ಬ್ರಾಹ್ಮಣರನ್ನು ಟೀಕಿಸಿದರು ಎಂಬ ಒಂದೇ ಕಾರಣಕ್ಕಾಗಿ ವಿಪ್ರನೊಬ್ಬ 'ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ' ಎಂದು ಆದೇಶ ಹೊರಡಿಸಿದ್ದಾನೆ. ಅಲ್ಲಿಗೆ ಹೆಣ್ಣನ್ನು ಬೆಂಕಿಗೆ ಹಾಕುವಲ್ಲಿಂದ ಶುರುವಾದ ಹಿಂದೂ ಧರ್ಮ ಇದೀಗ ಅತ್ಯಾಚಾರ ಮಾಡಿಸುವಲ್ಲಿಗೆ ಬಂದು ನಿಂತಿದೆ ಎಂದಾಯ್ತು.
ಸಾವಿರಾರು ವರ್ಷಗಳಿಂದಲೂ ಭಾರತೀಯರನ್ನು ವಂಚಿಸುತ್ತಾ ಬಂದ ಪುರೋಹಿತ ವರ್ಗ, ತಮ್ಮ ಜಾತಿಯ ಮಹಿಳೆಯರನ್ನೂ ಬೆಂಕಿಗೆ ಹಾಕಿ ಸುಡುತ್ತಾ ಬಂದಿತ್ತು. ಇದಕ್ಕೆ ಅವರು ನೀಡಿದ ಸುಂದರವಾದ ಹೆಸರು 'ಸತಿ ಸಹಗಮನ ಪದ್ದತಿ'. ಗಂಡ ಸತ್ತಾಗ ತಾನಾಗಿಯೇ ಮಹಿಳೆ ಆತನ ಚಿತೆಗೆ ಹಾರಿ ಪ್ರಾಣ ಬಿಡುತ್ತಿದ್ದಳು ಎಂಬ ಕತೆಯನ್ನು ಇಂದಿಗೂ ಕಟ್ಟಿ ಹೇಳುವವರಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ನಡೆದಿಲ್ಲ ಎನ್ನಲಾರೆ. ಆದರೆ ಎಲ್ಲಾ ಹೆಣ್ಣುಗಳೂ ಈ ರೀತಿ ಗಂಡನ ಜೊತೆ ಪ್ರಾಣತ್ಯಾಗ ಮಾಡುತ್ತಾರೆದರೆ ನಂಬಲಾದೀತೆ ? ಇತ್ತೀಚಿಗೆ ಫೇಸ್ಬುಕ್ನಲ್ಲಿ ಒಬ್ಬಾಕೆ 'ಮೊದ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾರಿಸಿರಬಹುದು, ನಂತರ ತಾವೇ ಇಷ್ಟ ಪಟ್ಟು ಬೆಂಕಿಗೆ ಹಾರಲು ಶುರು ಮಾಡಿರಬಹುದು' ಎಂದು ಬಡಬಡಿಸಿದ್ದರು ! ಇವರ ಗಂಡ ಸತ್ತಾಗ ಇವರೂ ಇಷ್ಟಪಟ್ಟು ಬೆಂಕಿಗೆ ಹಾರಿಬಿಡುತ್ತಾರೋ ಏನೋ. ಅಂದರೆ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾಕಿದರು, ಬರ ಬರುತ್ತಾ ವಿಧವೆಯರಿಗೆ ಅದು ಅನಿವಾರ್ಯ ಆಯ್ತು!
