತೂ ಕೇಳುವುದೇ ಬೇಡ. ಆದರೆ ಕೇಂದ್ರ ಸರ್ಕಾರ ಈ ರೀತಿ ಮಾಡಿದಿದ್ದರೆ ??? ಹೇಗಿದ್ದರೂ ಆಧಾರ್‌ ಕಾರ್ಡ್‌ ನೀಡಿದರೆ ಬೇರೆ ಯಾವುದೇ ದಾಖಲೆ ಬೇಡ ಅಂತ ತಿಳಿಸಿದ್ದರು. ಅದನ್ನೇ ಆಧಾರ್‌ ಕಾರ್ಡ್‌ ಇದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಂತ ಕಡ್ಡಾಯ ಮಾಡಿದ್ದಿದ್ದರೆ ? ಅದಕ್ಕೂ ಮೊದಲು ಬ್ಯಾಂಕ್‌ ಖಾತೆ ಇರುವವರೆಲ್ಲಾ ಆಧಾರ್‌ ಕಾರ್ಡ್‌ ಹೊಂದಿರಲೇ

ಪಿಸುಮಾತು ಬ್ಲಾಗ್‌ನ ಆಂಡ್ರಾಯಿಡ್ ಆಪ್ !

​ ಬ್ಲಾಗ್‌ಗೂ ಆಂಡ್ರಾಯಿಡ್ ಆಪ್‌? ಅಂತ ಮುಗು ಮುರಿಯಬೇಡಿ. ಆಪ್‌ಗಳ ವಿನ್ಯಾಸಕ್ಕೆ ಪ್ರವೇಶ ಮಾಡುವ ಸಲುವಾಗಿ ಮೊದಲ ಪ್ರಯತ್ನವಾಗಿ ಇದನ್ನು ತಯಾರಿಸಲಾಗಿದೆ. [ ಇಲ್ಲಿಂದ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ : https://play.google.com/store/apps/details?id=ana.sree.pisumathu4u ] ನನ್ನ ಬ್ಲಾಗ್‌ ಅನ್ನು ನಿರಂತರವಾಗಿ ಓದುತ್ತಿರುವವರು ಆಂಡ್ರಾಯಿಡ್ ಮೊಬೈಲನ್ನೂ ಉಪಯೋಗಿಸುತ್ತಿದ್ದಲ್ಲಿ ಈ ಆಪ್‌ ಮುಖಾಂತರ ಬ್ಲಾಗ್‌ ಬರಹಗಳನ್ನು ಓದಿಕೊಳ್ಳಬಹುದು. ಇದು ಉಚಿತ ಆಪ್‌ ಮತ್ತು ಇದು ಕಾರ್ಯ ನಿರ್ವಹಿಸಲು ಇಂಟರ್ನೆರ್ಟ್‌ ಬೇಕು. ಕನ್ನಡದ ಇನ್ನೂ ಅನೇಕ ಆಪ್‌ಗಳನ್ನು ತಯಾರಿಸುವ ಯೋಜನೆ ಇದೆ. ಆದರೆ ಸೀಮಿತ ಜನರು ಉಪಯೋಗಿಸುವ ಆಪ್‌ಗಳನ್ನು ಮಾಡಲು ಕೂಡಾ ತುಂಬಾ ಖರ್ಚಾಗುತ್ತದೆ. ಪಾವತಿಸಿ ಉಪಯೋಗಿಸುವ ಆಪ್‌ ಮಾಡಿದರೆ ಎಷ್ಟು ಜನ ಉಪಯೋಗಿಸುತ್ತಾರೋ ಗೊತ್ತಿಲ್ಲ.

ವೇಶ್ಯಾವಾಟಿಕೆ ಕಾನೂನುಬದ್ದವಾಗಲಿ

​ 'ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು' ಅಂತ ಕವಿ ನಿಸಾರ್‌ ಅಹಮದ್ ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ಮಹತ್ವಪೂರ್ಣವಾದ ಹೇಳಿಕೆ. ವೇಶ್ಯಾವಾಟಿಕೆ ಅನಾದಿ ಕಾಲದಿಂದಲೂ ಇತ್ತು, ಇದೆ ಹಾಗೂ ಮುಂದೂ ಇರುತ್ತದೆ. ಯಾವ ಕಾನೂನಿನಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಕಾನೂನು ಬದ್ದಗೊಳಿಸಿ ಅಮಾಯಕ ಹೆಣ್ಣು ಮಕ್ಕಳು ಈ ಬಲೆಗೆ ಬೀಳದಂತೆ ತಪ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.  ಈಗ ನಡೆಯುತ್ತಿರುವ ಕಾಳಸಂತೆಯ ವೇಶ್ಯಾವಾಟಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೂ ಆ ಹುಡುಗಿಯರಿಗೆ ಅಂತಹ ಲಾಭವಾಗುತ್ತಿಲ್ಲ. ಕಾರಣ ಅವರನ್ನು ನಿಯಂತ್ರಿಸುತ್ತಿರುವ ಮಧ್ಯವರ್ತಿಗಳೇ ಪೂರ್ತಿ ಲಾಭ ಪಡೆಯುತ್ತಿದ್ದಾರೆ. ಈ ದಂಧೆಯನ್ನು ಕಾನೂನುಬದ್ದಗೊಳಿಸಿ ಆ ವೃತ್ತಿಯವರಿಗೆ ರಕ್ಷಣೆ ಒದಗಿಸುವ ಮೂಲಕ ಮಧ್ಯವರ್ತಿಗಳಿಂದ ಬಿಡುಗಡೆ ಮಾಡಬೇಕಗಿದೆ.

ಗುರುತ್ವ ಬಲದಿಂದ ವಿಶ್ವದ ನಿರ್ದಿಷ್ಟ ಭಾಗಕ್ಕೆ ಚಲಿಸಬಹುದೇ ?

