ನನಗೆ ಹೀಗನ್ನಿಸಿದ್ದು ಸುಳ್ಳಲ್ಲ. ಕನ್ನಡಪ್ರಭದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹಿಂದಿನ ವಿಜಯ ಕರ್ನಾಟಕ ತೊರೆದಾದ ನಂತರ ತಮ್ಮ ಬಿಡುವಿನ ಸಮಯದಲ್ಲಿ ಬಹುಶಃ ತಮ್ಮ ಬರವಣಿಗೆಯನ್ನು ಜಾರಿಯಲ್ಲಿಡಲು ಅಂತಲೇ ಇರಬಹುದು, ತಮ್ಮದೇ ಒಂದು ಜಾಲತಾಣ [ http://vbhat.in/ ] ಶುರು ಮಾಡಿದ್ದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಚೆನ್ನಾಗಿ ಬರೆಯುತ್ತಾರೆಂಬುದು ರಾಜ್ಯಕ್ಕೆಲ್ಲಾ ಗೊತ್ತಿದೆ. ಆದರೆ ಅವರ ಜಾಲತಾಣದಲ್ಲಿ ಅವರ ಲೇಖನ / ಬರಹಗಳನ್ನು ಹೊಗಳಿ ಪ್ರತಿಕ್ರಿಯೆ ನೀಡಿದರೆ, ಬೇರೆಯವರನ್ನು ತೆಗಳಿ ಪ್ರಶ್ನೆ ಕೇಳಿದರೆ ಅವೆಲ್ಲಾ ಅಲ್ಲಿ ಪ್ರಕಟವಾಗುತ್ತವೆ. [ ಕೇಳ್ರಪ್ಪೋ ಕೇಳಿಯಲ್ಲಿ ಬೇರೆಯವರ ತೆಗಳಿಕೆಯೇ ಮುಖ್ಯ ವಸ್ತು ] ಆದರೆ ಅಪ್ಪಿ ತಪ್ಪಿ ನೀವೇನಾದರೂ "ಭಟ್ರೇ ನಿಮ್ಮ ಈ ಲೇಖನ / ಬರಹ ನನಗೆ ಇಷ್ಟವಾಗಲಿಲ್ಲ" ಅಂತೇನಾದರೂ ಪ್ರತಿಕ್ರಿಯೆ ಕೊಟ್ಟರೆ ಅದನ್ನವರು ಪ್ರಕಟಿಸುವುದೇ ಇಲ್ಲ! ಇದು ನಾನು ಸ್ವತಃ ನೋಡಿರುವ ವಿಷಯ.
ಅಂದರೆ ಇದರರ್ಥ ಭಟ್ಟರಿಗೆ ಬರೇ ಮುಖಸ್ತುತಿ ಮಾಡುವವರು ಬೇಕು, ವಿಮರ್ಶಿಸುವವರು ಬೇಕಾಗಿಲ್ಲ. ಇವರು ಬರೆಯುವುದೆಲ್ಲಾ ಎಲ್ಲರಿಗೂ ಇಷ್ಟವಾಗಬೇಕು ಅನ್ನುವುದು ಇವರ ಆಸೆಯೋ, ಅಥವಾ ತಮ್ಮ ಬರಹವನ್ನು ಇಷ್ಟ ಪಡದವರು ಬಾಯಿಯನ್ನೇ ಬಿಡಬಾರದು ಅನ್ನುವ ದುರಾಸೆಯೆಯೋ ಏನೋ. ಒಟ್ಟಿನಲ್ಲಿ ಭಟ್ಟರು ಹೊಗಳುಭಟ್ಟರ ಪಡೆ ಕಟ್ಟಲು ಹೊರಟಿದ್ದಾರೆಂದಾಯ್ತು.
ಅಂದರೆ ಇದರರ್ಥ ಭಟ್ಟರಿಗೆ ಬರೇ ಮುಖಸ್ತುತಿ ಮಾಡುವವರು ಬೇಕು, ವಿಮರ್ಶಿಸುವವರು ಬೇಕಾಗಿಲ್ಲ. ಇವರು ಬರೆಯುವುದೆಲ್ಲಾ ಎಲ್ಲರಿಗೂ ಇಷ್ಟವಾಗಬೇಕು ಅನ್ನುವುದು ಇವರ ಆಸೆಯೋ, ಅಥವಾ ತಮ್ಮ ಬರಹವನ್ನು ಇಷ್ಟ ಪಡದವರು ಬಾಯಿಯನ್ನೇ ಬಿಡಬಾರದು ಅನ್ನುವ ದುರಾಸೆಯೆಯೋ ಏನೋ. ಒಟ್ಟಿನಲ್ಲಿ ಭಟ್ಟರು ಹೊಗಳುಭಟ್ಟರ ಪಡೆ ಕಟ್ಟಲು ಹೊರಟಿದ್ದಾರೆಂದಾಯ್ತು.
ಕಾಮೆಂಟ್ಗಳು