ವಿಷಯಕ್ಕೆ ಹೋಗಿ

ನಾ ಕಂಡಂತೆ ಜಾತಿಯ ಏರ್ಪಾಡುಗಳು.

ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ.
೧. ಬ್ರಾಹ್ಮಣ
೨. ಲಿಂಗಾಯಿತ
೩. ಒಕ್ಕಲಿಗ
೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು)
೫. ದೀವರು (ಈಡಿಗರು)
೬. ಹಸಲರು
೭. ಹೊಲೆಯರು
೮. ಉಪ್ಪಾರರು
[ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ]
ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ...
* ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ.
* ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟಿಸುವುದಿಲ್ಲ.
ಬ್ರಾಹ್ಮಣರು ಮತ್ತು ಲಿಂಗಾಯಿತರ ನಡುವೆ ಅಂತಹ ಮೇಲು ಕೀಳು ಭಾವನೆ ಇಲ್ಲ. ಆದರೆ ಹಣ್ಣು ಗಂಡಿನ ವಿನಿಮಯ ಇಲ್ಲ.
* ಒಕ್ಕಲಿಗರು ಮೇಲಿನ ಎರಡು ಜಾತಿಗಳವರನ್ನೂ ತಮಗಿಂತ ಉತ್ತಮವೆಂತಲೂ ಕೆಲಗಿನ ಎಲ್ಲರನ್ನೂ ಕೀಳು ಎಂತಲೂ ಭಾವಿಸುತ್ತಾರೆ. ಶೆಟ್ಟರು, ಪೂಜಾರಿ ಹಗೂ ದೀವರ ಜೊತೆ ಮೇಲು ಕೀಳು ಭಾವ ಇಲ್ಲವಾದರೂ ಸಂಬಂಧ ಬೆಳೆಸುವುದಿಲ್ಲ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ. 
* ಶೆಟ್ಟರು, ಪೂಜಾರಿಗಳು, ದೀವರು - ಒಕ್ಕಲಿಗರನ್ನು ತಮ್ಮ ಸಮಾನ ಜತಿ ಎಂದು ಭಾವಿಸಿದ್ದಾರೆ. ಹಾಗೆಯೆ ಬ್ರಾಹ್ಮಣ ಲಿಂಗಯಿತರನ್ನು ಮೇಲೆಂದೂ ಕೊನೆಯ ಮೂರು ಜಾತಿಗಳನ್ನು ಕೀಳೆಂದೂ ಭಾವಿಸುತ್ತಾರೆ. ಕೊನೆಯ ಮೂರು ಜಾತಿಗಳವರನ್ನು ಮುಟ್ಟುವುದಿಲ್ಲ. 
* ಹಸಲರು - ಇವರು ಹೊಲೆಯರು ಹಾಗೂ ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರು ಕೀಳೆಂದು ಭಾವಿಸುತ್ತಾರೆ.
* ಹೊಲೆಯರು - ಇವರು ಉಪ್ಪಾರರನ್ನು ಮನೆಯೊಳಗೆ ಸೇರಿಸುವುದಿಲ್ಲ. ಅವರೂ ಕೀಳೆಂದು ಭಾವಿಸುತ್ತಾರೆ.
[ಇತ್ತೀಚಿಗೆ ಮುಟ್ಟುವುದರಿಂದ ಮೈಲಿಗೆ ಎಂಬ ಭಾವನೆ ಕೊಂಚೆ ಕಡಿಮೆ ಆಗಿದೆಯಾದರೂ ಪೂರ್ತಿಯಂತೂ ಹೋಗಿಲ್ಲ. ಉಳಿದಂತೆ ಮೇಲು ಕೀಳು ಭಾವನೆ ಹಾಗೆಯೆ ಇದೆ]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...