ಮೊನ್ನೆ ಮೊನ್ನೆ ಕೆಂದ್ರ ಸರ್ಕಾರದ ಜನ-ಧನ್ ಯೋಜನೆಯಲ್ಲಿ ಕೋಟ್ಯಾಂತರ ಜನರಿಗೆ ಬ್ಯಾಂಕ್ ಖಾತೆ ನೀಡಲಾಯ್ತು. ಪ್ರತಿಯೊಬ್ಬ ಪ್ರಜೆಗೂ ಒಂದು ಬ್ಯಾಂಕ್ ಖಾತೆ ಇರಲೇ ಬೇಕು, ಹಾಗಾಗಿ ಇದೊಂದು ಅತ್ಯುತ್ತಮ ಯೋಜನೆ.
ಆದರೆ ಇದನ್ನು ಜಾರಿಗೊಳಿಸಿದ ರೀತಿಯಲ್ಲಿನ ಯಡವಟ್ಟು ನೋಡಿ...
ಈ ಯೋಜನೆಯ ಪ್ರತಿಫಲ ಸಿಗಬೇಕಾಗಿದ್ದುದು ಈ ಮೊದಲೇ ಬ್ಯಾಂಕ್ ಖಾತೆ ಹೊಂದಿಲ್ಲದಿರುವವರಿಗೆ ಮಾತ್ರ. ಆದರೆ ಮೊದಲೇ ಬ್ಯಾಂಕ್ ಖಾತೆ ಇದ್ದವರೂ ಈ ಯೋಜನೆಯಡಿ ಲಕ್ಷಾಂತರ ಜನರು ಮತ್ತೊಂದು ಖಾತೆ ಮಾಡಿಸಿಕೊಂಡಿದ್ದಾರೆ ಎಂಬುದು ಈಗ ಸರ್ಕಾರದ ಅರಿವಿಗೆ ಬಂದಿದೆ. (ಹೀಗಾಗುತ್ತದೆ ಎಂದು ಮೊದಲೇ ತಿಳಿದಿರಲಿಲ್ಲ ಎನ್ನಲಾಗದು, ಸಂಖ್ಯೆಯ ಲಾಭ ಪಡೆಯಲು ಸುಮ್ಮನಾಗಿದ್ದಿರಲೂ ಬಹುದು.) ಈಗ ಅಂತಹ ಖಾತೆದಾರರನ್ನು ಹೊರ ಹಾಕಲು ಇನ್ನೊಂದು ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಎಂಬ ಸುದ್ದಿ ಬಂದಿದೆ. ಅದು ಆರು ತಿಂಗಳೋ ವರ್ಷವೋ ಹಿಡಿದರೆ ಅಚ್ಚರಿಯೇನಲ್ಲ, ಅಥವಾ ಎಷ್ಟರ ಮಟ್ಟಿಗೆ ಸರಿಯಾದ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ ಎಂಬುದನ್ನಂತೂ ಕೇಳುವುದೇ ಬೇಡ.
ಆದರೆ ಕೇಂದ್ರ ಸರ್ಕಾರ ಈ ರೀತಿ ಮಾಡಿದಿದ್ದರೆ ???
ಹೇಗಿದ್ದರೂ ಆಧಾರ್ ಕಾರ್ಡ್ ನೀಡಿದರೆ ಬೇರೆ ಯಾವುದೇ ದಾಖಲೆ ಬೇಡ ಅಂತ ತಿಳಿಸಿದ್ದರು. ಅದನ್ನೇ ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಂತ ಕಡ್ಡಾಯ ಮಾಡಿದ್ದಿದ್ದರೆ ? ಅದಕ್ಕೂ ಮೊದಲು ಬ್ಯಾಂಕ್ ಖಾತೆ ಇರುವವರೆಲ್ಲಾ ಆಧಾರ್ ಕಾರ್ಡ್ ಹೊಂದಿರಲೇ ಬೇಕು ಎಂದು ಕಡ್ಡಾಯ ಮಾಡಿದ್ದಿದ್ದರೆ? ಅಂದು ಅರ್ಜಿ ನೀಡಿದಾಗಲೇ ಐದು ಸೆಕೆಂಡಿನಲ್ಲಿ ಅರ್ಜಿದಾರರು ಇನ್ನೊಂದು ಬ್ಯಾಂಕ್ ಖಾತೆ ಹೊಂದಿದ್ದಾರೋ ಇಲ್ಲವೋ ಎಂಬುದು ತಿಳಿದು ಹೋಗಿರುತ್ತಿತ್ತು. ಈ ಯೋಜನೆಯನ್ನು ಇನ್ನೊಂದು ೩-೬ ತಿಂಗಳು ಮುಂದೂಡಿ ಆಧಾರ್ ಕಾರ್ಡ್ನ್ನು ಎಲ್ಲರಿಗೂ ವಿತರಿಸಿದ ನಂತರವೇ ಜಾರಿಗೊಳಿಸಬಹುದಿತ್ತು.
ಇನ್ನಾದರೂ ಕೇಂದ್ರ-ರಾಜ್ಯ ಸರ್ಕಾರಗಳು ಆಧಾರ್ ಅನ್ನು ಎಲ್ಲಾ ಇಲಾಖೆ/ಯೋಜನೆಗಳಿಗೂ ಕಡ್ಡಾಯ ಮಾಡಲಿ. ದೇಶವನ್ನು ಭ್ರಷ್ಟರಿಂದ ರಕ್ಷಿಸಲಿ.

ಕಾಮೆಂಟ್ಗಳು