ಮೊನ್ನೆ ಇಸ್ಕಾನ್ ದೇವಸ್ಥಾನಕ್ಕೆ ಗೆಳೆಯರೊಂದಿಗೆ ಅನಿವಾರ್ಯವಾಗಿ ಹೋಗಬೇಕಾಗಿ ಬಂತು. ದ್ವಾರದಲ್ಲೇ ಮೆಟೆಲ್ ಡಿಟೆಕ್ಟರ್ನಿಂದ ಪರಿಶೀಲನೆ ನಂತರ ಒಳ ಪ್ರವೇಶಿಸಿ, ಮುಂದೆ ನಡೆದಾಗ ಒಬ್ಬರು ಕರೆದು ನಾಲ್ಕೈದು ಜನರಿಗಾಗಿ ಇರುವ ಟಿಕೇಟೊಂದರ "ಆಫರ್" ಬಗ್ಗೆ ಹೇಳಿದರು.
ನಂತರ ಒಳಗೆ ಹೋದಾಗ ಅಲ್ಲಲ್ಲಿ "ಜೇಬುಗಳ್ಳರಿದ್ದಾರೆ ಎಚ್ಚರಿಕೆ" ಎಂಬ ಫಲಕ ಕಾಣಿಸಿತು. ದೇವರ ದಶ್ನ ಮುಗಿಸಿ ಹೊರ ಬರುತ್ತಿರುವಾಗ ಎದುರಾಯ್ತು, ಜನ ಜಂಗುಳಿಯ ಒಂದು ವರಾಂಡ. ಅದು ಥೇಟ್ ಚಿಕ್ಕದೊಂದು ಮಾಲ್ನಂತೆಯೇ ಇತ್ತು. ಅಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾರುತ್ತಿದ್ದರು. ಬೇಕರಿ ಇತ್ತು. ಪಾನೀಪೂರಿಯಿಂದ ಹಿಡಿದು ತಂಪು ಪಾನೀಯಗಳ ವರೆಗೆ ಎಲ್ಲಾ ದೊರೆಯುತ್ತಿದ್ದವು. ಅವುಗಳನ್ನು ಜನ ಮುಗಿಬಿದ್ದು ಖರೀದಿಸಿ ತಿನ್ನುತ್ತಿದ್ದರು. ಜಾಗವೇ ಇರದಷ್ಟು ಜನ ಸಂದಣಿ. ಅದು ದೇವಸ್ಥಾನದ ಆವರಣ ಅನ್ನುವ ಯಾವ ಛಾಯೆಯೂ ಅಲ್ಲಿರಲಿಲ್ಲ. ಯಾವುದೋ ಫುಟ್ಪಾತ್ ಹೋಟೆಲುಗಳ ಸಂದಿಯಲ್ಲಿ ನಾವಿರುವಂತೆ ಕಂಡು ಬಂತು. ಮೇಲಾಗಿ ಅಲ್ಲಿ ಯಲ್ಲಾ ವಸ್ತುಗಳ ಬೆಲೆಯೂ ತುಂಬಾ ದುಬಾರಿಯಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಆ ಆವರಣದಿಮದ ಹೊರಗೆ ಬಂದಾಗ ಉಚಿತವಾಗಿ ಬಿಸಿಬೇಳೆ ಬಾತ್ ವಿತರಿಸುತ್ತಿದ್ದರು. ಒಳಗೆ ಹಣ ತೆತ್ತು ಹೊಟ್ಟೆ ತುಂಬಿಸಿಕೊಂಡು ಬಂದಿರುವ ಬಹುತೇಕ ಮಂದಿ ಇಲ್ಲಿ ಇದನ್ನು ಪಡೆಯುತ್ತಿರಲಿಲ್ಲ.
ಅಂತೂ ಹೊರಗೆ ಬಂದಾಗ ಮೂಡಿದ ಒಂದೇ ಪ್ರಶ್ನೆ ...
"ಆ ಜೇಬುಗಳ್ಳರು ಯಾರು ???"
ನಂತರ ಒಳಗೆ ಹೋದಾಗ ಅಲ್ಲಲ್ಲಿ "ಜೇಬುಗಳ್ಳರಿದ್ದಾರೆ ಎಚ್ಚರಿಕೆ" ಎಂಬ ಫಲಕ ಕಾಣಿಸಿತು. ದೇವರ ದಶ್ನ ಮುಗಿಸಿ ಹೊರ ಬರುತ್ತಿರುವಾಗ ಎದುರಾಯ್ತು, ಜನ ಜಂಗುಳಿಯ ಒಂದು ವರಾಂಡ. ಅದು ಥೇಟ್ ಚಿಕ್ಕದೊಂದು ಮಾಲ್ನಂತೆಯೇ ಇತ್ತು. ಅಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾರುತ್ತಿದ್ದರು. ಬೇಕರಿ ಇತ್ತು. ಪಾನೀಪೂರಿಯಿಂದ ಹಿಡಿದು ತಂಪು ಪಾನೀಯಗಳ ವರೆಗೆ ಎಲ್ಲಾ ದೊರೆಯುತ್ತಿದ್ದವು. ಅವುಗಳನ್ನು ಜನ ಮುಗಿಬಿದ್ದು ಖರೀದಿಸಿ ತಿನ್ನುತ್ತಿದ್ದರು. ಜಾಗವೇ ಇರದಷ್ಟು ಜನ ಸಂದಣಿ. ಅದು ದೇವಸ್ಥಾನದ ಆವರಣ ಅನ್ನುವ ಯಾವ ಛಾಯೆಯೂ ಅಲ್ಲಿರಲಿಲ್ಲ. ಯಾವುದೋ ಫುಟ್ಪಾತ್ ಹೋಟೆಲುಗಳ ಸಂದಿಯಲ್ಲಿ ನಾವಿರುವಂತೆ ಕಂಡು ಬಂತು. ಮೇಲಾಗಿ ಅಲ್ಲಿ ಯಲ್ಲಾ ವಸ್ತುಗಳ ಬೆಲೆಯೂ ತುಂಬಾ ದುಬಾರಿಯಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಆ ಆವರಣದಿಮದ ಹೊರಗೆ ಬಂದಾಗ ಉಚಿತವಾಗಿ ಬಿಸಿಬೇಳೆ ಬಾತ್ ವಿತರಿಸುತ್ತಿದ್ದರು. ಒಳಗೆ ಹಣ ತೆತ್ತು ಹೊಟ್ಟೆ ತುಂಬಿಸಿಕೊಂಡು ಬಂದಿರುವ ಬಹುತೇಕ ಮಂದಿ ಇಲ್ಲಿ ಇದನ್ನು ಪಡೆಯುತ್ತಿರಲಿಲ್ಲ.
ಅಂತೂ ಹೊರಗೆ ಬಂದಾಗ ಮೂಡಿದ ಒಂದೇ ಪ್ರಶ್ನೆ ...
"ಆ ಜೇಬುಗಳ್ಳರು ಯಾರು ???"

ಕಾಮೆಂಟ್ಗಳು