ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದಲ್ಲೂ ಆಗಲಿ ಸೇನಾ ದಂಗೆ !

ಹೌದು ಕಡ್ಡಾಯವಾಗಿ ಭಾರತವೊಮ್ಮೆ ಈ ಹಾಳು ರಾಜಕಾರಣಿಗಳಿಂದ ಮುಕ್ತಿ ಪಡೆಯಲೇ ಬೇಕಾಗಿದೆ. ಈ ಭ್ರಷ್ಟ ಕಾಂಗ್ರೆಸ್, ಬಿಜೆಪಿ, ಜೆಡಿಎಸ್... ಯಾರೂ ಶುದ್ಧರಂತಿರಲಿ, ಯೋಗ್ಯರೇ ಅಲ್ಲ. ಇವರ ಕೈಗೆ ದೇಶ ಸಿಕ್ಕಿ ನಲುಗಿ ಹೋಗುತ್ತಿದೆ. ನಮ್ಮ ಸೇನಾಧಿಕಾರಿಗಳು ಅತಿ ಬೇಗನೆ ಮನಸ್ಸು ಮಾಡಲೇ ಬೇಕು. ಸೇನಾ ದಂಗೆಯ ಮೂಲಕ ಭಾರತವನ್ನು ವಶಪಡಿಸಿಕೊಂಡು ಕನಿಷ್ಟ ಹತ್ತು ವರ್ಷವಾದರೂ ಅವರು ಮುನ್ನಡೆಸಬೇಕು. ಇಲ್ಲವೆಂದರೆವೆಂದರೆ ನಮ್ಮ ದೇಶ ಅಧೋಗತಿಯಾಗುವುದು ಸತ್ಯ. ಈ ದೇಶಕ್ಕೆ ಈ ರಾಜಕಾರಣಿಗಳಿಂದ ಭವಿಷ್ಯ ಇಲ್ಲ. ಇವರ ಮೇಲಾಟ, ಅಧಿಕಾರ ಲಾಲಸೆ, ಲಂಚಗುಳಿತನ, ಭ್ರಷ್ಟಾಚಾರ ಎಲ್ಲವನ್ನೂ ಭಾರತ ಮಾತೆ ಸಹಿಸಲಾರಳು. ಹೀಗೇ ಬಿಟ್ಟರೆ ನಮ್ಮ ಸೈನಿಕರಿಗೂ ಇವರು ಸರಿಯಾದ ಶಸ್ತ್ರಾಸ್ತ್ರ ನೀಡದೇ ಅದರಲ್ಲೂ ಹಗರಣ ಮಾಡಿ ಕೊನೆಗೆ ಚೀನಾ ಅತವಾ ಪಾಕಿಸ್ತಾನ ದಂಡೆತ್ತಿ ಬಂದಾಗ ವಿನಾಕಾರಣ ನಮ್ಮ ಸೇನೆಯನ್ನೇ ಬಲಿ ಕೊಡಬೇಕಾಗುತ್ತದೆ.  ನಿಜ, ಸೇನಾ ಕಾರ್ಯಾಚರಣೆ ನಡೆದು ದೇಶವು ಸೇನೆಯ ತೆಕ್ಕೆಗೆ ಹೋದರೆ ಎಲ್ಲರಿಗೂ ತಾತ್ಕಾಲಿಕವಾಗಿ ಸಮಸ್ಯೆ, ಕಷ್ಟ ಎದುರಾಗಬಹುದು. ಆದರೆ ರಾಜಕಾರಣಿಗಳಿಗಿಂತಲೂ ಸೈನಿಕರು ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು. ( ಉದಾ : ಪಾಕಿಸ್ತಾನದಲ್ಲಿ ಫರವೇಜ್ ಮುಷರಫ್ ಆಡಳಿತದಲ್ಲಿ ಆ ದೇಶ ಸಾಕಷ್ಟು ಅಬಿವೃದ್ದಿಯನ್ನೇ ಹೊಂದಿತು. ಉಳಿದ ಪ್ರಧಾನಿಗಳಂತೆ ತನ್ನ ದೇಶಕ್ಕೇ ಹಾಳಂತೂ ಮಾಡಲಿಲ್ಲ ) ನಮ್ಮ ಸೇನಾಧಿಕಾರಿಗಳಲ್ಲಿ ಅದಕ್ಕಿಂತಲು ಪ್ರಾಮಾಣಿಕತನ, ವ್ಯವಹಾರ ಚ

ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?

