"ನಟ ದರ್ಶನ್ ಕುಟುಂಬದಲ್ಲಿ ಬಿರುಕು ಬರಲು ನಟಿ ನಿಖಿತಾ ಕಾರಣ" ಎಂಬ ಕಾರಣ ನೀಡಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕೆಯನ್ನು ಮೂರು ವರ್ಷ ಕನ್ನಡ ಚಿತ್ರರಂಗದಿಂದ ನಿಷೇಧಿಸಿ "ಮುಲ್ಲಾ ಕಾನೂನು" ಜಾರಿಗೊಳಿಸಿದೆ. ಇಂತಹ ತೀರ್ಪು ನೀಡಲು ಇವರು ಬಳಸಿದ ಮಾನದಂಡಗಳು ಯಾವುವು ಅನ್ನುವುದು ತಿಳಿದು ಬಂದಿಲ್ಲ. ಆದರೆ ನಮ್ಮಲ್ಲೇಳುವ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವಿಲ್ಲ.
* ದರ್ಶನ್ ಜೊತೆ ನಿಖಿತಾಳೇ ಗೆಳೆತನ ಬೆಳೆಸಿದಳು ಎಂದು ಇವರಿಗೆ ಹೇಗೆ ತಿಳಿಯಿತು ? ದರ್ಶನ್ ಸ್ವತಃ ತಾನೇ ಅವಳನ್ನು ಬುಟ್ಟಿಗೆ ಹಾಕಿಕೊಂಡಿರುವ ಸಾಧ್ಯತೆ ಇದೆಯಲ್ಲ? ಹಾಗಿದ್ದರೆ ದರ್ಶನ್ಗೆ ಶಿಕ್ಷೆ ಏನು ? ದರ್ಶನ್ ತಾನೇ ನಿಖಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ ಮುಂದೆ ಅವಳಿಲ್ಲದಿದ್ದರೆ ಇನ್ನೊಬ್ಬಳನ್ನು ಇಟ್ಟುಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟೀ ?
* ದರ್ಶನ್ - ವಿಜಯಲಕ್ಷ್ಮಿ ಯರದ್ದು ಕುಟುಂಬ ಕಲಹ. ಅದರ ಬಗ್ಗೆ ತೀರ್ಪು ನೀಡಲು ಇವರಿಗೆ ಏನು ಅಧಿಕಾರವಿದೆ ? ಇವರಿಗೆ ವಿಜಯಲಕ್ಷ್ಮಿ ಅವರೇನಾದರೂ ದೂರು ನೀಡಿದ್ದರೆ ?
* ದರ್ಶನ್ - ನಿಖಿತಾ ಇಬ್ಬರೂ ಸೇರಿ ತಪ್ಪು ಮಾಡಿರುವಾಗ ಒಬ್ಬಳಿಗೆ ಶಿಕ್ಷೆ ನೀಡಿದರೆ ಹೇಗೆ ? ಇಬ್ಬರನ್ನೂ ನಿಷೇಧಿಸಬೇಕಾಗಿತ್ತಲ್ಲವೇ ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿದಂತೆ ಆಗಲಿಲ್ಲವೇ ?
* ಅವರಿಬ್ಬರ ನಡುವೆ ಸಂಬಂಧ ಇದ್ದುದೇ ಹೌದಾದರೆ ಆಕೆಯನ್ನು ನಿಷೇಧಿಸಿದರೆ ಏನುಪಯೋಗ ? ಅವಳು ನಟಿಸದಿದ್ದರೂ ಸಂಬಂಧ ಮುಂದುವರಿಯದೇ ?
* ಇಷ್ಟಕ್ಕೂ ನಿಖಿತಾ ಬಗ್ಗೆ ದೂರಿರುವುದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು. ಹಾಗಂತೆ ನಿರ್ಮಾಪಕರ ಸಂಘಕ್ಕೆ ಅವರು ಯಾವ ಪುರಾವೆಯನ್ನೂ ನೀಡಿಲ್ಲ. ಅಕಸ್ಮಾತ್ ಅದು ಸುಳ್ಳಾಗಿದ್ದರೆ ? ವಿಜಯಲಕ್ಷ್ಮಿಯವರು ಅಂದುಕೊಂಡಂತೆ ದರ್ಶನ್ ಗೆಳೆತನ ಬೆಳೆಸಿದ್ದು ನಿಖಿತಾ ಆಗಿರದೇ ಬೇರೆ ಹೆಣ್ಣಾಗಿದ್ದರೆ ?
* ನಿಖಿತಾ ನಟಿಯಾಗಿರುವ ಕಾರಣಕ್ಕೆ ನಿಷೇಧ ಹೇರಲು ಸಾಧ್ಯವಾಯ್ತು. ಒಂದು ವೇಳೆ ಆಕೆ ನಟಿಯಾಗಿರದೇ ಹೋಗಿದ್ದರೆ ಇವರು ಯಾವ ನಿಷೇಧ ಹೇರುತ್ತಿದ್ದರು ?
