ಕನ್ನಡದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲೊಂದಾದ "ದುರ್ಗಾಸ್ತಮಾನ" ಓದಿ ಮನಸ್ಸು ಭಾರವಾಯ್ತು. ಹಾಗೆಯೇ ಇದರಲ್ಲಿ ದುರ್ಗದ ಪ್ರಧಾನಿ 'ಕಳ್ಳಿ ನರಸಪ್ಪಯ್ಯ' ದುರ್ಗಕ್ಕೆ ದ್ರೋಹ ಮಾಡಿದರೇ ಎಂಬ ಸ್ಪಷ್ಟತೆಯನ್ನು ಲೇಖಕ ತರಸು ಅವರು ನೀಡಿಲ್ಲ. (ನರಸಪ್ಪಯ್ಯ ದ್ರೋಹ ಮಾಡಿದ್ದರ ಬಗ್ಗೆ ಆಧಾರ ದೊರೆತಿಲ್ಲ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ). ಆದರೆ ಒಂದು ಗೊಂದಲವನ್ನು ಉಳಿಸಿ ಹೋಗಿದ್ದಾರೆ. ಅದೇನೆಂದರೆ ದೇಶಾಂತರ ಸಂಚಾರ ಹೋಗಿ ಮರಳುವಾಗ ಹೈದರಾಲಿಗೆ ಸೆರೆ ಸಿಗುವ ನರಸಪ್ಪಯ್ಯ ದಿವಾನ್ ಪೂರ್ಣಯ್ಯನ ಎದುರಲ್ಲೇ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. (ಪುಟ ೫೭೨), ಆದರೆ ತದನಂತರದ ಯುದ್ದದ ಸಮಯದಲ್ಲಿ ಮದಕರಿ ನಾಯಕನಿಗೆ ನರಸಪ್ಪಯ್ಯನವರ ಕೈ ಬರಹದ ಪತ್ರವೊಂದು ತಲುಪುತ್ತದೆ. (ಪುಟ ೫೮೦). ತಮ್ಮ ಮನೆಯನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಡಬೇಕು ಎಂದು. ಆ ಮನೆಯಲ್ಲಿ ತಾವು ಪ್ರಧಾನಿಯಾಗಿದ್ದಾಗ ಹುದುಗಿಸಿಟ್ಟಿದ್ದ ದುರ್ಗಕ್ಕೆ ಸಂಬಂಧಿಸಿದ ಪ್ರಮುಖವಾದ ರಹಸ್ಯ ದಾಖಲೆಗಳು ಇರುತ್ತವೆ. ಅವು ನಂತರ ಅವರ ಮಗನ ಮೂಲಕ ಹೈದರಾಲಿಗೆ ದೊರೆಯುತ್ತವೆ. ಆ ಮೂಲಕ ದುರ್ಗದ ರಹಸ್ಯಗಳು ಹೈದರಾಲಿಗೆ ಸಿಕ್ಕು ಮದಕರಿ ನಾಯಕನನ್ನು ಸೋಲಿಸಲು ಸುಲಭವಾಗುತ್ತದೆ. ಕೊನೆ ಕೊನೆಯಲ್ಲಿ ಮದಕರಿಯು ಆಗಾಗ ಹೇಳುವಂತೆ "ಪ್ರಧಾನಿ ಕಳ್ಳಿ ನರಸಪ್ಪಯ್ಯನವರೂ ದುರ್ಗಕ್ಕೆ ದ್ರೋಹ ಬಗೆದರು" ಎಂಬ ಮಾತು ಸತ್ಯವೇ ಅನ್ನಿಸುತ್ತದೆ.
* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. - ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. - ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ, ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಕಾಮೆಂಟ್ಗಳು