ವಿಷಯಕ್ಕೆ ಹೋಗಿ

ಧರ್ಮಾಂಧತೆಗೆ ಔಷಧಿ ಇಲ್ಲವೇ ?


ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಬ್ಬ ಮುಸ್ಲಿಂ ಹುಡುಗಿ ಕೆಲಸಕ್ಕೆ ಬರುತ್ತಿದ್ದಳು. ಆಕೆ ಮನೆಯಿಂದ ಬರುವಾಗ ಬುರ್ಕಾ ಹಾಕಿಕೊಂಡು ಬರುತ್ತಿದ್ದಳು. ಕಚೇರಿಗೆ ಬಂದೊಡನೆಯೇ ಅದನ್ನು ತೆಗೆದಿರಿಸಿ ಕೆಲಸಕ್ಕೆ ಕೂರುತ್ತಿದ್ದಳು. ಕಚೇರಿಯಲ್ಲಿ ಬುರ್ಕಾ ಧರಿಸಬಾರದು ಅಂತ ಯಾರೂ ಆಕೆಗೆ ಹೇಳಿರಲಿಲ್ಲ. ಸಂಜೆ ಮನೆಗೆ ಹೊರಡುವಾಗ ಯಥಾ ಪ್ರಕಾರ ಅದನ್ನು ಹಾಕಿಕೊಂಡು ಹೊರಡುತ್ತಿದ್ದಳು. 

ಚೆನ್ನಾಗಿ ಪರಿಚಿತರಾದ ನಂತರ 'ಯಾಕೆ ಹೀಗೆ ಮಾಡುತ್ತಿರುವೆ?' ಎಂದು ಕೇಳಿದ್ದಕ್ಕೆ ಆಕೆ ಹೇಳಿದ್ದು.. "ಇದನ್ನ ಯಾವ್ ನನ್‌ ಮಗಾ ಕಂಡು ಹಿಡಿದನೋ ಕರ್ಮ. ಇವರುಗಳದ್ದು ಒಳ್ಳೆ ಹಿಂಸೆ. ನಮಗೆ ಇಷ್ಟ ಇಲ್ಲಾ ಅಂದ್ರೂ ಹಾಕಿಕೊಳ್ಳಬೇಕು..' ಎಂದು ಹೇಳಿ ಇನ್ನೊಂದಿಷ್ಟು ಯಾರಿಗೋ ಉಗಿದಳು. 

'ಇವರುಗಳದ್ದು ಒಳ್ಳೆ ಹಿಂಸೆ' ಅಂದರೆ ? ಯಾರದ್ದು? ಯಾರವರು ? ಅಂತ ಕೇಳಿದ್ದಕ್ಕೆ ಆಕೆ ಸರಿಯಾಗಿ ಉತ್ತರಿಸಲಿಲ್ಲ, 'ಹೀಗೇ... ಇರ್ತಾರಲ್ಲ!' ಅಂತ ತೇಲಿಸಿದಳು. ಅವರು ಯಾರಂತ ಕೊನೆಗೂ ಗೊತ್ತಾಗಲಿಲ್ಲ.

ಹಾಗೆಯೇ ಇನ್ನೊಂದು ಘಟನೆ ಕೂಡಾ ನೆನಪಾಗ್ತಿದೆ. ಒಮ್ಮೆ ಫೋಟೋ ಸ್ಟುಡಿಯೋ ಸಹ ಹೊಂದಿದ್ದೆ. ಆಗ ಒಂದು ಮದುವೆಗೆ ಹೋದಾಗ (ಅದು ಹಿಂದುಗಳದ್ದು) ಅಲ್ಲಿಗೆ ಅವರ ಮುಸಲ್ಮಾನ ಕುಟುಂಬವೊಂದು ಸಹ (ಒಂದಿಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು) ಬಂದಿತ್ತು. ಮದುಮಕ್ಕಳು ಎಲ್ಲರ ಜೊತೆ ನಿಂತು ಫೋಟೋ ತೆಗೆಸುತ್ತಾ ಕೊನೆಗೊಮ್ಮೆ ಇವರನ್ನೂ ಕರೆದರು. ಆಗ ಮುಸ್ಲಿಂ ಮಹಿಳೆಯರು ನಗು ನಗುತ್ತಾ ಬಂದು ಮದುಮಕ್ಕಳ ಜೊತೆ ನಿಂತರು. ಆದರೆ ಆ ಗಂಡಸು ತಕ್ಷಣ ತನ್ನವರನ್ನು ಹಿಂದಕ್ಕೆ ಕರೆದ. ಮದುಮಕ್ಕಳೂ ಹಾಗೂ ನಾನು ಅವನಲ್ಲಿ ‘ಬನ್ನಿ ಸಾರ್‌ ನಿಂತ್ಕೊಳ್ಳಿ‘ ಎಂದು ಕೇಳಿಕೊಂಡೆ. ಆದರೆ ಅವನು ‘ನಮ್ಮ ಧರ್ಮದಲ್ಲಿ ಛಾಯಾಚಿತ್ರ ತೆಗೆಯುವಂತಿಲ್ಲ‘ ಎಂದು ನಿರಾಕರಿಸಿದ. ಪಾಪ ಖುಷಿಯಿಂದ ಫೋಟೋ ತೆಗೆಸಿಕೊಳ್ಳಲು ನಿಂತಿದ್ದ ಮಹಿಳೆಯರಿಬ್ಬರೂ ಒಲ್ಲದ ಮನಸ್ಸಿನಿಂದ ಅವನೊಂದಿಗೆ ತೆರಳಿದರು.

