ವಿಷಯಕ್ಕೆ ಹೋಗಿ

ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ !?



ಬ್ರಾಹ್ಮಣರನ್ನು ಟೀಕಿಸಿದರು ಎಂಬ ಒಂದೇ ಕಾರಣಕ್ಕಾಗಿ ವಿಪ್ರನೊಬ್ಬ 'ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ' ಎಂದು ಆದೇಶ ಹೊರಡಿಸಿದ್ದಾನೆ. ಅಲ್ಲಿಗೆ ಹೆಣ್ಣನ್ನು ಬೆಂಕಿಗೆ ಹಾಕುವಲ್ಲಿಂದ ಶುರುವಾದ ಹಿಂದೂ ಧರ್ಮ ಇದೀಗ ಅತ್ಯಾಚಾರ ಮಾಡಿಸುವಲ್ಲಿಗೆ ಬಂದು ನಿಂತಿದೆ ಎಂದಾಯ್ತು. 

ಸಾವಿರಾರು ವರ್ಷಗಳಿಂದಲೂ ಭಾರತೀಯರನ್ನು ವಂಚಿಸುತ್ತಾ ಬಂದ ಪುರೋಹಿತ ವರ್ಗ, ತಮ್ಮ ಜಾತಿಯ ಮಹಿಳೆಯರನ್ನೂ ಬೆಂಕಿಗೆ ಹಾಕಿ ಸುಡುತ್ತಾ ಬಂದಿತ್ತು. ಇದಕ್ಕೆ ಅವರು ನೀಡಿದ ಸುಂದರವಾದ ಹೆಸರು 'ಸತಿ ಸಹಗಮನ ಪದ್ದತಿ'. ಗಂಡ ಸತ್ತಾಗ ತಾನಾಗಿಯೇ ಮಹಿಳೆ ಆತನ ಚಿತೆಗೆ ಹಾರಿ ಪ್ರಾಣ ಬಿಡುತ್ತಿದ್ದಳು ಎಂಬ ಕತೆಯನ್ನು ಇಂದಿಗೂ ಕಟ್ಟಿ ಹೇಳುವವರಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ನಡೆದಿಲ್ಲ ಎನ್ನಲಾರೆ. ಆದರೆ ಎಲ್ಲಾ ಹೆಣ್ಣುಗಳೂ ಈ ರೀತಿ ಗಂಡನ ಜೊತೆ ಪ್ರಾಣತ್ಯಾಗ ಮಾಡುತ್ತಾರೆದರೆ ನಂಬಲಾದೀತೆ ? ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಒಬ್ಬಾಕೆ 'ಮೊದ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾರಿಸಿರಬಹುದು, ನಂತರ ತಾವೇ ಇಷ್ಟ ಪಟ್ಟು ಬೆಂಕಿಗೆ ಹಾರಲು ಶುರು ಮಾಡಿರಬಹುದು' ಎಂದು ಬಡಬಡಿಸಿದ್ದರು ! ಇವರ ಗಂಡ ಸತ್ತಾಗ ಇವರೂ ಇಷ್ಟಪಟ್ಟು ಬೆಂಕಿಗೆ ಹಾರಿಬಿಡುತ್ತಾರೋ ಏನೋ. ಅಂದರೆ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾಕಿದರು, ಬರ ಬರುತ್ತಾ ವಿಧವೆಯರಿಗೆ ಅದು ಅನಿವಾರ್ಯ ಆಯ್ತು!

ಆದರೆ ಪುರೋಹಿತರ ಹೀನ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಅನ್ನೋದಕ್ಕೆ ಈ ವಿ.ಆರ‍್. ಭಟ್ಟನೇ ಸಾಕ್ಷಿ. ಪ್ರಭಾ ಎನ್. ಬೆಳವಂಗಲ ಎಂಬುವವರು ಹೋರಾಟಗಳಲ್ಲಿ ತೊಡಗಿಸಿಕೊಂಡಂತವರು. ಅವರು ಮೊನ್ನೆ ಮೊನ್ನೆ ತಮ್ಮ ಫೇಸ್‌ಬುಕ್ ಪ್ರಕಟಣೆಯಲ್ಲಿ 'ಯಜ್ಞ ಯಾಗಗಳು ವೈಜ್ಞಾನಿಕತೆಯಿಂದ ಕೂಡಿಲ್ಲ' ಎಂಬಂತಹ ವಿಷಯವೊಂದನ್ನು ಹಾಕಿದ್ದರು. ಅವರ ಹೇಳಿಕೆ ತಪ್ಪು ಅಂತಾಗಿದ್ದರೆ ಅದು ಯಾವ ರೀತಿ ತಪ್ಪು ಅನ್ನುವುದನ್ನು ತಿಳಿಸಬೇಕಲ್ಲವೇ ? ಆದರೆ ಈ ವ್ಯಕ್ತಿ ವಿಷಯವನ್ನು ಚರ್ಚಿಸುವ ಬದಲಾಗಿ 'ನಿಮ್ಮಂತಾ ಮಹಿಳೆಯರ ಜುಟ್ಟುಗಳನ್ನು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಆಗುತ್ತದೆ' ಎಂದು ಬೆದರಿಕೆ ಹಾಕಿದ್ದಾನೆ. ಇದು ಅತ್ಯಂತ ಗಂಭೀರವಾದ ವಿಷಯವೇ ಆಗಿದ್ದು ಪ್ರಭಾ ಅವರು ಈತನ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಆದರೆ ಇಲ್ಲಿ ಯೋಚಿಸಬೇಕಾದುದು ಈತನ ಹಾಗೂ ಅತ್ಯಾಚಾರಿಗಳ ಮನಸ್ಥಿತಿಯ ಬಗ್ಗೆ. ಸಾವಿರ ವರ್ಷಗಳ ಹಿಂದೆ ಗಂಡ ಸತ್ತ ಬಳಿಕ ಹೆಣ್ಣೊಬ್ಬಳು ಪ್ರೀತಿಯ ಕಾರಣಕ್ಕೋ, ಕಾಮದ ಕಾರಣಕ್ಕೋ ಬೇರೆ ಗಂಡಿನೊಂದಿಗೆ ಹೋಗಿರಲಿಕ್ಕೂ ಸಾಕು. ಆಗ ಇದೇ ವಿಪ್ರಪುಂಗವರು ಹೀಗೆಯೇ ಯೋಚಿಸಿರಬೇಕಲ್ಲವೇ ? 'ಇಂತಹ ಹೆಣ್ಣುಗಳನ್ನು ಹಿಡಿದು ಗಂಡನೊಂದಿಗೇ ಸುಟ್ಟರೆ ಎಲ್ಲಾ ಸರಿ ಹೋಗುತ್ತದೆ' ಎಂದು ?! ಅದರ ಪರಿಣಾಮವೇ ಸತಿ ಪದ್ದತಿ. ವಯಸ್ಸಿಗೆ ಬಂದ ಹೆಣ್ಣು ತನಗಿಷ್ಟ ಬಂದವನ ಜೊತೆ ಹೋದಾಗ ಮೂಡಿರಬೇಕು 'ಬಾಲ್ಯ ವಿವಾಹ'ದ ಹೊಂಚು. ಅದೆಲ್ಲಾ ಹಾಳಾಗಿ ಹೋಗಲಿ, ಇಂದಿನ ಅತ್ಯಾಚಾರಿಗಳೂ ಹೀಗೆಯೇ ಅಂದುಕೊಂಡು ಅತ್ಯಾಚಾರ ಎಸಗುತ್ತಿರಬಹುದಲ್ಲವೇ ? 'ಹುಡುಗಿಯರು ಏನು ಸ್ಟೈಲ್ ಮಾಡುತ್ತಾರೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ, ಬೀದಿಯಲ್ಲೆಲ್ಲಾ ಒಬ್ಬಳೇ ಓಡಾಡುತ್ತಾಳೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ' ಎಂದೆಲ್ಲಾ ಯೋಚಿಸುತ್ತಿರಬಹುದೇ ? 

ನಾನು ಗಮನಿಸಿರುವಂತೆ ಹಿಂದಿನಂತೆ 'ಧಣಿ' ಎನ್ನುವ ಮನಸ್ಥಿತಿ ಈಗ ಕೆಳವರ್ಗದವರಲ್ಲಿ ಕಡಿಮೆಯಾಗುತ್ತಿದೆ. ಹಾಗೆಯೇ ಫೇಸ್‌ಬುಕ್‌ನಲ್ಲಿ ಗಮನಿಸಿದರೆ ಬ್ರಾಹ್ಮಣರ ಮೇಲಿನ ಅಸಹನೆ ದಟ್ಟವಾಗಿರುವುದೂ ಕಂಡು ಬರುತ್ತಿದೆ. ಇನ್ನಾದರೂ ವಿ.ಆರ್‌. ಭಟ್‌ನಂತವರು ಬುದ್ದಿ ಕಲಿಯದೇ ಹೋದರೆ ಬಹುಶಃ ಪರಿಣಾಮ ಭೀಕರವಾಗಬಹುದು. ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳಿದವರೇ ಅತ್ಯಾಚಾರಕ್ಕೊಳಗಾಗುವ ಕಾಲವೂ ಬರಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...