​ ಬೇರೆ ಗ್ರಹದ ಜೀವಿಗಳು ಭೂಮಿಯನ್ನು ತಲುಪುವುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ಅಷ್ಟು ದೂರದಿಂದ ಬರಲು ಅಗಾಧವಾದ ಇಂದನ ಬೇಕಾಗುತ್ತದೆ. ಹಾಗೂ ಅದಕ್ಕಿಂತಲೂ ಮಿಗಿಲಾದ ವೇಗವೂ ಬೇಕು. ಅವರು ಎಲ್ಲಾ ಗ್ರಹಗಳಿಗೂ ಇರುವ ಪ್ರತ್ಯೇಕ ಗುರುತ್ವ ಶಕ್ತಿಯನ್ನೋ ಅಥವಾ ಕಾಂತ ಶಕ್ತಿಯನ್ನೋ ಬಳಸಿ ಆ ಗ್ರಹದ ಸಮೀಪ ಹೋಗುವ ವಿಶಿಷ್ಟ ಯಂತ್ರಗಳನ್ನು ಬಳಸುತ್ತಿರಬಹುದೇ ?  ಉದಾಹರಣೆಗೆ ನಮ್ಮ ಭೂಮಿಗೆ ಇರುವ ಗುರುತ್ವ ಬಲ ಇನ್ನೊಂದು ಗ್ರಹಕ್ಕೆ ಇಷ್ಟೇ ಪ್ರಮಾಣದಲ್ಲಿ ಇರಲಾರದು. ಈ ಗುರುತ್ವ ಬಲವನ್ನು ಗ್ರಹಿಸುವ ಯಂತ್ರವೊಂದನ್ನು ಕಂಡು ಹಿಡಿದಿದ್ದೇ ಆದಲ್ಲಿ ಪ್ರತಿ ಗ್ರಹವನ್ನೂ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಸೌರ ಮಂಡಲದಿಂದ ಹೊರಗಿರುವಾಗ ಸೌರಮಂಡಲದ ಗುರುತ್ವ ಬಲವನ್ನು ಗ್ರಹಿಸಿ ಸೌರ ಮಂಡಲ ಪ್ರವೇಶಿಸಬಹುದು. ಕ್ಷೀರ ಪಥದಿಂದ ಹೊರಗಿರುವಾಗ ಕ್ಷೀರಪಥದ ಗುರುತ್ವ ಬಲವನ್ನು ಗ್ರಹಿಸಿ ನಮ್ಮ ಗೆಲಾಕ್ಸಿಯನ್ನು ಪ್ರವೇಶಿಸಬಹುದು. ಅಂದರೆ ಪ್ರತಿ ಗೆಲಾಕ್ಸಿಗೂ, ಸೌರವ್ಯೂಹಕ್ಕೂ (ನಕ್ಷತ್ರ), ಗ್ರಹಗಳಿಗೂ ಪ್ರತ್ಯೇಕವಾದ ಪ್ರಮಾಣದ ಗುರುತ್ವ ಬಲ ಇದೆ. ಅದನ್ನು ಗ್ರಹಿಸಿ ಅದನ್ನು ಬಳಸಿಕೊಂಡು ಪ್ರಯಾಣಿಸುವ ಯಂತ್ರಗಳನ್ನು ಅನ್ಯಗ್ರಹವಾಸಿಗಳು ತಯಾರಿಸಿರಲೂ ಬಹುದು. ಅಂದರೆ ಕ್ಷೀರ ಪಥದಿಂದ ಬಲು ದೂರ ಇರುವ ಅನ್ಯಗ್ರಹವಾಸಿಗಳು ಮೊದಲು ಕ್ಷೀರಪಥದ ಗುರುತ್ವವನ್ನು ಗ್ರಹಿಸಿ ಅದರ ಸಮೀಪ ಬರುತ್ತಾರೆ. ನಂತರ ಕ್ಷೀರಪಥದಲ್ಲಿನ ಕೋಟ್ಯಾಂತರ ನಕ್ಷತ್ರಗಳ ನಡುವೆ ಸೂರ್ಯನ ಗು

ಅವನು ಅವಳು ಹಾಗೂ ಮತ್ತೊಬ್ಬಳು !

​ ನಮ್ಮ ಹಳೆ ಮನೆ ಮಾಲಿಕರ ಮಗಳು ನನ್ನೊಂದಿಗೆ ಆತ್ಮೀಯವಾಗಿಯೇ ಇದ್ದಳು. ಆಗಾಗ ನನ್ನ ಮನೆಗೆ ಬಂದು ಹರಟೆ ಹೊಡೆಯುತ್ತಾ, ಗಣಕದಲ್ಲಿ ಫೇಸ್‌ಬುಕ್ ನೋಡುತ್ತಾ ಕೂತಿರುತ್ತಿದ್ದಳು. ಅದೇ ರೀತಿ ನನ್ನ ಕಿರಿಯ ಗೆಳೆಯನೊಬ್ಬ ಸಹ ಆಗಾಗ ಮಾತನಾಡಲೆಂದು ಬರುತ್ತಿದ್ದ. ಎರಡು ಗ್ರಹಗಳು ಒಂದಲ್ಲಾ ಒಂದು ದಿನ ಹತ್ತಿರತ್ತಿರ ಬರಲೇ ಬೇಕಲ್ಲ ? ಅದೇ ತರ ಆಯ್ತು. ಆ ಹುಡುಗನನ್ನು ನೋಡಿದ ಈ ಹುಡುಗಿ ಆತನ ಬಗ್ಗೆ ಇಂಚಿಂಚೇ ವಿಚಾರಿಸತೊಡಗಿದಳು. ನಾನೂ ತಮಾಷೆಗೆ ರೇಗಿಸತೊಡಗಿದೆ. ಕೊನೆಗೊಂದು ದಿನ ಅವಳೀಗೆ ಇವನನ್ನು ಪರಿಚಯ ಮಾಡಿ ಕೊಟ್ಟೆ. ಇಬ್ಬರೂ ಅವರಷ್ಟಕ್ಕೆ ಅವರೇ ಮೊಬೈಲ್‌ನಲ್ಲಿ ಸಂದೇಶ-ಮಾತುಗಳನ್ನ ವಿನಿಮಯ ಮಾಡಿಕೊಳ್ಳತೊಡಗಿದರು. ಹೀಗೆ ಹೊಸ ಶಕೆ ಶುರುವಾದ ಹೊಸದರಲ್ಲೇ ಈ ಹುಡುಗಿ ಏನು ಮಾಡಿದೆ ಅಂದರೆ 'ಇರಲರದವಳು ಇರುವೆ ಬಿಟ್ಕೊಂಡಳು' ಅನ್ನುವಂತೆ ಒಂದು ದಿನ ತನ್ನ ಗೆಳತಿಗೆ 'ತನಗೊಬ್ಬ ಹೊಸ ಗೆಳೆಯ ಸಿಕ್ಕಿರುವ ಬಗ್ಗೆ' ಕೊಚ್ಚಿಕೊಂಡು ಆಕೆಯ ಮೊಬೈಲ್‌ನಿಂದಲೂ ಈತನೊಂದಿಗೆ ಚಾಟ್‌ ಮಾಡಿ ತನ್ನ ಹಿರಿಮೆಯನ್ನು ಸಾರಿಕೊಂಡಿದ್ದಾಳೆ.  ಈಕೆಯ ಗೆಳೆಯನ ಬಗ್ಗೆ ಗೆಳತಿಯಾದ ಆಕೆಗೆ ಇವಳು ಏನೇನು ಹೇಳಿ ಹುರಿದುಂಬಿಸಿದ್ದಳೋ ಏನೋ, ಆಕೆಗೂ ಒಮ್ಮೆ ಈ ಗೆಳೆಯನೊಂದಿಗೆ ಸ್ನೇಹ ಬೆಳೆಸುವ ಮನಸ್ಸಾಗಿದೆ. ಅದೊಂದು ರಾತ್ರಿ ಅವನಿಗೆ ಹೆದರುತ್ತೆದರುತ್ತಲೇ 'ಹಾಯ್‌' ಹೇಳಿದ್ದಾಳೆ. ಇವನು ಅದು ಈ ಹುಡುಗಿ ಅಂದುಕೊಂಡು ಮಾತು ಶುರು ಮಾಡಿದ್ದಾನೆ. ಕೊನೆಗೆ

