ವಿಷಯಕ್ಕೆ ಹೋಗಿ

ಅವರನ್ ಬಿಟ್, ಇವರನ್ ಬಿಟ್.....ಇನ್ಯಾರು ??

ಒಮ್ಮೆ ರೈಲಿನಲ್ಲಿ ಮನಮೋಹನ್ ಸಿಂಗ್, ಒಬಮಾ, ಸೋನಿಯಾ ಮತ್ತು ಐಶ್ವರ್ಯ ರೈ ಪ್ರಯಾಣ ಮಾಡುತ್ತಿದ್ದರು.

ಹೋಗುತ್ತಿರುವಾಗ ರೈಲು ಒಂದು ಸುರಂಗ ಮಾರ್ಗವನ್ನು ಪ್ರವೇಶಿಸಿದಾಗ ಕತ್ತಲಾವರಿಸಿತು. ಆ ಕತ್ತಲಿನಲ್ಲಿ ಯಾರೋ ಯಾರಿಗೂ ಮುತ್ತು ಕೊಟ್ಟಂತೆ ಶಬ್ಧ ಕೇಳಿಸಿತು. ಅದರ ಹಿಂದೆಯೇ ಪಳಾರ‍್ ಎಂದು ಕೆನ್ನೆಗೆ ಬಾರಿಸಿದ ಶಬ್ಧವೂ ಬಂತು. ಅಷ್ಟರಲ್ಲೇ ಸುರಂಗ ಮಾರ್ಗ ಮುಗಿದು ಬೆಳಕು ಬಂತು.

ನೋಡಿದರೆ ಒಬಮಾ ಕೆನ್ನೆ ಕೆಂಪಾಗಿ ಹೋಗಿದೆ.

ಆಗ ಒಬ್ಬೊಬ್ಬರೂ ಒಂದೊಂದು ರೀತಿ ಯೋಚಿಸತೊಡಗಿದರು.

ಸೋನಿಯಾ : "ಈ ಅಮೆರಿಕಾದವರದ್ದು ಇದೇ ಕಥೆ. ಚೆನ್ನಾಗಿರೋ ಹೆಂಗಸರು ಕಂಡರೆ ಚುಂಬಿಸೋದು. ಒಬಮಾ ಹೋಗಿ ಐಶ್‌ಳನ್ನು ಚುಂಬಿಸಿದ್ದಾನೆ, ಅವಳು ತಿರುಗಿ ಬಾರಿಸಿದ್ದಾಳೆ"

ಐಶ್ವರ್ಯ : "ಓಬಮಾ ನನ್ನನ್ನು ಚುಂಬಿಸಲು ಹೋಗಿ ಸೋನಿಯಾಳನ್ನು ಚುಂಬಿಸಿದ್ದಾನೆ, ಅವಳು ಬಾರಿಸಿದ್ದಾಳೆ"

ಒಬಮಾ : "ಈ ಮುದುಕ ಕಡಿಮೆಯವನಲ್ಲ ಅನ್ಸುತ್ತೆ, ಕತ್ತಲಲ್ಲಿ ಸೋನಿಯಾ ಅಂತ ತಿಳಿದು ಐಶ್ವರ್ಯಳಿಗೆ ಚುಂಬಿಸಿದ್ದಾನೆ. ಅವಳು ಅದನ್ನು ನಾನು ಚುಂಬಿಸಿದೆ ಅಂತ ತಪ್ಪಾಗಿ ತಿಳಿದು ನನಗೆ ಹೊಡೆದಿದ್ದಾಳೆ ಛೇ!"

ಮನಮೋಹನ್ ಸಿಂಗ್ : "ಇನ್ನೊಂದು ಸುರಂಗ ಮಾರ್ಗ ಬರಲಿ.... ನನ್ನ ಕೈಗೆ ನಾನೇ ಚುಂಬಿಸಿಕೊಂಡು ಈ ಒಬಮಾನಿಗೆ ಮತ್ತೊಂದು ಬಾರಿಸುತ್ತೇನೆ!!"

ಕಾಮೆಂಟ್‌ಗಳು

ಗುಡುಗು ಮಿಂಚು ಹೇಳಿದ್ದಾರೆ…
ನಿಜವಾಗಿಯೂ ಇದು ಹಳೆ ನಗೆಹನಿ. ಪಾತ್ರಗಳು ಬದಲಾಗಿವೆ ಅಷ್ಟೇ.

ಕಿಸ್, ಯಾರಿಗೆ ಯಾರೂ ಕೊಟ್ಟಿಲ್ಲ. ಮನಮೋಹನ್ ಸಿಂಗ್ ತಮ್ಮ ಕೈಗೆ ತಾವೇ ಚುಂಬಿಸಿಕೊಂಡು ಎಲ್ಲರನ್ನೂ ಗೊಂದಲಕ್ಕೀಡು ಮಾಡಿ ಅನುಮಾನ ಬಾರದಂತೆ ಒಬಮಾನಿಗೆ ಹೊಡೆದಿದ್ದಾರೆ !!