ವಿಷಯಕ್ಕೆ ಹೋಗಿ

ಗುಬ್ಬಿ ಗೂಡು ಮತ್ತು ಅನಾಥ ಮರಿ !



ಆಗ ನಾನು ಕುಂಬಳಗೊಡಿನ ಪೆಪ್ಸಿ ಕಂಪನಿಯ ಸಮೀಪ ಮನೆ ಮಾಡಿಕೊಂಡಿದ್ದೆ. ಆ ಮನೆಯ ಹೊರಗಿನ ಒಂದು ಮೂಲೆಯಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ಇದ್ದವು. ಅವು ಮೊಟ್ಟೆ ಇಟ್ಟು ಮರಿಯನ್ನೂ ಮಾಡಿದವು. ಅದೇ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೆ ಇದ್ದ ನನ್ನ ಗೆಳೆಯನ ಮೆಯವರು ಅವರ ಗೋಡೌನ್‌ ಸ್ವಚ್ಚ ಮಾಡುವಾಗ ಅಲ್ಲಿಯೂ ಒಂದು ಗುಬ್ಬಿ ಗೂಡು ಇದ್ದು, ಅದರಲ್ಲೂ ಎರಡು ಮರಿಗಳು ಇದ್ದವು. ಆದರೆ ಅವರು ನೋಡದೇ ಎಳೆದು ಹಾಕಿದ್ದರಿಂದ ಬಿದ್ದು ಒಂದು ಮರಿ ಸತ್ತು ಹೋಗಿ ಮತ್ತೊಂದು ಮರಿ ಮಾತ್ರ ಉಳಿಯಿತು. ಅದನ್ನು ಅವನು ತಂದು ನನಗೆ ಕೊಟ್ಟ. ನಾನದನ್ನು ನಮ್ಮ ಮನೆಯಲ್ಲಿ ಇದ್ದ ಗುಬ್ಬಿ ಗೂಡಿನ ಒಳಗೆ ಇದನ್ನೂ ಬಿಟ್ಟೆ. ಮೂರೂ ಮರಿಗಳೂ ಒಂದೇ ತರ ಇದ್ದವು. ಮೂರೂ ಕಣ್ಣು ಕೂಡಾ ಬಿಟ್ಟಿರಲಿಲ್ಲ.

ಆದರೆ ಹೊರಗೆ ಹೋಗಿದ್ದ ತಾಯಿ ಗುಬ್ಬಿ ಬಂದು ತನ್ನ ಮರಿಗಳ ಜೊತೆ ಬೇರೆ ಮರಿಯೊಂದು ಇರುವುದನ್ನು ಹೇಗೋ ಗುರುತಿಸಿ ಅದನ್ನು ಎಳೆದು ಹೊರಗೆ ಹಾಕಿತು. ಅದು ಹೀಗೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ನಾನು ಆ ಗೂಡಿನ ನೇರಕ್ಕೆ ಗೋಣಿಚೀಲಗಳನ್ನೆಲಾ ಹಾಕಿ ಮೆತ್ತೆ ಮಾಡಿ ಇಟ್ಟಿದ್ದೆ, ಮರಿ ಬಿದ್ದರೂ ಏನೂ ಆಗಬಾರದು ಅಂತ. ತಾಯಿ ಗುಬ್ಬಿ ಹೊರಗೆ ಹೋದಾಗ ಮತ್ತೆ ಆ ಮರಿಯನ್ನು ಗೂಡಿನೊಳಗೆ ಬಿಟ್ಟರೂ ಮತ್ತೊಮ್ಮೆ ಬಂದಾಗ ಮತ್ತೆ ಹೊರಗೆ ತಳ್ಳಿತು.

ಬೇರೆ ದಾರಿ ಕಾಣದೇ ಅನಾಥ ಮರಿಯನ್ನು ತಂದು ಮನೆಯ ಒಳಗೆ ಒಂದು ಮೂಲೆಯಲ್ಲಿ ಗೂಣಿಚೀಲವನ್ನೇ ಗೂಡಿನಂತೆ ಮಾಡಿ ನೀರು ಕುಡಿಸಿ ಮರಿಯನ್ನು ಅಲ್ಲಿ ಬಿಟ್ಟೆ. ಆದರೆ ಆ ಮರಿ ಒಂದೇ ಸಮನೆ ಚಿಂವ್ ಚಿಂವ್‌ ಎಂದು ಕೂಗು ಹಾಕುತ್ತಿತ್ತು.