ಓ ನಿರ್ಭಾವುಕ ಕಥೆಗಾರ...

​ ಇದು ಪ್ರೇಮ ಪತ್ರವಲ್ಲ. ಪ್ರೇಮದ ಆಲಾಪನೆ, ನಿವೇದನೆಗಳೂ ಅಲ್ಲ. ಇಲ್ಲಿರುವುದು ನನ್ನ ವೇದನೆ ಮತ್ರ. ನೀನೇಕೆ ಹಾಗೆ ಮತು ಕೊಟ್ಟು ಮೋಸ ಮಡಿದೆ? ನಿನ್ನ ಮೋಸಕ್ಕೊಂದು ಸಾಮಜಿಕ ನ್ಯಾಯದ ಪ್ಯಾಲೆ ಸಾಕ್ಷಿಯನ್ನೊದಗಿಸುತ್ತೀಯ. ನನಗೆ ಮೂವತ್ತಾರು, ನಿನಗೆ ಇಪ್ಪತ್ತಾರು. ಈ ಹತ್ತು ವರ್ಷಗಳ ಅಂತರವೇ ನ್ನ ನನ್ನ ನಡುವಿನ ಮಹದಂತರವಾಗಿ ನಿರೂಪಿಸಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿಬಿಡುತ್ತೀಯ. ಆದರೆ ವಯಸ್ಸಿನಲ್ಲಿ ಅಂತರವಿತ್ತೇ ಹೊರತೂ ಮನಸ್ಸಿನಲ್ಲಿ ಅಲ್ಲವಲ್ಲ? ನಮ್ಮೆರಡು ಮನಸ್ಸುಗಳೂ ಸಂಭವಗಳ ಪ್ರೀತಿಗೆ ಸಿಲುಕಿ ಆಕರ್ಷಣೆಯ ಸಂಭಾವನೀಯತೆಯಲ್ಲಿ ಒಂದಾಗಿ ಹೋಗಿರಲಿಲ್ಲವೇ? ದೂರದ ಊರಲ್ಲಿದ್ದರೂ ನಾವು ಪತ್ರಗಳಲ್ಲಿ ಪ್ರೇಮಲೋಕ ಸೃಷ್ಟಿಸಿದೆವು. ಅಕ್ಷರಗಳಲ್ಲಿ ಅರಮನೆ ಕಟ್ಟಿದೆವು. ಭಾವನೆಗಳ ಮಹಲನ್ನು ಆಕಾಶದೆತ್ತರಕ್ಕೆ ಹಬ್ಬಿಸಿದೆವು. ಕೈಗೂಡದ ಪ್ರೇಮಕ್ಕಾಗಿ ಹಪಹಪಿಸಿದೆವು. ನೀನಿಂದು ದೂರಾಗಿ ಹೋಗುವೆಂಂದಾದರೆ ಈ ಮೋಸಕ್ಕೆ ನಾನ್ಯಾರ ಬಳಿ ಮೊರೆಯಿಡಲಿ? ಈ ನನ್ನ ಚೀತ್ಕಾರವನ್ನಾಲಿಸಿ ತೀರ್ಪು ನೀಡುವ ನ್ಯಾಯದಿsಶ ಯರು? ಒಳ್ಳೆಯವನೆಂದು, ಶುದ್ಧ ಮನಸ್ಸಿನವನೆಂದು, ಮನುಷ್ಯನೆಂದು, ಕೊನೆಗೆ ದೇವರೆಂದೇ ನಿನ್ನನ್ನು ಸ್ವೀಕರಿಸಿದೆ. ನಂಬಿದ ದೇವರೇ ಮುಳ್ಳು ದಾರಿಗೆ ದೂಡಿದರೆ ನಾನ್ಯಾವ ನ್ಯಾಯದಿsಶನಲ್ಲಿ ಮೊರೆಯಿಡಲಿ ಪ್ರಭುವೇ? ಹೌದು, ಈ ನನ್ನ ರೋಧನಕ್ಕೆ ಕಿವಿಗೊಟ್ಟು ನನ್ನ ವೇದನೆಯ ದೂರಿಗೆ ತೀರ್ಪು ನೀಡುವ ನ್ಯಾಯದಿsಶ ನಿನ್ನ ಅಂತರಾತ್ಮವೊಂದೇ. ನೀನೊಮ್ಮೆ ಅದರ

