ವಿಷಯಕ್ಕೆ ಹೋಗಿ

ಕಾಡು ಪ್ರಾಣಿಗಳು ಮತ್ತು ನಾವು



ನಾನು ಕಾಡಿನಲ್ಲೇ ಹುಟ್ಟಿ ಬೆಳೆದವನು. ಕಾಡೆಮ್ಮೆ ಇಂದಿಗೂ ನಮ್ಮ ಮನೆ ಅಂಗಳದ ತನಕೆ ಕೆಲವೊಮ್ಮೆ ಬಂದು ಹೋಗುತ್ತವೆ. ಹುಲಿ, ಕತ್ತೆ ಕಿರುಬಗಳು ಬಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗುತ್ತವೆ. ಆಗಾಗ ನಮ್ಮನೆ ಹಸುಗಳು ಹುಲಿಗೆ ಆಹಾರವಾಗುತ್ತಿರುತ್ತವೆ. ನಾವು ಹುಡುಗರಾಗಿದ್ದಾಗ ನಮ್ಮನೆಯಿಂದ ಸ್ವಲ್ಪ ದೂರದಲ್ಲೇ ತೋಳದ ಹಿಂಡೊಂದು ನಮ್ಮ ಚಿಕ್ಕ ಕರುವೊಂದನ್ನು ಹಿಡಿಯಲು ಬಂದಿದ್ದವು. ಅವುಗಳಿಂದ ಕರುವನ್ನು ರಕ್ಷಿಸಲು ನಮ್ಮ ದನಕರುಗಳು ಸಾಹಸ ಮಾಡುತ್ತಿದ್ದವು. ಇದನ್ನು ಕಂಡ ನಾನೂ ನಮ್ಮಣ್ಣನೂ (ಆಗ ಚಿಕ್ಕ ಹುಡುಗರು) ನಾಯಿಯನ್ನು ಕರೆದುಕೊಂಡು ಕೂಗುತ್ತಾ ಅಲ್ಲಿಗೆ ಓಡಿದೆವು. ನಾವು ಹತ್ತಿರ ಹೋಗುವವರೆಗೂ ತೋಳಗಳು ಕದಲಿಲ್ಲ. ನಾವಿಬ್ಬರು ಮತ್ತು ನಾಯಿಗಳೆರಡು (ಅವು ಹಳ್ಳಿ ನಾಯಿಗಳು) ಇದ್ದುದರಿಂದ ಕೊನೆಗೂ ಅವು ಕಾಡಿನೊಳಗೆ ಓಡಿದವು. ಅಕಸ್ಮಾತ್ ಅವು ತಿರುಗಿ ನಮ್ಮೆ ಮೇಲೆಯೇ ಮುಗಿ ಬಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಲಢ್ಯ ತೋಳಗಳ ಎದುರಲ್ಲಿ ನಮ್ಮ ಕಂಟ್ರಿ ನಾಯಿಗಳು ಏನೂ ಮಾಡುವಂತಿರಲಿಲ್ಲ.
ಆಮೇಲೊಂದು ದಿನ ಬೆಳಗ್ಗೆ ಶಾಲೆಗೆ ಹೋಗಲು ನಮ್ಮನೆಯಿಂದ ಕಾಡಿನ ಅಂಕುಡೊಂಕು ದಾರಿಯಲ್ಲಿ ಓಡುತ್ತಾ ಹೊರಟಿದ್ದೆ. ಒಂದು ತಿರುವು ತಿರುಗಿದಾಗ ಕೇವಲ ಎಂಟತ್ತು ಅಡಿ ದೂರದಲ್ಲೇ ನಿಂತಿತ್ತು ಬೃಹತ್ ಗಾತ್ರದ ಕಾಡುಕೋಣ. ಎದೆ ಝಲ್ ಎಂದಿತ್ತು. ಹಿಂತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದೇ ಹೆದರಿ ಓಡಿ ಹೋಗಿತ್ತು. ಮತ್ತೊಂದು ದಿನ ಸಂಜೆ ಶಾಲೆ ಬಿಟ್ಟು ಬರುವಾಗ ಬೆಟ್ಟದ ದಾರಿಯಲ್ಲಿ ನನ್ನಿಂದ ೫೦-೬೦ ಅಡಿ ದೂರದ ಪೊದೆಯ ಮರೆಯಿಂದ ಹುಲಿಯಂತಹ ಪ್ರಾಣಿಯೊಂದು ಭಯದಿಂದ ಓಡಿ ಹೋಯ್ತು. ಅದು ಮಳೆಗಾಲದ ಕತ್ತಲಾವರಿಸಿತ್ತಾದ್ದರಿಂದ ಹುಲಿಯೇ ಅಥವಾ ಕತ್ತೆ ಕಿರುಬವೇ ಅನ್ನೋದು ಸರಿಯಗಿ ಗೊತ್ತಾಗಲಿಲ್ಲ.

