ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ.
೧. ಬ್ರಾಹ್ಮಣ
೨. ಲಿಂಗಾಯಿತ
೩. ಒಕ್ಕಲಿಗ
೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು)
೫. ದೀವರು (ಈಡಿಗರು)
೬. ಹಸಲರು
೭. ಹೊಲೆಯರು
೮. ಉಪ್ಪಾರರು
[ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ]
ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ...
* ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ.
* ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟಿಸುವುದಿಲ್ಲ.
ಬ್ರಾಹ್ಮಣರು ಮತ್ತು ಲಿಂಗಾಯಿತರ ನಡುವೆ ಅಂತಹ ಮೇಲು ಕೀಳು ಭಾವನೆ ಇಲ್ಲ. ಆದರೆ ಹಣ್ಣು ಗಂಡಿನ ವಿನಿಮಯ ಇಲ್ಲ.
* ಒಕ್ಕಲಿಗರು ಮೇಲಿನ ಎರಡು ಜಾತಿಗಳವರನ್ನೂ ತಮಗಿಂತ ಉತ್ತಮವೆಂತಲೂ ಕೆಲಗಿನ ಎಲ್ಲರನ್ನೂ ಕೀಳು ಎಂತಲೂ ಭಾವಿಸುತ್ತಾರೆ. ಶೆಟ್ಟರು, ಪೂಜಾರಿ ಹಗೂ ದೀವರ ಜೊತೆ ಮೇಲು ಕೀಳು ಭಾವ ಇಲ್ಲವಾದರೂ ಸಂಬಂಧ ಬೆಳೆಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ.
* ಶೆಟ್ಟರು, ಪೂಜಾರಿಗಳು, ದೀವರು - ಒಕ್ಕಲಿಗರನ್ನು ತಮ್ಮ ಸಮಾನ ಜತಿ ಎಂದು ಭಾವಿಸಿದ್ದಾರೆ. ಹಾಗೆಯೆ ಬ್ರಾಹ್ಮಣ ಲಿಂಗಯಿತರನ್ನು ಮೇಲೆಂದೂ ಕೊನೆಯ ಮೂರು ಜಾತಿಗಳನ್ನು ಕೀಳೆಂದೂ ಭಾವಿಸುತ್ತಾರೆ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ.
* ಹಸಲರು - ಇವರು ಹೊಲೆಯರು ಹಾಗೂ ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರು ಕೀಳೆಂದು ಭಾವಿಸುತ್ತಾರೆ.
* ಹೊಲೆಯರು - ಇವರು ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರೂ ಕೀಳೆಂದು ಭಾವಿಸುತ್ತಾರೆ.
[ಇತ್ತೀಚಿಗೆ ಮುಟ್ಟುವುದರಿಂದ ಮೈಲಿಗೆ ಎಂಬ ಭಾವನೆ ಕೊಂಚೆ ಕಡಿಮೆ ಆಗಿದೆಯಾದರೂ ಪೂರ್ತಿಯಂತೂ ಹೋಗಿಲ್ಲ. ಉಳಿದಂತೆ ಮೇಲು ಕೀಳು ಭಾವನೆ ಹಾಗೆಯೆ ಇದೆ]
ಕಾಮೆಂಟ್ಗಳು