ಏನೂ ಮಾಡಲೂ ತೋಚದೇ ನನ್ನಷ್ಟಕ್ಕೆ ನಾನು ಪುಸ್ತಕ ಓದುತ್ತ ಕುಳಿತಿದ್ದೆ. ಈ ಅನಾಥ ಮರಿಯ ಕೂಗನ್ನು ಕೇಳಿದ ಹೊರಗಿನ ಗುಬ್ಬಿ ನಿಧಾನಕ್ಕೆ ಒಳಗೆ ಬಂದು ಈ ಮರಿಯನ್ನು ನೋಡಿಕೊಂಡು ಹಾರಿ ಹೋಯ್ತು. ಮತ್ತೆ ಸ್ವಲ್ಪ ಹೊತ್ತಿಗೆ ಹೊರಗಿನಿಂದ ಹಾರಿ ಬಂದು ಮರಿಯ ಬಳಿ ಹೋಯ್ತು. ನೋಡಿದರೆ ತಾಯಿ ಗುಬ್ಬಿಯ ಬಾಯಲ್ಲಿ ಒಂದು ಹುಳವಿದೆ ! ಅದನ್ನು ಈ ಮರಿಗೆ ತಿನ್ನಿಸಿ ಮತ್ತೆ ಹಾರಿ ಹೋಯ್ತ. ಆಮೇಲೆ ಗೂಡಿನ್ಲಿನ ತನ್ನ ಮಾರಿಗಳಿಗೆ ಆಹಾರ ತಂದು ಕೊಡುವುದರ ಜೊತೆಗೆ ಈ ಮರಿಗೂ ಆಹಾರ ತಂದು ಕೊಡಲು ಶುರು ಮಾಡಿತು. ಒಂದೆರಡು ದಿನ ಕಳೆದಾಗ ಈ ಮರಿಯನ್ನು ಈಗ ಅದು ತನ್ನ ಮರಿಯಂತೆಯೇ ಸ್ವೀಕರಿಸಿದೆ ಎಂದು ತಿಳಿದುಕೊಂಡ ನಾನು ಮತ್ತೆ ಇದನ್ನು ಆ ಗೂಡಿನಲ್ಲಿ ಬಿಟ್ಟೆನು. ಗೂಡಿಗೆ ಮರಳಿದ ತಾಯಿ ಗುಬ್ಬಿ ಅದನ್ನು ಒಪ್ಪದೇ ಮತ್ತೆ ಎಳೆದು ಹೊರಗೆ ಹಾಕಿತು. ಸರಿ ಎಂದು ತಂದು ಗೋಣಿಚೀಲದ ಗೂಡಿನಲ್ಲೇ ಆ ಮರಿಯನ್ನು ಬಿಟ್ಟೆ. ಆ ತಾಯಿ ಗುಬ್ಬಿ ಆಹಾರ ಕೊಡುವುದನ್ನು ಮುಂದುವರಿಸಿತು. ಯಾಕೆ ತನ್ನ ಗೂಡಿನಲ್ಲಿ ಈ ಅನಾಥ ಮರಿಯನ್ನು ಸೇರಿಸಲಿಲ್ಲ ಅನ್ನೋದು ನನಗೆ ಗೊತ್ತಾಗಲಿಲ್ಲ. ಆದರೆ ಈ ಮರಿಯ ಕೂಗಾಟ ಕೇಳಿ ಆಹಾರ ತಂದು ಕೊಡುವುದನ್ನು ಮಾತ್ರ ಅದು ಬಿಡಲಿಲ್ಲ.

ಈ ನಡುವೆ ಈ ಅನಾಥ ಮರಿ ಸ್ವಲ್ಪ ದಿನದಲ್ಲಿ ಖಾಯಿಲೆ ಬಿದ್ದು ಒಂದೆರಡು ದಿನಕ್ಕೇ ಸತ್ತೂ ಹೋಯಿತು. ಆ ಮರಿ ಸತ್ತ ಒಂದೆರಡು ದಿನಗಳ ವರೆಗೆ ತಾಯಿ ಗುಬ್ಬಿ ಒಳಗೆ ಬಂದು ಅನಾಥ ಮರಿ ಇದ್ದ ಜಾಗವನ್ನು ನೋಡಿಕೊಂಡು ಹೋಗುತ್ತಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...