ನಮ್ಮ ಮನೆಯಿಂದ ಎರಡು ಮೂರು ಕಿಲೋಮೀಟರು ದೂರದೊಳಗೇ ಹೆಬ್ಬಾವು, ಕಾಳಿಂಗ ಸರ್ಪ ಎಲ್ಲವನ್ನೂ ನೋಡಿದ್ದೇನೆ. ನಮ್ಮ ಮನೆ ಪಕ್ಕದ ಗದ್ದೆಗೆ ಕಾಡುಕೊಣಗಳೂ ಕಾಡು ಹಂದಿಗಳೂ ಮಳೆಗಾಲದ ನಿತ್ಯದ ಅತಿಥಿಗಳು.
ಆ ನಂತರ...
ಒಂದು ಬಾರಿ ಬಳ್ಳಾರಿಯ ಪ್ರಾಣಿಸಂಗ್ರಹಲಾಯಕ್ಕೆ ಹೋಗಿದ್ದಾಗ ಅಲ್ಲಿನ ಹುಲಿ ಕೋಣೆಯಲ್ಲಿ ಮಲಗಿದ್ದ ಹುಲಿಯ ಬಾಲ ಕಂಬಿಗಳ ಮೂಲಕ ಹೊರಗೆ ಬಂದಿತ್ತು. ಅದನ್ನು ಕೆಲವರು ಹಿಡಿದು ಎಳೆದಾಡುತ್ತಾ ಹುಲಿಗೆ ತೊಂದರೆ ಕೊಡುತ್ತಿದ್ದರು. ಹುಲಿಗೆ ಅಭ್ಯಾಸವಾಗಿತ್ತೋ ಏನೋ, ಒಟ್ಟಿನಲ್ಲಿ ಅದು ಸುಮ್ಮನಿತ್ತು. ನಾನೂ ನನ್ನ ಗೆಳೆಯರೂ ಅವರಿಗೆ ಹಾಗೆ ಮಾಡಬೇಡಿರಿ ಎಂದು ಹೆದರಿಸಿದೆವು. ನಾವು ಆ ಕಡೆ ಹೋದ ನಂತರ ಮತ್ತೆ ಅವರುಗಳು (ಚಿಕ್ಕ ಪುಟ್ಟ ಮಕ್ಕಳೂ ಇದ್ದ ಕುಟುಂಬವದು) ಹಾಗೆಯೇ ಚೇಷ್ಟೆ ಮಾಡುತ್ತಿದ್ದರು. ನಾವು ಸಮಯವಾದ್ದರಿಂದ ಹೊರಗೆ ಬಂದೆವು. ನಂತರ ಏನೂ ಅವಗಡ ನಡೆದ ಬಗ್ಗೆ ವರದಿಯಂತೂ ಆಗಲಿಲ್ಲ.
ಆದರೆ ಎಲ್ಲಾ ಸಂದರ್ಭದಲ್ಲೂ ಹಾಗೆಯೇ ನಡೆಯದಲ್ಲ ? ಕಾಡು ಪ್ರಾಣಿಗಳನ್ನು ದೂರದಿಂದ ನೋಡಿ ಆನಂದಿಸಬೇಕೇ ಹೊರತೂ ಅವುಗಳ ಜೊತೆ ಚೆಲ್ಲಾಟವಾಡಲು ಹೋಗಬಾರದು. ಈ ಯುವಕ ರಕ್ಷಣಾ ಬೇಲಿಯನ್ನು ಹತ್ತಿ ಆಚೆ ಬಿದ್ದಿದ್ದಾನೆಂದರೆ ಈತ ಅವಿವೇಕಿಯಲ್ಲದೇ ಬೇರೇನಲ್ಲ. (ಮಾನಸಿಕ ಅಸ್ವಸ್ಥನಂತೆ). ಆದರೆ ಮುಂದೆ ಯಾರೂ ಇಂತಹ ಅಚಾತುರ್ಯಕ್ಕೆ ಇಳಿಯದಿರಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...