ಕನ್ನಡದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲೊಂದಾದ "ದುರ್ಗಾಸ್ತಮಾನ" ಓದಿ ಮನಸ್ಸು ಭಾರವಾಯ್ತು. ಹಾಗೆಯೇ ಇದರಲ್ಲಿ ದುರ್ಗದ ಪ್ರಧಾನಿ 'ಕಳ್ಳಿ ನರಸಪ್ಪಯ್ಯ' ದುರ್ಗಕ್ಕೆ ದ್ರೋಹ ಮಾಡಿದರೇ ಎಂಬ ಸ್ಪಷ್ಟತೆಯನ್ನು ಲೇಖಕ ತರಸು ಅವರು ನೀಡಿಲ್ಲ. (ನರಸಪ್ಪಯ್ಯ ದ್ರೋಹ ಮಾಡಿದ್ದರ ಬಗ್ಗೆ ಆಧಾರ ದೊರೆತಿಲ್ಲ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ). ಆದರೆ ಒಂದು ಗೊಂದಲವನ್ನು ಉಳಿಸಿ ಹೋಗಿದ್ದಾರೆ. ಅದೇನೆಂದರೆ ದೇಶಾಂತರ ಸಂಚಾರ ಹೋಗಿ ಮರಳುವಾಗ ಹೈದರಾಲಿಗೆ ಸೆರೆ ಸಿಗುವ ನರಸಪ್ಪಯ್ಯ ದಿವಾನ್ ಪೂರ್ಣಯ್ಯನ ಎದುರಲ್ಲೇ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. (ಪುಟ ೫೭೨), ಆದರೆ ತದನಂತರದ ಯುದ್ದದ ಸಮಯದಲ್ಲಿ ಮದಕರಿ ನಾಯಕನಿಗೆ ನರಸಪ್ಪಯ್ಯನವರ ಕೈ ಬರಹದ ಪತ್ರವೊಂದು ತಲುಪುತ್ತದೆ. (ಪುಟ ೫೮೦). ತಮ್ಮ ಮನೆಯನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಡಬೇಕು ಎಂದು. ಆ ಮನೆಯಲ್ಲಿ ತಾವು ಪ್ರಧಾನಿಯಾಗಿದ್ದಾಗ ಹುದುಗಿಸಿಟ್ಟಿದ್ದ ದುರ್ಗಕ್ಕೆ ಸಂಬಂಧಿಸಿದ ಪ್ರಮುಖವಾದ ರಹಸ್ಯ ದಾಖಲೆಗಳು ಇರುತ್ತವೆ. ಅವು ನಂತರ ಅವರ ಮಗನ ಮೂಲಕ ಹೈದರಾಲಿಗೆ ದೊರೆಯುತ್ತವೆ. ಆ ಮೂಲಕ ದುರ್ಗದ ರಹಸ್ಯಗಳು ಹೈದರಾಲಿಗೆ ಸಿಕ್ಕು ಮದಕರಿ ನಾಯಕನನ್ನು ಸೋಲಿಸಲು ಸುಲಭವಾಗುತ್ತದೆ. ಕೊನೆ ಕೊನೆಯಲ್ಲಿ ಮದಕರಿಯು ಆಗಾಗ ಹೇಳುವಂತೆ "ಪ್ರಧಾನಿ ಕಳ್ಳಿ ನರಸಪ್ಪಯ್ಯನವರೂ ದುರ್ಗಕ್ಕೆ ದ್ರೋಹ ಬಗೆದರು" ಎಂಬ ಮಾತು ಸತ್ಯವೇ ಅನ್ನಿಸುತ್ತದೆ.
ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್ನ ಟಾಪ್ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಕಾಮೆಂಟ್ಗಳು