'ವಿದೇಶಿ ಬ್ಯಾಂಕ್ಗಳಲ್ಲಿ ಕಪ್ಪು ಹಣ ಇರಿಸಿದವರ ಎಲ್ಲಾ ಹೆಸರುಗಳನ್ನು ತನಗೊಪ್ಪಿಸುವಂತೆಯೂ, ತಾನೇ ತನಿಖೆ ನಡೆಸಿ ಕಪ್ಪು ಹಣವಿದ್ದರೆ ವಾಪಸ್ಸು ತರುವುದಾಗಿಯೂ, ಕೇಂದ್ರ ಸರ್ಕಾರದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ ಎಂಬುದಾಗಿಯೂ' ನಿನ್ನೆ ಸುಪ್ರೀಂ ಕೋರ್ಟ್ ಆದೇಶಿಸುವುದರೊಂದಿಗೆ ಕಪ್ಪು ಹಣವನ್ನು ತಂದು ಮತ ಹಾಕಿದವರಿಗೆ ನ್ಯಾಯ ಒದಗಿಸಿ, ವಿರೋಧಿಸಿದವರ ಬಾಯನ್ನೂ ಮುಚ್ಚಿಸಬಹುದಾಗಿದ್ದ ಸುವರ್ಣಾವಕಾಶವನ್ನು ಬಿಜೆಪಿ (ಮುಖ್ಯವಾಗಿ ಮೋದಿ) ಕಳೆದುಕೊಂಡರು. ಲಪಡಾ ಬಾಬಾನೊಬ್ಬ ನಗೆಪಾಟಲಿಗೂ ಈಡಾದುದು ಈಗ ಇತಿಹಾಸ. ಯುಪಿಎ ಸಹ ಕಪ್ಪು ಹಣ ತರುವ ಪ್ರಯತ್ನವನ್ನು (ಪ್ರಾಮಾಣಿಕ ಅನ್ನಲಾಗದಿದ್ದರೂ) ಶುರು ಮಾಡಿತ್ತು. ಆದರೆ ಎನ್ಡಿಎ ಕೂಡಾ ಯುಪಿಎ ಗಿಂತ ಹೆಚ್ಚಿನದನ್ನಾಗಲೀ ಭಿನ್ನವಾಗಿಯಾಗಲೀ ಮಾಡಲಿಲ್ಲ. ಇದರಿಂದಾಗಿ ಪ್ರಜೆಗಳಂತೆಯೇ ನ್ಯಾಯಾಲಯ ಸಹ ಮುನಿಸುಗೊಂಡಿರುವುದು ಸ್ಪಷ್ಟ. ಇಂದಿನಿಂದ ಕಪ್ಪು ಹಣದ ಚೆಂಡು ನ್ಯಾಯಾಲಯದ ಅಂಗಳದಲ್ಲಿರಲಿದೆ. ಇನ್ಮುಂದೆ ಕಪ್ಪು ಹಣ ಬರುವುದಾಗಲೀ, ಬಾರದಿರುವುದಾಗಲೀ ನಡೆದರೆ ಅದಕ್ಕೆ ಕಾರಣ ನ್ಯಾಯಾಲಯವಾಗಿರುತ್ತದೆಯೇ ಹೊರತೂ ಮೋದಿ/ಬಿಜೆಪಿ ಅಲ್ಲ. ಒಂದು ವೇಳೆ ನ್ಯಾಯಾಲಯವು ತನಿಖೆ ನಡೆಸಿ ಕಪ್ಪುಹಣ ತಂದುಬಿಟ್ಟರೆ ಮೋದಿ ಭಕ್ತರು ಯಥಾ ಪ್ರಕಾರ ಮೋದಿಯ ಗುಣಗಾನ (ಸುಳ್ಳು) ಮಾಡಿ ಮುಗ್ದರನ್ನು 'ಇದು ಮೋದಿಯೇ ತಂದಿದ್ದು' ಎಂದು ನಂಬಿಸಲೂಬಹುದು. ಆದರೆ ಪ್ರಜ್ಞಾವಂತರೆಲ್ಲರಿಗೂ (ಇಷ್ಟು ದಿನ ಮೋದಿಯನ್ನು
ಮನಸು ಹೃದಯಗಳ ಸವಿಮಾತು............