ಕೊನೆಗೂ ರಾಜ್ಯಪಾಲರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಭ್ರಷ್ಟ ಮುಖ್ಯಮಂತ್ರಿಯೊಬ್ಬನ ಮೇಲೆ ಮೊಖದ್ದಮೆ ದಾಖಲಿಸಲು ಅವಕಾಶ ಕೊಟ್ಟು ಕರ್ನಾಟಕದ ಮಟ್ಟಿಗೆ ಇತಿಹಾಸ ಬರೆದಿದ್ದಾರೆ. ಅಧಿಕಾರದಲ್ಲಿರುವಾಗಲೇ ಮೊಖದ್ದಮೆ ಎದುರಿಸುತ್ತಿರುವ ಎರಡನೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಇಂಥಹುದೊಂದು ಧೈರ್ಯದ ಕೆಲಸಕ್ಕೆ ಕೈ ಹಾಕಿದ ಇಬ್ಬರು ನ್ಯಾಯವಾದಿಗಳಿಗೆ ಜಯವಾಗಲಿ. ಅವರು ಮೊಖದ್ದಮೆ ದಾಖಲಿಸಲಿ, ನ್ಯಾಯಾಲಯದಲ್ಲಿ ಯಡ್ಡಿ ಹಗರಣ ಮಾಡಿರುವುದು ನಿರೂಪಿತವಾದರೆ ಈ ಮನುಷ್ಯ ಜೈಲಿಗೆ ಹೋಗಲಿ. ಅದು ಉಳಿದ ರಾಜಕಾರಣಿಗಳಿಗೂ ಪಾಠವಾಗಲಿ. ರಾಜ್ಯ ಉದ್ಧಾರವಾಗಲಿ.
ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಹಗರಣಗಳಿಗೆ ಎಲ್ಲಿ ಶಿಕ್ಷೆಯಾಗಿ ಹೋಗುತ್ತೋ ಎಂಬ ಭಯದಲ್ಲಿ ತೊಳಲಾಡುತ್ತಿರುವುದು ಗೋಚರವಾಗುತ್ತಿದೆ. ಹಾಗಾಗಿಯೇ ರಾಜ್ಯಪಾಲರ ವಿರುದ್ಧ "ರಾಜ್ಯ ಬಂದ್"ಗೆ ಕರೆ ಕೊಟ್ಟಿದ್ದಾರೆ. ಆದರೆ ಇದರಿಂದ ಆಗುವ ನಷ್ಟ ಇವರಪ್ಪ ತುಂಬಿ ಕೊಡ್ತಾರಾ? ಅಥವಾ ಬಿಜೆಪಿ ತುಂಬಿ ಕೊಡುತ್ತಾ ? ಬಹಳಷ್ಟು ಕಡೆ ಕಲ್ಲು ತೂರಾಟ ನಡೆಯುತ್ತಿದೆ. ಬಸ್ಗಳು ಇಲ್ಲ. ಪೊಲೀಸರೇ ಬಂದ್ ನಡೆಸುತ್ತಿದ್ದಾರೆ. ಶಾಲಾ ಕಾಲೇಜು ರಜೆ. ನನ್ನದೇ ಒಂದು ಮುಖ್ಯವಾದ ಕೆಲಸಕ್ಕೆ ಪ್ರಮುಖ ಟೆಕ್ನಿಷಿಯನ್ ಒಬ್ಬರು ಇಂದು ತಮ್ಮ ಸಮಯ ನೀಡಿದ್ದರು. ಬಂದ್ನಿಂದ ಆ ಕೆಲಸ ನಿಂತು ಹೋಯ್ತು. ಅವರು ಇನ್ನು ಸಿಗುವುದು ಯಾವತ್ತೋ? ಒಂದೋ ಅವರಿಗಾಗಿ ಕಾದು ನನ್ನ ಸಮಯ ಹಾಳು ಮಾಡಿಕೊಳ್ಳಬೇಕು, ಅಥವಾ ಬೇರೆ ಯಾರಿಂದಲಾದರೂ ಆ ಕೆಲಸ ಮಾಡಿಸಿ ಗುಣಮಟ್ಟವಿಲ್ಲದೇ ನಷ್ಟ ಮಾಡಿಕೊಳ್ಳಬೇಕು. ಅದನ್ನು ಈ ಬಡ್ಡೀಮಗ ಯಡ್ಡಿ ತುಂಬಿ ಕೊಡುತ್ತಾನಾ?
