ಬಿಜೆಪಿಯ ಭಟ್ಟಂಗಿಗಳು 'ಕಾಂಗ್ರೆಸ್ನಿಂದ ಏನೂ ಅಭಿವೃದ್ದಿ ಆಗಿಲ್ಲ' ಎಂದು ಹೇಳುತ್ತಾ ಮತ್ತೊಂದು ಕಾಂಗ್ರೆಸ್ ವಿರೋಧಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದಾರೆ, ಅಥವಾ ಈಗಾಗಲೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್ನಿಂದ ಅಭಿವೃದ್ದಿಯೇ ಆಗಿಲ್ಲ ಅನ್ನೋದನ್ನ ಒಪ್ಪಲು ಸಾಧ್ಯವೇ ? ಖಂಡಿತಾ ಬೇಕಾದಷ್ಟು ಕೆಲಸಗಳಾಗಿವೆ. ನಮ್ಮ ಹಳ್ಳಿಯಲ್ಲಿ ಅವರು ಶಾಲೆಯನ್ನು ತೆರೆಯದೇ ಹೋಗಿದ್ದರೆ ನಾನಿವತ್ತು ನಮ್ಮ ತಂದೆ ತಾಯಿಯಂತೆ ನಮ್ಮೂರಿನ ಧನಿಕರ ಮನೆ ಸೆಗಣಿ ಬಳಿದುಕೊಂಡು ಜೀವಿಸಬೇಕಾಗಿತ್ತು! ನನಗಿಂತಾ ಹಿಂದಿನವರು ಕಲಿಯುವ ಅವಕಾಶವಿಲ್ಲದೇ ಆ ಕೆಲಸ ಮಾಡಿಕೊಂಡಿದ್ದಾರೆ. ಅಂದು ಐದನೇ ತರಗತಿ ವರೆಗೆ ಮಾತ್ರ ಇದ್ದ ಶಾಲೆಯಲ್ಲಿ ಏಳನೇ ತರಗತಿ ವರೆಗೂ ಅವಕಾಶ ಕಲ್ಪಿಸಿದಾಗ ಅದೇ ಊರಿನ ಮೇಲ್ವರ್ಗದ ಧನಿಕರು ಶಾಲೆಗೆ ಬೀಗ ಜಡಿದು ಉಪಾಧ್ಯಾಯರಿಗೆ 'ನಮ್ಮ ಅನುಮತಿ ಇಲ್ಲದೇ ಹೇಗೆ ಏಳನೇ ತರಗತಿ ವರೆಗೂ ಪಾಠ ಮಾಡ್ತೀರಿ ?' ಎಂದು ಧಮಕಿ ಹಾಕಿದ್ದನ್ನ ನಾನಿನ್ನೂ ಮರೆತಿಲ್ಲ. ಈ ಊರಿನ ಬಡ ಮಕ್ಕಳೆಲ್ಲಾ ಹೆಚ್ಚು ಓದುತ್ತಾ ಹೋದಂತೆ ತಮ್ಮ ಮನೆ-ತೋಟದ ಕೆಲಸಕ್ಕೆ ಕೂಲಿಗಳ ಬರ ಏರ್ಪಡುತ್ತದೆ ಎಂಬ ಆತಂಕ ಅಂದೇ ಅವರನ್ನು ಕಾಡಿತ್ತು! ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಸೇವೆಯನ್ನು ನಮ್ಮ ಕುಗ್ರಾಮಗಳವರೆಗೂ ನೀಡದೇ ಹೋಗಿದ್ದರೂ ಸಹ ನನ್ನ ವಿಧ್ಯಾಭ್ಯಾಸ ಏಳನೇ ತರಗತಿಗೇ ಕೊನೆಯಾಗಿರುತ್ತಿತ್ತು. ಇಂತಹ ಅನೇಕ ಸವಲತ್ತುಗಳನ್ನು ಪಡೆದು ಬೆಳೆದ ನಾನು ಕಾಂಗ್ರೆಸ್ನಿಂದ
ಮನಸು ಹೃದಯಗಳ ಸವಿಮಾತು............