ಇಂಡಿಯಾ ಒಕ್ಕೂಟ 1947 ರಿಂದಲೂ ಒಂದು ಯುದ್ಧವನ್ನು ಮಾಡುತ್ತಾ ಬಂದಿದೆ! ಅದು ಪರೋಕ್ಷ ಯುದ್ದ. ಯಾರ ಮೇಲೆ ಅಂದರೆ 'ತನ್ನದೇ ಪ್ರಜೆಗಳು' ಅಂತ ನಂಬಿಸಲಾಗಿರುವ ಹಿಂದಿಯೇತರ ಜನರ ಮೇಲೆ! ಹಿಂದಿಯೇತರ ನುಡಿಗಳ ನಾಶ ಮತ್ತು ಆ ಜನರ ಸ್ವಾತಂತ್ರ್ಯ ಹರಣ ಈ ಯುದ್ಧದ ಉದ್ದೇಶ. ಇದು ಚೀನಾ ದೇಶವು ಮುಸ್ಲಿಮರ ಅಸ್ತಿತ್ವವನ್ನು ಹೊಸಕಿ ಹಾಕುತ್ತಿರುವಷ್ಟೇ ಕ್ರೌರ್ಯದ ಕೆಲಸ.
ಇದನ್ನು ಯಾರು ಶುರು ಮಾಡಿದರು ಅಂತ ನೋಡಲು ಹೋದರೆ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ದೊಡ್ಡ ದೊಡ್ಡ ಹೆಸರುಗಳೇ ಮುಂದೆ ಬರುತ್ತವೆ. ಜಾತಿ ಸಮಾನತೆಗೆ ಅಷ್ಟು ಮಹತ್ವ ಕೊಟ್ಟ ಅದೇ ಅಂಬೇಡ್ಕರ್ ನುಡಿ ಸಮಾನತೆಯನ್ನು ಮಾತ್ರ ಕಡೆಗಣಿಸಿದ್ದು ಆಘಾತ ಉಂಟುಮಾಡುವ ವಿಷಯ. ಒಕ್ಕೂಟ ರಚನೆಯಾದ ಹೊಸದರಲ್ಲಿ 'ಒಂದಾಗುವಿಕೆ'ಗಾಗಿ ಹಾಗೆ ಮಾಡಲಾಯ್ತು ಅಂತ ತೇಪೆ ಹಾಕಬಹುದು ಅಷ್ಟೇ. ತಮಾಷೆ ಅಂದರೆ ಡಿಎಂಕೆ ಬಿಟ್ಟರೆ ಯಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳುಇ ಇದರ ಬಗ್ಗೆ ದನಿ ಎತ್ತುತಿಲ್ಲ!
ಆದರೆ ಅಲ್ಲಿಂದ ಶುರುವಾದ ನಮ್ಮ ಸ್ವಾತಂತ್ರ್ಯ ಹರಣದ ಕೆಲಸ ಇಂದೂ ನಿಂತಿಲ್ಲ, ಬಿಜೆಪಿ ಆಡಳಿತದಲ್ಲಿ ಅದು ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಇದನ್ನು ತಡೆಯುವುದು ಹೇಗೆ? ನಮ್ಮ ನುಡಿಯ ಜೊತೆಗೆ ನಮ್ಮತನವನ್ನು ಉಳಿಸಿಕೊಳ್ಳುವುದು ಹೇಗೆ?
ಮೊದಲಿಗೆ ಈ ಹಿಂದಿ ಒಕ್ಕೂಟದ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶ ಅನ್ನುವುದು ಒಂದು ಬೋಗಸ್ ಬಣ್ಣ, ಇದರ ಹಿಂದೆ ಇರುವುದು ಹಿಂದಿ ತೋಳ ಅಷ್ಟೇ. ಎಲ್ಲರೂ ಪ್ಲಾನ್ ಮಾಡಿ ನಮ್ಮನ್ನು ಒಂದು ಕೆಡ್ಡದೊಳಗೆ ಬೀಳಿಸಿಕೊಂಡಿದ್ದಾರೆ. ಇದರಿಂದ ಹೊರ ಬರುವ ದಾರಿಯನ್ನು ಹುಡುಕದೆ ಹೋದರೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಅಸ್ತಿತ್ವ ಕಳೆದುಕೊಂಡ ಜೀತದಾಳುಗಳಾಗಿ ಬದುಕಬೇಕಾಗುತ್ತೆ.
ಕಾಮೆಂಟ್ಗಳು