ಕೊಳವೆ ಬಾವಿ ಅವಘಡಗಳನ್ನು ನಿಲ್ಲಿಸಲು ಸರ್ಕಾರ ಹೀಗೆ ಮಾಡಲಿ

​ ೧. ವ್ಯಕ್ತಿಯೊಬ್ಬ ಕೊಳವೆ ಬಾವಿ ಕೊರೆಸಬೇಕೆಂದರೆ ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. (ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಿಂದ) ೨. ಕೊಳವೆಬಾವಿ ಕೊರೆಯುವ ಸಂಸ್ಥೆಯವರು ಅನುಮತಿ ಪಡೆಯದ ಬಾವಿಗಳನ್ನು ಕೊರೆಯುವಂತಿಲ್ಲ. ೩. ಅನುಮತಿ ನೀಡುವಾಗ ಗ್ರಾಮಾಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಅದು ಕೊಳವೆಬಾವಿಗೆ ಯೋಗ್ಯವೇ ಎಂದರಿತು ಅನುಮತಿ ನೀಡಬೇಕು. (ಹತ್ತಿರದಲ್ಲೇ ಬೇರೆ ಕೊಳವೆಬಾವಿ ಇರಬಹುದು, ನೀರಿಲ್ಲದಿರುವಿಕೆ ಇತ್ಯಾದಿ) ೪. ಅನುಮತಿ ನೀಡುವಾಗ ಆ ವ್ಯಕ್ತಿಯಿಂದ ಒಂದು ಲಕ್ಷ ರೂಪಾಯಿಯನ್ನು ಠೇವಣಿ ಪಡೆದು ಅನುಮತಿ ಪತ್ರ ನೀಡಬೇಕು. ೫. ರೈತನಿಂದ ಅನುಮತಿ ಪತ್ರ ಪಡೆದ ನಂತರವೇ ಕೊಳವೆಬಾವಿ ಕೊರೆಯುವವರು ಕೆಲಸ ಪ್ರಾರಂಭಿಸಬೇಕು. ೬. ಕೊರೆದಾದ ನಂತರ ಮತ್ತೆ ಗ್ರಾಮಾಧಿಕಾರಿಯನ್ನು ಕರೆಸಿ ನೀರು ಸಿಕ್ಕಿದ್ದರೆ ಅದಕ್ಕೆ ಮಾಡಿರುವ ವ್ಯವಸ್ಥೆ, ಅಥವಾ ನೀರು ಸಿಗದಿದ್ದರೆ ಕೊಳವೆಬಾವಿಯನ್ನು ಮುಚ್ಚಿರುವುದನ್ನು ಅಧಿಕಾರಿಯು ಪರಿಶೀಲಿಸಬೇಕು. ೭. ಎಲ್ಲವೂ ಸಮರ್ಪಕವಾಗಿದೆ ಎಂದಾದ ನಂತರವೇ ರೈತ ಇರಿಸಿರುವ ಠೇವಣಿಯನ್ನು ಕೊಳವೆಬಾವಿ ಕೊರೆದ ಸಂಸ್ಥೆಗೆ ಹಸ್ತಾಂತರಿಸಬೇಕು. ೮. ಇಷ್ಟೆಲ್ಲಾ ಆದ ನಂತರವೂ ಏನಾದರೂ ಅವಘಡ ಸಂಭವಿಸಿದಲ್ಲಿ ಈ ಮೂವರ ಮೇಲೂ ಕ್ರಿಮಿನಲ್ ಮೊಖದ್ದಮೆ ದಾಖಲಿಸಬೇಕು. ಹೀಗೆ ಮಾಡುವುದರಿಂದ ಒಂದಿಷ್ಟು ಲಂಚಕ್ಕೆ ದಾರಿಯಾಗಬಹುದಾದರೂ ಮಕ್ಕಳ ಪ್ರಾಣಹಾನಿಯಂತ ಅವಘಡಗಳನ್ನು ಕಡಿಮೆ ಮಾಡಬಹುದು.

ಬಿಜೆಪಿಯವರು ದೇವರಲ್ಲ, ಕಾಂಗ್ರೆಸ್‌ನವರು ರಾಕ್ಷಸರಲ್ಲ

​ ಬಿಜೆಪಿಯ ಭಟ್ಟಂಗಿಗಳು 'ಕಾಂಗ್ರೆಸ್‌ನಿಂದ ಏನೂ ಅಭಿವೃದ್ದಿ ಆಗಿಲ್ಲ' ಎಂದು ಹೇಳುತ್ತಾ ಮತ್ತೊಂದು ಕಾಂಗ್ರೆಸ್ ವಿರೋಧಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದಾರೆ, ಅಥವಾ ಈಗಾಗಲೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನಿಂದ ಅಭಿವೃದ್ದಿಯೇ ಆಗಿಲ್ಲ ಅನ್ನೋದನ್ನ ಒಪ್ಪಲು ಸಾಧ್ಯವೇ ?  ಖಂಡಿತಾ ಬೇಕಾದಷ್ಟು ಕೆಲಸಗಳಾಗಿವೆ.  ನಮ್ಮ ಹಳ್ಳಿಯಲ್ಲಿ ಅವರು ಶಾಲೆಯನ್ನು ತೆರೆಯದೇ ಹೋಗಿದ್ದರೆ ನಾನಿವತ್ತು ನಮ್ಮ ತಂದೆ ತಾಯಿಯಂತೆ ನಮ್ಮೂರಿನ ಧನಿಕರ ಮನೆ ಸೆಗಣಿ ಬಳಿದುಕೊಂಡು ಜೀವಿಸಬೇಕಾಗಿತ್ತು! ನನಗಿಂತಾ ಹಿಂದಿನವರು ಕಲಿಯುವ ಅವಕಾಶವಿಲ್ಲದೇ ಆ ಕೆಲಸ ಮಾಡಿಕೊಂಡಿದ್ದಾರೆ. ಅಂದು ಐದನೇ ತರಗತಿ ವರೆಗೆ ಮಾತ್ರ ಇದ್ದ ಶಾಲೆಯಲ್ಲಿ ಏಳನೇ ತರಗತಿ ವರೆಗೂ ಅವಕಾಶ ಕಲ್ಪಿಸಿದಾಗ ಅದೇ ಊರಿನ ಮೇಲ್ವರ್ಗದ ಧನಿಕರು ಶಾಲೆಗೆ ಬೀಗ ಜಡಿದು ಉಪಾಧ್ಯಾಯರಿಗೆ 'ನಮ್ಮ ಅನುಮತಿ ಇಲ್ಲದೇ ಹೇಗೆ ಏಳನೇ ತರಗತಿ ವರೆಗೂ ಪಾಠ ಮಾಡ್ತೀರಿ ?' ಎಂದು ಧಮಕಿ ಹಾಕಿದ್ದನ್ನ ನಾನಿನ್ನೂ ಮರೆತಿಲ್ಲ. ಈ ಊರಿನ ಬಡ ಮಕ್ಕಳೆಲ್ಲಾ ಹೆಚ್ಚು ಓದುತ್ತಾ ಹೋದಂತೆ ತಮ್ಮ ಮನೆ-ತೋಟದ ಕೆಲಸಕ್ಕೆ ಕೂಲಿಗಳ ಬರ ಏರ್ಪಡುತ್ತದೆ ಎಂಬ ಆತಂಕ ಅಂದೇ ಅವರನ್ನು ಕಾಡಿತ್ತು! ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಸೇವೆಯನ್ನು ನಮ್ಮ ಕುಗ್ರಾಮಗಳವರೆಗೂ ನೀಡದೇ ಹೋಗಿದ್ದರೂ ಸಹ ನನ್ನ ವಿಧ್ಯಾಭ್ಯಾಸ ಏಳನೇ ತರಗತಿಗೇ ಕೊನೆಯಾಗಿರುತ್ತಿತ್ತು. ಇಂತಹ ಅನೇಕ ಸವಲತ್ತುಗಳನ್ನು ಪಡೆದು ಬೆಳೆದ ನಾನು ಕಾಂಗ್ರೆಸ್‌ನಿಂದ

ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ !?

​ ಬ್ರಾಹ್ಮಣರನ್ನು ಟೀಕಿಸಿದರು ಎಂಬ ಒಂದೇ ಕಾರಣಕ್ಕಾಗಿ ವಿಪ್ರನೊಬ್ಬ 'ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ' ಎಂದು ಆದೇಶ ಹೊರಡಿಸಿದ್ದಾನೆ. ಅಲ್ಲಿಗೆ ಹೆಣ್ಣನ್ನು ಬೆಂಕಿಗೆ ಹಾಕುವಲ್ಲಿಂದ ಶುರುವಾದ ಹಿಂದೂ ಧರ್ಮ ಇದೀಗ ಅತ್ಯಾಚಾರ ಮಾಡಿಸುವಲ್ಲಿಗೆ ಬಂದು ನಿಂತಿದೆ ಎಂದಾಯ್ತು.  ಸಾವಿರಾರು ವರ್ಷಗಳಿಂದಲೂ ಭಾರತೀಯರನ್ನು ವಂಚಿಸುತ್ತಾ ಬಂದ ಪುರೋಹಿತ ವರ್ಗ, ತಮ್ಮ ಜಾತಿಯ ಮಹಿಳೆಯರನ್ನೂ ಬೆಂಕಿಗೆ ಹಾಕಿ ಸುಡುತ್ತಾ ಬಂದಿತ್ತು. ಇದಕ್ಕೆ ಅವರು ನೀಡಿದ ಸುಂದರವಾದ ಹೆಸರು 'ಸತಿ ಸಹಗಮನ ಪದ್ದತಿ'. ಗಂಡ ಸತ್ತಾಗ ತಾನಾಗಿಯೇ ಮಹಿಳೆ ಆತನ ಚಿತೆಗೆ ಹಾರಿ ಪ್ರಾಣ ಬಿಡುತ್ತಿದ್ದಳು ಎಂಬ ಕತೆಯನ್ನು ಇಂದಿಗೂ ಕಟ್ಟಿ ಹೇಳುವವರಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ನಡೆದಿಲ್ಲ ಎನ್ನಲಾರೆ. ಆದರೆ ಎಲ್ಲಾ ಹೆಣ್ಣುಗಳೂ ಈ ರೀತಿ ಗಂಡನ ಜೊತೆ ಪ್ರಾಣತ್ಯಾಗ ಮಾಡುತ್ತಾರೆದರೆ ನಂಬಲಾದೀತೆ ? ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಒಬ್ಬಾಕೆ 'ಮೊದ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾರಿಸಿರಬಹುದು, ನಂತರ ತಾವೇ ಇಷ್ಟ ಪಟ್ಟು ಬೆಂಕಿಗೆ ಹಾರಲು ಶುರು ಮಾಡಿರಬಹುದು' ಎಂದು ಬಡಬಡಿಸಿದ್ದರು ! ಇವರ ಗಂಡ ಸತ್ತಾಗ ಇವರೂ ಇಷ್ಟಪಟ್ಟು ಬೆಂಕಿಗೆ ಹಾರಿಬಿಡುತ್ತಾರೋ ಏನೋ. ಅಂದರೆ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾಕಿದರು, ಬರ ಬರುತ್ತಾ ವಿಧವೆಯರಿಗೆ ಅದು ಅನಿವಾರ್ಯ ಆಯ್ತು! ಆದರೆ ಪುರೋ

ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಮಾಡಿದ ಅನ್ಯಾಯ !

​ ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಬಡವರ ವಿರೋಧಿ ನಿರ್ಣಯ ಜಾರಿ ಮಾಡಿದೆ. ಅದೇನೆಂದರೆ ಶೇ. ೨೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿದ್ದರೂ ಸಾಕು, ಆ ಶಾಲೆ/ಕಾಲೇಜಗೆ 'ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆ' ಎಂದು ಮಾನ್ಯತೆ ನೀಡುವುದು. (ಈ ಹಿಂದೆ ಈ ಮಾನ್ಯತೆ ಪಡೆಯಲು ಕನಿಷ್ಟ ಶೇ. ೭೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿರಬೇಕಿತ್ತು). ಈ ನಿಯಮ ಮೇಲ್ನೋಟಕ್ಕೆ ಅಲ್ಪ ಸಂಖ್ಯಾತರ ಪರ ಅನ್ನಿಸಿದರೂ ದೊಡ್ಡ ನಷ್ಟ ಅಲ್ಪ ಸಂಖ್ಯಾತ ಬಡವರಿಗೇ ಆಗುತ್ತದೆ. ಉದಾ : ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲಾ ದುಡ್ಡಿಗಾಗಿಯೇ ನಡೆಯುತ್ತಿರುವಂತಹವು ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಒಂದು ಶಾಲೆಯ ವಿದ್ಯಾರ್ಥಿಗಳ ಸಾಮರ್ಥ್ಯ ೧೦೦ ಎಂದು ಇಟ್ಟುಕೊಳ್ಳೋಣ. ಈ ಶೈಕ್ಷಣಿಕ ವರ್ಷದಲ್ಲಿ ಆ ಶಾಲೆಗೆ ಕನಿಷ್ಟ ೨೫ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಸೇರಿದರೂ ಸಾಕು. ಆ ಸಂಸ್ಥೆಯು 'ತಾನು ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆ' ಎಂದು ಪ್ರಮಾಣ ಪತ್ರ ಪಡೆಯಬಹುದು. ಅವರು ಆ ಪ್ರಮಾಣ ಪತ್ರ ಪಡೆಯುವುದರಿಂದ ಬಡವರಿಗಾಗುವ ನಷ್ಟ ಏನು ? ಅದು ವಿಷಯ. ಒಂದು ಸಂಸ್ಥೆ ಈ ಪ್ರಮಾಣ ಪತ್ರ ಪಡೆದ ನಂತರ ಅದು 'ಸಮಾನ ಶಿಕ್ಷಣ ಹಕ್ಕು' ಆರ್‌.ಟಿ.ಇ. ನಿಂದ ಹೊರಗುಳಿಯುತ್ತದೆ. ಅಂದರೆ ಮೇಲ್ಕಂಡ ಶಾಲೆಗೆ ಕನಿಷ್ಟ ೨೫ ಧನಿಕರ ಮಕ್ಕಳು ಸಿಕ್ಕರೆ ಸಾಕು, (ಅದೇನೂ ದೊಡ್ಡ ವಿಷಯವಲ್ಲ) ನಂತರ ಬಡ ಮಕ್ಕಳನ್ನು (ಅವರು ಅಲ್ಪಸಂಖ್ಯಾತರಿದ್ದರೂ) ಪ್ರವೇಶ ನಿರಾಕರಿಸಬಹುದು! ಏಕೆಂದರೆ

ಸಾಲದ ಮಾಹಿತಿ ನೀಡಲಿ !

​ಹೊಸ ಸರ್ಕಾರಗಳು ಬಂದಾಗೆಲ್ಲಾ ಹೇಳುವ ಒಂದೇ ಮಾತು... "ಹಳೆ ಸರ್ಕಾರ ಮಾಡಿ ಹೋದ ಸಾಲದ ಹೊರೆ ತುಂಬಾ ಇದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯ!"  ಇನ್ನೈದು ವರ್ಷದ ನಂತರ ಮತ್ತೊಂದು ಸರ್ಕಾರ ಬಂದರೆ ಅವರು ಹೇಳುವುದೂ ಇದನ್ನೇ.  ಅದಕ್ಕಾಗಿ ಈ ಸಲ ಕೇಂದ್ರ ಸರ್ಕಾರ ಒಂದು ಕೆಲಸ ಮಾಡಲಿ. ಭಾರತದ ಸಾಲ ಎಷ್ಟಿದೆ ? ಯಾವ ಯಾವ ರಾಜ್ಯಗಳ ತಲೆ ಮೇಲೆ ಎಷ್ಟಿದೆ ? ಅದು ಯಾವ ಯಾವ ದೇಶದ್ದು ? ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನೆಲ್ಲಾ ಜನರಿಗೆ ತಿಳಿಸಲಿ. ಹಾಗೆಯೇ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಅದು ಎಷ್ಟು ತೀರಿತು, ಅಥವಾ ಎಷ್ಟು ಹೆಚ್ಚಾಯ್ತು ಎಂಬುದನ್ನೂ ತಿಳಿಸಲಿ. ಆಗ ಮಾತ್ರ ಇವರ ಅಭಿವೃದ್ದಿಯ ನಿಜವಾದ ತಿರುಳು ತಿಳಿಯಲು ಸಾಧ್ಯ. ಸಾಲ ತಂದು ರೋಡು ಮಾಡಿ, ಅಭಿವೃದ್ದಿ ಮಾಡಿದೆವು ಅಂತ ಬೊಂಗು ಬಿಡೋದು ಬೇಡ. ಆಮೇಲೆ ದೇಶದ ಆದಾಯವೆಲ್ಲಾ ಬಡ್ಡಿ ಕಟ್ಟೋಕೇ ಸಾಕಾಗಲ್ಲ !

ದುನಿಯಾ ವಿಜಿಯ ಸಾಮಾಜಿಕ ಬದುಕು !