ಆದರೆ ಪುರೋಹಿತರ ಹೀನ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಅನ್ನೋದಕ್ಕೆ ಈ ವಿ.ಆರ್. ಭಟ್ಟನೇ ಸಾಕ್ಷಿ. ಪ್ರಭಾ ಎನ್. ಬೆಳವಂಗಲ ಎಂಬುವವರು ಹೋರಾಟಗಳಲ್ಲಿ ತೊಡಗಿಸಿಕೊಂಡಂತವರು. ಅವರು ಮೊನ್ನೆ ಮೊನ್ನೆ ತಮ್ಮ ಫೇಸ್ಬುಕ್ ಪ್ರಕಟಣೆಯಲ್ಲಿ 'ಯಜ್ಞ ಯಾಗಗಳು ವೈಜ್ಞಾನಿಕತೆಯಿಂದ ಕೂಡಿಲ್ಲ' ಎಂಬಂತಹ ವಿಷಯವೊಂದನ್ನು ಹಾಕಿದ್ದರು. ಅವರ ಹೇಳಿಕೆ ತಪ್ಪು ಅಂತಾಗಿದ್ದರೆ ಅದು ಯಾವ ರೀತಿ ತಪ್ಪು ಅನ್ನುವುದನ್ನು ತಿಳಿಸಬೇಕಲ್ಲವೇ ? ಆದರೆ ಈ ವ್ಯಕ್ತಿ ವಿಷಯವನ್ನು ಚರ್ಚಿಸುವ ಬದಲಾಗಿ 'ನಿಮ್ಮಂತಾ ಮಹಿಳೆಯರ ಜುಟ್ಟುಗಳನ್ನು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಆಗುತ್ತದೆ' ಎಂದು ಬೆದರಿಕೆ ಹಾಕಿದ್ದಾನೆ. ಇದು ಅತ್ಯಂತ ಗಂಭೀರವಾದ ವಿಷಯವೇ ಆಗಿದ್ದು ಪ್ರಭಾ ಅವರು ಈತನ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಆದರೆ ಇಲ್ಲಿ ಯೋಚಿಸಬೇಕಾದುದು ಈತನ ಹಾಗೂ ಅತ್ಯಾಚಾರಿಗಳ ಮನಸ್ಥಿತಿಯ ಬಗ್ಗೆ. ಸಾವಿರ ವರ್ಷಗಳ ಹಿಂದೆ ಗಂಡ ಸತ್ತ ಬಳಿಕ ಹೆಣ್ಣೊಬ್ಬಳು ಪ್ರೀತಿಯ ಕಾರಣಕ್ಕೋ, ಕಾಮದ ಕಾರಣಕ್ಕೋ ಬೇರೆ ಗಂಡಿನೊಂದಿಗೆ ಹೋಗಿರಲಿಕ್ಕೂ ಸಾಕು. ಆಗ ಇದೇ ವಿಪ್ರಪುಂಗವರು ಹೀಗೆಯೇ ಯೋಚಿಸಿರಬೇಕಲ್ಲವೇ ? 'ಇಂತಹ ಹೆಣ್ಣುಗಳನ್ನು ಹಿಡಿದು ಗಂಡನೊಂದಿಗೇ ಸುಟ್ಟರೆ ಎಲ್ಲಾ ಸರಿ ಹೋಗುತ್ತದೆ' ಎಂದು ?! ಅದರ ಪರಿಣಾಮವೇ ಸತಿ ಪದ್ದತಿ. ವಯಸ್ಸಿಗೆ ಬಂದ ಹೆಣ್ಣು ತನಗಿಷ್ಟ ಬಂದವನ ಜೊತೆ ಹೋದಾಗ ಮೂಡಿರಬೇಕು 'ಬಾಲ್ಯ ವಿವಾಹ'ದ ಹೊಂಚು. ಅದೆಲ್ಲಾ ಹಾಳಾಗಿ ಹೋಗಲಿ, ಇಂದಿನ ಅತ್ಯಾಚಾರಿಗಳೂ ಹೀಗೆಯೇ ಅಂದುಕೊಂಡು ಅತ್ಯಾಚಾರ ಎಸಗುತ್ತಿರಬಹುದಲ್ಲವೇ ? 'ಹುಡುಗಿಯರು ಏನು ಸ್ಟೈಲ್ ಮಾಡುತ್ತಾರೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ, ಬೀದಿಯಲ್ಲೆಲ್ಲಾ ಒಬ್ಬಳೇ ಓಡಾಡುತ್ತಾಳೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ' ಎಂದೆಲ್ಲಾ ಯೋಚಿಸುತ್ತಿರಬಹುದೇ ?
ನಾನು ಗಮನಿಸಿರುವಂತೆ ಹಿಂದಿನಂತೆ 'ಧಣಿ' ಎನ್ನುವ ಮನಸ್ಥಿತಿ ಈಗ ಕೆಳವರ್ಗದವರಲ್ಲಿ ಕಡಿಮೆಯಾಗುತ್ತಿದೆ. ಹಾಗೆಯೇ ಫೇಸ್ಬುಕ್ನಲ್ಲಿ ಗಮನಿಸಿದರೆ ಬ್ರಾಹ್ಮಣರ ಮೇಲಿನ ಅಸಹನೆ ದಟ್ಟವಾಗಿರುವುದೂ ಕಂಡು ಬರುತ್ತಿದೆ. ಇನ್ನಾದರೂ ವಿ.ಆರ್. ಭಟ್ನಂತವರು ಬುದ್ದಿ ಕಲಿಯದೇ ಹೋದರೆ ಬಹುಶಃ ಪರಿಣಾಮ ಭೀಕರವಾಗಬಹುದು. ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳಿದವರೇ ಅತ್ಯಾಚಾರಕ್ಕೊಳಗಾಗುವ ಕಾಲವೂ ಬರಬಹುದು.

ಕಾಮೆಂಟ್ಗಳು