ವಿಷಯಕ್ಕೆ ಹೋಗಿ

ನಾ ಕಂಡಂತೆ ಜಾತಿಯ ಏರ್ಪಾಡುಗಳು.

ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ.
೧. ಬ್ರಾಹ್ಮಣ
೨. ಲಿಂಗಾಯಿತ
೩. ಒಕ್ಕಲಿಗ
೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು)
೫. ದೀವರು (ಈಡಿಗರು)
೬. ಹಸಲರು
೭. ಹೊಲೆಯರು
೮. ಉಪ್ಪಾರರು
[ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ]
ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ...
* ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ.
* ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟಿಸುವುದಿಲ್ಲ.
ಬ್ರಾಹ್ಮಣರು ಮತ್ತು ಲಿಂಗಾಯಿತರ ನಡುವೆ ಅಂತಹ ಮೇಲು ಕೀಳು ಭಾವನೆ ಇಲ್ಲ. ಆದರೆ ಹಣ್ಣು ಗಂಡಿನ ವಿನಿಮಯ ಇಲ್ಲ.
* ಒಕ್ಕಲಿಗರು ಮೇಲಿನ ಎರಡು ಜಾತಿಗಳವರನ್ನೂ ತಮಗಿಂತ ಉತ್ತಮವೆಂತಲೂ ಕೆಲಗಿನ ಎಲ್ಲರನ್ನೂ ಕೀಳು ಎಂತಲೂ ಭಾವಿಸುತ್ತಾರೆ. ಶೆಟ್ಟರು, ಪೂಜಾರಿ ಹಗೂ ದೀವರ ಜೊತೆ ಮೇಲು ಕೀಳು ಭಾವ ಇಲ್ಲವಾದರೂ ಸಂಬಂಧ ಬೆಳೆಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ. 
* ಶೆಟ್ಟರು, ಪೂಜಾರಿಗಳು, ದೀವರು - ಒಕ್ಕಲಿಗರನ್ನು ತಮ್ಮ ಸಮಾನ ಜತಿ ಎಂದು ಭಾವಿಸಿದ್ದಾರೆ. ಹಾಗೆಯೆ ಬ್ರಾಹ್ಮಣ ಲಿಂಗಯಿತರನ್ನು ಮೇಲೆಂದೂ ಕೊನೆಯ ಮೂರು ಜಾತಿಗಳನ್ನು ಕೀಳೆಂದೂ ಭಾವಿಸುತ್ತಾರೆ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ. 
* ಹಸಲರು - ಇವರು ಹೊಲೆಯರು ಹಾಗೂ ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರು ಕೀಳೆಂದು ಭಾವಿಸುತ್ತಾರೆ.
* ಹೊಲೆಯರು - ಇವರು ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರೂ ಕೀಳೆಂದು ಭಾವಿಸುತ್ತಾರೆ.
[ಇತ್ತೀಚಿಗೆ ಮುಟ್ಟುವುದರಿಂದ ಮೈಲಿಗೆ ಎಂಬ ಭಾವನೆ ಕೊಂಚೆ ಕಡಿಮೆ ಆಗಿದೆಯಾದರೂ ಪೂರ್ತಿಯಂತೂ ಹೋಗಿಲ್ಲ. ಉಳಿದಂತೆ ಮೇಲು ಕೀಳು ಭಾವನೆ ಹಾಗೆಯೆ ಇದೆ]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...