ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು.
ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ !
ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು.
ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ?
ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರಸ್ವಾಮಿ ಪಟ್ಟಾಭಿಷೇಕದ ಜೊತೆ ಹೋಲಿಸಿ ನೋಡಿದರೆ.. ಕುಮಾರಸ್ವಾಮಿ ಅವರಿಂದ ಒಳ್ಳೆಯದು ಆಗುವವರಿಗೆ ಮಳೆ ಬಂದುದು ಶುಭ ಸೂಚಕವೂ ಕೆಟ್ಟದು ಆಗುವವರಿಗೆ ( ಇಲ್ಲಿ ಕೆಟ್ಟದು ಅಂದರೆ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದು ) ಅಶುಭ ಸೂಚಕವೂ ಆಯ್ತಲ್ಲ !?
ಅಥವಾ ಕುಮಾರಸ್ವಾಮಿ ಕೆಟ್ಟದಾಗಿ ಆಡಳಿತ ಮಾಡುವ ಮೂಲಕ ಜನರಿಗೆ ತೊಂದರೆ ಕೊಟ್ಟರೆ ? ಅದು ಬಿಜೆಪಿಗೆ ಲಾಭವಾಗಲಿದೆ ಅಲ್ಲವೇ ? ಆಗ ಈಗಿನ ಶುಭ ಅಶುಭಾಗಳು ಅದಲು ಬದಲಾಗುತ್ತವೆ.
ಹಾಗೆಯೇ ಒಂದು ಮಳೆಯನ್ನು ಶುಭ, ಅಶುಭ ಅಂತೆಲ್ಲ ಹೇಳುವುದು ಮೂರ್ಖತನ. ಮದುವೆ ನಡೆವಾಗ ಸಣ್ಣದಾಗಿ ಮಳೆ ಬಂದರೆ ಆಗಲೂ ಶುಭ ಸೂಚನೆ ಅನ್ನುತ್ತಾರೆ. ಆದರೆ ಅದೇ ಮದುವೆ ಸಮಯದಲ್ಲಿ ಬಂದ ಮಳೆ ಇಡೀ ಮದುವೆಯನ್ನೇ ಅಲ್ಲೋಲ ಕಲ್ಲೋಲ ಮಾಡಿ ಅಶುಭವಾಗಿದ್ದನ್ನೂ ನೋಡಿದ್ದೇನೆ.
ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ !
ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು.
ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ?
ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರಸ್ವಾಮಿ ಪಟ್ಟಾಭಿಷೇಕದ ಜೊತೆ ಹೋಲಿಸಿ ನೋಡಿದರೆ.. ಕುಮಾರಸ್ವಾಮಿ ಅವರಿಂದ ಒಳ್ಳೆಯದು ಆಗುವವರಿಗೆ ಮಳೆ ಬಂದುದು ಶುಭ ಸೂಚಕವೂ ಕೆಟ್ಟದು ಆಗುವವರಿಗೆ ( ಇಲ್ಲಿ ಕೆಟ್ಟದು ಅಂದರೆ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದು ) ಅಶುಭ ಸೂಚಕವೂ ಆಯ್ತಲ್ಲ !?
ಅಥವಾ ಕುಮಾರಸ್ವಾಮಿ ಕೆಟ್ಟದಾಗಿ ಆಡಳಿತ ಮಾಡುವ ಮೂಲಕ ಜನರಿಗೆ ತೊಂದರೆ ಕೊಟ್ಟರೆ ? ಅದು ಬಿಜೆಪಿಗೆ ಲಾಭವಾಗಲಿದೆ ಅಲ್ಲವೇ ? ಆಗ ಈಗಿನ ಶುಭ ಅಶುಭಾಗಳು ಅದಲು ಬದಲಾಗುತ್ತವೆ.
ಹಾಗೆಯೇ ಒಂದು ಮಳೆಯನ್ನು ಶುಭ, ಅಶುಭ ಅಂತೆಲ್ಲ ಹೇಳುವುದು ಮೂರ್ಖತನ. ಮದುವೆ ನಡೆವಾಗ ಸಣ್ಣದಾಗಿ ಮಳೆ ಬಂದರೆ ಆಗಲೂ ಶುಭ ಸೂಚನೆ ಅನ್ನುತ್ತಾರೆ. ಆದರೆ ಅದೇ ಮದುವೆ ಸಮಯದಲ್ಲಿ ಬಂದ ಮಳೆ ಇಡೀ ಮದುವೆಯನ್ನೇ ಅಲ್ಲೋಲ ಕಲ್ಲೋಲ ಮಾಡಿ ಅಶುಭವಾಗಿದ್ದನ್ನೂ ನೋಡಿದ್ದೇನೆ.
ಮಳೆಯನ್ನೇ ನಂಬಿರುವ ರೈತನಿಗೆ ಸಕಾಲದಲ್ಲಿ ಮಳೆ ಬಿದ್ದರೆ ಅದು ಶುಭ, ತೆನೆ ಹೊತ್ತು ನಿಂತ ಪೈರಿನ ಮೇಲೆ ಅದೇ ಮಳೆ ಬಿದ್ದರೆ ಬೆಳೆ ನಾಶವಾಗಿ ಅಶುಭವಾಗುತ್ತದೆ.
ಹಾಗಾಗಿ ಮೂರನೇ ಗುಂಪಿನ ನಮ್ಮ ವಾದ ಏನೆಂದರೆ ಮಳೆ ಬೀಳುವುದು ಪ್ರಕೃತಿಯ ಒಂದು ಕ್ರಿಯೆ. ಅದು ಮನುಶ್ಯರು ಏನು ಮಾಡುತ್ತಿದ್ದಾರೆ ? ಅವರು ಒಳ್ಳೆಯವರಾ ಕೆಟ್ಟವರಾ, ಈಗ ನಾನು ಹೋಗಿ ಏನು ಸೂಚನೆ ಕೊಡಲಿ ಎಂದೆಲ್ಲಾ ಯೋಚಿಸಿ ಬರುವುದಿಲ್ಲ. ಹವಾಮಾನ ಮೋಡ ಎಲ್ಲವೂ ಸರಿಯಾಗಿ ಹೊಂದಿಕೆ ಆಯ್ತು ಅಂದರೆ ಮಳೆ ಬೀಳುತ್ತದೆ ಅಷ್ಟೇ. ಅದಕ್ಕೆ ಹೋಗಿ ಶುಭ, ಅಶುಭಾಗಳ ಲೇಬಲ್ ಹಚ್ಚಿ ಜನರನ್ನು ಗೊಂದಲ ಗೊಳಿಸುವದು ಬೇಡ.
ಕಾಮೆಂಟ್ಗಳು