ಎಲ್ಲರೂ ಒಮ್ಮೆ ಇಂದಿನ ಕನ್ನಡಪ್ರಭ (ಪುಟ-೭) ನೋಡಿ. ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಹೋರಾಟಕ್ಕೆ ಇಳಿದಿರುವ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿಯವರ ಸಂದರ್ಶನವಿದೆ. ಈ ಹೋರಾಟದ ನೇತೃತ್ವ ಇವರದ್ದೇ. ಅಂದರೆ ಉಳಿದ ಸಾಹಿತಿಗಳನ್ನು, ಕನ್ನಡ ಹೋರಾಟಗಾರರನ್ನು ಸೇರಿಸಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೋರಾಟಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಆಮರಾಣಾಂತ ಉಪವಾಸ ಮಾಡುತ್ತಾರಂತೆ! ಸರಿ ಇವರ ಕನ್ನಡ ಕಾಳಜಿ ಮತ್ತು ಹೋರಾಟವನ್ನು ಮೆಚ್ಚೋಣ. ಆದರೆ ಸಂದರ್ಶನದಲ್ಲಿ ಇವರೇ ಬಾಯಿ ಬಿಟ್ಟಿರುವಂತೆ ಇವರ ಇಬ್ಬರು ಮಕ್ಕಳು ಓದಿದ್ದು ಒಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ!! ಅದಕ್ಕೆ ಇವರು ನೀಡಿರುವ ಕಾರಣ "ನಗರದಲ್ಲಿ ಸುಸಜ್ಜಿತ ಕನ್ನಡ ಮಾಧ್ಯಮ ಶಾಲೆಗಳು ಇಲ್ಲದ್ದರಿಂದ ಹಾಗೆ ಮಾಡಬೇಕಾಯ್ತಂತೆ!" ಎಂಥಹಾ ಕುಚೋಧ್ಯ ನೋಡಿ. ಅಲ್ಲಾ, ಇವರು ಯಾರ ಕಿವಿ ಮೇಲೆ ಹೂವಿಡಲು ಹೊರಟಿದ್ದಾರೆ ? ನಗರದಲ್ಲಿ ಸುಸಜ್ಜಿತ ಕನ್ನಡ ಶಾಲೆ ಸಿಗಲಿಲ್ಲ ಅಂತ ಇವರು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರು. ಅಂದರೆ ಇವರ ಪ್ರಕಾರ ಹಳ್ಳಿಗಳ ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿವೆಯೇ ? ಇವರು ಯಾವುದಾದರೂ ಉತ್ತರ ಕರ್ನಾಟಕದ ಹಳ್ಳಿಯ ಶಾಲೆಯನ್ನು ನೋಡಿದ್ದಾರಾ ? ಇದನ್ನು ಯಾರೂ ಪ್ರಶ್ನಿಸಬಾರದಂತೆ. "ಸಾರ್ವತ್ರಿಕ ವಿಷಯವನ್ನು ಆ ರೀತಿ ವೈಯಕ್ತಿಕವಾಗಿ ನೋಡಬಾರದು" ಎಂಬ ಫಾರ್ಮಾನು ಬೇರೆ. ಇವರ ಮಕ್ಕಳದ್ದು ವೈ

ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?

ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗಳು ಹೇಳುತ್ತಿರುವ ಕಾರಣ "ಕನ್ನಡಕ್ಕೆ ಧಕ್ಕೆ!". ಇದನ್ನು ಸ್ವಲ್ಪ ವಿವೇಚಿಸೋಣ. ನಿಜ, ಕನ್ನಡಕ್ಕೆ ತೊಂದರೆ ಆಗಬಹುದು. ಆದರೆ ಸರ್ಕಾರ ಆಂಗ್ಲ ಮಾಧ್ಯಮ ತರಲು ಹೊರಟಿರುವುದು ಸರ್ಕಾರಿ ಶಾಲೆಗಳಲ್ಲಿ. ಅಂದರೆ ನಿಸ್ಸಂಶಯವಾಗಿ ಅಲ್ಲಿ ಓದುತ್ತಿರುವ ಮಕ್ಕಳು ( ಕನಿಷ್ಟ ೯೫% ) ಬಡ ಮಕ್ಕಳೇ ಹೊರತೂ ಶ್ರೀಮಂತರಲ್ಲ. ಇಂದು ಹಳ್ಳಿಯ ಅಲ್ಪಸ್ವಲ್ಪ ಹಣವಂತರೂ ಸಹ ತಮ್ಮ ಮಕ್ಕಳನ್ನು ಹತ್ತಿರದ ಪಟ್ಟಣದ ಆಂಗ್ಲ (ಖಾಸಗಿ) ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲದೇ ಅವು ಮುಚ್ಚಿಕೊಳ್ಳುತ್ತಿವೆ. ಅಂದರೆ ದುಡ್ಡಿರುವ ಮಕ್ಕಳು ಆಂಗ್ಲ ಕಲಿತು ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಕೆಲಸ ಹಿಡಿಯಲು ತಯಾರಾದರೆ ಬಡ ಮಕ್ಕಳು ಕನ್ನಡವನ್ನು ಮಾತ್ರ ಕಲಿತು ತೀರಾ ಕೆಳ ಮಟ್ಟದ ಕೆಲಸಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಏಕೆಂದರೆ ಬೆಂಗಳೂರಿನ ಚಿಕ್ಕದೊಂದು ರಿಯಲ್ ಎಸ್ಟೇಟ್ ಕಚೇರಿಗೆ ಸಹಾಯಕನಾಗಿ ಸೇರಲಿಕ್ಕೂ ಆಂಗ್ಲ ಬಂದರೆ ಹೆಚ್ಚು ಸಂಬಳ ಮತ್ತು ಅವಕಾಶವಿದೆ. ಅಷ್ಟೇಕೆ ಕೊನೆ ಪಕ್ಷ ದೊಡ್ಡದೊಂದ ಹೋಟೆಲಿನಲ್ಲಿ ಸರ್ವರ‍್ ಆಗಲಿಕ್ಕೂ ಆಂಗ್ಲ ಗೊತ್ತಿದ್ದರೆ ಸಂಬಳ ಜಾಸ್ತಿ ಸಿಗುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