ವಿಷಯಕ್ಕೆ ಹೋಗಿ

ಗೂಗಲ್‌ನವರ ಕೈಬರಹದ ಅಪ್ಲಿಕೇಷನ್‌

ಕೈಬರಹದ ಅಪ್ಲಿಕೇಷನ್‌ ಅಂದರೆ ನಿಮ್ಮ ಕೈಬರಹವನ್ನು ಹಾಗೆಯೇ ಅದು ಫಾಂಟ್‌ ಆಗಿ ಪರಿವರ್ತಿಸುತ್ತದೆ ಎಂದಲ್ಲ. ಬದಲಿಗೆ ನೀವು ಏನು ಬರೆಯುತ್ತೀರೋ ಆ ಅಕ್ಷರಗಳನ್ನು ಫಾಂಟ್‌ ಆಗಿ ಪರಿವರ್ತಿಸುತ್ತದೆ. ಕನ್ನಡಿಗರು ಖುಶಿ ಪಡುವ ವಿಷಯವೇನೆಂದರೆ ಇದನ್ನು ಹಾಕಿಕೊಂಡು ಸುಲಭವಾಗಿ ನಾವು ಕನ್ನಡದಲ್ಲೇ ಸಂದೇಶಗಳನ್ನು ಬರೆಯಬಹುದು. (ಟೈಪ್‌ ಮಾಡುವುದಲ್ಲ, ಬರೆಯುವುದು).


ಈ ಅಪ್ಲಿಕೇಷನ್ ಸಧ್ಯಕ್ಕೆ ಆಂಡ್ರಾಯಿಡ್‌ ಮೊಬೈಲ್‌ಗಳಿಗೆ ಮಾತ್ರ ಲಭ್ಯವಿದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ಮೊಬೈಲ್ನ ಭಾಷೆ ಅಥವಾ ಇನ್‌ಪುಟ್‌ ಭಾಷೆಯನ್ನು ಕನ್ನಡ ಮಾಡಿಕೊಂಡಿದ್ದರೆ ಸಂದೇಶ ಬರೆಯಲು ಹೋದಾಗ ಭಾಷೆಗೆ ಸಂಬಂಧಿಸಿದ ಇನ್ನೊಂದು ಕಡತವನ್ನು ಇಳಿಸಿಕೊಳ್ಳುವಂತೆ ಕೋರುತ್ತದೆ. ಅದು ಕನ್ನಡಕ್ಕೆ ಸಂಬಂಧಿಸಿದ ಕಡತ. ಅದನ್ನು ಮೊಬೈಲ್‌ಗೆ ಇಳಿಸಿಕೊಂಡ ನಂತರ ಸಂದೇಶ ಬರೆಯಲು ಹೋದಾಗ (ಫೇಸ್‌ಬುಕ್‌/ವಾಟ್ಸ್‌ಆಪ್‌ ಇತ್ಯಾದಿ) ಒಂದು ಸ್ಲೇಟ್‌ ಮೂಡುತ್ತದೆ. ಅಲ್ಲಿ ಬೆರಳಿನಿಂದ ಕನ್ನಡ ಅಕ್ಷರಗಳನ್ನು ಬರೆಯುತ್ತಾ ಹೋದರೆ ನಾವು ಬರೆದುದನ್ನು ಗುರುತಿಸಿ ಮೇಲಗ್ಡೆಯ ಚದುರದಲ್ಲಿ ಸರಿಯಾದ ಪದಗಳನ್ನು ಅದು ಜೋಡಿಸುತ್ತಾ ಹೋಗುತ್ತದೆ. ನಮ್ಮ ಕೈಬರಹ ಚೆನ್ನಾಗಿಲ್ಲದಿದ್ದರೂ (ನನ್ನ ಕೈಬರಹ ಚೆನ್ನಾಗಿಲ್ಲ) ಅದು ಬಹುತೇಕ ಸರಿಯಾಗಿಯೇ ಅಕಷರಗಳನ್ನು ಗುರುತಿಸುತ್ತದೆ. ಅದೇ ರೀತಿ ಇಂಗ್ಲೀಷ್‌ ಅಕ್ಷರಗಳನ್ನೂ ಬರೆಯಬಹುದು.

ಆದರೆ ತೊಂದರೆ ಏನೆಂದರೆ ಈ ರೀತಿ ಜಾಸ್ತಿಯಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಬೆರಳು ಸವೆದು ಹೋದಂತೆ ಉರಿ ಶುರುವಾಗುತ್ತದೆ. ಅದಕ್ಕಾಗಿ ನೀವು ೨೦೦-೩೦೦ ರೂಪಾಯಿಗೆಲ್ಲಾ ದೊರೆಯುವ ಒಂದು Touchscreen Stylus pen ಗಳನ್ನು ಉಪಯೋಗಿಸಬಹುದು.

ಇದನ್ನು ಬಳಸುವಾಗ ಇಂಟರ್‌ನೆಟ್‌ ಆನ್‌ನಲ್ಲಿಟ್ಟುಕೊಂಡು ನಿಮ್ಮ ಕೈಬರಹವನ್ನು ಗೂಗಲ್‌ನವರಿಗೆ ಕಳಿಸುತ್ತಾ ಈ ತಂತ್ರಾಂಶವನ್ನು ಇನ್ನಷ್ಟು ಸದಾರಿಸಲು ಸಹ ಅನುವು ಮಾಡಿ ಕೊಡಬಹುದು.
ಆಪ್‌ನ ಕೊಂಡಿ ಇಲ್ಲಿದೆ : https://play.google.com/store/apps/details?id=com.google.android.apps.handwriting.ime

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.