ವಿಷಯಕ್ಕೆ ಹೋಗಿ

ಮಳೆ ಶುಭವೋ ಅಶುಭವೋ ?

ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು.
ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ !
ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು.
ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ?
ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರಸ್ವಾಮಿ ಪಟ್ಟಾಭಿಷೇಕದ ಜೊತೆ ಹೋಲಿಸಿ ನೋಡಿದರೆ.. ಕುಮಾರಸ್ವಾಮಿ ಅವರಿಂದ ಒಳ್ಳೆಯದು ಆಗುವವರಿಗೆ ಮಳೆ ಬಂದುದು ಶುಭ ಸೂಚಕವೂ ಕೆಟ್ಟದು ಆಗುವವರಿಗೆ ( ಇಲ್ಲಿ ಕೆಟ್ಟದು ಅಂದರೆ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದು ) ಅಶುಭ ಸೂಚಕವೂ ಆಯ್ತಲ್ಲ !?
ಅಥವಾ ಕುಮಾರಸ್ವಾಮಿ ಕೆಟ್ಟದಾಗಿ ಆಡಳಿತ ಮಾಡುವ ಮೂಲಕ ಜನರಿಗೆ ತೊಂದರೆ ಕೊಟ್ಟರೆ ? ಅದು ಬಿಜೆಪಿಗೆ ಲಾಭವಾಗಲಿದೆ ಅಲ್ಲವೇ ? ಆಗ ಈಗಿನ ಶುಭ ಅಶುಭಾಗಳು ಅದಲು ಬದಲಾಗುತ್ತವೆ.
ಹಾಗೆಯೇ ಒಂದು ಮಳೆಯನ್ನು ಶುಭ, ಅಶುಭ ಅಂತೆಲ್ಲ ಹೇಳುವುದು ಮೂರ್ಖತನ. ಮದುವೆ ನಡೆವಾಗ ಸಣ್ಣದಾಗಿ ಮಳೆ ಬಂದರೆ ಆಗಲೂ ಶುಭ ಸೂಚನೆ ಅನ್ನುತ್ತಾರೆ. ಆದರೆ ಅದೇ ಮದುವೆ ಸಮಯದಲ್ಲಿ ಬಂದ ಮಳೆ ಇಡೀ ಮದುವೆಯನ್ನೇ ಅಲ್ಲೋಲ ಕಲ್ಲೋಲ ಮಾಡಿ ಅಶುಭವಾಗಿದ್ದನ್ನೂ ನೋಡಿದ್ದೇನೆ. 
ಮಳೆಯನ್ನೇ ನಂಬಿರುವ ರೈತನಿಗೆ ಸಕಾಲದಲ್ಲಿ ಮಳೆ ಬಿದ್ದರೆ ಅದು ಶುಭ, ತೆನೆ ಹೊತ್ತು ನಿಂತ ಪೈರಿನ ಮೇಲೆ ಅದೇ ಮಳೆ ಬಿದ್ದರೆ ಬೆಳೆ ನಾಶವಾಗಿ ಅಶುಭವಾಗುತ್ತದೆ.

ಹಾಗಾಗಿ ಮೂರನೇ ಗುಂಪಿನ ನಮ್ಮ ವಾದ ಏನೆಂದರೆ ಮಳೆ ಬೀಳುವುದು ಪ್ರಕೃತಿಯ ಒಂದು ಕ್ರಿಯೆ. ಅದು ಮನುಶ್ಯರು ಏನು ಮಾಡುತ್ತಿದ್ದಾರೆ ? ಅವರು ಒಳ್ಳೆಯವರಾ ಕೆಟ್ಟವರಾ, ಈಗ ನಾನು ಹೋಗಿ ಏನು ಸೂಚನೆ ಕೊಡಲಿ ಎಂದೆಲ್ಲಾ ಯೋಚಿಸಿ ಬರುವುದಿಲ್ಲ. ಹವಾಮಾನ ಮೋಡ ಎಲ್ಲವೂ ಸರಿಯಾಗಿ ಹೊಂದಿಕೆ ಆಯ್ತು ಅಂದರೆ ಮಳೆ ಬೀಳುತ್ತದೆ ಅಷ್ಟೇ. ಅದಕ್ಕೆ ಹೋಗಿ ಶುಭ, ಅಶುಭಾಗಳ ಲೇಬಲ್ ಹಚ್ಚಿ ಜನರನ್ನು ಗೊಂದಲ ಗೊಳಿಸುವದು ಬೇಡ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...