ಇದೀಗ ದಿನೇಶ್ ಅಮೀನ್ ಮಟ್ಟು ಅವರ ಹೇಳಿಕೆ ಹಾಗೂ ಮಂಗಳೂರಿನ ಪತ್ರಕರ್ತನವೀನ್ ಸೂರಿಂಜೆ ಬುರ್ಕಾ ಧರಿಸುವುದು ಕಡ್ಡಾಯವೇನಲ್ಲ ಎಂಬಂತೆ ಒಂದು ಹೇಳಿಕೆ ಹಾಕಿದ್ದಕ್ಕೆ ಧರ್ಮಾಂಧ ಮುಸಲ್ಮಾನರು ಅವರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಇದ್ದುದರಲ್ಲಿ ಕೆಲವು ವಿವೇಕಿ ಮುಸಲ್ಮಾನರು ಸೂರಿಂಜೆ ಪರ ವಹಿಸಿರುವುದು ಸಮಾಧಾನದ ಸಂಗತಿ. 

ಇದರರ್ಥ ಇಷ್ಟೇ, ಇವರು ಸ್ತ್ರೀಯರನ್ನು ಸದಾ ಬುರ್ಖಾದೊಳಗೆ ಮುಚ್ಚಿಡಲಿಕ್ಕೇ ಪ್ರಯತ್ನಿಸುತ್ತಿದ್ದಾರೆ. ಹೆಣ್ಣು ಯಾರಿಗೂ ಮುಖ ತೋರಿಸಲೇ ಬರುದು ಎಂಬುದೇ ದೊಡ್ಡ ಮೂರ್ಖತನ. ಅದನ್ನು ಎಷ್ಟು ಮುಸಲ್ಮಾನ ಹೆಣ್ಣುಗಳು ಪಾಲಿಸುತ್ತಿದ್ದಾರೆ ? ಒಮ್ಮೆ ಗೂಗಲ್‌ ಇಮೇಸ್ ಸರ್ಚ್‌‌ನಲ್ಲಿ ಮುಸ್ಲಿಂ ಗರ್ಲ್‌ ಅಂತ ಹುಡುಕಿ ನೋಡಿ, ಬುರ್ಕಾ ಧರಿಸಿರುವ ಆದರೆ ಮುಖ ತೋರಿಸಿರುವ ನೂರಾರು ಹುಡುಗಿಯರ ಚಿತ್ರ ಲಭ್ಯವಾಗುತ್ತದೆ. ಇವರಿಗೆಲ್ಲಾ ಈ ಧರ್ಮಾಂಧರು ಹೋಗಿ ಮುಖ ತೋರಿಸದಂತೆ ಮಾಡುತ್ತಾರಾ ?

ಸೂರಿಂಜೆ ಈ ಹಿಂದೆ ಇದ್ದದ್ದನ್ನು ಇದ್ದಂತೆ ಹೇಳಿ ಅತ್ತ ಹಿಂದೂ ಧರ್ಮಾಂಧರ ವಿರೋಧವನ್ನೂ ಕೊಟ್ಟಿಕೊಂಡಿದ್ದಾರೆ. 
ನಾನು ಗಮನಿಸಿದಂತೆ ಎಲ್ಲಾ ಧರ್ಮದ ಧರ್ಮಾಂಧರ ಸಮನ್ವಯತೆ ಏನೆಂದರೆ ಅವರ ತಪ್ಪನ್ನು ಯಾರೂ ಪ್ರಶ್ನೆ ಮಡುವುದಂತಿರಲಿ, ಇದು ತಪ್ಪು ಅಂತ ಎತ್ತಿ ತೋರಿಸಲೂ ಬಾರದು. ಹಾಗೆ ಮಾಡಿದರೆ ಸಾಕು... ಅದು ಧರ್ಮ ನಿಂದನೆಯಾಗಿ ಹೋಗುತ್ತದೆ. ಅಂದರೆ ಧರ್ಮ ನಿಂದನೆಯ ಗುಮದಮ ತೋರಿಸುತ್ತಾ ಇವರುಗಳು ಗೊಡ್ಡು ಸಂಪ್ರದಾಯಗಳನ್ನು ಸಾಕುತ್ತಿದ್ದಾರೆ. ಆದರೆ ಈ ಧರ್ಮಾಂಧತೆಗೆ ಔಷಧಿ ಇಲ್ಲವೇ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...