​ನೀವು ಎಷ್ಟೋ ನಟ ನಟಿಯರ ಫೇಸ್‌ಬುಕ್ ಪ್ರೊಫೈಲ್ ಪುಟ ನೋಡಿರಬಹುದು. ಅವರೊಂದಿಗೆ ಅಲ್ಲಿ ಗೆಳೆತನವನ್ನೂ ಸಾಧಿಸಿರಬಹುದು. ಆದರೆ ಅವರು ಹಂಚಿಕೊಳ್ಳುವ ವಿಷಯ, ಚಿತ್ರಗಳಾದರೂ ಎಂಥವು ? ನಟರಾದರೆ ತಾನು ಇತ್ತೀಚಿಗೆ ನಟಿಸಿರುವ, ನಟಿಸುತ್ತಿರುವ ಚಿತ್ರಗಳಲ್ಲಿ ತಾನು ಮಾಡಿದ ಪಾತ್ರಗಳ ಚಿತ್ರ, ನಟಿಯರನ್ನು ತಬ್ಬಿಕೊಂಡಿರುವ ಚಿತ್ರ, ನೃತ್ಯ, ಸಾಹಸ ಮಾಡುತ್ತಿರುವ ಚಿತ್ರಗಳನ್ನು  ಹಂಚಿಕೊಳ್ಳುತ್ತಾರೆ. ಅದೇ ನಟಿಯರಾದರೆ ಅವರೂ ಕೂಡಾ ಇತ್ತೀಚಿನ ತಮ್ಮ ಚಿತ್ಗಳ ಬಗ್ಗೆ, ದೊಡ್ಡ ದೊಡ್ಡ ನಟರ ಜೊತೆ ಅವಕಾಶ ಸಿಕ್ಕಿರುವುದರ ಬಗ್ಗೆ, ಅಲ್ಲಿ ಇಲ್ಲಿ ಸುತ್ತಾಡಿ ಸಂತೋಷಗೊಂಡಿದುದರ ಬಗ್ಗೆ ಹಾಗೂ ಯಥಾ ಪ್ರಕಾರ ತಮ್ಮ ವಿವಿಧ ಭಂಗಿಗಳ ಚಿತ್ರಗಳಲ್ಲಿ ಎದೆ, ಸೊಂಟ, ಕಾಲುಗಳನನ್‌ಉ ತೋರಿಸುತ್ತಾ ದಿನನಿತ್ಯ ಪ್ರಕಟಣೆಗಳನ್ನು ಹಂಚಿಕೊಳ್ಳುತ್ತಾರಷ್ಟೇ ? ಇದಕ್ಕೆ ಹೊರತಾದ ನಟ-ನಟಿಯರು ತೀರಾ ಕಡಿಮೆ ಎಂದೇ ಹೇಳಬೇಕು. ಆದರೆ ನಾನು ಕಂಡ ಸಿನೆಮಾ ನಟ ನಟಿಯರ ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿ ದುನಿಯಾ ವಿಜಿ ಅವರ ಪ್ರೊಫೈಲ್ ಮಾತ್ರ ವಿಭಿನ್ನ! ಇವರ ಪ್ರೊಫೈಲ್‌ನಲ್ಲಿ ಚಿತ್ರ ಜೀವನಕ್ಕಿಂತಲೂ ನಿಜ ಜೀವನದ ವಿವಿಧ ಮುಳ್ಳಿನ ಮಗ್ಗುಲುಗಳನ್ನು ತೆರೆದಿಡುತ್ತಿದ್ದಾರೆ. ಇವರ ಪ್ರೊಫೈಲ್ ವೀಕ್ಷಿಸಿದರೆ ಒಬ್ಬ ನಟನ ಪ್ರೊಫೈಲ್ ನೋಡುತ್ತಿರುವುದರ ಬದಲಾಗಿ ಒಬ್ಬ ಸಮಾಜ ಸೇವಕನ ಪ್ರೊಫೈಲ್ ನೋಡುತ್ತಿರುವಂತೆ ಭಾಸವಾಗುತ್ತದೆ. ಚಿತ್ರರಂಗದಲ್ಲಿನ ಅನೇಕರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ ಇವರು ಅಲ್

ಈ ಚುನಾವಣೆಯಲ್ಲಿ ನಡೆಯಿತೇ ಮೆಘಾ ಮೋಸ ?!

​ ಆಶ್ಚರ್ಯವೇ ? ವಾರಣಾಸಿ ಕ್ಷೇತ್ರದ ಮತದಾನದ ಈ ಲೆಕ್ಕಾಚಾರ ಗಮನಿಸಿ : ವಾರಣಾಸಿ ಕ್ಷೇತ್ರದ ಮತದಾರರ ಸಂಖ್ಯೆ : 15,32,438 ಮತ ಚಲಾಯಿಸಿದವರು ಶೇ. 55.63% = ಅಂದರೆ ಸುಮಾರು 8,52,496 ಇದರಲ್ಲಿ ಮೋದಿ ಪಡೆದಿರುವುದು = 5,81,022 ಉಳಿದವರಿಗೆ ಹೋಗಿರುವ ಮತಗಳು = 4,49,627 ಇಬ್ಬರಿಗೂ ಸೇರಿ (ಮೋದಿ + ಉಳಿದವರು) = 10,30,649 ಮತ ಚಲಾವಣೆ ಆಗಿದ್ದು 8,52,496, ಆದರೆ ಎಣಿಕೆ ಆಗಿದ್ದು 10,30,649 ?! ಇದು ಹೇಗೆ ಸಾಧ್ಯ ? ಈ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳು ಎಲ್ಲಿಂದ ಬಂದವು ? ನನ್ನ ಲೆಕ್ಕದಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿ. 

ಹೊಸ ಸರ್ಕಾರ, ಹಳೆ ಆಶಯಗಳು !