ಈ ಹಾಳು ರಾಜಕಾರಣಿಗಳು ದೇಶವನ್ನು ರಾಜ್ಯವನ್ನು ಉದ್ಧಾರ ಮಾಡುವುದು ಅಷ್ಟರಲ್ಲೇ ಇದೆ. ಇವರಿಮದ ದೇಶ ದುರ್ಗತಿ ಹೊಂದುತ್ತಿದೆಯೇ ಹೊರತೂ ಉದ್ದಾರವಂತೂ ಆಗುತ್ತಿಲ್ಲ. ರಾಜ್ಯ ಬಂದ್ಗೆ ಕರೆ ಕೊಡಲು ರಾಜ್ಯವೇನು ಇವರಪ್ಪನ ಮನೆ ಆಸ್ತಿಯಾ?
ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಹಗರಣಗಳಿಗೆ ಎಲ್ಲಿ ಶಿಕ್ಷೆಯಾಗಿ ಹೋಗುತ್ತೋ ಎಂಬ ಭಯದಲ್ಲಿ ತೊಳಲಾಡುತ್ತಿರುವುದು ಗೋಚರವಾಗುತ್ತಿದೆ. ಹಾಗಾಗಿಯೇ ರಾಜ್ಯಪಾಲರ ವಿರುದ್ಧ "ರಾಜ್ಯ ಬಂದ್"ಗೆ ಕರೆ ಕೊಟ್ಟಿದ್ದಾರೆ. ಆದರೆ ಇದರಿಂದ ಆಗುವ ನಷ್ಟ ಇವರಪ್ಪ ತುಂಬಿ ಕೊಡ್ತಾರಾ? ಅಥವಾ ಬಿಜೆಪಿ ತುಂಬಿ ಕೊಡುತ್ತಾ ? ಬಹಳಷ್ಟು ಕಡೆ ಕಲ್ಲು ತೂರಾಟ ನಡೆಯುತ್ತಿದೆ. ಬಸ್ಗಳು ಇಲ್ಲ. ಪೊಲೀಸರೇ ಬಂದ್ ನಡೆಸುತ್ತಿದ್ದಾರೆ. ಶಾಲಾ ಕಾಲೇಜು ರಜೆ. ನನ್ನದೇ ಒಂದು ಮುಖ್ಯವಾದ ಕೆಲಸಕ್ಕೆ ಪ್ರಮುಖ ಟೆಕ್ನಿಷಿಯನ್ ಒಬ್ಬರು ಇಂದು ತಮ್ಮ ಸಮಯ ನೀಡಿದ್ದರು. ಬಂದ್ನಿಂದ ಆ ಕೆಲಸ ನಿಂತು ಹೋಯ್ತು. ಅವರು ಇನ್ನು ಸಿಗುವುದು ಯಾವತ್ತೋ? ಒಂದೋ ಅವರಿಗಾಗಿ ಕಾದು ನನ್ನ ಸಮಯ ಹಾಳು ಮಾಡಿಕೊಳ್ಳಬೇಕು, ಅಥವಾ ಬೇರೆ ಯಾರಿಂದಲಾದರೂ ಆ ಕೆಲಸ ಮಾಡಿಸಿ ಗುಣಮಟ್ಟವಿಲ್ಲದೇ ನಷ್ಟ ಮಾಡಿಕೊಳ್ಳಬೇಕು. ಅದನ್ನು ಈ ಬಡ್ಡೀಮಗ ಯಡ್ಡಿ ತುಂಬಿ ಕೊಡುತ್ತಾನಾ?
ಈ ಹಾಳು ರಾಜಕಾರಣಿಗಳು ದೇಶವನ್ನು ರಾಜ್ಯವನ್ನು ಉದ್ಧಾರ ಮಾಡುವುದು ಅಷ್ಟರಲ್ಲೇ ಇದೆ. ಇವರಿಮದ ದೇಶ ದುರ್ಗತಿ ಹೊಂದುತ್ತಿದೆಯೇ ಹೊರತೂ ಉದ್ದಾರವಂತೂ ಆಗುತ್ತಿಲ್ಲ. ರಾಜ್ಯ ಬಂದ್ಗೆ ಕರೆ ಕೊಡಲು ರಾಜ್ಯವೇನು ಇವರಪ್ಪನ ಮನೆ ಆಸ್ತಿಯಾ?
ಕಾಮೆಂಟ್ಗಳು