ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೀವ ವಿಕಾಸದಲ್ಲಿ ವೈರಸ್ ಗಳ ಕೈವಾಡ ?!

ಡಾರ್ವಿನ್ ಥಿಯರಿಯನ್ನು ಹಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಅದರೆ ಡಾರ್ವಿನ್ ಥಿಯರಿ ಒಪ್ಪಿದವರಿಗೂ ಒಂದು ಗೊಂದಲ ಇದೆ. ಏನೆಂದರೆ ಹೊಸ ಜೀವಿ ಉದಯವಾಗುವಾಗ ತನಗೆ ಬೇಕಾದಂತೆ ಜೀನ್ (DNA) ನಲ್ಲಿ ಮಾರ್ಪಾಡು ಹೇಗೆ ಮಾಡಿಕೊಳ್ಳುತ್ತದೆ ? ಎಂದು. ಅದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಜೀವಿಗಳ ವಿಕಾಸದಲ್ಲಿ ಕೈ ಆಡಿಸುತ್ತಿರುವುದು ಕೆಲವು ವೈರಸ್ ಅಂತೆ ! ನಮ್ಮ ಜೀವ ಕೋಶಗಳಿಗಿಂತಲೂ ಚಿಕ್ಕದಾದ ವೈರಸ್ ಗಳು ಗಂಡಿನ ವೀರ್ಯ ಮತ್ತು ಹೆಣ್ಣಿನ ಅಂಡಾಣು ಒಳಗೆ ಸೇರಿಕೊಂಡು ಹೊಸ ಜೀವದ ಉದಯ ಆಗುವ ಸಮಯದಲ್ಲಿ ತಂದೆ ತಾಯಿಗಳ ಯಥಾವತ್ ಪ್ರತಿ ಮಗು ಆಗದಂತೆ ಜೀನ್ ನಲ್ಲಿ ಕೆಲವೊಂದು ಕಡತಗಳನ್ನು ಹಾಳು ಮಾಡುತ್ತವೆ ಅಂತೆ. ಆ ಹಾಳಾದ ಕೊಂಡಿಗಳ ಬದಲು ಜೀವ ಕೋಶಗಳು ಬೇರೆ ಕಡತಗಳನ್ನು ಬಳಸಿ ಬೆಳೆಯುವದರ ಮೂಲಕ ತಂದೆ, ತಾಯಿಯ ಜೆರಾಕ್ಸ್ ಪ್ರತಿ ಹುಟ್ಟದಂತೆ ಆಗುತ್ತದೆ. ಭೂಮಿಯ ಜೀವಿಗಳೇಲ್ಲ ಬೇರೆ ಗ್ರಹದ ಮುಂದುವರಿದ ಜೀವಿಗಳ ಪ್ರಯೋಗ ಪಶುಗಳು ಅಂತಾನೂ ಕೆಲವು ವಿಜ್ಞಾನಿಗಳು ಹೇಳಿದ್ದಾರೆ. ಈಗ ಅನುಮಾನ ಇರೋದು ಈ ವೈರಸ್ ಗಳು ಆ ಮುಂದುವರಿದ ಜೀವಿಗಳ ಸೃಷ್ಟಿ ಇರಬಹುದಾ  ? (ಕಂಪ್ಯೂಟರ್ ವೈರಸ್ ಕೂಡ ಮನವ ಜೀವಿಗಳ ಸೃಷ್ಟಿ!)

ಸಿ.ಟಿ. ರವಿ ಸಂದರ್ಶನ ಮಾಡಿದ್ದು

​ ಅದು ನಾನು ಚಿಕ್ಕಮಗಳೂರಿನ ಒಂದು ಸ್ಥಳಿಯ ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಇದ್ದ ಸಮಯ. ಆಗ ಸಿ.ಟಿ. ರವಿ ಅವರು ಬರಿ ಶಾಸಕರಾಗಿದ್ದರು. ನಮ್ಮ ಪತ್ರಿಕೆಯ ಮಾಲೀಕರು ದೊಡ್ಡ ಗಾರ್ಮೆಂಟ್ಸ್ ಸಹ ಹೊಸದಾಗಿ ಮಾಡಿದ್ದರು. ಬೇರೆ ಬೇರೆ ಕಾರಣಗಳಿಂದ ಅವರಿಗೆ ಶಾಸಕರ ಸಹಾಯ ಬೇಕೇ ಆಗಿತ್ತು.  ಒಂದು ದಿನ ರವಿ ಅವರನ್ನು ಕಚೇರಿಗೆ ಕರೆದು, ಪಕ್ಕದಲ್ಲೇ ಇದ್ದ ಗಾರ್ಮೆಂಟ್ಸ್ ಅನ್ನೂ ತೋರಿಸಲು ನಿರ್ಧರಿಸಿದರು. ಹಾಗೆ ಬರುವ ರವಿ ಅವರದೊಂದು ಸಂದರ್ಶನ ಮಾಡಿ ಪತ್ರಿಕೆಯಲ್ಲಿ ಹಾಕುವಂತೆ ನನಗೂ ಹೇಳಿದರು. ಆಗಷ್ಟೇ ಬಾಬಾ ಬುಡನ್ ಗಿರಿ ವಿವಾದ ಭುಗಿಲೆದ್ದ ಸಮಯ, ಮತ್ತು ಅದರಲ್ಲಿ ರವಿ ಅವರೂ ಸಹ ಸಕ್ರಿಯರಾಗಿದ್ದರು. ಸಂದರ್ಶನ ಶುರು ಮಾಡಿದ ನಾನು ಅವರ ರಾಜಕೀಯ ಜೀವನದ ಬಗ್ಗೆ ಎಲ್ಲಾ ಕೇಳಿ ಆದ ನಂತರ ಸಹಜವಾಗಿ ದತ್ತ ಪೀಠದ ಬಗ್ಗೆ ಪ್ರಶ್ನೆ ಎತ್ತಿದೆ. ಒಂದು ಕ್ಷಣ ಮೌನವಾದ ರವಿ ಅವರು ಪಕ್ಕದಲ್ಲೇ ಕುಳಿತಿದ್ದ ಪರಕಾಶಕರನ್ನು ನೋಡಿದರು. ಪ್ರಕಾಶಕರು (ಸಂಪಾದಕ, ಮಾಲೀಕ) ಸಾವರಿಸಿಕೊಂಡು ನನ್ನಲ್ಲಿ "ಈಗ ಆ ವಿಶಯ ಬೇಡ ಬಿಡಿ." ಅಂದರು. ಅಲ್ಲಿಗೆ ಸಂದರ್ಶನ ಮುಕ್ತಾಯವಾಯ್ತು. ಶಾಸಕರು ಹೋದ ನಂತರ ಸಂಪಾದಕರು ನನ್ನಲ್ಲಿ ಹೇಳಿದರು.. "ಯಾವುದೇ ಪ್ರಶ್ನೆಗೆ ಸಮಯ ಸಂದರ್ಭ ಇರುತ್ತೆ. ಈಗ ಅವರಿಂದ ನಮಗೆ ಕೆಲಸ ಆಗಬೇಕಾಗಿದೆ. ಇಂತಹ ಸಮಯದಲ್ಲಿ ಅವರಿಗೆ ಮುಜುಗರ ಮಾಡಬಾರದು... ನಮ್ಮ ಕೆಲಸ ಆಗಿಲ್ಲ ಅಂದರೆ ಮುಂದೆ ನೋಡುವ.." ಅಂದರು. ಅವರ ಕೆಲಸ ಅಯ್ತೋ ಬಿಡ್ತೋ