ಹೌದು ಕಡ್ಡಾಯವಾಗಿ ಭಾರತವೊಮ್ಮೆ ಈ ಹಾಳು ರಾಜಕಾರಣಿಗಳಿಂದ ಮುಕ್ತಿ ಪಡೆಯಲೇ ಬೇಕಾಗಿದೆ. ಈ ಭ್ರಷ್ಟ ಕಾಂಗ್ರೆಸ್, ಬಿಜೆಪಿ, ಜೆಡಿಎಸ್... ಯಾರೂ ಶುದ್ಧರಂತಿರಲಿ, ಯೋಗ್ಯರೇ ಅಲ್ಲ. ಇವರ ಕೈಗೆ ದೇಶ ಸಿಕ್ಕಿ ನಲುಗಿ ಹೋಗುತ್ತಿದೆ. ನಮ್ಮ ಸೇನಾಧಿಕಾರಿಗಳು ಅತಿ ಬೇಗನೆ ಮನಸ್ಸು ಮಾಡಲೇ ಬೇಕು. ಸೇನಾ ದಂಗೆಯ ಮೂಲಕ ಭಾರತವನ್ನು ವಶಪಡಿಸಿಕೊಂಡು ಕನಿಷ್ಟ ಹತ್ತು ವರ್ಷವಾದರೂ ಅವರು ಮುನ್ನಡೆಸಬೇಕು. ಇಲ್ಲವೆಂದರೆವೆಂದರೆ ನಮ್ಮ ದೇಶ ಅಧೋಗತಿಯಾಗುವುದು ಸತ್ಯ. ಈ ದೇಶಕ್ಕೆ ಈ ರಾಜಕಾರಣಿಗಳಿಂದ ಭವಿಷ್ಯ ಇಲ್ಲ. ಇವರ ಮೇಲಾಟ, ಅಧಿಕಾರ ಲಾಲಸೆ, ಲಂಚಗುಳಿತನ, ಭ್ರಷ್ಟಾಚಾರ ಎಲ್ಲವನ್ನೂ ಭಾರತ ಮಾತೆ ಸಹಿಸಲಾರಳು. ಹೀಗೇ ಬಿಟ್ಟರೆ ನಮ್ಮ ಸೈನಿಕರಿಗೂ ಇವರು ಸರಿಯಾದ ಶಸ್ತ್ರಾಸ್ತ್ರ ನೀಡದೇ ಅದರಲ್ಲೂ ಹಗರಣ ಮಾಡಿ ಕೊನೆಗೆ ಚೀನಾ ಅತವಾ ಪಾಕಿಸ್ತಾನ ದಂಡೆತ್ತಿ ಬಂದಾಗ ವಿನಾಕಾರಣ ನಮ್ಮ ಸೇನೆಯನ್ನೇ ಬಲಿ ಕೊಡಬೇಕಾಗುತ್ತದೆ. ನಿಜ, ಸೇನಾ ಕಾರ್ಯಾಚರಣೆ ನಡೆದು ದೇಶವು ಸೇನೆಯ ತೆಕ್ಕೆಗೆ ಹೋದರೆ ಎಲ್ಲರಿಗೂ ತಾತ್ಕಾಲಿಕವಾಗಿ ಸಮಸ್ಯೆ, ಕಷ್ಟ ಎದುರಾಗಬಹುದು. ಆದರೆ ರಾಜಕಾರಣಿಗಳಿಗಿಂತಲೂ ಸೈನಿಕರು ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು. ( ಉದಾ : ಪಾಕಿಸ್ತಾನದಲ್ಲಿ ಫರವೇಜ್ ಮುಷರಫ್ ಆಡಳಿತದಲ್ಲಿ ಆ ದೇಶ ಸಾಕಷ್ಟು ಅಬಿವೃದ್ದಿಯನ್ನೇ ಹೊಂದಿತು. ಉಳಿದ ಪ್ರಧಾನಿಗಳಂತೆ ತನ್ನ ದೇಶಕ್ಕೇ ಹಾಳಂತೂ ಮಾಡಲಿಲ್ಲ ) ನಮ್ಮ ಸೇನಾಧಿಕಾರಿಗಳಲ್ಲಿ ಅದಕ್ಕಿಂತಲು ಪ್ರಾಮಾಣಿಕತನ, ವ್ಯವಹಾರ ಚ
ಮನಸು ಹೃದಯಗಳ ಸವಿಮಾತು............