ಕರ್ನಾಟಕ ಕಂಡ ಮಹಾ ಭ್ರಷ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಜೈಲು ಮುದ್ದೆ ಮುರಿಯಲು ಹೋಗುವ ಮೂಲಕ ರಾಜ್ಯಕ್ಕೆ ಆಶಾಕಿರಣ ಮೂಡಿಸಿದ್ದಾರೆ.
ಇವರ ರೈತಪರ ಹೋರಾಟವನ್ನು ನೋಡಿ ಮೆಚ್ಚಿದ ಜನತೆ ಕುಮಾರಸ್ವಾಮಿಯನ್ನು ಮೂಲೆಗೆಸೆದು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದೇನೋ ಸರಿ. ಆದರೆ ಅದರ ನಂತರ ಈ ಮನುಷ್ಯ ಬದಲಾದ ಪರಿ ನೋಡಿದರೆ ಊಸರವಳ್ಳಿಯೂ ನಾಚಿಕೊಳ್ಳುತ್ತೆ. ಅಂತಹ ಹೋರಾಟದ ಹಿನ್ನೆಲೆಯ ವ್ಯಕ್ತಿ ಇವರೇನಾ ? RSS ನಿಂದ ಬಂದವರು ಇವರೇನಾ ಅನ್ನಿಸಿದ್ದು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿರುವಂತೆಯೇ ಶೋಭಾಳನ್ನು ಬಗಲಲ್ಲಿಟ್ಟುಕೊಂಡು ಮಾಡಬಾರದ ಅನಾಚಾರಕ್ಕಿಳಿದ ಯಡ್ಡಿ ಫಕತ್ತು ನುಂಗಲು ಕುಳಿತುಬಿಟ್ಟರು. ಅಭಿವೃದ್ಧಿಯ ಹೆಸರಲ್ಲಿ ತಾವು ಮತ್ತು ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡಿಕೊಂಡರು. ಇದಕ್ಕೆ ತಮ್ಮ ಜಾತಿಯನ್ನು ಕೋಟೆಯನ್ನಾಗಿ ಬಳಸಿಕೊಂಡರು. ಇದಕ್ಕಾಗಿ ಐನಾತಿ ಸ್ವಾಮೀಜಿಗಳಿಗೆ ಕೋಟ್ಯಾಂತರ ರೂಪಾಯಿ ಬಿಟ್ಟಿ ಹಣ ನೀಡಿ ಜಾತಿಯ ಜನರನ್ನು ಏಮಾರಿಸಲು ಉಪಯೋಗಿಸಿಕೊಂಡರು. ಇಂತಹ ಹಲಾಲುಖೋರ ಯಡಿಯೂರಪ್ಪ ಕೊನೆಗೂ ಜೈಲೂಟ ಉಣ್ಣಲು ಕಂಬಿ ಹಿಂದೆ ಚಕ್ಕಳಮಕ್ಕಳ ಹಾಕಿರುವುದು ಉಳಿದ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳಿಗೆ ಪಾಠವಾಗಲಿ. ನ್ಯಾಯಾಲಯಕ್ಕೆ ಒಂದು ಧನ್ಯವಾದಗಳು.
ಇಂತಹ ನೀತಿಗೆಟ್ಟ ಜಾತೀವಾದಿ ಹಲಾಲುಟೋಪಿ ರಾಜಕಾರಣಿ ಹಿಂದೆ ಬಂದಿರಲಿಲ್ಲ, ಮುಂದೆಯೂ ಬರುವುದು ಬೇಡ. ಹಾಗೆಯೇ ಕೇವಲ ಜಾತಿ ಕಾರಣಕ್ಕೆ ಭ್ರಷ್ಟರನ್ನೂ ಬೆಂಬಲಿಸುವ ಮಠಾಧೀಶರಿಗೆ ಮತ್ತು ಜನತೆಗೆ ಇದೊಂದು ಪಾಠವಾಗಲಿ.
ಇವರ ರೈತಪರ ಹೋರಾಟವನ್ನು ನೋಡಿ ಮೆಚ್ಚಿದ ಜನತೆ ಕುಮಾರಸ್ವಾಮಿಯನ್ನು ಮೂಲೆಗೆಸೆದು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದೇನೋ ಸರಿ. ಆದರೆ ಅದರ ನಂತರ ಈ ಮನುಷ್ಯ ಬದಲಾದ ಪರಿ ನೋಡಿದರೆ ಊಸರವಳ್ಳಿಯೂ ನಾಚಿಕೊಳ್ಳುತ್ತೆ. ಅಂತಹ ಹೋರಾಟದ ಹಿನ್ನೆಲೆಯ ವ್ಯಕ್ತಿ ಇವರೇನಾ ? RSS ನಿಂದ ಬಂದವರು ಇವರೇನಾ ಅನ್ನಿಸಿದ್ದು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿರುವಂತೆಯೇ ಶೋಭಾಳನ್ನು ಬಗಲಲ್ಲಿಟ್ಟುಕೊಂಡು ಮಾಡಬಾರದ ಅನಾಚಾರಕ್ಕಿಳಿದ ಯಡ್ಡಿ ಫಕತ್ತು ನುಂಗಲು ಕುಳಿತುಬಿಟ್ಟರು. ಅಭಿವೃದ್ಧಿಯ ಹೆಸರಲ್ಲಿ ತಾವು ಮತ್ತು ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡಿಕೊಂಡರು. ಇದಕ್ಕೆ ತಮ್ಮ ಜಾತಿಯನ್ನು ಕೋಟೆಯನ್ನಾಗಿ ಬಳಸಿಕೊಂಡರು. ಇದಕ್ಕಾಗಿ ಐನಾತಿ ಸ್ವಾಮೀಜಿಗಳಿಗೆ ಕೋಟ್ಯಾಂತರ ರೂಪಾಯಿ ಬಿಟ್ಟಿ ಹಣ ನೀಡಿ ಜಾತಿಯ ಜನರನ್ನು ಏಮಾರಿಸಲು ಉಪಯೋಗಿಸಿಕೊಂಡರು. ಇಂತಹ ಹಲಾಲುಖೋರ ಯಡಿಯೂರಪ್ಪ ಕೊನೆಗೂ ಜೈಲೂಟ ಉಣ್ಣಲು ಕಂಬಿ ಹಿಂದೆ ಚಕ್ಕಳಮಕ್ಕಳ ಹಾಕಿರುವುದು ಉಳಿದ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳಿಗೆ ಪಾಠವಾಗಲಿ. ನ್ಯಾಯಾಲಯಕ್ಕೆ ಒಂದು ಧನ್ಯವಾದಗಳು.
ಇಂತಹ ನೀತಿಗೆಟ್ಟ ಜಾತೀವಾದಿ ಹಲಾಲುಟೋಪಿ ರಾಜಕಾರಣಿ ಹಿಂದೆ ಬಂದಿರಲಿಲ್ಲ, ಮುಂದೆಯೂ ಬರುವುದು ಬೇಡ. ಹಾಗೆಯೇ ಕೇವಲ ಜಾತಿ ಕಾರಣಕ್ಕೆ ಭ್ರಷ್ಟರನ್ನೂ ಬೆಂಬಲಿಸುವ ಮಠಾಧೀಶರಿಗೆ ಮತ್ತು ಜನತೆಗೆ ಇದೊಂದು ಪಾಠವಾಗಲಿ.
ಕಾಮೆಂಟ್ಗಳು