"ಜನಲೋಕಪಾಲ್" ಮಸೂದೆಗಾಗಿ ನವದೆಹಲಿಯ ಜಂತರ್ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಕೊನೆಗೂ ವಿಜಯ ಸಾಧಿಸಿದ ಅಣ್ಣಾ ಹಜಾರೆಯವರಿಗೆ ನಾವು ಧನ್ಯವಾದ ಅರ್ಪಿಸಲೇ ಬೇಕು. ದೇಶಾಧ್ಯಂತ ಜನರ ಬೆಂಬಲ ಅವರಿಗೆ ದೊರಕಿತು. ಇದು ಭ್ರಷ್ಟಾಚಾರಕ್ಕೆ ಜನ ಎಷ್ಟೊಂದು ಬೇಸತ್ತಿದ್ದಾರೆ ಎಂಬುದನ್ನು ತೋರಿಸಿತು. ಇನ್ನೊಂದು ಸಂತೋಷದ ಸಂಗತಿ ಎಂದರೆ ಜನಲೋಕಪಾಲ್ನ ಜಂಟಿ ಸದನ ಸಮಿತಿಯಲ್ಲಿ ನಮ್ಮ ಹೆಮ್ಮೆಯ ಲೋಕಾಯುಕ್ತ ಸಂತೋಷ್ ಹೆಗಡೆಯವರೂ ಸಹ ಇದ್ದಾರೆ. ಅಲ್ಲದೇ ಹೆಸರು ಕೆಡಿಸಿಕೊಳ್ಳದ ರಾಜಕಾರಣಿ ವೀರಪ್ಪ ಮೊಯಿಲಿ ಸಹ ಇದ್ದಾರೆ.
ಜನಲೋಕಪಾಲ್ ಕಾನೂನು ಪ್ರಕಾರ ಪ್ರಧಾನ ಮಂತ್ರಿಯನ್ನೂ ಸಹ ವಿಚಾರಣೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ. ಇದೊಂದು ಉತ್ತಮ ಬೆಳವಣಿಗೆ. ಅದೇ ರೀತಿ ಮುಖ್ಯಮಂತ್ರಿಯನ್ನೂ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಕೊಡಬೇಕು. ಅದಕ್ಕಾಗಿಯೂ ನಾವು ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಯುವ ಜನತೆ ಎಚ್ಚೆತ್ತುಕೊಂಡರೆ ಇದೂ ಸಹ ಸಾಧ್ಯ ಎನ್ನಬಹುದು. ಇಲ್ಲಿ ಗಮನಿಸಬೇಕಾದ ಅಂಶ ಯಡ್ಡಿ - ಅಶೋಕ್ರಂತಹ ಗೋಸುಂಬೆಗಳು "ಹಜಾರೆಯವರ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ" ಎಂದು ಹೇಳಿದ್ದಾರೆ. ಆದರೆ ತಮ್ಮ ಕಾಲ ಬುಡದಲ್ಲೇ ಲೋಕಾಯುಕ್ತಕ್ಕೆ ಅಧಿಕಾರ ಕೊಡುತ್ತಿಲ್ಲ. ಇಂತಹ ನಾಚಿಗೆ ಗೆಟ್ಟ ರಾಜಕಾರಣಿಗಳನ್ನು ಮೊದಲು ಒದ್ದು ಓಡಿಸಬೇಕಾಗಿದೆ.
ಜನಲೋಕಪಾಲ್ ಕಾನೂನು ಪ್ರಕಾರ ಪ್ರಧಾನ ಮಂತ್ರಿಯನ್ನೂ ಸಹ ವಿಚಾರಣೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ. ಇದೊಂದು ಉತ್ತಮ ಬೆಳವಣಿಗೆ. ಅದೇ ರೀತಿ ಮುಖ್ಯಮಂತ್ರಿಯನ್ನೂ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಕೊಡಬೇಕು. ಅದಕ್ಕಾಗಿಯೂ ನಾವು ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಯುವ ಜನತೆ ಎಚ್ಚೆತ್ತುಕೊಂಡರೆ ಇದೂ ಸಹ ಸಾಧ್ಯ ಎನ್ನಬಹುದು. ಇಲ್ಲಿ ಗಮನಿಸಬೇಕಾದ ಅಂಶ ಯಡ್ಡಿ - ಅಶೋಕ್ರಂತಹ ಗೋಸುಂಬೆಗಳು "ಹಜಾರೆಯವರ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ" ಎಂದು ಹೇಳಿದ್ದಾರೆ. ಆದರೆ ತಮ್ಮ ಕಾಲ ಬುಡದಲ್ಲೇ ಲೋಕಾಯುಕ್ತಕ್ಕೆ ಅಧಿಕಾರ ಕೊಡುತ್ತಿಲ್ಲ. ಇಂತಹ ನಾಚಿಗೆ ಗೆಟ್ಟ ರಾಜಕಾರಣಿಗಳನ್ನು ಮೊದಲು ಒದ್ದು ಓಡಿಸಬೇಕಾಗಿದೆ.
ಕಾಮೆಂಟ್ಗಳು