ವೆಂಕಟಾಚಲಯ್ಯನವರು ಬರುವ ವರೆಗೆ ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಇರುವುದೇ ಹೆಚ್ಚಿನವರಿಗೆ ತಿಳಿದಿರಲಿಲ್ಲ. ವೆಂಕಟಾಚಲಯ್ಯನವರ ನಂತರ ಬಂದ ಸಂತೋಷ್ ಹೆಗಡೆಯವರು ಯಾರ ಮುಲಾಜನ್ನೂ ನೋಡದೇ ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಹೆಡೆಮುರಿ ಕಟ್ಟಿದರು. ಇವರಿಂದಾಗಿ "ಕರ್ನಾಟಕ ಲೋಕಾಯುಕ್ತ" ದೇಶದಲ್ಲೇ ನಂ 1 ಆಯ್ತು. ಸಿಬಿಐ ಸಹ ತನ್ನ ವಾರ್ಷಿಕ ಮೀಟಿಂಗ್ನಲ್ಲಿ ತನಿಖಾ ಮಾದರಿಗೆ ಕರ್ನಾಟಕ ಲೋಕಾಯುಕ್ತದ ತನಿಖಾ ರೀತಿಯ ಮಾದರಿಯನ್ನು ಅಳವಡಿಸಿಕೊಳ್ಳಲು ಚರ್ಚೆ ನಡೆಸಿದರು. ಈಗ ಬಿಹಾರ್ನ ಮುಖ್ಯಮಂತ್ರಿ ನಿತೀಶ್ಕುಮಾರ್ ತಮ್ಮ ರಾಜ್ಯದ ಲೋಕಾಯುಕ್ತಕ್ಕೆ ಕಾಯಕಲ್ಪ ಕಲ್ಪಿಸಿ ಕೊಡಲು ಸಂತೋಷ್ ಹೆಗಡೆಯವರಿಗೆ ಆಹ್ವಾನ ನೀಡಿದ್ದಾಗಿ ಸುದ್ದಿ ಇದೆ.
ಹೊಸ ಲೋಕಾಯುಕ್ತರಾದ ಶ್ರೀ ಶಿವರಾಜ್ ಪಾಟೀಲ್ ಅವರು ಸಂತೋಷ್ ಹೆಗಡೆಯವರಿಗಿಂತಲೂ ಹೆಚ್ಚು ಅಥವಾ ಕಡೇ ಪಕ್ಷ ಅವರಷ್ಟಾದರೂ ಖಡಕ್ ಆಗಿ ಕಾರ್ಯ ನಿರ್ವಹಿಸಬೇಕಾಗಿದೆ. ಅವರ ವೈಖರಿ ನೋಡಿದರೆ ರಾಜ್ಯದ ಜನತೆಗೆ ನಿರಾಶೆ ಮಾಡಲಾರರು ಎಂದೇ ತೋರುತ್ತಿದೆ. ಏಕೆಂದರೆ ಗಣಿ ವರದಿಯಲ್ಲಿ ಯಡ್ಡಿಗೆ ಹೆಗಡೆಯವರು ವಿವರಣೆ ಕೇಳದಿರುವುದು ತಪ್ಪೇನಲ್ಲ, ಕೇಳಲೇಬೇಕಾದ ಅಗತ್ಯ ಇಲ್ಲ ಎಂದು ಹೆಗಡೆಯವರ ಕ್ರಮವನ್ನು ಸಮರ್ಥಿಸಿದ್ದಾರೆ.
ಭ್ರಷ್ಟರ ಪಾಲಿಗೆ ಇವರೂ ಸಹ ದುಸ್ವಪ್ನವಾಗಲಿ... ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ.
ಹೊಸ ಲೋಕಾಯುಕ್ತರಾದ ಶ್ರೀ ಶಿವರಾಜ್ ಪಾಟೀಲ್ ಅವರು ಸಂತೋಷ್ ಹೆಗಡೆಯವರಿಗಿಂತಲೂ ಹೆಚ್ಚು ಅಥವಾ ಕಡೇ ಪಕ್ಷ ಅವರಷ್ಟಾದರೂ ಖಡಕ್ ಆಗಿ ಕಾರ್ಯ ನಿರ್ವಹಿಸಬೇಕಾಗಿದೆ. ಅವರ ವೈಖರಿ ನೋಡಿದರೆ ರಾಜ್ಯದ ಜನತೆಗೆ ನಿರಾಶೆ ಮಾಡಲಾರರು ಎಂದೇ ತೋರುತ್ತಿದೆ. ಏಕೆಂದರೆ ಗಣಿ ವರದಿಯಲ್ಲಿ ಯಡ್ಡಿಗೆ ಹೆಗಡೆಯವರು ವಿವರಣೆ ಕೇಳದಿರುವುದು ತಪ್ಪೇನಲ್ಲ, ಕೇಳಲೇಬೇಕಾದ ಅಗತ್ಯ ಇಲ್ಲ ಎಂದು ಹೆಗಡೆಯವರ ಕ್ರಮವನ್ನು ಸಮರ್ಥಿಸಿದ್ದಾರೆ.
ಭ್ರಷ್ಟರ ಪಾಲಿಗೆ ಇವರೂ ಸಹ ದುಸ್ವಪ್ನವಾಗಲಿ... ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ.
ಕಾಮೆಂಟ್ಗಳು