ಅದೇನೇ ಆದರೂ ಆಕೆ ಈಗ ನ್ಯಾಯಾಲಯದ ಮೊರೆ ಹೋದರೆ ಇವರಿಗೆ ಮುಖಭಂಗ ಕಟ್ಟಿಟ್ಟ ಬುತ್ತಿ. ಕೇವಲ ಅನುಮಾನದ ಆಧಾರದ ಮೇಲೆ ಯಾರನ್ನೂ ಚಿತ್ರರಂಗದಿಂದ ನಿಷೇಧಿಸುವ ಅಧಿಕಾರ ಯಾರಿಗೂ ಇಲ್ಲ. ಇದು ಇವರ ಮುಲ್ಲಾ ಕಾನೂನು ಅಷ್ಟೇ ಅಲ್ಲ... ಮೂರ್ಖ ಕಾನೂನು ಕೂಡಾ.
* ದರ್ಶನ್ ಜೊತೆ ನಿಖಿತಾಳೇ ಗೆಳೆತನ ಬೆಳೆಸಿದಳು ಎಂದು ಇವರಿಗೆ ಹೇಗೆ ತಿಳಿಯಿತು ? ದರ್ಶನ್ ಸ್ವತಃ ತಾನೇ ಅವಳನ್ನು ಬುಟ್ಟಿಗೆ ಹಾಕಿಕೊಂಡಿರುವ ಸಾಧ್ಯತೆ ಇದೆಯಲ್ಲ? ಹಾಗಿದ್ದರೆ ದರ್ಶನ್ಗೆ ಶಿಕ್ಷೆ ಏನು ? ದರ್ಶನ್ ತಾನೇ ನಿಖಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ ಮುಂದೆ ಅವಳಿಲ್ಲದಿದ್ದರೆ ಇನ್ನೊಬ್ಬಳನ್ನು ಇಟ್ಟುಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟೀ ?
* ದರ್ಶನ್ - ವಿಜಯಲಕ್ಷ್ಮಿ ಯರದ್ದು ಕುಟುಂಬ ಕಲಹ. ಅದರ ಬಗ್ಗೆ ತೀರ್ಪು ನೀಡಲು ಇವರಿಗೆ ಏನು ಅಧಿಕಾರವಿದೆ ? ಇವರಿಗೆ ವಿಜಯಲಕ್ಷ್ಮಿ ಅವರೇನಾದರೂ ದೂರು ನೀಡಿದ್ದರೆ ?
* ದರ್ಶನ್ - ನಿಖಿತಾ ಇಬ್ಬರೂ ಸೇರಿ ತಪ್ಪು ಮಾಡಿರುವಾಗ ಒಬ್ಬಳಿಗೆ ಶಿಕ್ಷೆ ನೀಡಿದರೆ ಹೇಗೆ ? ಇಬ್ಬರನ್ನೂ ನಿಷೇಧಿಸಬೇಕಾಗಿತ್ತಲ್ಲವೇ ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿದಂತೆ ಆಗಲಿಲ್ಲವೇ ?
* ಅವರಿಬ್ಬರ ನಡುವೆ ಸಂಬಂಧ ಇದ್ದುದೇ ಹೌದಾದರೆ ಆಕೆಯನ್ನು ನಿಷೇಧಿಸಿದರೆ ಏನುಪಯೋಗ ? ಅವಳು ನಟಿಸದಿದ್ದರೂ ಸಂಬಂಧ ಮುಂದುವರಿಯದೇ ?
* ಇಷ್ಟಕ್ಕೂ ನಿಖಿತಾ ಬಗ್ಗೆ ದೂರಿರುವುದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು. ಹಾಗಂತೆ ನಿರ್ಮಾಪಕರ ಸಂಘಕ್ಕೆ ಅವರು ಯಾವ ಪುರಾವೆಯನ್ನೂ ನೀಡಿಲ್ಲ. ಅಕಸ್ಮಾತ್ ಅದು ಸುಳ್ಳಾಗಿದ್ದರೆ ? ವಿಜಯಲಕ್ಷ್ಮಿಯವರು ಅಂದುಕೊಂಡಂತೆ ದರ್ಶನ್ ಗೆಳೆತನ ಬೆಳೆಸಿದ್ದು ನಿಖಿತಾ ಆಗಿರದೇ ಬೇರೆ ಹೆಣ್ಣಾಗಿದ್ದರೆ ?
* ನಿಖಿತಾ ನಟಿಯಾಗಿರುವ ಕಾರಣಕ್ಕೆ ನಿಷೇಧ ಹೇರಲು ಸಾಧ್ಯವಾಯ್ತು. ಒಂದು ವೇಳೆ ಆಕೆ ನಟಿಯಾಗಿರದೇ ಹೋಗಿದ್ದರೆ ಇವರು ಯಾವ ನಿಷೇಧ ಹೇರುತ್ತಿದ್ದರು ?
ಅದೇನೇ ಆದರೂ ಆಕೆ ಈಗ ನ್ಯಾಯಾಲಯದ ಮೊರೆ ಹೋದರೆ ಇವರಿಗೆ ಮುಖಭಂಗ ಕಟ್ಟಿಟ್ಟ ಬುತ್ತಿ. ಕೇವಲ ಅನುಮಾನದ ಆಧಾರದ ಮೇಲೆ ಯಾರನ್ನೂ ಚಿತ್ರರಂಗದಿಂದ ನಿಷೇಧಿಸುವ ಅಧಿಕಾರ ಯಾರಿಗೂ ಇಲ್ಲ. ಇದು ಇವರ ಮುಲ್ಲಾ ಕಾನೂನು ಅಷ್ಟೇ ಅಲ್ಲ... ಮೂರ್ಖ ಕಾನೂನು ಕೂಡಾ.

ಕಾಮೆಂಟ್ಗಳು