ವಿಷಯಕ್ಕೆ ಹೋಗಿ

ಕತ್ತಲಲ್ಲಿ ಕಾನೂನು... ವಕೀಲರ ಗೂಂಡಾಗಿರಿ !





ಇಂದು ವಕೀಲರು ಪತ್ರಕರ್ತರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಏಕೆಂದರೆ ಇದು ಮೊದಲೇನಲ್ಲ, ಕೊನೆಯೂ ಅಗುವುದಿಲ್ಲ. ಏಕೆಂದರೆ ನಮ್ಮ ವ್ಯವಸ್ಥೆ ಸದ್ದಿಲ್ಲದೇ ಹದಗೆಟ್ಟಿದೆ. ಒಳಗೊಳಗೇ ಕೊಳೆತಿರುವ ಈ ಸಮಾಜದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಇಂದು ವಕೀಲರು ಮಾಡಿದ್ದನ್ನು ನಾಳೆ ಪೊಲೀಸರು ಮಾಡಬಹುದು. ನಾಡಿದ್ದು ಇನ್ಯಾರೋ ಮಾಡಬಹದು. ಇದಕ್ಕೆಲ್ಲಾ ಕಾರಣಗಳು ಅನೇಕ... ಆದರೆ ಮೂಲ ಒಂದೇ... ವ್ಯವಸ್ಥೆ ಹದಗೆಟ್ಟಿದೆ.

ಇಲ್ಲಿ ಉತ್ತಮ ಸಮಜದ ನಿರ್ಮಾಣದ ಕನಸು ಕಾಣುವವರಿಗಿಂತಲೂ ಅಕ್ರಮ ಸಂಪಾದನೆಯ ಕನಸು ಕಾಣುತ್ತಿರುವವರೇ ಅಧಿಕ. ಹೀಗಾಗಿ ಸಮಾಜ ಘಾತುಕರ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದೆ. ಹಣ ಹೆಚ್ಚು ಹೇಗೆ ಬರುತ್ತೋ ಆ ಕಡೆಗೆ ಜನರ ಮನನ್ಸು ಒಲಿಯುತ್ತಿದೆ. ಇದಕ್ಕೆ ನ್ಯಾಯವಾದಿಗಳೇನೂ ಹೊರತಾಗಿಲ್ಲ. ಭ್ರಷ್ಟರೊಂದಿಗೆ ಕೈ ಜೋಡಿಸುತ್ತಿರುವ ಅನೇಕ ನ್ಯಾಯವಾದಿಗಳಿಗೆ ಸಹಜವಾಗಿಯೇ ’ಭ್ರಷ್ಟರಿಗೆ ದುಸ್ವಪ್ನವಾಗಿರುವ’ ಸುದ್ದಿ ವಾಹಿನಿಗಳ ಬಗ್ಗೆ ಆಕ್ರೋಶವಿದೆ. ಇದರ ಜೊತೆ ಜಾತಿ ರಾಜಕೀಯ ವಕೀಲರನ್ನು ಬಿಟ್ಟಿಲ್ಲ. ಯಡಿಯೂರಪ್ಪನನ್ನು ಬೆತ್ತಲು ಮಾಡಿ ಮಾನ ಕಳೆದ ಸುದ್ದಿ ವಾಹಿನಿಗಳ ಮೇಲೆ ಜಾತಿಯ ಕಾರಣಕ್ಕೇ ಸಿಟ್ಟುಗೊಂಡಿರುವವರಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿಯ ವಿಷಯದಲ್ಲೂ ನಡೆದಿದೆ. ಆತನ ಬಿಟ್ಟಿ ದುಡ್ಡು ತಿಂದ ಕೆಲವು ನ್ಯಾಯವಾದಿಗಳು ಇಂದು ಆತನ ಬಗ್ಗೆ ಹೆಚ್ಚೇ ಅನ್ನುವಷ್ಟು ಸುದ್ದಿ ಮಾಡ ಹೊರಟಿದ್ದ ಸುದ್ದಿ ವಾಹಿನಿಗಳ ಮೇಲೆ ಪ್ರಹಾರ ನಡೆಸಿರುವ ಸಾಧ್ಯತೆ ಹೆಚ್ಚಿದೆ. ಅಂದರೆ ವಕೀಲರು ಏನು ಮಾಡಿದರೂ ಜನ ಸಹಿಸಬೇಕು. ದಿನವಿಡೀ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು ರಸ್ತೆ ತಡೆ ನಡೆಸಿದರೂ ಅವರ ಮೇಲೆ ಕ್ರಮವಿಲ್ಲ.