​ಎನ್‌.ಡಿ.ಎ.ಗೆ ಸ್ಪಷ್ಟ ಬಹುಮತ ಬಂದಿರುವುದರಿಂದ ಕೆಲವೊಂದು ವಿಷಯಗಳು ಸ್ಪಷ್ಟವಾಗಿವೆ.  ೧. ಅತಂತ್ರ ಲೋಕಸಭೆ ಏನಾದರೂ ಆಗಿದ್ದರೆ ಅದರಿಂದ ದೇಶಕ್ಕೆ ತುಂಬಾ ನಷ್ಟವೇ ಆಗುತ್ತಿತ್ತು.  ೨. ರಾಹುಲ್‌ / ಸೋನಿಯಾಗಾಂಧಿಗೆ ಪಕ್ಷವನ್ನು/ದೇಶವನ್ನು ಮುನ್ನಡೆಸುವಂತಾ ಶಕ್ತಿ ಇಲ್ಲ ಅನ್ನುವುದು ಸಾಬೀತಾಯ್ತು. ೩. ಹತ್ತಾರು ವರ್ಷಗಳಿಂದ ಒಂದೇ ಪಕ್ಷದ ಅಧಿಕಾರ ಇರುವುದು ಕೂಡಾ ಉತ್ತಮ ಬೆಳವಣಿಗೆ ಅಲ್ಲ. ಅದರಲ್ಲೂ ೨ಜಿ, ಕಾಮನ್‌ವೆಲ್ತ್‌ನಂತಹ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ನಡೆದ ಬಳಿಕವೂ ಯುಪಿಎ ಯನ್ನು ಮುಂದುವರಿಸಿದ್ದರೆ ಅದು ಅವರ ಭ್ರಷ್ಟಾಚಾರಕ್ಕೆ ನೀಡುವ ಕುಮ್ಮಕ್ಕಿನಂತೆ ಆಗುವ ಸಾಧ್ಯತೆ ಇತ್ತು. ೪. ಕಾಂಗ್ರೆಸ್ ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವುದೇ ಬಹುಸಂಖ್ಯಾತರು ಬಿಜೆಪಿಯತ್ತ ಒಲಿಯಲು ಪ್ರಮುಖ ಕಾರಣ.  ೫. ಕಾಂಗ್ರೆಸ್ ಮಾಡಿದ ಒಳ್ಳೆಯ ಕೆಲಸಗಳನ್ನೂ ಪ್ರಚಾರ ಮಾಡದೇ ಕೇವಲ ರಾಹುಲ್‌ಗಾಂಧಿ ಬಜನೆಯಲ್ಲಿ ತೊಡಗಿದ್ದು ಮತ್ತೊಂದು ತಪ್ಪು. (ನೆಹರು ಕುಟುಂಬದಿಂದ ಆ ಪಕ್ಷ ಹೊರ ಬಾರದಿದ್ದುದರ ಪರಿಣಾಮ ಇದು) ೫. ಆಮ್ ಆದ್ಮಿ ಪಕ್ಷ ಸ್ಪಷ್ಟ ದಾರಿಯನ್ನು ಕಂಡುಕೊಳ್ಳಲಿಲ್ಲ. ಅದೂ ಕೂಡಾ ಕೇಜ್ರೀವಾಲ್ ಕೇಂದ್ರೀಕೃತವಾಯ್ತು, ಅಲ್ಲದೇ 'ಆಮ್ ಆದ್ಮಿ' ಎಂಬ ಹೆಸರೇ ಹಿಂದಿಯೇತರ ರಾಜ್ಯಗಳಿಗೆ ಪರಕೀಯವೆನ್ನಿಸುತ್ತದೆ. ಅದೇನೇ ಇದ್ದರೂ ಜನರ ತೀರ್ಮಾನವೇ ಅಂತಿಮ. ಮುಂಬರುವ ಸರ್ಕಾರ, ಪ್ರಧಾನಿ ಜನರ/ದೇಶದ ಆಶೋತ್ತರಗಳಿಗೆ ಸ್ಪಂದ

ಶಿಕ್ಷಣ ಮಾಫಿಯಾ !

​ ಏಪ್ರಿಲ್ ಕಳೆದು ಮೇ ಬಂತೆಂದರೆ ಮಕ್ಕಳಿರುವ ಮನೆಯಲ್ಲಿ ತಲ್ಲಣ ಶುರುವಾಗುತ್ತದೆ. ಅದು ಮಕ್ಕಳನ್ನು ಶಾಲೆಗೆ ಸೇರಿಸುವ, ಅಥವಾ ಮುಂದಿನ ತರಗತಿಗೆ ಶುಲ್ಕ ತುಂಬುವ ತಲ್ಲಣ. ಕೆಲವೇ ವರ್ಷಗಳ ಹಿಂದಿನವರೆಗೂ ವಿದ್ಯೆ ಇಷ್ಟೊಂದು ದುಬಾರಿಯಾಗಿರಲಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಉನ್ನತ ಶಿಕ್ಷಣವೊಂದು ಕೈಗೆಟುಕದ ಹಾಗಿತ್ತು ಅನ್ನುವುದನ್ನು ಬಿಟ್ಟರೆ ಪ್ರಾಥಮಿಕ ಶಿಕ್ಷಣವಾಗಲೀ ಪ್ರೌಢ ಶಿಕ್ಷಣವಾಗಲೀ ಅಥವಾ ಕಾಲೇಜು ವಿದ್ಯಾಭ್ಯಾಸವಾಗಲೀ - ಇವ್ಯಾವೂ ದುಬಾರಿ ಅನ್ನಿಸುತ್ತಲೇ ಇರಲಿಲ್ಲ. ಹಾಗಾಗಿ ಮನೆಯ ಮಕ್ಕಳು ಕಾಲೇಜು ಶಿಕ್ಷಣ ಮುಗಿಸುವವರೆಗೂ ಮನೆ ಮಂದಿಗೆ ಓದಿಸುವ ತಲೆ ಬಿಸಿ ಅಂತ ಏನೂ ಅನ್ನಿಸುತ್ತಿರಲಿಲ್ಲ. ಓದುವವರಿಗಷ್ಟೇ ಅದು ಇರುತ್ತಿದ್ದುದು.  ಆದರೆ ಈಗೇನಾಗಿ ಹೋಗಿದೆ ? ವಿದ್ಯೆಯನ್ನ ಯಾರೂ ಕದಿಯಲಾಗದು, ಕದಿಯಲಾಗದ ವಸ್ತು ವಿದ್ಯೆ-ಸರಸ್ವತಿ ಎಂದೆಲ್ಲಾ ಹೇಳಲಾಗುತ್ತಿತ್ತು. ಶಿಕ್ಷಣ ಅಥವಾ ವಿದ್ಯೆ ಎಂದು ಹೇಳಲ್ಪಡುವ ವಿಷಯ ದೇಶದ ಪ್ರಮುಖ ವ್ಯಾಪಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದೆ ವರ್ತಕರು ದಿನಸಿ ಅಂಗಡಿ ಇಟ್ಟರೆ ನಷ್ಟ ಬಾರದು ಎಂದು ಹೇಳುತ್ತಿದ್ದರು. ಆ ಮಾತು ಈಗ ಶಾಲೆಯೊಂದನ್ನು ತೆರೆದರೆ.. ಎಂಬಂತೆ ಮಾರ್ಪಾಟಾಗಿದೆ. ಬೇರೆ ಯಾವ ವ್ಯವಹಾರ ಮಾಡಲು ತೊಡಗಿದರೂ ನಷ್ಟವೇರ್ಪಡುವ ಅವಕಾಶ ಇದೆ. ಆದರೆ ಶಾಲೆಯೊಂದನ್ನು ತೆರೆದುದೇ ಆದರೆ ಯಾವ ಕಾರಣಕ್ಕೂ ನಷ್ಟ ಎಂಬುದಿಲ್ಲ. ಏಕೆಂದರೆ ಇದೊಂದು ಪಕ್ಕಾ ವ್ಯಾಪಾರಿ ಸರಕಾಗಿ ಬದಲಾಗಿ ಹೋಗಿದೆ.