ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು:
ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು:
ತಡೆ 1:
ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು. ಕಾರ್ಪೊರೇಟ್ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು.
ಮೋದಿ ಕೊಟ್ಟ ಪರಿಹಾರ:
ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ. ಕಾರ್ಪೊರೇಟ್ಗಳು ಈಗ ಸಂತೋಷವಾಗಿದ್ದಾರೆ.
ತಡೆ 2:
ಕಾರ್ಪೊರೇಟ್ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು. ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು.
ಮೋದಿ ಕೊಟ್ಟ ಪರಿಹಾರ:
ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು. ಕಾರ್ಪೊರೇಟ್ಗಳು ಮತ್ತೆ ಸಂತೋಷಗೊಂಡಿದ್ದಾರೆ.
ತಡೆ 3:
ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾರೆ ಎಂದು ನಿರ್ಣಯಿಸುವ ಅಧಿಕಾರ ಕಾರ್ಪೊರೇಟ್ ಗಳಿಗೆ ಇರಲಿಲ್ಲ. ರೈತ ತನಗೆ ಬೇಕಾದ ಬೆಳೆಯನ್ನು ಬೆಳೆವ ಸ್ವಾತಂತ್ರ್ಯ ಹೊಂದಿದ್ದನು.
ಮೋದಿ ಕೊಟ್ಟ ಪರಿಹಾರ:
ಕಾರ್ಪೊರೇಟ್ ಗಳು ಇನ್ಮುಂದೆ ರೈತರೊಂದಿಗೆ ಕರಾರು/ಒಪ್ಪಂದ ಮಾಡಿಕೊಳ್ಳಲಿವೆ, ಅಲ್ಲಿ ಯಾವ ರೀತಿಯ ಬೆಳೆ ಬೆಳೆಯಬೇಕೆಂದು ಕಾರ್ಪೊರೇಟ್ ಗಳೇ ನಿರ್ಣಯ ಮಾಡುತ್ತವೆ!. ಕಾರ್ಪೊರೇಟ್ಗಳು ಮತ್ತೆ ಸಂತೋಷಗೊಂಡಿದ್ದಾರೆ.
ತಡೆ 4:
ರೈತರ ವಿರುದ್ಧ ಏನಾದರೂ ತಪ್ಪಾದಲ್ಲಿ ಕಾರ್ಪೊರೇಟ್ಗಳು ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸಲು ಕಷ್ಟ ಆಗುತ್ತಿತ್ತು.
ಮೋದಿ ನೀಡಿದ ಪರಿಹಾರ:
ರೈತರು ನ್ಯಾಯಾಲಯಗಳಿಗೆ ಹೋಗುವ ಅವಕಾಶ ತಪ್ಪಿಸಿ. ಅವರು ಎಸ್ಡಿಎಂ ಮತ್ತು ಡಿಸಿಗೆ ಹೋಗುವಂತೆ ಹೊಸ ಕಾಯ್ದೆ ಹೇಳುತ್ತದೆ. ಕಾರ್ಪೊರೇಟ್ಗಳು ಅವರಿಗೆ ಲಂಚ ಕೊಟ್ಟು ತಮಗೆ ಬೇಕಾದಂತೆ ನಿರ್ಣಯ ಮಾಡಿಸಿಕೊಳ್ಳುವ ಸದವಕಾಶ. ಮತ್ತೊಮ್ಮೆ ಕಾರ್ಪೊರೇಟ್ ಗಳು ಬಹಳ ಅನಂದವಾಗಿವೆ!
ಒಟ್ಟಾರೆ ಹೊಸ ಕೃಷಿ ಕಾಯ್ದೆಯಿಂದಾಗಿ:
ಕಾರ್ಪೊರೇಟ್ಗಳಿಗೆ ಅನುಕೂಲ - 100%
ರೈತರಿಗೆ ಅನಾನುಕೂಲ - 100%
ಆದಾಗ್ಯೂ ಮೋದಿ ಮತ್ತು ಅವರ ಬೆಂಬಲಿಗರು ಹೇಳುತ್ತಾರೆ.. "ಈ ಬಿಲ್
ಬೆಳೆಗಾರರ ಪರವಾಗಿದೆ" ಎಂದು!!. 🙄🙄🙄
(ಅಂಗ್ಲದಿಂದ ನುಡಿಮಾರ್ಪು)
ಕಾಮೆಂಟ್ಗಳು