ಯಾವುದೇ ಒಂದು ಗುಂಪುಗಾರಿಕೆ ಸಾಮಾಜಿಕವಾಗಿ ಒಳ್ಳೆಯದಲ್ಲ. ಜಾತಿ, ವೃತ್ತಿ ಗುಂಪುಗಾರಿಕೆಗಳು ಸದಾ ದೇಶಕ್ಕೆ ಮುಳುವಾಗಿಯೇ ಇವೆ. ನಾಯಕತ್ವ ವಹಿಸಿಕೊಂಡ ಅಲ್ಪಜ್ಞರು ಈ ಆಮಿಷಕ್ಕೆ ಒಳಗಾದರಂತೂ ಮುಗಿದೇ ಹೋಯ್ತು. ಇಡಿಯ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಲಿಂಗಾಯತ ಸಮಾಜವನ್ನು ಬೆನ್ನಿಗಿಟ್ಟುಕೊಂಡವರಂತೆ ಯಡಿಯೂರಪ್ಪ ಆಡಿದ್ದಕ್ಕೂ, ಇಡಿಯ ವಕೀಲ ವೃಂದವೇ ತಮ್ಮ ಹಿಂದಿದೆ ಎಂದು ಅಟ್ಟಹಾಸ ಮೇರೆದ ಇಂದಿನ ಕೆಲವು ದುಷ್ಟ ವಕೀಲರಿಗೂ ಯಾವುದೇ ವ್ಯತ್ಯಾಸ ಇಲ್ಲ. ಇವರ ಉದ್ದೇಶ ಒಂದೇ, ತಮ್ಮನ್ನು ಯಾರು ಪ್ರಶ್ನಿಸಬಾರದು. ತಮ್ಮ ಬಲ ಇಷ್ಟಿದೆ ಎಂದು ತೋರಿಸಿಕೊಳ್ಳುವುದು.

ಇದೆಲ್ಲ ಒಂದು ಕಡೆಗಾದರೆ ಕಾನೂನನ್ನು ಪಾಲಿಸಬೇಕಾಗಿದ್ದ ಪೊಲೀಸರನ್ನು ಕಟ್ಟಿ ಹಾಕಿದ್ದಾದರೂ ಯಾರು ? ಪೊಲೀಸ್ ಆಯುಕ್ತರೇ ? ಸರ್ಕಾರವೇ ? ಜನಾರ್ದನ ರೆಡ್ಡಿಯೇ ? ಬಿಜೆಪಿ ಸರ್ಕಾರ ಯಾಕೆ ಇಷ್ಟೊಂದು ನಿರ್ಲಜ್ಜ, ಬೇಜವಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ ? ಇನ್ನೂ ಯಾಕೆ ಇವರಿಗೆ ಬುದ್ದಿ ಬಂದಿಲ್ಲ ? ಅಷ್ಟು ದೊಡ್ಡ ಗಲಾಟೆ ನಡೆದಿದ್ದರೂ ಸದಾನಂದ ಗೌಡರು "ನನಗೆ ವಿಷಯ ತಿಳಿದಿಲ್ಲ" ಅನ್ನುತ್ತಾರೆ ಎಂದರೆ ಇಂತಹ ಜಾಣ ಕುರುಡರಿಗೆ ಏನೆನ್ನಬೇಕು ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...